• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಕಾಂಗ್ರೆಸ್ ಕನಸಿಗೆ ಎಳ್ಳುನೀರು ಮೋದಿ ಒರೆಸಿದರು ಜನರ ಕಣ್ಣೀರು..!

ದಿವ್ಯಾ ಕಾಸರಗೋಡು Posted On December 19, 2017
0


0
Shares
  • Share On Facebook
  • Tweet It

ಗುಜರಾತ್, ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ ನಂತರ ಬಿಜೆಪಿ ತಳಮಟ್ಟದ ಕಾರ್ಯಕರ್ತರಿಂದ ಹಿಡಿದು ರಾಷ್ಟ್ರಮಟ್ಟದ ನಾಯಕರು ವಿಜಯೋತ್ಸವದಲ್ಲಿ ಮಿಂದೆದ್ದರು. ಅತ್ತ ಗೆಲುವಿನ ಕಹಳೆ ಮೊಳಗುತ್ತಲೇ ದೆಹಲಿಯಲ್ಲಿ ಅಮಿತ್ ಶಾ ಸಹಸ್ರಾರು ಕಾರ್ಯಕರ್ತರ ಮಧ್ಯೆ ನಿಂತು ಸಿಹಿ ಹಂಚಿ ಸಂಭ್ರಮಿಸಿದರು. ಆದರೆ ಪ್ರಧಾನ ಸೇವಕ ಪ್ರಜಾಪ್ರಭುತ್ವದ ದೇಗುಲದಲ್ಲಿ ವಿರೋಧ ಪಕ್ಷಗಳ ಮಾತು ಆಲಿಸುತ್ತಿದ್ದರು. ಅದೇ ಅಲ್ಲವೇ ಪ್ರಧಾನ ಸೇವಕನ ಲಕ್ಷಣ.

ಇಡೀ ರಾಷ್ಟ್ರಾಧ್ಯಂತ ಬಿಜೆಪಿ ಮುಖಂಡರು ವಿಜಯದ ಗುಂಗಿನಲ್ಲಿ ನಾನಾ ಲೆಕ್ಕಾಚಾರ ಹಾಕುತ್ತಾ ಕುಳಿತ್ತಿದ್ದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾತ್ರ ಕಾರ್ಯಕರ್ತರಿಗೆ ಒಂದೆರಡು ಸ್ಫೂರ್ತಿಯ ಮಾತುಗಳನ್ನಾಡಿ, ಮತದಾರರಿಗೆ ವಂದನೆ ಸಲ್ಲಿಸಿ ವಿಜಯದ ಸಂಭ್ರವನ್ನು ಮುಗಿಸಿದ್ದರು. ಗೆದ್ದ ಖುಷಿಯಲ್ಲಿ ಅವರು ಪಕ್ಷದ ಮುಖಂಡರ ಜತೆ ಪಾರ್ಟಿ ಮಾಡದೇ ನೊಂದವರ ಕಣ್ಣೀರು ಒರೆಸಲು ತಡರಾತ್ರಿಯೇ ದೆಹಲಿ ಬಿಟ್ಟಿದ್ದರು. ಅತ್ತ ಕಾಂಗ್ರೆಸ್ ಮುಕ್ತ ಭಾರತಕ್ಕೆ ಮುನ್ನುಡಿ ಬರೆದು, ಇತ್ತ ಕೇರಳ, ತಮಿಳುನಾಡು, ಲಕ್ಷದ್ವೀಪದಲ್ಲಿ ಓಖಿ ಸಂಕಷ್ಟಕ್ಕೆ ಒಳಗಾಗಿದ್ದ ಜನರ ಕಣ್ಣೀರು ಒರೆಸಲು ಮಂಗಳೂರಿನತ್ತ ಧಾವಿಸಿದ್ದರು.

ಸೋಮವಾರ ರಾತ್ರಿ ವಿಜಯದ ನುಡಿಗಳನ್ನಾಡಿದ ನರೇಂದ್ರ ಮೋದಿ ನೇರ ಓಖಿ ಚಂಡಮಾರುತ್ತದ ಹೊಡೆತಕ್ಕೆ ತತ್ತರಿಸಿದ ಲಕ್ಷಾಂತರ ಜನರ ಕಣ್ಣೀರು ಒರೆಸಲು ಕರಾವಳಿಯತ್ತ ನಡೆದಿದ್ದರು. ರಾತ್ರಿ 12 ಗಂಟೆಗೆ ಮಂಗಳೂರಿನ ಸರ್ಕಾರಿ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡುವ ಮೂಲಕ ಸರಳತೆ ಮೆರೆಯುವುದರೊಂದಿಗೆ, ನಾನು ಪ್ರಧಾನ ಸೇವಕ ಎಂಬುದನ್ನು ಸಾಬೀತು ಮಾಡಿದ್ದರು.

