• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ತಾಯಿಗೆ ಗೌರವ ಸಲ್ಲಿಸದೆ, ಅಫ್ಜಲ್ ಗುರುವನ್ನು ಗೌರವಿಸುತ್ತೀರಾ ಎಂದು ವೆಂಕಯ್ಯ ನಾಯ್ಡು ಪ್ರಶ್ನಿಸಿದ್ದೇಕೆ?

TNN Correspondent Posted On December 8, 2017


  • Share On Facebook
  • Tweet It

ದೆಹಲಿ: ಮೀರತ್ ನ ನೂತನ ಮೇಯರ್ ಬಿಎಸ್ ಪಿ ಸುನೀತಾ ವರ್ಮಾ ಅವರು ಪಾಲಿಕೆ ಮಂಡಳಿ ಸಭೆಯಲ್ಲಿ ವಂದೇ ಮಾತರಂ ಹಾಡಬೇಕು ಎಂದು ಕಡ್ಡಾಯಗೊಳಿಸಿದ ಬಿಜೆಪಿ ಮೇಯರ್ ಆದೇಶ ರದ್ದುಗೊಳಿಸಿರುವುದಕ್ಕೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಆಕ್ರೋಶ ವ್ಯಕ್ತಪಡಿಸಿದ್ದು, ವಂದೇ ಮಾತರಂಗೆ ಗೌರವ ನೀಡದೆ, ಉಗ್ರ ಅಫ್ಜಲ್ ಗುರುವನ್ನು ಗೌರವಿಸುತ್ತೀರಾ ಎಂದು ಪ್ರಶ್ನಿಸಿದ್ದಾರೆ.

ವಂದೇ ಮಾತರಂ ಎಂದರೆ ತಾಯಿಗೆ ವಂದನೆ, ದೇಶಕ್ಕೆ ವಂದನೆ ಎಂದು ಅರ್ಥ. ಆದರೆ ತಾಯಿಗೆ ವಂದನೆ ಸಲ್ಲಿಸಲು ಆಗುವುದಿಲ್ಲ ಎನ್ನುತ್ತೀರಲ್ಲ ನಿಮ್ಮ ಸಮಸ್ಯೆಯಾದರೂ ಏನು? ತಾಯಿಯನ್ನು ವಂದಿಸದೆ ಅಫ್ಜಲ್ ಗುರುವಿಗೆ ವಂದನೆ ಸಲ್ಲಿಸುತ್ತೀರಾ ಎಂದು ದೆಹಲಿಯಲ್ಲಿ ವಿಶ್ವ ಹಿಂದೂ ಪರಿಷತ್ ಮುಖಂಡ ಅಶೋಕ್ ಸಿಂಘಾಲ್ ಅವರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಛಾಟಿ ಬೀಸಿದ್ದಾರೆ.

ಮಾತೃಭೂಮಿಯನ್ನು ಗೌರವಿಸುವುದು ಪ್ರತಿ ಭಾರತೀಯನ ಕರ್ತವ್ಯ. ಬಣ್ಣ, ಜಾತಿ, ಧರ್ಮದ ಹೊರತಾಗಿಯೂ ದೇಶದ ಎಲ್ಲರೂ ರಾಷ್ಟ್ರವನ್ನು ಗೌರವಿಸಬೇಕು ಎಂದು ಕರೆ ನೀಡಿದರು.

ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಮೇಯರ್ ಆಡಳಿತದಲ್ಲಿದ್ದಾಗ ಸಭೆ ವೇಳೆ ವಂದೇ ಮಾತರಂ ಕಡ್ಡಾಯಗೊಳಿಸಿದ್ದರು. ಆದರೆ ಇತ್ತೀಚೆಗೆ ಅಧಿಕಾರ ವಹಿಸಿಕೊಂಡ ಸುನಿತಾ ವರ್ಮಾ ಅವರು ವಂದೇ ಮಾತರಂ ಹಾಡುವ ಆದೇಶ ರದ್ದುಗೊಳಿಸಿದ್ದರು.

