• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಕೊಳಕ ಉಗ್ರ ಬುರ್ಹಾನ್ ವನಿಯನ್ನು ಹೊಗಳಿದ, ಖಲಿಸ್ತಾನ ಪ್ರತ್ಯೇಕ ಬೆಂಬಲಿಗ ಮೂಲಭೂತವಾದಿ ಪತ್ರಿಕೆ

TNN Correspondent Posted On December 27, 2017
0


0
Shares
  • Share On Facebook
  • Tweet It

ಚಂಡಿಗಡ್: ಕಾಶ್ಮೀರ ಕಣಿವೆಯಲ್ಲಿ ಭಾರತದ ಸೌರ್ವಭೌಮತ್ವಕ್ಕೆ ಕಂಟವಾಗಿದ್ದ ಉಗ್ರ ಬುರ್ಹಾನ್ ವನಿಯನ್ನು ಸೇನೆ 2016 ಜುಲೈನಲ್ಲಿ ಹೊಡೆದುರುಳಿಸಿತ್ತು, ಆಗ ಕೆಲ ಡೋಂಗಿ ವಿಚಾರವ್ಯಾದಿಗಳು ವನಿ ಹತ್ಯೆಯನ್ನು ಖಂಡಿಸಿ, ಸೌಹಾರ್ದದ ನಾಟಕವಾಡಿದ್ದರು. ಇದೀಗ ಅವರ ಸಾಲಿಗೆ ಪಾಕಿಸ್ತಾನ ಪರವಿರುವ ಸಿಖ್ ಮೂಲಭೂತವಾದಿಗಳು ಸೇರಿದ್ದು, ಅವರ ಪತ್ರಿಕೆಯೊಂದರಲ್ಲಿ ಉಗ್ರ ಬುರ್ಹಾನ್ ವನಿಯನ್ನು ಬೆಂಬಲಿಸಿ, ಹೊಗಳಲಾಗಿದೆ.

ಪಾಕ್ ಪರ ಹೋರಾಟಕ್ಕೆ ಬೆಂಬಲಿಸುತ್ತಿರುವ ಸಿಖ್ ಮೂಲಭೂತವಾದಿಗಳು ಭಾರತದಿಂದ ಸಿಖ್ ರಾಷ್ಟ್ರ ಪ್ರತ್ಯೇಕವಾಗಬೇಕು ಎಂದು ಆಗ್ರಹಿಸಿದ್ದಾರೆ. ಆದ್ದರಿಂದ ಕಾಶ್ಮೀರ ಪ್ರತ್ಯೇಕತೆಗೆ ಬೆಂಬಲಿಸಿದ, ಸೈನಿಕರ ಗುಂಡಿಗೆ ಬಲಿಯಾದ ಬುರ್ಹಾನ್ ವನಿಯನ್ನು ಬೆಂಬಲಿಸಿದ್ದಾರೆ. ಆತನಿಗೆ ಹೀರೋ ಪಟ್ಟ ಕಟ್ಟಿ, ಯುವಕರನ್ನು ಮತ್ತು ಪಾಕಿಸ್ತಾನವನ್ನು ಸೆಳೆಯುವ ವಿಫಲ ಯತ್ನ ನಡೆಸಿದೆ. ತನ್ನ ಪತ್ರಿಕೆಯ ಮುಖಪುಟದಲ್ಲಿ ಬುರ್ಹಾನ್ ವನಿಗೆ ಹೀರೋ ಪಟ್ಟ ಕಟ್ಟಿರುವುದು ಸ್ವಾಭಿಮಾನಿಗಳು ಮತ್ತು ದೇಶಾಭಿಮಾನಿಗಳಾಗಿರುವ ಸಿಖ್ ರು ಮತ್ತು ಭಾರತವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಖಲಿಸ್ತಾನ ಪ್ರತ್ಯೇಕ ರಾಷ್ಟ್ರದ ಪರವಿರುವ ‘ವಂಗಾರ್’ ಪತ್ರಿಕೆಯಲ್ಲಿ ‘ಹೀರೋ ಆಫ್ ಪ್ರಿಡ್ಂ ಆಫ್ ಕಾಶ್ಮೀರ್’ ಎಂದು ಮುಖಪುಟದಲ್ಲೇ ವರ್ಣಿಸಿದೆ. ಅಲ್ಲದೇ ಬುರ್ಹಾನ್ ವನಿ ಚಿತ್ರವನ್ನು ಬಳಸಿ, ‘ಇಂಡಿಯಾ ಔಟ್ ಆಫ್ ಕಾಶ್ಮೀರ್’ ಎಂದು ಹೆಡಿಂಗ್ ನೀಡಿ ಭಾರತದಿಂದ ಪ್ರತ್ಯೇಕವಾಗಬೇಕು ಎಂದು ಆಗ್ರಹಿಸಿ ಲೇಖನ ಬರೆದಿದೆ. ಅಲ್ಲದೇ ಕಾಶ್ಮೀರದಲ್ಲಿ ಕಲ್ಲು ಎಸೆಯುವವರ ಚಿತ್ರ ಬಳಸಿದೆ.

