• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಬಾಹ್ಯ ಸೌಂದರ್ಯಕ್ಕಿಂತ ಆಂತರ್ಯದ ಸೌಂದರ್ಯವೇ ಮುಖ್ಯ ಎನ್ನುತ್ತೆ ಈ ಮೊಟ್ಟೆ!

TNN Correspondent Posted On July 7, 2017


  • Share On Facebook
  • Tweet It

29 ದಾಟಿದರೆ ಇನ್ನು ಜನಾರ್ಧನನಿಗೆ ಮದುವೆಯಾಗುವುದು ಕಷ್ಟ, ಸನ್ಯಾಸಿಯಾಗುವ ಯೋಗವಿದೆ ಎಂದು ಹೇಳುವ ಜೋತಿಷಿಗಳ ಮಾತಿನಿಂದ ಶುರುವಾಗುವ ಕಥೆ ಅಧ್ಭುತವಾಗಿ ಮುಂದೆ ಸಾಗುತ್ತದೆ. 28ರ ವಯಸ್ಸಿನಲ್ಲಿ ಹುಡುಗಿ ಸಿಗುವುದೇ ಕಷ್ಟ ಅಂತಹ ಸಂಧರ್ಭದಲ್ಲಿ ಬೋಳು ತಲೆಯ ನಾಯಕನಿಗೆ ಮದುವೆಯಾಗಲು ಹುಡುಗಿ ಸಿಗುವಳೆ ಅನ್ನೋದೇ ಚಿತ್ರದ ಕಥಾ ವಸ್ತು.
ಒಂದೆಡೆ ಮನೆ ಮನೆಗೆ ಹೋಗಿ ಹುಡುಗಿ ನೋಡಿ ಕಿತ್ತಳೆ ಹಣ್ಣಿನ ಜೂಸ್ ಕುಡಿಯೋದು ಬಿಟ್ರೆ ಹೆಣ್ಣು ಒಪ್ಪಿಕೊಳ್ಳುತ್ತಿಲ್ಲ ಎನ್ನುವ ತಲೆನೋವು ಜನಾರ್ಧನ ನ ಅಪ್ಪ ಅಮ್ಮನಿಗೆ. ಹೀಗೆ ನಾಯಕನಿಗೆ ಹೆಣ್ಣು ಹುಡುಕುವ ವಿಷಯದಲ್ಲೇ ಕಥೆ ಮುಂದುವರಿಯುತ್ತಾ ಸಾಗುತ್ತದೆ! ಹುಡುಗಿ ಸಿಗದೆ ಇದ್ದಾಗ ಜನಾರ್ಧನನಿಗೆ ಒಬ್ರೆ ಸ್ಪೂರ್ತಿ ಅದು ನಟ ಸಾರ್ವಭೌಮ ಡಾ. ರಾಜ್‌ಕುಮಾರ್. ಹಳೆಯ ರಾಜ್‌ಕುಮಾರ್ ಅವರ ಹಾಡುಗಳನ್ನು ಅಲ್ಲಲ್ಲಿ ಬಳಸಿರುವುದು ವಿಭಿನ್ನವಾಗಿ ಮೂಡಿ ಬಂದಿದೆ. ಹೀಗೆ ಸಿನಿಮಾದಲ್ಲಿ ನಾಯಕ ನಟ ತಾನಾಗಿಯೇ ಹುಡುಗಿಯನ್ನು ಹುಡುಕಿ ಕೊಳ್ಳುತ್ತಾನಾ ಇಲ್ಲ ಸನ್ಯಾಸಿಯಾಗುತ್ತಾನ ಅನ್ನೋದನ್ನ ನೀವು ಸಿನಿಮಾ ಮಂದಿರಕ್ಕೆ ಹೋಗಿ ನೋಡಬೇಕು!
