• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ

ಇಂದು ಭಾರತೀಯ ನೌಕಾ ದಿನ, ಮಿಡಿಯಲಿ ನಮ್ಮ ಮನ…

ಮಧು ಪಂಡಿತ್, ಬೆಂಗಳೂರು Posted On December 4, 2017
0


0
Shares
  • Share On Facebook
  • Tweet It

ಪ್ರತಿ ವರ್ಷ ಭಾರತದಲ್ಲಿ ಡಿ.4ನ್ನು ಭಾರತೀಯ ನೌಕಾ ದಿನ ಎಂದು ಆಚರಿಸಲಾಗುತ್ತದೆ. ದೇಶದ ಮೂರೂ ಕಡೆ ಸಾಗರವನ್ನೇ ಹೊಂದಿರುವ ನಾವು, ನಮಗೆ ಭದ್ರತೆ ಒದಗಿಸುವ ನೌಕಾಪಡೆಯನ್ನು ಎಷ್ಟು ಶ್ಲಾಘಿಸಿದರೂ ಕಡಿಮೆಯೇ. ಬರೀ ರಕ್ಷಣೆ ಅಲ್ಲ, ದೇಶದ ಎಲ್ಲೇ ನೆರೆ ಹಾವಳಿಯಾಗಲಿ, ಅಲ್ಲೆಲ್ಲ ಭಾರತೀಯ ನೌಕಾಪಡೆ ಆಗಮಿಸಿ ಅಮೋಘ ಸೇವೆ ಒದಗಿಸಿದೆ. ಜನರಿಗೆ ಭದ್ರತೆ ನೀಡಿದೆ. ವಿದೇಶದಿಂದ ಆಮದಾಗುವ ಸರಕಿನಲ್ಲೂ ನೌಕಾಪಡೆಯ ಪಾತ್ರವಿದೆ. ಅಷ್ಟಕ್ಕೂ ಡಿ.4ನ್ನೇ ಏಕೆ ನೌಕಾದಿನವನ್ನಾಗಿ ಏಕೆ ಆಚರಿಸಲಾಗುತ್ತದೆ? ಭಾರತಕ್ಕೆ ನೌಕಾಪಡೆ ಹೇಗೆ ಪ್ರಾಮುಖ್ಯತೆ? ನೌಕಾದಿನದ ನೆಪದಲ್ಲಿ ನಮ್ಮ ಮನ ಮಿಡಿಯುವ ಕೆಲ ಅಂಶಗಳು ಇಲ್ಲಿವೆ…

ಡಿ.4ನ್ನು ನೌಕಾದಿನವನ್ನಾಗಿ ಏಕೆ ಆಚರಿಸಲಾಗುತ್ತದೆ?

ಅದು 1971. ಪೂರ್ವ ಪಾಕಿಸ್ತಾನಿಯರನ್ನು ಹೊರಹಾಕಿ ಉದ್ಧಟತನ ಮಾಡಿದ್ದ ಪಾಕಿಸ್ತಾನ ಭಾರತಕ್ಕೆ ತಲೆನೋವಾಗಿತ್ತು. ಲಕ್ಷಾಂತರ ನಿರಾಶ್ರಿತರು ಭಾರತಕ್ಕೆ ಹೊರೆಯಾಗಿದ್ದರು. ಆಗ ಅನಿವಾರ್ಯವಾಗಿ ನಾವು ಪಾಕಿಸ್ತಾನದ ವಿರುದ್ಧ ಯುದ್ಧ ಮಾಡಲೇಬೇಕಾಯಿತು. ಈ ವೇಳೆ 1991ರ ಡಿ.4ರಂದು ಪಾಕಿಸ್ತಾನವನ್ನು ಹಿಮ್ಮೆಟ್ಟಿಸುವಲ್ಲಿ ಭಾರತೀಯ ನೌಕಾಪಡೆ ಮಹತ್ತರ ಪಾತ್ರ ನಿರ್ವಹಿಸಿದ ಹಿನ್ನೆಲೆಯಲ್ಲಿ ಡಿ.4ನ್ನ ನೌಕಾದಿನವನ್ನಾಗಿ ಆಚರಿಸಲಾಗುತ್ತಿದೆ. ಇದೇ ಕಾರಣಕ್ಕೆ ಇಂದು ನರೇಂದ್ರ ಮೋದಿ ಅವರು ನೌಕಾಪಡೆಯನ್ನು ಶ್ಲಾಘಿಸಿದ್ದಾರೆ.

