• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ

ಪರೇಶನ ಸಾವಿನ ತನಿಖೆ ಸಿಬಿಐಗೆ ವಹಿಸಲು ಇಷ್ಟೆಲ್ಲ ಆಗಬೇಕಿತ್ತೇ ಸಿಎಂ ಸಿದ್ದರಾಮಯ್ಯ?

-ವಿಶಾಲ್ ಗೌಡ, ಕುಶಾಲನಗರ Posted On December 14, 2017
0


0
Shares
  • Share On Facebook
  • Tweet It

ಪರೇಶ್ ಮೇಸ್ತ

ಹೊನ್ನಾವರದ ಅಮಾಯಕ ಅಪ್ಪಟ್ಟ ಹಿಂದೂ ಯುವಕ. ಈತ ಡಿಸೆಂಬರ್ 6ರಂದು ನಡೆದ ಗಲಭೆಯಂದು ಕಾಣೆಯಾಗುತ್ತಾನೆ. ಅಂದು ಸಂಜೆ ಅಜಾದ್ ಅಣ್ಣಿಗೇರಿ ಎಂಬ ದುರುಳ ಮತ್ತು ಕೆಲ ಮುಸ್ಲಿಂ ಯುವಕರು ಲಾಂಗ್ ಮಚ್ಚು, ಹಿಡಿದು ರಸ್ತೆಯಲ್ಲಿ ಅಡ್ಡಾಡಿರುವ ವಿಡಿಯೋಗಳು ಹರಿದಾಡಿವೆ. ಡಿಸೆಂಬರ್ 8ರಂದು ಆತನ ಶವ ಕೆರೆಯಲ್ಲಿ ಪತ್ತೆಯಾಗುತ್ತದೆ.

ನಂತರ ಶಾಂತಿಪ್ರಿಯ ಹೊನ್ನಾವರ, ಕುಮಟಾ, ಶಿರಸಿಯಲ್ಲಿ ಹಿಂದೂಗಳು ಬೀದಿಗೆ ಇಳಿಯುತ್ತಾರೆ. ಸರ್ಕಾರ ಮತ್ತದೆ ಕ್ಲೀನ್ ಚೀಟ್ ಕೊಡುವ, ಸಹಜ ಸಾವು ಎಂಬ ತಲೆಬುಡವಿಲ್ಲದ ವರದಿ ಸಿದ್ಧಪಡಿಸುತ್ತದೆ. ಆತನದ್ದು ಸಹಜ ಸಾವು ಎನ್ನುತ್ತದೆ. ಆದರೆ ಇದೀಗ ಸಿಬಿಐ ತನಿಖೆಗೆ ಪರೇಶ್ ಮೇಸ್ತಾ ಸಾವಿನ ಪ್ರಕರಣದ ತನಿಖೆ ವಹಿಸಲಾಗಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯಗೆ ಕೆಲವು ಪ್ರಶ್ನೆಗಳು ಕೇಳಲೇಬೇಕು.

*ಪರೇಶ್ ಮೇಸ್ತ ಸಾವಿನ ನಂತರ ಗಲಭೆ ನಿಯಂತ್ರಿಸಲು ಸರ್ಕಾರಕ್ಕೆ ತಾಕತ್ತು ಇರಲಿಲ್ಲವೇ?

*ಮೇಸ್ತ ಹೆಣ ಸಿಕ್ಕಿದ್ದ ಸುದ್ದಿ ಬಚ್ಚಿಟ್ಟು ಕಾರ್ಯಕ್ರಮ ಮಾಡುವ ಹೀನ ಮನಸ್ಥಿತಿಗೆ ನಿಮ್ಮ ಸರ್ಕಾರವೇಕೆ ಇಳಿಯಿತು. ಗಲಭೆ ಸೃಷ್ಟಿಯಾಗುತ್ತದೆ ಎಂಬ ಕನಸೇನಾದರೂ ಆಡಳಿತಾಂಗಕ್ಕೆ ಬಿದ್ದಿತ್ತಾ?

*ಗಲಭೆ ಕುಮಟಾ, ಶಿರಸಿ, ಕಾರವಾರ ಎನ್ನುತ್ತಾ ಇಡೀ ಉತ್ತರ ಕನ್ನಡ ಜಿಲ್ಲೆಗೆ ಹರಡುವುದನ್ನು ನಿಯಂತ್ರಿಸಲು ಅದೇಕೇ ಹಿಂದೇಟು ಹಾಕಲಾಯಿತು?

* ಮಾಧ್ಯಮಗಳಿಂದ ಮೇಸ್ತ ಸಾವಿನ ಸುದ್ದಿ ದೂರವಿಡಲು ವ್ಯವಸ್ಥಿತವಾಗಿ ರವಿ ಬೆಳಗೆರೆ ಅವರನ್ನು ಆತುರದಲ್ಲಿ ಬಂಧಿಸಲಾಯಿತೇ?