ಚಿತ್ರದ ನಾಯಕ ಮತ್ತು ನಿರ್ದೇಶಕ ರಾಜ್ ಬಿ ಶೆಟ್ಟಿ ಅವರ ಈ ಪ್ರಯತ್ನಕ್ಕೆ ಭೇಷ ಅನ್ನಲೇ ಬೇಕು. ಒಂದು ಸಿನಿಮಾಗೆ ಎಷ್ಟು ವಿಷಯಗಳು ಬೇಕೋ ಅಷ್ಟೇ ವಿಷಯಗಳನ್ನು ತೋರಿಸುವ ಕೆಲಸಕ್ಕೆ ಕೈ ಹಾಕಿ ಯಶಸ್ವಿಯಾಗಿದ್ದಾರೆ ಅಂದ್ರೆ ತಪ್ಪಾಗದು. ಪ್ರವೀಣ್ ಶ್ರೀಯಾನ್ ಅವರ ಕ್ಯಾಮರ ಕೆಲಸ ಸಿನಿಮಾ ಚೆನ್ನಾಗಿ ಮೂಡಿ ಬರಲು ಸಹಕಾರಿಯಾಗಿದೆ. ಸಿನಿಮಾ ಕೆಲವು ಕಡೆ ನಿಧಾನ ಗತಿಯಲ್ಲಿ ಸಾಗುತ್ತಿದೆ ಎಂದು ಒಂದೊಮ್ಮೆ ಅನ್ನಿಸಿದರು ಅಲ್ಲಲಿ ಬರುವ ಹಾಸ್ಯದ ಸನ್ನಿವೇಶ ನಗೆಗಡಲಲ್ಲಿ ತೇಲಿಬಿಡುತ್ತದೆ. ಹೀಗೆ ಸಿನಿಮಾ ಸಾಗುವವಾಗ ಬರುವ ಹಿನ್ನಲೆ ಸಂಗೀತ ಮತ್ತು ಚಿತ್ರದ ಹಾಡುಗಳು ನಿಜಕ್ಕೂ ಚೆನ್ನಾಗಿ ಮೂಡಿಬಂದಿದೆ. ಮಿಧುನ್ ಮುಕುಂಧನ್ ನಾನು ಕನ್ನಡದ ಪ್ರತಿಭಾನ್ವಿತ ಸಂಗೀತ ನಿರ್ದೇಶಕ ಎಂದು ಎಲ್ಲರ ದೃಷ್ಟಿ ಅವ್ರನ್ನೇ ನೋಡುವ ಹಾಗೆ ಮಾಡಿದೆ.
ಚಿತ್ರದಲ್ಲಿ ಎಲ್ಲರ ಪಾತ್ರವು ಚೆನ್ನಾಗಿ ಮೂಡಿ ಬಂದಿದೆ. ಕಾಲೇಜ್ ನಲ್ಲಿ ಕೆಲಸ ಮಾಡುವ ಶ್ರೀನಿವಾಸ ಅವರ ಪಾತ್ರವಂತು ಅಧ್ಭುತ. ಹೀಗೆ ಪ್ರತಿ ಒಬ್ಬರ ಪಾತ್ರವು ನಿಮ್ಮನ್ನು ಆಕರ್ಷಿಸುವುದರಲ್ಲಿ ಎರಡು ಮಾತಿಲ್ಲ..  ಮ್ಯಾಂಗೋ ಪಿಕಲ್ ನಿರ್ಮಾಣದ ಈ ಸಿನಿಮಾವನ್ನು ನೋಡಿ ಲೂಸಿಯ ಪವನ್ ಕುಮಾರ್ ಕೈ ಜೋಡಿಸಿದ್ದು ಯಾವ ಕಾರಣಕ್ಕೆ ಅನ್ನೋದು ಈ ಚಿತ್ರ ಈಗ ಸಾಬೀತು ಪಡಿಸಿದೆ. ಒಟ್ಟಿನಲ್ಲಿ ಸಿನಿಮಾ ನಿಮ್ಮನ್ನು ಎರಡು ಘಂಟೆ ಐದು ನಿಮಿಷ ಮನೋರಂಜಿಸುವುದರಲ್ಲಿ ಎರಡು ಮಾತಿಲ್ಲ.
ರಾಜ್ ಶೆಟ್ಟಿ ಕಥೆ ಹೇಳಿ ಶಾರ್ಟ್ ಫಿಲ್ಮ್ ಮಾಡೋಣ ಎಂದು ಸುಹಾನ್ ಪ್ರಸಾದ್ ಗೆ ಹೇಳಿದಾಗ ‘ ಬೇಡ ರಾಜ್ ಇದನ್ನು ದೊಡ್ಡ ಮಟ್ಟದಲ್ಲೇ ಮಾಡೋಣ ಎಂದು ಹೇಳದ್ದಿದ್ದ್ರೆ ಈ ಸಿನಿಮಾ ಇವತ್ತು ಯೂಟ್ಯೂಬ್ನಲ್ಲಿ ಇರುತ್ತಿತ್ತು!!!
  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Tulunadu News May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search