• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ತಲೆನೋವಿಗೆ ಸುಲಭ ಪರಿಹಾರ

TNN Correspondent Posted On July 5, 2017


  • Share On Facebook
  • Tweet It

ಜನರನ್ನು ಹೆಚ್ಚು ಕಾಡುವ ನೋವು ಅಂದ್ರೆ ತಲೆನೋವು.ಜಾಸ್ತಿ ವಾಹನಗಳ ಹಾರ್ನ್ ಕೇಳಿದಾಗ ,ಟ್ರಾಫಿಕ್ ನಲ್ಲಿ ಸಿಕ್ಕಿ ಬಿದ್ದಾಗ,ಕಟು ಪರಿಮಳ ಇರುವ ಸುಗಂಧ ದ್ರವ್ಯವನ್ನು ಯಾರಾದರೂ ಹಚ್ಚಿ ಹತ್ತಿರ ಬಂದಾಗ ,ಒತ್ತಡ ಜಾಸ್ತಿಯಾದಾಗ ,ಹೀಗೆ ತಲೆನೋವಿಗೆ ಕಾರಣಗಳು ಹತ್ತು ಹಲವು .ಈಗ ಇದಕ್ಕೆ ಪರಿಹಾರ ಏನಿದೆ ಎಂದು ತಿಳಿಯೋಣ .

ಶುಂಠಿ ಚಹಾ ತಲೆನೋವಿಗೆ ಉತ್ತಮ ಪರಿಹಾರ ನೀಡುತ್ತದೆ .ಅರ್ಧ ಟಿ ಚಮಚ ಚಹಾ ಹುಡಿ ,ಸ್ವಲ್ಪ ಬೆಲ್ಲ /ಸಕ್ಕರೆ ,ತುರಿದ ಶುಂಠಿ ಸೇರಿಸಿ ಚಹಾ ತಯಾರಿಸಿ ಕುಡಿಯಿರಿ.ಹಾಲು ಸೇರಿಸಿದರೆ ರುಚಿ ಹೆಚ್ಚುತ್ತದೆ.ಇದರಿಂದ ತಲೆನೋವು ಬೇಗ ಕಡಿಮೆಯಾಗುತ್ತದೆ .

 

ನೀಲಗಿರಿ ತೈಲದಿಂದ ಹಣೆಯನ್ನು ಮಸಾಜು ಮಾಡುವುದು .ಸ್ವಲ್ಪ ನೀಲಗಿರಿ ತೈಲವನ್ನು ತೆಗೆದುಕೊಂಡು ಹಣೆಗೆ ನಿಧಾನವಾಗಿ ಮಸಾಜು ಮಾಡುವುದು ಒತ್ತಡ ಕಡಿಮೆ ಮಾಡುವುದರೊಂದಿಗೆ ತಲೆ ನೋವನ್ನು ನೀಗಿಸುತ್ತದೆ.ಹಣೆಯ ಮಧ್ಯ ಭಾಗದಿಂದ ಮಸಾಜು ಶುರು ಮಾಡಿ ಕಣ ತಲೆ ತನಕ ಮುಂದುವರಿಸಿ.ನಂತರ ಎರಡು ಹುಬ್ಬುಗಳನ್ನು ತೀಡಿ.ಬೊಟ್ಟು ಇದು ಹಣೆಯ ಮಧ್ಯವನ್ನು ಸ್ವಲ್ಪ ಜಾಸ್ತಿ ಒತ್ತಿ.ತಲೆನೋವು ನಿಧಾನವಾಗಿ ಕಡಿಮೆಯಾಗುತ್ತದೆ.

ಪ್ರಮಾಣಬದ್ಧವಾದ ಉಸಿರಾಟ  ತಲೆನೋವಿಗೆ ಪರಿಹಾರ ನೀಡುತ್ತದೆ.ಮೊದಲಿಗೆ ಮೂಗಿನ ಬಲಹೊಳ್ಳೆಯಿಂದ ಗಾಳಿ ಒಳತೆಗೆದುಕೊಂಡು ಕೆಲ ಕ್ಷಣಗಳ ನಂತರ ಅದೇ ಹೊಳ್ಳೆಯಿಂದ ಹೊರಬಿಡಿ .ಈಗ ಎಡ ಹೊಳ್ಳೆಯಿಂದ ಉಸಿರು ತೆಗೆದುಕೊಂಡು ಕೆಲಕ್ಷಣಗಳ ನಂತರ ಅದೇ ಹೊಳ್ಳೆಯಿಂದ ಹೊರಬಿಡಿ .ಈ ಪ್ರಕ್ರಿಯೆಯನ್ನು ೩ ಸಲ ಮಾಡಿ .ತಲೆನೋವು ಅದಾಗೇ ಕಡಿಮೆಯಾಗುತ್ತದೆ .