* ಫೊರೇನಿಕ್ಸ್ ವರದಿಯನ್ನು, ಸಾಮಾಜಿಕ ಜಾಲತಾಣಗಳು, ಹಿಂದೂಪರ ಸಂಘಟನೆಗಳು ಮತ್ತು ಹಿಂದೂ ಮುಖಂಡರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವ ಧಾವಂತವೇನಿತ್ತು?ಜಿಲ್ಲಾ ಪೊಲೀಸ್ ಇಲಾಖೆ ತನ್ನ ಅಂತಸತ್ವವೇ ಕಳೆದುಕೊಂಡಂತೆ ಏಕೆ ವರ್ತಿಸಿತು?.

* ಫೊರೇನಿಕ್ಸ್ ವರದಿಯನ್ನು ಯಾರೋ ಕೇಳಿದ ಪ್ರಶ್ನೆಗಳಿಗೆ ತಕ್ಕಂತೆ ಪ್ರಶ್ನೋತ್ತರ ಮಾಲೆ ತಯಾರಿಸಿ ಬಿಡುಗಡೆ ಮಾಡುವ ಅಗತ್ಯವೇನಿತ್ತು?  ನಾವು ತುಂಬಾ ಸಾಚಾ ಎಂಬುದನ್ನು ತೋರಿಸುವುದಕ್ಕೋ?

* ಒಂದೆಡೆ ಮರಣೋತ್ತರ ಪರೀಕ್ಷೆ ವರದಿ ಬಿಡುಗಡೆ ಮಾಡಲಾಗುತ್ತೆ. ಮತ್ತೊಂದೆಡೆ ಮೇಸ್ತಾ ಹತ್ಯೆ ಕುರಿತು ತನಿಖೆಯಲ್ಲಿ ಕೆಲ ಆರೋಪಿಗಳನ್ನು ಬಂಧಿಸಲಾಗಿದೆ ಎನ್ನುತ್ತಾರೆ ಪೊಲೀಸರು. ಹಾಗಾದ್ರೆ ವರದಿ ಸುಳ್ಳೋ? ಪೊಲೀಸರು ಬಂಧಿಸಿದ್ದೇನೆ ಎಂದು ಹೇಳುತ್ತಿರುವುದು ಸುಳ್ಳೋ?

*ಇದೀಗ ರಾಜ್ಯದ ಪೊಲೀಸರ ಆತ್ಮಸ್ಥೈರ್ಯ ಕಸಿಯುವಂತೆ , ಇಷ್ಟೆಲ್ಲಾ ಗಲಭೆ ನಡೆದ ನಂತರ ಸಿಬಿಐ ತನಿಖೆಗೆ ವಹಿಸಿದ್ದೇವೆ ಎಂಬ ದುರುಳ ನೀತಿಯನ್ನೇಕೆ ರೂಪಿಸಿದ್ದೀರಿ.

* ಪರೇಶ್ ಮೇಸ್ತಾ ಹತ್ಯೆ ಪ್ರಕರಣವನ್ನು ಯಶಸ್ವಿಯಾಗಿ ಮುಚ್ಚಿಹಾಕಿ, ಎಲ್ಲ ಮಾಹಿತಿಗಳನ್ನು ನಾಶ ಮಾಡಿ, ಇದೀಗ ಸಿಬಿಐಗೆ ವಹಿಸಿದರೇ ನ್ಯಾಯ ಸಿಗುತ್ತದೆಯೇ?. ಆ ಅಮಾಯಕ ಹಿಂದೂವಿನ ಕುಟುಂಬಕ್ಕೆ ನ್ಯಾಯ ದೊರೆಯುತ್ತದೆಯೇ?

*ಇಷ್ಟೆಲ್ಲಾ ವರದಿಗಳು, ಹೋರಾಟ, ಪ್ರತಿಭಟನೆ, ರಾಜ್ಯ ಸರ್ಕಾರದ ತನಿಖೆಗಳು ಆದ ನಂತರ ಸಿಬಿಐಗೆ ವಹಿಸಿದರೇ,ಸೂಕ್ತನ್ಯಾಯ ಸಿಗುವ ಅನುಮಾನ ಮೂಡುತ್ತೇ?. ಕೆಲ ಸರ್ಕಾರದ ಅಡಿಯಾಳುಗಳು ಸಾಕ್ಷ್ಯ ನಾಶ ಮಾಡಿರುವ ಶಂಕೆಯೂ ಇದೆ. ಇಷ್ಟೆಲ್ಲಾ ಆದ ನಂತರವೂ ಮತ್ತೆ ಮೇಸ್ತ ಸಾವಿಗೆ ನ್ಯಾಯ ಹುಡುಕುವುದು ಕಷ್ಟವಾಗಬಹುದಲ್ಲವೇ?

