• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಜಾಧವ್ ಅವರ ತಾಯಿ, ಹೆಂಡತಿಯನ್ನು ದೇಶಕ್ಕೆ ಕರೆಸಿ ಅವಮಾನ ಮಾಡಿದ ದುರುಳ ಪಾಕಿಸ್ತಾನ!

TNN Correspondent Posted On December 27, 2017
0


0
Shares
  • Share On Facebook
  • Tweet It

ದೆಹಲಿ: ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿಯನ್ನು ವಿನಾಕಾರಣ ಬಂಧಿಸಿ ಗಲ್ಲು ಶಿಕ್ಷೆ ವಿಧಿಸಿರುವ ಪಾಕಿಸ್ತಾನದ ಉದ್ಧಟತನ ಮುಂದುವರಿದಿದ್ದು, ಕುಲಭೂಷಣ ಜಾಧವ್ ಅವರನ್ನು ಪಾಕಿಸ್ತಾನಕ್ಕೆ ಕರೆಸಿಕೊಂಡು ಅವಮಾನ ಮಾಡಿದೆ.

ಜಾಧವ್ ಅವರ ಭೇಟಿಗೂ ಮುನ್ನ ಪಾಕಿಸ್ತಾನಿ ಅಧಿಕಾರಿಗಳು ಕುಲಭೂಷಣ ಅವರ ತಾಯಿ ಹಾಗೂ ಪತ್ನಿಯ ಸಿಂಧೂರ, ಮಂಗಳಸೂತ್ರ ಹಾಗೂ ಕೈಬಳೆಯನ್ನು ಬಲವಂತವಾಗಿ ಪಡೆದು ಕಳುಹಿಸಿದ್ದರು. ಅಲ್ಲದೆ ಭೇಟಿಗೂ ಮೊದಲು ಪಡೆದಿದ್ದ ಜಾಧವ್ ಪತ್ನಿಯವರ ಚಪ್ಪಲಿಯನ್ನೂ ಹಿಂದಿರುವಾಗ ವಾಪಸ್ ನೀಡಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದ್ದು, ಪಾಕಿಸ್ತಾನದ ಕುತ್ಸಿತ ಮನಸ್ಸಿನ ಪ್ರದರ್ಶನವಾಗಿದೆ.

ಅಲ್ಲದೆ ಜಾಧವ್ ಅವರ ತಾಯಿ ಹಾಗೂ ಪತ್ನಿ ತೊಟ್ಟುಕೊಂಡಿದ್ದ ಬಟ್ಟೆಗೆ ಬದಲಿಗೆ ಬೇರೆ ಬಟ್ಟೆ ನೀಡಿ ಕಳುಹಿಸಿದ್ದು, ಪಾಕಿಸ್ತಾನ ಎಂಥ ಮನಸ್ಥಿತಿ ಹೊಂದಿದೆ ಎಂಬುದು ಸಾಬೀತಾಗಿದೆ.

ಇದಕ್ಕೂ ಮೊದಲು ಕುಲಭೂಷಣ ಜಾಧವ್ ಸಂಬಂಧಿಕರಿಗೆ ಭೇಟಿ ನೀಡಲು ಅನುಮತಿ ಹಾಗೂ ವೀಸಾ ಒದಗಿಸುವುದಾಗಿ ಘೋಷಿಸಿದ್ದ ಪಾಕಿಸ್ತಾನ, ವಿಶ್ವದ ಎದುರು ಮಾನವೀಯತೆಯ ನಾಟಕವಾಡಿತ್ತು. ಆದರೆ ಭಾರತೀಯರನ್ನು ತನ್ನ ದೇಶಕ್ಕೆ ಕರೆಯಿಸಿಕೊಂಡು ಅಗೌರವದಿಂದ ನಡೆದುಕೊಂಡಿರುವುದು ನೆರೆರಾಷ್ಟ್ರದ ಕೀಳು ಚಿಂತನೆಯ ಅನಾವರಣವಾಗಿದೆ. ಆ ಮೂಲಕ ಪಾಕಿಸ್ತಾನ ಎಂದಿಗೂ ನಂಬಿಗೆಯ ಹಾಗೂ ಸಾತ್ವಿಕ ವಿಚಾರವುಳ್ಳ ರಾಷ್ಟ್ರವಲ್ಲ ಎಂಬುದು ವಿಶ್ವದ ಎದುರು ಬಹಿರಂಗವಾಗಿದೆ.

