• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಪಾಪಿ ಪಾಕಿಸ್ತಾನದ ಸರ್ಕಾರಿ ಪೋಷಿತ ಭಯೋತ್ಪಾದನೆಯ ಕರಾಳ ಮುಖ ಎಳೆಎಳೆಯಾಗಿ ಬಿಚ್ಚಿಟ್ಟ ಉಗ್ರ

TNN Correspondent Posted On December 2, 2017
0


0
Shares
  • Share On Facebook
  • Tweet It

ದೆಹಲಿ: ಪಾಕಿಸ್ತಾನ ಸರ್ಕಾರದ ಭಯೋತ್ಪಾದನೆ ಕುರಿತು ನಿಲುವು ಮತ್ತೊಮ್ಮೆ ಸಾಬೀತಾಗಿದೆ.  ಪೊಲೀಸರು ಬಂಧಿಸಿರುವ ಜಮಾತ್ ಉದ್ ದವಾ ಉಗ್ರ ಸಂಘಟನೆಯ ಭಯೋತ್ಪಾದಕ ಮಹಮ್ಮದ ಅಮಿರ್ ಅಲಿಯಾಸ್ ಅಬು ಹಮಾಸ್ ತನಿಖೆ ವೇಳೆ ಪಾಕ್ ಗುಪ್ತಚರ ಸಂಸ್ಥೆ ಐಎಸ್ಐ ಭಯೋತ್ಪಾದಕರಿಗೆ ಪೋಷಣೆ ನೀಡುತ್ತಿದೆ ಎಂದು ಹೇಳಿದ್ದಾನೆ.

ಇತ್ತೀಚೆಗೆ ಕಾಶ್ಮೀರದ ಗಡಿಯಲ್ಲಿ ಅಕ್ರಮವಾಗಿ ನುಸುಳಿ ದುಷ್ಕೃತ್ಯಗಳನ್ನು ನಡೆಸಲು ಸಂಚು ಹೂಡಿದ್ದ ಮಹಮ್ಮದ್ ಅಮಿರ್ ನನ್ನು ಭಾರತೀಯ ಸೈನಿಕರು ಬಂಧಿಸಿ, ಎನ್ಐಎ ವಶಕ್ಕೆ ನೀಡಿದ್ದರು. ತನಿಖೆ ವೇಳೆ ಪಾಕಿಸ್ತಾನದ ಗುಪ್ತಚರ ಇಲಾಖೆ ಭಯೋತ್ಪಾದಕರಿಗೆ ಹೇಗೆ ಸಹಕಾರ ನೀಡುತ್ತಿದೆ ಎಂಬುದರ ಕುರಿತು ಎಳೆ ಎಳೆಯಾಗಿ ಮಾಹಿತಿ ನೀಡಿದ್ದಾನೆ.

‘ನಿರುದ್ಯೋಗಿಗಳು ಭಯೋತ್ಪಾದಕರಾಗುತ್ತಿದ್ದಾರೆ. ಭಯೋತ್ಪಾದನೆ ತರಬೇತಿ ಶಿಬಿರದಿಂದ ಹೊರಬರುವವರನ್ನು ಸೈನಿಕರಂತೆ ಬರುತ್ತಾರೆ. ಅವರು ಐಎಸ್ಐ ಎಜೆಂಟ್ ಗಳಾಗಿ ಭಯೋತ್ಪಾದನೆಗಾಗಿ ಸಂಚು ಮಾಡುತ್ತಾರೆ. ಅಲ್ಲದೇ ಐಎಸ್ಐ ಹೆಸರಲ್ಲಿ ಯುವಕರನ್ನು ಭಯೋತ್ಪಾದನೆ ಶಿಬಿರಗಳಿಗೆ ಸಾಗಿಸುವ ಕಾರ್ಯ ಮಾಡುತ್ತಾರೆ. ವಿಶೇಷವಾಗಿ ಕಾಶ್ಮೀರದ ಅಜಾದಿ ಹೆಸರಿ ದೃಶ್ಯಗಳನ್ನು ತೋರಿಸಿ, ನಮ್ಮ ಬಂದುಗಳು ಸಂಕಷ್ಟದಲ್ಲಿದ್ದಾರೆ ಅವರನ್ನು ರಕ್ಷಿಸಿ ಎಂದು ಪ್ರಚೋಧನೆ ನೀಡುತ್ತಾರೆ ಎಂಬ ಮಾಹಿತಿ ಮಹಮ್ಮದ್ ಅಮಿರ್ ನೀಡಿದ್ದಾನೆ.