ಇಂತಹ ಹಲವು ಪ್ರಶ್ನೆಗಳ ಮಧ್ಯೆ ನಿದ್ದೆಯಲ್ಲಿರುವ ಸಿದ್ದರಾಮಯ್ಯ ಸರ್ಕಾರ ತನ್ನ ಕ್ಲೀನ್ ಚೀಟ್ ಕೊಡುವ ಹೀನ ಕೃತ್ಯಕ್ಕೆ ಇಳಿಯುತ್ತದೆ. ಅದಕ್ಕೆ ಸಾಕ್ಷಿ ಎಂಬಂತೆ ಸರ್ಕಾರದ ಅಡಿಯಾಳಾಗಿ ವರ್ತಿಸಿದ ಅಧಿಕಾರಿಗಳು ಮತ್ತು ವೈದ್ಯರ ಕೆಲವು ಇಬ್ಬಂದಿತನಗಳು ಸಾಕ್ಷಿಯಾಗಿ ನಿಲ್ಲುತ್ತವೆ. ಎಲ್ಲ ಪ್ರಶ್ನೆಗಳು ಸಿದ್ದರಾಮಯ್ಯ ಸರ್ಕಾರ ಯಶಸ್ವಿಯಾಗಿ ಮೇಸ್ತ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದೇ ಎಂದರ್ಥ. ಅಷ್ಟೇ ಮತ್ತೇನಲ್ಲ.

 

0
Shares
  • Share On Facebook
  • Tweet It


- Advertisement -


Trending Now
ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಅರ್ಜಿ: ಅರುಣ್ ಶ್ಯಾಮ್ ವಾದ...
-ವಿಶಾಲ್ ಗೌಡ, ಕುಶಾಲನಗರ June 20, 2025
ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
-ವಿಶಾಲ್ ಗೌಡ, ಕುಶಾಲನಗರ June 18, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಅರ್ಜಿ: ಅರುಣ್ ಶ್ಯಾಮ್ ವಾದ...
    • ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
    • ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
    • ಭೀಕರ ರಸ್ತೆ ಅಪಘಾತ- ದಕ ಜಿಲ್ಲಾ NSUI ಉಪಾಧ್ಯಕ್ಷ ಸೇರಿ ಇಬ್ಬರು ಯುವಕರು ಸಾವು!
    • ವಿಮಾನ ದುರಂತ ಸ್ಥಳದಲ್ಲಿ ಸಿಕ್ಕಿವೆ ಸಾಕಷ್ಟು ಚಿನ್ನ, ಹಣ, ಭಗವದ್ಗೀತೆ!
    • ಲಂಡನ್ನಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಕೊನೆಯ ಕ್ಷಣದಲ್ಲಿ ಪ್ರಯಾಣ ರದ್ದು!
    • ಗಿರೀಶ್ ಭಾರದ್ವಾಜ್ ಮನವಿಗೆ ಸ್ಪಂದನೆ: ಹಿಂದೂ ಮುಖಂಡರ ರಾತ್ರಿ ಮನೆ ಭೇಟಿಯ ಬಗ್ಗೆ ವರದಿ ಕೇಳಿದ ಪೊಲೀಸ್ ದೂರು ಪ್ರಾಧಿಕಾರ!
    • ಹಿಂದೂಗಳು 3 ಮಕ್ಕಳನ್ನು ಹೆರಲು ಕೊಪ್ಪಳದಲ್ಲಿ ತೊಗಾಡಿಯಾ ಕರೆ!
    • ಬೈಕ್ ಟ್ಯಾಕ್ಸಿ ಬ್ಯಾನ್ ನಿಂದ ಬೆಂಗಳೂರಿನ 1 ಲಕ್ಷ ಯುವಕರ ಉದ್ಯೋಗಕ್ಕೆ ಕುತ್ತು!
    • ಯುಪಿಐನಲ್ಲಿ ಇನ್ನು ಹಣ ವರ್ಗಾವಣೆಗೆ 15 ಸೆಕೆಂಡ್ ಸಾಕು!
  • Popular Posts

    • 1
      ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಅರ್ಜಿ: ಅರುಣ್ ಶ್ಯಾಮ್ ವಾದ...
    • 2
      ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
    • 3
      ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
    • 4
      ಭೀಕರ ರಸ್ತೆ ಅಪಘಾತ- ದಕ ಜಿಲ್ಲಾ NSUI ಉಪಾಧ್ಯಕ್ಷ ಸೇರಿ ಇಬ್ಬರು ಯುವಕರು ಸಾವು!
    • 5
      ವಿಮಾನ ದುರಂತ ಸ್ಥಳದಲ್ಲಿ ಸಿಕ್ಕಿವೆ ಸಾಕಷ್ಟು ಚಿನ್ನ, ಹಣ, ಭಗವದ್ಗೀತೆ!

  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search