  • Share On Facebook
  • Tweet It


- Advertisement -


Trending Now
42 ಕೋಟಿ ಮನೆಯಲ್ಲಿ ಸಿಕ್ಕಿದ್ದ ಅಂಬಿಕಾಪತಿ ಸಾವಿನ ಬಗ್ಗೆ ಕೆಂಪಣ್ಣ ಹೇಳಿದ್ದೇನು?
Tulunadu News November 28, 2023
ಕಾಂತಾರಾ - 1 ತುಳು ಭಾಷೆಗೆ ಡಬ್ ಆಗಲ್ವಾ?
Tulunadu News November 28, 2023
Leave A Reply

  • Recent Posts

    • 42 ಕೋಟಿ ಮನೆಯಲ್ಲಿ ಸಿಕ್ಕಿದ್ದ ಅಂಬಿಕಾಪತಿ ಸಾವಿನ ಬಗ್ಗೆ ಕೆಂಪಣ್ಣ ಹೇಳಿದ್ದೇನು?
    • ಕಾಂತಾರಾ - 1 ತುಳು ಭಾಷೆಗೆ ಡಬ್ ಆಗಲ್ವಾ?
    • ಮೀನಿನ ರೇಟ್ ಜಾಸ್ತಿ ಆಗಲು ಏನು ಕಾರಣ ಗೊತ್ತಾ?
    • ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ!
    • ದುಬಾರಿ ಗಿಫ್ಟ್ ಸಿಗದ ಕೋಪ, ಹೆಂಡತಿ ಹೊಡೆದು ಗಂಡ ಮೃತ್ಯು!
    • ಜನಪ್ರತಿನಿಧಿಗಳು ಅಧಿಕಾರಿಗಳಿಗೆ ಜೋರು ಮಾಡಬಾರದಾ?
    • ಸರಕಾರಕ್ಕೆ ಶಾಲೆಯಲ್ಲಿ ಶಿಕ್ಷಣಕ್ಕಿಂತ ಆಹಾರವೇ ಮುಖ್ಯವಾಯಿತೇ!
    • ಬಸ್ ಕಂಡಕ್ಟರ್ ಗೆ ಚಾಕು ಹಾಕಿದವನ ಕಾಲಿಗೆ ಶೂಟ್ ಮಾಡಿ ಬಂಧಿಸಿದ ಯುಪಿ ಪೊಲೀಸರು
    • ಚೀನಾದಲ್ಲಿ ಮತ್ತೊಂದು ಸೋಂಕು, ಎಚ್ಚರವಹಿಸಲು ಭಾರತ ನಿರ್ಧಾರ
    • ಗಾಂಧಿ ಕುಟುಂಬದ ಭರ್ತಡೇ ದಿನ ಕ್ರಿಕೆಟ್ ಮ್ಯಾಚ್ ಇದ್ರೆ ಭಾರತ ಸೋಲುತ್ತೆ - ಅಸ್ಸಾಂ ಸಿಎಂ
  • Popular Posts

    • 1
      42 ಕೋಟಿ ಮನೆಯಲ್ಲಿ ಸಿಕ್ಕಿದ್ದ ಅಂಬಿಕಾಪತಿ ಸಾವಿನ ಬಗ್ಗೆ ಕೆಂಪಣ್ಣ ಹೇಳಿದ್ದೇನು?
    • 2
      ಕಾಂತಾರಾ - 1 ತುಳು ಭಾಷೆಗೆ ಡಬ್ ಆಗಲ್ವಾ?
    • 3
      ಮೀನಿನ ರೇಟ್ ಜಾಸ್ತಿ ಆಗಲು ಏನು ಕಾರಣ ಗೊತ್ತಾ?
    • 4
      ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ!
    • 5
      ದುಬಾರಿ ಗಿಫ್ಟ್ ಸಿಗದ ಕೋಪ, ಹೆಂಡತಿ ಹೊಡೆದು ಗಂಡ ಮೃತ್ಯು!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search