• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಮಂಗಳೂರಿನ ಈ ಅಜ್ಜ ಮಾಡಿ ಕೊಡುವ ಕಬ್ಬಿನ ಹಾಲನ್ನು ನೀವು ಕುಡಿಯಲೇ ಬೇಕು!

TNN Correspondent Posted On July 6, 2017


  • Share On Facebook
  • Tweet It

ವಯಸ್ಸು 70 ದಾಟಿದೆ ಆದ್ರೂ ಅವರ ಅಂಗಡಿಗೆ ಬಂದು ಕಬ್ಬಿನ ಹಾಲನ್ನು ಲೋಟಕ್ಕೆ ಹಾಕಿ ಮಾರಾಟ ಮಾಡುತ್ತಾರೆ. ಮನೆಯಲ್ಲಿ ಕೂತು ಏನು ಮಾಡಲಿ ಎನ್ನುತ್ತಾರೆ ಅನಂತ್ ಶೆಣೈ. ಸುಮಾರು 60ವರ್ಷಗಳಿಂದ ಈ ವ್ಯಾಪಾರವನ್ನು ಶುರು ಮಾಡಿ ಎಲ್ಲರ ನೆಚ್ಚಿನ ಅಜ್ಜ ಎಂದು ಗುರುತಿಸಿ ಕೊಂಡಿದ್ದಾರೆ! ಮುಂಜಾನೆ 4 ಘಂಟೆಗೆ ಇವರ ಅಂಗಡಿ ತೆರೆಯುತ್ತದೆ. ನಗು ಮುಖದಿಂದ ಎಲ್ಲರನ್ನು ಸ್ವಾಗತಿಸಿ ಬನ್ನಿ ಕುಳಿತುಕೊಳ್ಳಿ ಎಂದು ಹೇಳಿ ನಿಮಗೆ ಎಷ್ಟು ಲೋಟ ಕಬ್ಬಿನ ಹಾಲನ್ನು ಕೊಡಲಿ ಎಂದು ಕೇಳುವ ಶೈಲಿ ಒಂದು ಲೋಟ ಕುಡಿಯುವವನಿಗೂ ಮತ್ತೊಂದು ಲೋಟ ಕಬ್ಬಿನ ಹಾಲನ್ನು ಕುಡಿಯೋಣ ಎಂದು ಅನ್ನಿಸದೆ ಬಿಡದು!
ಮಂಗ್ಲಿ ಮಾಮ್ ಎಂದೇ ಚಿರ ಪರಿಚಿತರಾದ ಅನಂತ್ ಅಜ್ಜ ಪಬ್ಲಿಕ್ ಟಿ ವಿ ನಡೆಸುವ ಪಬ್ಲಿಕ್ ಹೀರೋದಲ್ಲಿ ಕಾರ್ಯಕ್ರಮ ದಲ್ಲಿ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. 1958ರಲ್ಲಿ ಅಲೋಶಿಯಸ್ ಕಾಲೇಜಿನ ಮುಂಭಾಗದಲ್ಲಿ ತಮ್ಮ ಅಂಗಡಿಯನ್ನು ಶುರು ಮಾಡಿದರು. ಮುಂಬೈಗೆ ಹೋಗಿ ಅಲ್ಲಿಂದ ಬೇಲ್ ಪುರಿ ಅನ್ನು ಕಲಿತು ಮುಂಬೈ ಬೇಲ್ ಮಂಗಳೂರಿನಲ್ಲಿ ಪರಿಚಯಿಸಿದ್ದು ಇದೆ ಮಂಗ್ಲಿ ಮಾಮ್. ಆ ಕಾಲದಲ್ಲಿ ಪೈಸೆ ಗೆ ಒಂದು ಗ್ಲಾಸ್ ಕಬ್ಬಿನ ಹಾಲು ಕೊಡುತ್ತಿದ್ದ ಅನಂತ್ ಅಜ್ಜ ಈಗ ೧೫ .ರೂ ತೆಗೆದು ಕೊಳ್ಳುತ್ತಾರೆ.
ಅಜ್ಜನಿಗೆ 24 ಬಾರಿ ಮಲೇರಿಯಾ ಬಂದಿದೆ!!
ಹೌದು ಅನಂತ್ ಅಜ್ಜ ಹೇಳುವ ಪ್ರಕಾರ ಅವರಿಗೆ ಈ ವರೆಗೆ 24 ಬಾರಿ ಮಲೇರಿಯಾ ಬಂದಿದೆಯಂತೆ. ನಿಮಗೆ ಕಷ್ಟ ಆಗಲಿಲ್ಲವೆ ಅಜ್ಜ ಎಂದು ನಮ್ಮ ತಂಡ ಕೇಳಿದಕ್ಕೆ ‘ ನಾನು ತುಂಬಾ ಶಕ್ತಿ ಶಾಲಿ ಅಂತ ಹೇಳಿ ನಕ್ಕು ಅಲ್ಲೇ ಕುಳಿತು ಬಿಟ್ಟರು ಮಂಗ್ಲಿ ಮಾಮ್.
ಒಮ್ಮೆ ನೀವು ಇವರ ಅಂಗಡಿಗೆ ಬೇಟಿ ಕೊಟ್ಟು ಒಂದು ಲೋಟ ಕಬ್ಬಿನ ಹಾಲನ್ನು ಕುಡಿಯಲೇ ಬೇಕು. ಇವರ ಅಂಗಡಿ ಇರುವುದು ಮಂಗಳೂರಿನ ಕೆನರಾ ಉರ್ವ ಶಾಲೆಯ ಮುಂಭಾಗದಲ್ಲಿ!
  • Share On Facebook
  • Tweet It