ಶ್ರೀಗಂಧವನ್ನು ಹಚ್ಚುವುದು ಕೂಡ ತಲೆನೋವಿಗೆ ಪರಿಹಾರ ನೀಡುತ್ತದೆ.ಶ್ರೀಗಂಧ ಕೊರಡನ್ನು ತೆಗೆದುಕೊಂಡು ತೇಯ್ದು ಆ ಗಂಧವನ್ನು ಕಣತಲೆಗೆ ಹಚ್ಚಿ .ಇದನ್ನು ದಿನ ನಿತ್ಯ ಮಾಡುವುದರಿಂದ ದೀರ್ಘ ಕಾಲದ ತಲೆನೋವು ಕೂಡ ಕಡಿಮೆಯಾಗುತ್ತದೆ.ಶ್ರೀಗಂಧದ ಪುಡಿಗಿಂತ ಕೊರಡನ್ನು ತೇಯುವುದು ಉತ್ತಮ.

  • Share On Facebook
  • Tweet It


- Advertisement -


Trending Now
ಉದಯನಿಧಿ ಮಾಡಿದ ಡ್ಯಾಮೇಜ್ ಸರಿಯಾಗಿಲ್ಲ!
Tulunadu News December 6, 2023
9 ಬಾರಿ ಅಂಬಾರಿ ಹೊತ್ತ ಅರ್ಜುನನಿಗೆ ಸ್ವಲ್ಪವೂ ಮಹತ್ವವಿಲ್ಲವೇ!
Tulunadu News December 6, 2023
Leave A Reply

  • Recent Posts

    • ಉದಯನಿಧಿ ಮಾಡಿದ ಡ್ಯಾಮೇಜ್ ಸರಿಯಾಗಿಲ್ಲ!
    • 9 ಬಾರಿ ಅಂಬಾರಿ ಹೊತ್ತ ಅರ್ಜುನನಿಗೆ ಸ್ವಲ್ಪವೂ ಮಹತ್ವವಿಲ್ಲವೇ!
    • ಊರಿನ ಬಹುತೇಕ ಜನ ಒಂದೇ ಬಿಲ್ಡಿಂಗ್ ನಲ್ಲಿ ವಾಸ!
    • ಇ.0.ಡಿ.ಯಾ ಮೈತ್ರಿಕೂಟದ ಸಭೆಗೆ ನಿತೀಶ್, ಅಖಿಲೇಶ್, ಮಮತಾ ಡೌಟ್!
    • #ಮೆಲೋಡಿ ಹ್ಯಾಶ್ ಟ್ಯಾಗ್ ಸಿಕ್ಕಾಪಟ್ಟೆ ವೈರಲ್!
    • ಜನವರಿ 21 ರ ಮೊದಲೇ ಅಯೋಧ್ಯೆಗೆ ಬಂದರೆ ಉತ್ತಮ ಎಂದು ಟ್ರಸ್ಟ್ ಮನವಿ!
    • ತೆಲಂಗಾಣ, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಗೆದ್ದರೆ, ಕನುಗೋಳು ಹಿಡಿಯುವವರಿಲ್ಲ!
    • ಯುವಕರನ್ನು ಕಿಡ್ನಾಪ್ ಮಾಡಿ ಮದುವೆ ಮಾಡಿಸುವ ಗ್ಯಾಂಗ್ ಪಕ್ಡ್ವಾ!
    • ಡಚ್ ಯುವತಿಯ ಪ್ರೇಮಕ್ಕೆ ಬಿದ್ದ ಯುಪಿ ಯುವಕ, ಕಂಕಣಭಾಗ್ಯ!
    • ಪಾಕ್ ಕ್ರಿಕೆಟಿಗರ ಸ್ವಾಗತಕ್ಕೆ ಸಿಡ್ನಿ ವಿಮಾನ ನಿಲ್ದಾಣದಲ್ಲಿ ಯಾರೂ ಬಂದಿಲ್ಲ!
  • Popular Posts

    • 1
      ಉದಯನಿಧಿ ಮಾಡಿದ ಡ್ಯಾಮೇಜ್ ಸರಿಯಾಗಿಲ್ಲ!
    • 2
      9 ಬಾರಿ ಅಂಬಾರಿ ಹೊತ್ತ ಅರ್ಜುನನಿಗೆ ಸ್ವಲ್ಪವೂ ಮಹತ್ವವಿಲ್ಲವೇ!
    • 3
      ಊರಿನ ಬಹುತೇಕ ಜನ ಒಂದೇ ಬಿಲ್ಡಿಂಗ್ ನಲ್ಲಿ ವಾಸ!
    • 4
      ಇ.0.ಡಿ.ಯಾ ಮೈತ್ರಿಕೂಟದ ಸಭೆಗೆ ನಿತೀಶ್, ಅಖಿಲೇಶ್, ಮಮತಾ ಡೌಟ್!
    • 5
      #ಮೆಲೋಡಿ ಹ್ಯಾಶ್ ಟ್ಯಾಗ್ ಸಿಕ್ಕಾಪಟ್ಟೆ ವೈರಲ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search