• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ

ದೇಶ ದ್ರೋಹಿ ಫಾರೂಕ್ ಅಬ್ದುಲ್ಲಾನನ್ನು ಕರೆಸಿ, ಅದ್ಯಾವ ಬಿಟ್ಟಿ ಪ್ರಚಾರ ಪಡೆಯುವಿರಿ ದೇವೇಗೌಡರೇ?

ತೇಜಸ್ವಿ ಪ್ರತಾಪ Posted On December 10, 2017
0


0
Shares
  • Share On Facebook
  • Tweet It

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಬಾಯಿ ಬಿಟ್ಟರೇ ಬರೀ ದೇಶವಿರೋಧಿ ಹೇಳಿಕೆಗಳೇ ಹೊರಬೀಳುತ್ತವೇ. ದೇಶದ ಅನ್ನ ತಿಂದು, ದೇಶದ ಜನರು ಕಟ್ಟಿದ ತೆರಿಗೆ ಹಣದಲ್ಲಿ ರಕ್ಷಣೆ ಪಡೆಯುವ ಈತ ಕಾಶ್ಮೀರ ಪಾಕಿಸ್ತಾನಕ್ಕೆ ಸೇರಬೇಕು, ಕಾಶ್ಮೀರ ಪ್ರತ್ಯೇಕ ರಾಷ್ಟ್ರವಾಗಬೇಕು ಎಂದು ಸದಾ ದೇಶದ ವಿರುದ್ಧ ಹಲ್ಲುಮಸೆಯುತ್ತಾ, ಬೆಂಕಿ ಹಚ್ಚುವ ಕಾರ್ಯ ಮಾಡುತ್ತಾನೆ. ಆದರೆ ಇಂತಹ ರಾಷ್ಟ್ರವಿರೋಧಿಯನ್ನು, ರಾಷ್ಟ್ರದ ರಕ್ಷಣೆಗೆ ಸವಾಲಾಗಿ ಪರಿಣಮಿಸಿರುವ ದುರುಳನನ್ನು ಕರ್ನಾಟಕದ ಮಣ್ಣಿನ ಮಗ ಮಾಜಿ ಪ್ರಧಾನಿ ದೇವೇಗೌಡರು ತಮ್ಮ ಕುಟುಂಬದ ಜೆಡಿಎಸ್ ಪಕ್ಷದ ಪ್ರಚಾರಕ್ಕೆ ಕರೆಸುತ್ತಿದ್ದಾರೆ. ಇದೇ ಅಲ್ಲವೇ ದೇಶಕ್ಕೆ, ರಾಜ್ಯಕ್ಕೆ ಎದುರಾಗಿರುವ ಕಂಟಕ.

ದೇವೇಗೌಡರಿಗೆ ರಾಷ್ಟ್ರ ರಾಜಕಾರಣದಲ್ಲಿ ಮೆರೆದ ಹಲವು ಧೈತ್ಯ ಮುಖಂಡರ ಆತ್ಮೀಯತೆ ಇದೆ. ಆದರೆ ತುಮಕೂರಿನಲ್ಲಿ ನಡೆಯುತ್ತಿರುವ ಜೆಡಿಎಸ್ ಸಮಾವೇಶದಲ್ಲಿ ಅಲ್ಪಸಂಖ್ಯಾತರ ಮತ ಸೆಳೆಯುವ ಉದ್ದೇಶಕ್ಕಾಗಿ ಇದೆಂತಾ ದುರುದ್ದೇಶಕ್ಕೆ ಕೈ ಹಾಕಿದ್ದೀರಿ?. ರಾಜಕಾರಣಕ್ಕಾಗಿ ದೇಶದ ಹಿತವನ್ನೇ ಬಲಿ ನೀಡುವ ವ್ಯಕ್ತಿಯನ್ನು ಕರೆಸಿ ಬಿಟ್ಟಿ ಪ್ರಚಾರ ಪಡೆಯುವ ಧೈನೆಸಿ ಸ್ಥಿತಿ ಯಾಕೇ ದೇವೇಗೌಡರೇ?.

ಕೇವಲ ಮುಸ್ಲಿಮರ ಮತಕ್ಕಾಗಿ ದೇಶದ ವಿರುದ್ಧ ಷಡ್ಯಂತ್ರ ಹೂಡುವ ವ್ಯಕ್ತಿಯನ್ನು ಕರೆಸಿ ಮತ ಬೇಡುವ ದರ್ದು ಏನಿತ್ತು ಗೌಡರೇ?. ನೀವು ಹಿಂದೂ ರಾಷ್ಟ್ರವಾಗಲು ಬಿಡುವುದಿಲ್ಲ ಎಂದು ಹೇಳಿದಾಗಲೇ ಜನರು ನಿಮಗೆ ನೀಡಿದ ಪ್ರತಿಕ್ರಿಯೆ ನೋಡಿಯಾದರೂ ಸುಮ್ಮನಿರಬೇಕಿತ್ತು. ಫಾರೂಕ್ ಅಬ್ದುಲ್ಲಾನಂತಹವನನ್ನು ಕರೆಸಿ ಮತ ಬೇಡುತ್ತೀರಾದರೇ ನಿಮಗೆ ನಿಮ್ಮ ಮೇಲೆ ಭರವಸೆ ಇಲ್ಲ ಎಂದಾಯಿತಲ್ಲವೇ?