- Advertisement -


Trending Now
ವಾಹನ ಸವಾರರೇ, ನಿಮ್ಮ ಜೇಬಿಗೆ ಬೀಳಲಿದೆ ಕತ್ತರಿ!
Tulunadu News June 2, 2023
ಬ್ರಿಜ್ ವಿರುದ್ಧ ಪ್ರತಿಭಟನೆಯ ಹಿಂದಿನ ಸತ್ಯ!!
Tulunadu News June 1, 2023
Leave A Reply

  • Recent Posts

    • ವಾಹನ ಸವಾರರೇ, ನಿಮ್ಮ ಜೇಬಿಗೆ ಬೀಳಲಿದೆ ಕತ್ತರಿ!
    • ಬ್ರಿಜ್ ವಿರುದ್ಧ ಪ್ರತಿಭಟನೆಯ ಹಿಂದಿನ ಸತ್ಯ!!
    • ಕೇರಳ ಸ್ಟೋರಿ ಸಿನೆಮಾ ಕಾಲ್ಪನಿಕ ಕಥೆ ಅಲ್ಲ!!
    • ಕಾಂಗ್ರೆಸ್ ಸರಕಾರ ಹೊಸ ಸಂಸತ್ ಭವನ ನಿರ್ಮಿಸಿದ್ದರೆ ಏನಾಗುತ್ತಿತ್ತು?
    • ಗ್ಯಾರಂಟಿ ಇಲ್ಲದ ಸರಕಾರದಿಂದ ದ್ವೇಷದ ಆಡಳಿತ: ವೇದವ್ಯಾಸ್ ಕಾಮತ್
    • ನಾವು ಬೇರೆ ಧರ್ಮದ ಯುವಕರ ಜಾಲಕ್ಕೆ ಬಲಿಯಾಗಲ್ಲ!
    • ಗೆದ್ದ ಕೂಡಲೇ ಕಾಂಗ್ರೆಸ್ಸಿಗರ ದಬ್ಬಾಳಿಕೆ ಶುರು!!
    • ಮೇ ಮಳೆ ತೆರೆದಿಟ್ಟಿತ್ತು ಹಣೆಬರಹ!
    • ಚುನಾವಣೆ ಪ್ರಜಾಪ್ರಭುತ್ವದ ಹಬ್ಬ ಬೆಟ್ಟಿಂಗ್ ನವರಿಗೆ!!
    • ಕೇರಳ ಸ್ಟೋರಿ ಮೇ ಮೇರಾ ಅಬ್ದುಲ್ಲಾ ಅಲಗ್ ಹೇ?
  • Popular Posts

    • 1
      ವಾಹನ ಸವಾರರೇ, ನಿಮ್ಮ ಜೇಬಿಗೆ ಬೀಳಲಿದೆ ಕತ್ತರಿ!
    • 2
      ಬ್ರಿಜ್ ವಿರುದ್ಧ ಪ್ರತಿಭಟನೆಯ ಹಿಂದಿನ ಸತ್ಯ!!
    • 3
      ಕೇರಳ ಸ್ಟೋರಿ ಸಿನೆಮಾ ಕಾಲ್ಪನಿಕ ಕಥೆ ಅಲ್ಲ!!
    • 4
      ಕಾಂಗ್ರೆಸ್ ಸರಕಾರ ಹೊಸ ಸಂಸತ್ ಭವನ ನಿರ್ಮಿಸಿದ್ದರೆ ಏನಾಗುತ್ತಿತ್ತು?
    • 5
      ಗ್ಯಾರಂಟಿ ಇಲ್ಲದ ಸರಕಾರದಿಂದ ದ್ವೇಷದ ಆಡಳಿತ: ವೇದವ್ಯಾಸ್ ಕಾಮತ್


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search