ಭಯೋತ್ಪಾದಕ ತರಬೇತಿ ಶಿಬಿರದಿಂದ ಹೊರಬಂದವರಿಗೆ ಜಿಪಿಎಸ್, ವೈರ್ ಲೆಸ್ ಮೊಬೈಲ್ ಮೂಲಕ ಸೂಚನೆ, ಸಂದೇಶಗಳನ್ನು ನೀಡುತ್ತದೆ. ಆ ಮೂಲಕ ಭಾರತದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ಸಂಚು ರೂಪಿಸಲಾಗುತ್ತಿದೆ ಎಂಬ ಆಘಾತಕಾರಿ ಮಾಹಿತಿ ತನಿಖಾಧಿಕಾರಿಗಳ ಎದುರು ಬಾಯಿ ಬಿಟ್ಟಿದ್ದಾನೆ.

ಮುಂಬೈ ದಾಳಿ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಮತ್ತು ಜಾಕಿ ಉರ್ ರೆಹೆಮಾನ್ ಲಕ್ವಿ ಅವರಿಗೆ ಪಾಕಿಸ್ತಾನದ ಗುಪ್ತಚರ ಇಲಾಖೆ ಸಂಪೂರ್ಣ ಸಹಕಾರ ನೀಡುತ್ತಿದೆ. ನಾನು 2014ರಲ್ಲಿ ಎಲ್ಇ ಟಿ ಸೇರಿದ್ದೆ. ಹಫೀಜ್ ಸಯೀದ್ ನೇತೃತ್ವದ ಶಿಬಿರದಲ್ಲೇ ತರಬೇತಿ ಪಡೆದಿದ್ದೇನೆ. ಇನ್ನು ಹಲವು ಯುವಕರು ಅಲ್ಲಿ ತರಬೇತಿ ಪಡೆದಿದ್ದಾರೆ ಎಂದು ಕ್ಯಾಮೆರಾದ ಎದುರೇ ಬಾಯಿ ಬಿಟ್ಟಿದ್ದಾನೆ.

ಎಲ್ ಇಟಿ ತರಬೇತಿ ಮುಗಿಸಿ ಹೊರಬಂದು ಸಣ್ಣ ಉದ್ಯಮ ಆರಂಭಿಸಲು ಉದ್ದೇಶಿಸಿದ್ದೆ. ಆದರೆ ಎಲ್ ಇಟಿಯವರು ಮತ್ತೆ ನನ್ನನ್ನು ಅವರ ಮೋಹ ಜಾಲಕ್ಕೆ ಸಿಲುಕಿಸಿದ್ದರು. ನಂತರ ಮುಂದಿನ ಹಂತದ ತರಬೇತಿಯಾದ ಡೈರಾ ಈ ಆಮ್ ಗೆ ಕಳುಹಿಸಿದ್ದರು. ಅಲ್ಲಿ ನಾಲ್ಕು ತಿಂಗಳು ಎಕೆ 47 ಗನ್, ಪಿಸ್ತೋಲ್, ಗ್ರೈನೆಡ್ ಲಾಂಚರ್ ಬಳಕೆ, ಅರಣ್ಯದಲ್ಲಿ ಯುದ್ಧ  ಹೇಗೆ ಮಾಡಬೇಕು ಎಂಬುದರ ಕುರಿತು ತರಬೇತಿ ಪಡೆದಿದ್ದೇ ಎಂದು ತರಬೇತಿ ಪಡೆದಿದ್ದೇನೆ ಎಂದು ಬಾಯಿ ಬಿಟ್ಟಿದ್ದಾನೆ.

ಈ ಎಲ್ಲ ಚಟುವಟಿಕೆಗಳಿಗೆ ಪಾಕಿಸ್ತಾನ ಸರ್ಕಾರ ಪರೋಕ್ಷ ಮತ್ತು ಪ್ರತ್ಯಕ್ಷವಾಗಿ ಸಹಕಾರ ನೀಡುತ್ತಿದೆ. ಪಾಕಿಸ್ತಾನ ಸೈನ್ಯವು ಭಾರತವನ್ನು ಎದುರಿಸಲು ಭಯೋತ್ಪಾದಕರ ಸಹಾಯವನ್ನು ಗಡಿಯಲ್ಲಿ ಪಡೆಯುತ್ತದೆ. ಅದಕ್ಕಾಗಿಯೇ ಭಾರತಕ್ಕೆ ನುಸುಳಲು ಉಗ್ರರಿಗೆ ಅನುಕೂಲಕರ ವಾತಾವರಣ ಇದೆ ಎಂದು ತಿಳಿಸಿದ್ದಾನೆ.

0
Shares
  • Share On Facebook
  • Tweet It




Trending Now
ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
Tulunadu News September 17, 2025
ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
Tulunadu News September 17, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
    • ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
    • ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
  • Popular Posts

    • 1
      ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
    • 2
      ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
    • 3
      ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • 4
      ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • 5
      ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!

  • Privacy Policy
  • Contact
© Tulunadu Infomedia.

Press enter/return to begin your search