ನಿತ್ಯ ನಿದ್ರೆ ಬಿಟ್ಟು ವಿಜಯೋತ್ಸವದ ಗುಂಗಿನಲ್ಲಿ ಉಳಿಯದೇ ನೊಂದವರ ನೋವು, ನಲಿವು ಆಲಿಸಲು ಮುಂದಾಗಿದ್ದು, ಜನರ ಮನ ತಟ್ಟತ್ತದೆ ಎಂಬುದಕ್ಕೆ ಮೋದಿ ಸ್ವಾಗತಕ್ಕೆ ಮಂಗಳೂರಿನಲ್ಲಿ ರಾತ್ರಿ 12 ಗಂಟೆಗೆ ಸಹಸ್ರಾರು ಜನರು ಜಯಘೋಷಗಳೊಂದಿಗೆ ಸ್ವಾಗತಕ್ಕೆ ನಿಲ್ಲುತ್ತಾರೆ. ಹೆಣ್ಣು ಗಂಡು, ಯುವಕರು ಸೇರಿ ಜಯಘೋಷ ಮೊಳಗಿಸಿದ್ದೇ ಸಾಕ್ಷಿ.

ದೇಶದ ಸಮಸ್ಯೆಗಳನ್ನು ಚರ್ಚಿಸಬೇಕಾದ ಸಂಸತ್ ಅಧಿವೇಶನ ನಡೆಯುವ ವೇಳೆ ವಿದೇಶಿ ಯಾತ್ರೆಗೆ ಹೋಗುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಎದುರು ನಮ್ಮ ಹೆಮ್ಮೆಯ ಪ್ರಧಾನಿ ಮಾದರಿಯಾಗಿ ನಿಲ್ಲುತ್ತಾರೆ. ಇಂತಹ ಸಣ್ಣ ಸಂಗತಿಗಳು ದೇಶದ ಪ್ರಧಾನ ಸೇವಕ ನರೇಂದ್ರ ಮೋದಿ ಅವರ ಮೇಲಿನ ಅಭಿಮಾನವನ್ನು ಹೆಚ್ಚಿಸುತ್ತದೆ. ಅದೇ ಅಲ್ಲವೇ ಬಿಜೆಪಿಯನ್ನು ಭಾರತದಾದ್ಯಂತ ವಿಜಯದ ಕಹಳೆಯನ್ನು ಮೊಳಗಿಸಿದರೇ, ವಿಶ್ವಾದ್ಯಂತ ಭಾರತದ ತಾಕತ್ತನ್ನು ಬಿಂಬಿಸುತ್ತಿದೆ. ನೋವಿಗೆ ಮಿಡಿಯುವ ಪ್ರಧಾನ ಸೇವಕನನ್ನು ನಾವು ಬೆಂಬಲಿಸದೇ, ವಿದೇಶಕ್ಕೆ ಹೋಗಿ ಮಜಾ ಮಾಡಿ ಬರುವ ವ್ಯಕ್ತಿಯನ್ನು ನಾವು ಬೆಂಬಲಿಸಲಾದೀತೇ?

0
Shares
  • Share On Facebook
  • Tweet It




Trending Now
ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ವೇದವ್ಯಾಸ ಕಾಮತರಿಗೆ ಮನವಿ ಸಲ್ಲಿಸಿದ ಒಕ್ಕೂಟ
ದಿವ್ಯಾ ಕಾಸರಗೋಡು June 29, 2026
ಉಡುಪಿ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈಗೆ 3 ವರ್ಷ ಜೈಲು ಶಿಕ್ಷೆ!
ದಿವ್ಯಾ ಕಾಸರಗೋಡು June 26, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ವೇದವ್ಯಾಸ ಕಾಮತರಿಗೆ ಮನವಿ ಸಲ್ಲಿಸಿದ ಒಕ್ಕೂಟ
    • ಉಡುಪಿ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈಗೆ 3 ವರ್ಷ ಜೈಲು ಶಿಕ್ಷೆ!
    • ಕರ್ನಾಟಕದ ಪ್ರತಿಭೆ ದೀಕ್ಷಿತ್ ಅಮೀನ್‌ಗೆ ವಿಶ್ವ ಶಾಲಾ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಗೌರವ
    • Najlepsze bonusy i sloty w polskim kasynie online
    • ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್
    • ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
  • Popular Posts

    • 1
      ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ವೇದವ್ಯಾಸ ಕಾಮತರಿಗೆ ಮನವಿ ಸಲ್ಲಿಸಿದ ಒಕ್ಕೂಟ

  • Privacy Policy
  • Contact
© Tulunadu Infomedia.

Press enter/return to begin your search