ನೌಕಾಪಡೆಯ ಹೆಮ್ಮಯ ಸಂಗತಿಗಳು…
  • ಭಾರತೀಯ ನೌಕಾಪಡೆ ಜಗತ್ತಿನ ಮೊದಲ ನೌಕಾಪಡೆ ಎಂಬ ಖ್ಯಾತಿಗೆ ಹೊಂದಿದೆ. ನೌಕೆ ನಿರ್ವಹಣೆಗೆ ಜಗತ್ತಿನಲ್ಲಿ ಒಂದು ಸಾವಿರ ವರ್ಷದ ಇತಿಹಾಸವಿದ್ದರೂ, ಭಾರತದಲ್ಲಿ 7600 ವರ್ಷಗಳ ಹಿಂದೆಯೇ ನೌಕೆಗಳ ನಿರ್ವಹಣೆ ಇತ್ತು ಎಂದು ತಿಳಿದುಬಂದಿದೆ.
  • ಭಾರತದಲ್ಲಿ ಮೊದಲ ಬಾರಿಗೆ 1612ರಲ್ಲಿ ಬ್ರಿಟಿಷರು ಜಲಾಂತರ್ಗಾಮಿ ನೌಕೆ ಪರಿಚಯಿಸಿದರು. ಇದೇ ಮುಂದೆ ರಾಯಲ್ ಇಂಡಿಯನ್ ನೇವಿ ಎಂದು ಹೆಸರು ಪಡೆಯಿತು.
  • ಎರಡನೇ ಮಹಾ ಯುದ್ಧದಲ್ಲಿ ಭಾರತದ ಅತಿ ಹೆಚ್ಚು ನೌಕೆಗಳು ಪಾಲ್ಗೊಂಡವು ಹೆಗ್ಗಳಿಗೆ ಹೊಂದಿದ ಖ್ಯಾತಿ ನಮ್ಮದಾಗಿದೆ.
  • ಜಗತ್ತಿನ ಹತ್ತು ಪ್ರಮುಖ ನೌಕಾಪಡೆಯಲ್ಲಿ ಭಾರತೀಯ ನೌಕಾಪಡೆಯ ಸ್ಥಾನ 5ನೇಯದ್ದು.
  • ದೇಶ ಸ್ವಾತಂತ್ರ್ಯ ಗಳಿಸಿದ ಬಳಿಕ 1950ರಲ್ಲಿ ಭಾರತ ನೌಕಾಪಡೆಯನ್ನು ದೇಶದ ಸೈನ್ಯಕ್ಕೆ ಅಳವಡಿಸಿಕೊಂಡಿತು.
  • ಕೊಂಕಣ್ ಮತ್ತು ಗೋವಾ ಬಂದರು ವಹಿವಾಟಿನ ರಕ್ಷಣೆಗೆ ಭದ್ರ ಹಡಗು ನಿರ್ಮಿಸಿದ ಕಾರಣ ಛತ್ರಪತಿ ಶಿವಾಜಿ ರಾಜೆ ಭೋಸಲೆ ಅವರನ್ನು ಭಾರತದ ನೌಕಾಪಡೆ ಪಿತಾಮಹ ಎಂದು ಕರೆಯಲಾಗುತ್ತದೆ.
  • ಐಎನ್ಎಸ್ ವಿರಾಟ್ ಭಾರತದ ಮೊದಲ ನೌಕಾ ಕ್ಷಿಪಣಿ ಉಡಾವಣೆ ಮಾಡುವ ಯುದ್ಧವಿಮಾನವಾಗಿದೆ.
  • ಇದುವರೆಗೂ ಭಾರತದ ನೌಕೆಗಳು ಜಗತ್ತಿನ ಮೂರು ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡು ಮಹತ್ತರ ಪಾತ್ರ ನಿರ್ವಹಿಸಿದ ಅಗ್ಗಳಿಕೆ ಹೊಂದಿದೆ.
  • ಭಾರತದ ನೌಕಾಪಡೆಯ ಬ್ರಹ್ಮೋಸ್ ಕ್ಷಿಪಣಿ ಅತಿವೇಗದ ಕ್ಷಿಪಣಿ ಎಂಬ ಖ್ಯಾತಿಗೆ ಭಾಜನವಾಗಿದೆ.
  • ಕೇರಳದ ಕಣ್ಣೂರಿನಲ್ಲಿರುವ ಎಳಿಮಲಾ ನೌಕಾ ಅಕಾಡೆಮಿ ಏಷ್ಯಾದಲ್ಲೆ ದೊಡ್ಡ ನಾವಲ್ ಅಕಾಡೆಮಿ ಎಂಬ ಕೀರ್ತಿಗೆ ಭಾಜನವಾಗಿದೆ.
  • ಭಾರತೀಯ ನೌಕಾಪಡೆಯ ಮ್ಯಾಕ್ರೋಸ್ ಹಾಗೂ ಮರಿನ್ ಕಮಾಂಡೋ ನೌಕೆಗಳು ಸಮುದ್ರದ ಮೊಸಳೆ (ಮಗರ್ ಮಚ್) ಎಂದೇ ಖ್ಯಾತವಾಗಿದ್ದು, ಭಯೋತ್ಪಾದಕರಿಗೆ ಇವುಗಳೆಂದರೆ ನಡುಕ.
  • ಜಗತ್ತಿನಲ್ಲೇ ಎರಡು ನಾವಲ್ ಏರೋಬಾಟಿಕ್ ತಂಡಗಳಿದ್ದು, ಅವುಗಳಲ್ಲಿ ಭಾರತವೂ ಒಂದು ಹೆಮ್ಮೆಯ ಸಂಗತಿ.
  • ಪ್ರಸ್ತುತ ಭಾರತದ ನೌಕಾಪಡೆಯಲ್ಲಿ 1 ಕ್ಷಿಪಣಿ ಉಡಾವಣೆ ವಿಮಾನ, 8 ಯುದ್ಧ ನೌಕೆ, ಶತ್ರು ಸದೆಬಡಿಯಲು 11 ನೌಕೆ, 1 ಅಣುಚಾಲಿತ ಜಲಾಂತರ್ಗಾಮಿ (ಇಂಥಾ ಆರು ಸಬ್ ಮೆರಿನ್ ನಿರ್ಮಾಣಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ), 67 ಸಾವಿರಕ್ಕೂ ಅಧಿಕ ಸೈನಿಕರು ಸೇವೆ ಸಲ್ಲಿಸುತ್ತಿದ್ದಾರೆ.