ರಾಷ್ಟ್ರಗೀತೆ ಹೇಳಲು ಹಿಂಜರೆಯುವ, ದೇಶದ ಧ್ವಜಕ್ಕೆ ಗೌರವ ನೀಡದೆ ಅಪಮಾನ ಮಾಡುವ, ದೇಶದ ಏಕತೆಯನ್ನೇ ಪ್ರಶ್ನಿಸುವ, ದೇಶದ ಗಡಿ ಕಾಯುವ ಸೈನಿಕರನ್ನು ಹೀಯಾಳಿಸುವ ಅಬ್ದುಲ್ಲಾನಂತರ ದೇಶದ್ರೋಹಿಯನ್ನು ನೀವು ಬೆಂಬಲಿಸಿದಂತಾಯಿತಲ್ಲವೇ ದೇವೇಗೌಡರೇ. ಅವರನ್ನು ಕರೆಸಿ ಸಮಾವೇಶ ಮಾಡುತ್ತೀರಿ ಎಂದ ಮೇಲೆ ನೀವು ಅವರ ನಿಲುವಿಗೆ ಬೆಂಬಲಿಸುತ್ತೀರಿ ಎಂದಾಯಿತಲ್ಲವೇ?

ರಾಷ್ಟ್ರ, ರಾಜ್ಯ ರಾಜಕಾರಣದಲ್ಲಿರುವ ನಿಮಗೆ ಕಾಶ್ಮೀರದಲ್ಲಿ ಬೆಂಕಿ ಹಚ್ಚಿ ಪಾಕಿಸ್ತಾನವನ್ನು ಮಣಿಸುವ ತಾಕತ್ತು ಭಾರತಕ್ಕೆ ಇಲ್ಲ ಎನ್ನುವ, ಪಾಕ್ ಆಕ್ರಮಿತ ಕಾಶ್ಮೀರ ಪಾಕಿಸ್ತಾನಕ್ಕೆ ಸೇರುತ್ತದೆ ಎನ್ನುವನನ್ನು ತಂದು ಪ್ರಚಾರ ಪಡೆಯುವ ನಿಮ್ಮ ಈ ನಿರ್ಧಾರ ಅದೆಷ್ಟು ದೇಶ ಭಕ್ತರ ಮನಸ್ಸಿಗೆ ಘಾಸಿ ಮಾಡಬಹುದು ಎಂಬ ಸಣ್ಣ ಪರಿಜ್ಞಾನವೂ ಇಲ್ಲದೇ ಹೋಯಿತೇ?. ಇಂತಹ ದೇಶವಿರೋಧಿಯನ್ನು ಬೆಂಬಲಿಸುವ ಮೂಲಕ ಅದ್ಯಾವ ಸಾಧನೆಯನ್ನು ನೀವು ಮಾಡಲು ಹೊರಟಿದ್ದೀರಿ ಎಂಬ ಪ್ರಶ್ನೆಗೆ ಯಾವ ಉತ್ತರ ನೀಡುತ್ತೀರಿ?.

ಮತಕ್ಕಾಗಿ, ಅಧಿಕಾರಕ್ಕಾಗಿ ದೇವೇಗೌಡರು ಯಾವುದೇ ಸ್ಥಾನಕ್ಕೆ ಇಳಿಯುತ್ತಾರೆ ಎಂಬ ಮಾತಿಗೆ ನೀವು ಪ್ರೇರಣೆ ನೀಡುವುದು ಬೇಡ. ಮತಯಾಚಿಸಲು, ಮತದಾರರನ್ನು ಸೆಳೆಯಲು ಹಲವು ಮಾರ್ಗಗಳಿಗೆ ಅದೆಲ್ಲವನ್ನು ಬಿಟ್ಟು ದೇಶದ್ರೋಹಿಯನ್ನು ಕರೆಸಿ ಮತ ಬೇಡುವ ಹೀನ ಸ್ಥಿತಿಗೆ ಇಳಿಯಬೇಡಿ.. ದೇಶದ್ರೋಹಿಯನ್ನು ಬೆಂಬಲಿಸಲು ಅಲ್ಪಸಂಖ್ಯಾತರೇನು ಮಳ್ಳರಲ್ಲ.

0
Shares
  • Share On Facebook
  • Tweet It




Trending Now
ಮಹಾನಗರ ಪಾಲಿಕೆ ಮೇ 1ರಿಂದ ನೀರಿನ ರೇಷನಿಂಗ್ ಘೋಷಣೆ!
ತೇಜಸ್ವಿ ಪ್ರತಾಪ April 27, 2026
ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
ತೇಜಸ್ವಿ ಪ್ರತಾಪ April 14, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮಹಾನಗರ ಪಾಲಿಕೆ ಮೇ 1ರಿಂದ ನೀರಿನ ರೇಷನಿಂಗ್ ಘೋಷಣೆ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
    • ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಸಲ್ಲಿಸಿದ ನಟ!
  • Popular Posts

    • 1
      ಮಹಾನಗರ ಪಾಲಿಕೆ ಮೇ 1ರಿಂದ ನೀರಿನ ರೇಷನಿಂಗ್ ಘೋಷಣೆ!

  • Privacy Policy
  • Contact
© Tulunadu Infomedia.

Press enter/return to begin your search