0
Shares
  • Share On Facebook
  • Tweet It




Trending Now
ಜಿಎಸ್ಟಿ ಇಳಿಕೆ ಪರಿಣಾಮ- ದೀಪಾವಳಿಗೆ 6.05 ಲಕ್ಷ ಕೋಟಿ ವಸ್ತು ಮಾರಾಟ!
Tulunadu News October 22, 2025
ಪುತ್ತೂರು: ಅಕ್ರಮ ಗೋಸಾಗಾಟ, ಪೊಲೀಸರಿಂದ ಫೈರಿಂಗ್!
Tulunadu News October 22, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಜಿಎಸ್ಟಿ ಇಳಿಕೆ ಪರಿಣಾಮ- ದೀಪಾವಳಿಗೆ 6.05 ಲಕ್ಷ ಕೋಟಿ ವಸ್ತು ಮಾರಾಟ!
    • ಪುತ್ತೂರು: ಅಕ್ರಮ ಗೋಸಾಗಾಟ, ಪೊಲೀಸರಿಂದ ಫೈರಿಂಗ್!
    • ದೀಪಾವಳಿ ಬೋನಸ್ ಕಡಿಮೆ ಕೊಟ್ಟಿದ್ದಕ್ಕೆ ಟೋಲ್ ಸಿಬ್ಬಂದಿಗಳು ಮಾಡಿದ್ದೇನು?
    • ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
    • ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
    • "ಒಂದು ಶೋಗಾಗಿ ಕೈಕಾಲು ಹಿಡಿಯುತ್ತಿದ್ದ ಕಾಲದಿಂದ..." ರಿಷಬ್ ಶೆಟ್ಟಿ 2016 ರ ಘಟನೆಯನ್ನು ನೆನಪಿಸಿಕೊಂಡದ್ದು ಯಾಕೆ?
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಕಸಾಯಿಖಾನೆ ಮುಟ್ಟುಗೋಲು ಹಾಕಿದ ಪ್ರಥಮ ಪ್ರಕರಣ ದಾಖಲು - ಎಸ್ಪಿ
    • ಗೆದ್ದರೂ ಟ್ರೋಫಿ ಪಡೆಯದೇ ದಿಟ್ಟ ಉತ್ತರ ನೀಡಿದ ಭಾರತೀಯ ತಂಡಕ್ಕೆ ಭೇಷ್!
    • ಕೇವಲ ₹100 ಲಂಚದ ಪ್ರಕರಣದಲ್ಲಿ 39 ವರ್ಷಗಳ ಬಳಿಕ ನಿರ್ದೋಷಿ ಘೋಷಣೆ!
    • ನಮ್ಮ ಜಿಲ್ಲೆಗೆ ಕಳುಹಿಸಬೇಡಿ, ಬೇಕಾದರೆ ಕಾಡಿಗೆ ಕಳುಹಿಸಿ ಎಂದು ರಾಯಚೂರಿನಲ್ಲಿ ತಿಮರೋಡಿ ವಿರುದ್ಧ ಪ್ರತಿಭಟನೆ!
  • Popular Posts

    • 1
      ಜಿಎಸ್ಟಿ ಇಳಿಕೆ ಪರಿಣಾಮ- ದೀಪಾವಳಿಗೆ 6.05 ಲಕ್ಷ ಕೋಟಿ ವಸ್ತು ಮಾರಾಟ!
    • 2
      ಪುತ್ತೂರು: ಅಕ್ರಮ ಗೋಸಾಗಾಟ, ಪೊಲೀಸರಿಂದ ಫೈರಿಂಗ್!
    • 3
      ದೀಪಾವಳಿ ಬೋನಸ್ ಕಡಿಮೆ ಕೊಟ್ಟಿದ್ದಕ್ಕೆ ಟೋಲ್ ಸಿಬ್ಬಂದಿಗಳು ಮಾಡಿದ್ದೇನು?

  • Privacy Policy
  • Contact
© Tulunadu Infomedia.

Press enter/return to begin your search