 

 

0
Shares
  • Share On Facebook
  • Tweet It




Trending Now
ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
ಮಧು ಪಂಡಿತ್, ಬೆಂಗಳೂರು December 23, 2025
ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
ಮಧು ಪಂಡಿತ್, ಬೆಂಗಳೂರು December 23, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
    • ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
    • ಭಾರತ ಒಂದು ‘ಹಿಂದೂ ರಾಷ್ಟ್ರ’ – ಸಂವಿಧಾನಿಕ ಮಾನ್ಯತೆ ಅಗತ್ಯವಿಲ್ಲ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
    • ಸೋನಿಯಾ ಗಾಂಧಿ ಕುರಿತು ರೇವಂತ್ ರೆಡ್ಡಿ ಹೇಳಿಕೆ: ಬಿಜೆಪಿ ತೀವ್ರ ಟೀಕೆ
    • ಬಾಂಡ್ ರದ್ದಾದ ಬಳಿಕ ರಾಜಕೀಯ ಪಕ್ಷಗಳಿಗೆ ಬಂದ 3811 ಕೋಟಿಯಲ್ಲಿ ಬಿಜೆಪಿಯ ಪಾಲು 82%!
    • ಭಕ್ತಿಗೀತೆ ಹಾಡುತ್ತಿದ್ದ ಗಾಯಕಿಯ ಮೇಲೆ ದರ್ಪ! ಜಾತ್ಯಾತೀತ ಗೀತೆ ಹಾಡಲು ಒತ್ತಾಯ!
    • ರೈತರ ಮಕ್ಕಳನ್ನು ಮದುವೆಯಾಗುವ ಹೆಣ್ಮಕ್ಕಳಿಗೆ 10 ಲಕ್ಷ ನೀಡಿ - ಸರಕಾರಕ್ಕೆ ಶಾಸಕ ಆಗ್ರಹ!
    • ವಿಡಿಯೋ ಕಾಲ್ ನಲ್ಲಿ ನಿಶ್ಚಿತಾರ್ಥ-ಎಲ್ ಇಡಿ ಸ್ಕ್ರೀನ್ ಗೆ ಆರತಿ!
    • ಅಜಾನ್ ಚರ್ಚೆಯ ಸಂದರ್ಭದಲ್ಲಿ ದೀಪಾವಳಿ ಪಟಾಕಿ ವಿಷಯ ಎತ್ತಿದ ಸಚಿವ!
    • ಇಷ್ಟು ಚಿಕ್ಕ ವಯಸ್ಸಿಗೆ ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಕಾರ್ಯಾಧ್ಯಕ್ಷ ಪಟ್ಟ!
  • Popular Posts

    • 1
      ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
    • 2
      ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
    • 3
      ಭಾರತ ಒಂದು ‘ಹಿಂದೂ ರಾಷ್ಟ್ರ’ – ಸಂವಿಧಾನಿಕ ಮಾನ್ಯತೆ ಅಗತ್ಯವಿಲ್ಲ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
    • 4
      ಸೋನಿಯಾ ಗಾಂಧಿ ಕುರಿತು ರೇವಂತ್ ರೆಡ್ಡಿ ಹೇಳಿಕೆ: ಬಿಜೆಪಿ ತೀವ್ರ ಟೀಕೆ
    • 5
      ಬಾಂಡ್ ರದ್ದಾದ ಬಳಿಕ ರಾಜಕೀಯ ಪಕ್ಷಗಳಿಗೆ ಬಂದ 3811 ಕೋಟಿಯಲ್ಲಿ ಬಿಜೆಪಿಯ ಪಾಲು 82%!

  • Privacy Policy
  • Contact
© Tulunadu Infomedia.

Press enter/return to begin your search