• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಭದ್ರತೆಗೆ ಅಪಾಯ, ಮುಂಬೈ ಸೈಂಬಿಯೋಸಿಸ್ ಶಾಲೆಯಲ್ಲಿ ಬುರ್ಖಾ ನಿಷೇಧ

TNN Correspondent Posted On December 25, 2017
0


0
Shares
  • Share On Facebook
  • Tweet It

ಮುಂಬೈ: ಶಾಲೆಯಲ್ಲಿ ಬುರ್ಖಾ ಧರಿಸಿ ಹೊರಗಿನ ಯುವತಿಯರು ಪ್ರವೇಶ ಮಾಡುತ್ತಿರುವುದರಿಂದ ಶಾಲೆಯ ಭದ್ರತೆಗೆ ಅಪಾಯ ಎದುರಾಗಿದ್ದು, ವಿದ್ಯಾರ್ಥಿನಿಯರು ಬುರ್ಖಾ ಧರಿಸಿ ಶಾಲೆಗೆ ಬರುವುದನ್ನು ಮುಂಬೈನ ಸೈಂಬಿಯೋಸಿಸ್ ಶಾಲಾ ಆಡಳಿತ ಮಂಡಳಿ ಆದೇಶ ಹೊರಡಿಸಿದೆ.

ಬುರ್ಖಾ ನಿಷೇಧಿಸಿರುವ ಕುರಿತು ವಿದ್ಯಾರ್ಥಿನಿಯರ ಕುಟುಂಬಕ್ಕೆ ಪತ್ರ ಬರೆದಿರುವ ಶಾಲಾ ಆಡಳಿತ ಮಂಡಳಿ ‘ವಿದ್ಯಾರ್ಥಿನಿಯರೆಂದು ಹೇಳಿಕೊಂಡು, ಹೊರಗಿನ ಯುವತಿಯರು ಶಾಲೆ ಪ್ರವೇಶಿಸುತ್ತಿದ್ದಾರೆ. ಇದು ಶಾಲೆಯ ಭದ್ರತೆಗೆ ಅಪಾಯ ಒಡ್ಡಿದೆ. ಅಲ್ಲದೇ ಪೋಷಕರು ಬಂದಾಗ ವಿದ್ಯಾರ್ಥಿನಿಯರನ್ನು ಗುರುತಿಸಲು ಆಗದೇ ಹೆಣಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಶಾಲೆಯಲ್ಲಿ ಬುರ್ಖಾ ನಿಷೇಧಿಸಲು ಕಾರಣ ಎಂದು ಹೇಳಿದ್ದಾರೆ.

ಶಾಲೆಯಲ್ಲಿ ಮಾತ್ರ ಬುರ್ಖಾ ನಿಷೇಧಿಸಿದ್ದು, ಶಾಲೆ ಮುಗಿದ ತಕ್ಷಣ ವಿದ್ಯಾರ್ಥಿನಿಯರು ಬುರ್ಖಾ ಧರಿಸಬಹುದು. ಇತ್ತೀಚೆಗೆ ವಿದ್ಯಾರ್ಥಿನಿಯರ ಸಾಲಿನಲ್ಲಿ ಇಬ್ಬರು ಬುರ್ಖಾಧಾರಿಗಳು ಬಂದು ಕೂಡಿದ್ದರು. ಅವರ ಹೆಸರು, ಹಾಜರಾತಿ ಸಂಖ್ಯೆ ಕೇಳಲು ಹೋದಾಗ ಶಾಲೆಯಿಂದ ಓಡಿ ಹೋಗಿದ್ದಾರೆ. ಹೀಗೆ ಶಾಲೆಗೆ ಯಾರ್ಯಾರೋ ಬರಲು ಅವಕಾಶ ನೀಡುವ ಬುರ್ಖಾ ನಿಷೇಧಿಸಲಾಗಿದೆ. ಅದನ್ನು ಶಾಲೆ ಬಿಟ್ಟ ತಕ್ಷಣ ಧರಿಸಬಹುದು ಎಂದು ಶಾಲಾ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.

ನಾವು ಯಾವುದೇ ಧರ್ಮದ ಆಚರಣೆ ವಿರುದ್ಧವಲ್ಲ. ಕ್ಯಾಮೆರಾಕೆ ಮುಖ ಕಾಣದೇ ಭದ್ರತೆ ಪರಿಶೀಲನೆಗೆ ಸಮಸ್ಯೆಯಾಗುತ್ತಿದೆ. ಇದರಿಂದ ಸಮಸ್ಯೆಯಾಗುತ್ತಿದೆ. ಇದರಲ್ಲಿ ಧಾರ್ಮಿಕ ಕಾರಣಗಳನ್ನು ಹುಡುಕಬಾರದು. ಕೇವಲ ನಮ್ಮ ದಾಖಲೆಗಾಗಿ ಮತ್ತು ಶಾಲೆಯ ರಕ್ಷಣೆಗೆ ಮಾತ್ರ ಈ ನಿಯಮ ಜಾರಿ ತರಲಾಗಿದೆ ಎಂದು ಶಾಲೆ ಟ್ರಸ್ಟಿ ಕಮಲರಾಜ್ ತಿಳಿಸಿದ್ದಾರೆ.

0
Shares
  • Share On Facebook
  • Tweet It




Trending Now
ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
Tulunadu News March 27, 2026
ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
Tulunadu News March 20, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
    • ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಸಲ್ಲಿಸಿದ ನಟ!
    • ಅಕ್ರಮ 4 ಸಾವಿರ ಲೀಟರ್ ಡೀಸಿಲ್ ಬೆಳ್ತಂಗಡಿಯಲ್ಲಿ ಪತ್ತೆ!
    • ಕಳ್ಳತನ ನಡೆದ ಅರಣ್ಯಾಧಿಕಾರಿ ಮನೆ ಹಾಗೂ ನೆರೆಮನೆಗಳಲ್ಲಿ ಸಿಸಿಟಿವಿಗಳೂ ಇಲ್ಲ!
    • ಸಾಲ ಕೊಡಿಸುವ ಭರವಸೆ: ಕೋಟ್ಯಾಂತರ ರೂ ವಂಚನೆಯ ರೋಶನ್ ಸಲ್ದಾನ Case Update:
    • ಅಲಿ ಖಮೇನಿ ಹತ್ಯೆ: ಕರ್ನಾಟಕದ 'ಮಿನಿ ಇರಾನ್' ನಲ್ಲಿ 3 ದಿನ ಶೋಕಾಚಾರಣೆ!
    • ಇರಾನ್ ನಾಯಕ‌ ಅಲಿ ಖಮೇನಿ ಆತ್ಮಕ್ಕೆ ಶಾಂತಿ ಕೋರಿದ ಸಿಎಂ ಸಿದ್ದರಾಮಯ್ಯ
  • Popular Posts

    • 1
      ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!

  • Privacy Policy
  • Contact
© Tulunadu Infomedia.

Press enter/return to begin your search