ಪತ್ರಿಕೆ 2016 ಅಗಸ್ಟ್ ನಲ್ಲೇ ಪ್ರಕಟಣೆಯಾಗಿದ್ದು, ಆದರೆ ಒಂದು ವರೆ ವರ್ಷದ ನಂತರ ನಡೆಯುತ್ತಿರುವ ಜೋರ್ ಮೇಳದಲ್ಲಿ ಪತ್ರಿಕೆ ದೊರೆತಿದೆ. ಗುರುಗೋವಿಂದ್ ಸಿಂಗ್ ರ ಮಕ್ಕಳಾದ ಶಹಿಬ್ಜಾದ್ ಬಾಬಾ ಜೋರಾವರ್ ಸಿಂಗ್ ಮತ್ತು ಶಹಿಬ್ಜಾದ್ ಬಾಬಾ ಫತೆಹ್ ಸಿಂಗ್ ಹುತಾತ್ಮರಾದ ದಿನದ ನಿಮಿತ್ತ ಜೋರ್ ಮೇಳ ಆಚರಿಸಲಾಗುತ್ತದೆ. ಮೇಳದಲ್ಲಿ ಸಿಖ್ ಧರ್ಮದ ಲಕ್ಷಾಂತರ ಜನರು ಭಾಗವಹಿಸುತ್ತಾರೆ.

ಖಲಿಸ್ತಾನ ಬೆಂಬಲಿಗ ಅಂಗಡಿಯಲ್ಲಿ ಈ ಪತ್ರಿಕೆ ಜತೆಗೆ ಖಲಿಸ್ತಾನ ಪ್ರತ್ಯೇಕ ರಾಷ್ಟ್ರದ ಕುರಿತ ಪುಸ್ತಕಗಳನ್ನು ಮಾರಾಟ ಮಾಡುತ್ತಿದ್ದ. ಅಲ್ಲದೇ ಬೈಕ್ ಮೇಲೆ ಅಂಟಿಸುವ ಚೀಟಿಗಳು, ಕರ ಪತ್ರಗಳು, ಬ್ಯಾಡ್ಜ್ ಸ್ ಗಳನ್ನು ಮಾರಾಟ ಮಾಡುತ್ತಿದ್ದ. ಅಲ್ಲದೇ ಖಲಿಸ್ತಾನ ಹೋರಾಟಗಾರ ಜರ್ನೈಲ್ ಸಿಂಗ್ ಬಿಂದ್ರನ್ ವಾಲೆ ಬೆಂಬಲಿಸಿ ಕರ ಪತ್ರಗಳನ್ನು ಮಾರಾಟ ಮಾಡುತ್ತಿದ್ದ. ಪತ್ರಿಕೆಯಲ್ಲಿ ‘ಸ್ವಾತಂತ್ರ್ಯದ ಸಂದೇಶ’ ಎಂಬ ಹೆಸರಲ್ಲಿ ಎರಡು ಲೇಖನಗಳನ್ನು ಜಗ್ತಾರ್ ಸಿಂಗ್ ಹವಾರಾ ಬರೆದಿದ್ದಾನೆ. ಈತ ಪಂಜಾಬ್ ಮಾಜಿ ಮುಖ್ಯಮಂತ್ರಿ ಬಿಯಾಂತ್ ಸಿಂಗ್ ಹತ್ಯೆಯಲ್ಲಿ ಭಾಗಿಯಾಗಿರುವ ಆರೋಪಿಯಾಗಿದ್ದಾನೆ.

0
Shares
  • Share On Facebook
  • Tweet It




Trending Now
ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
Tulunadu News November 21, 2025
ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
Tulunadu News November 20, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
    • ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
    • ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!
    • ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
  • Popular Posts

    • 1
      ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
    • 2
      ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
    • 3
      ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!

  • Privacy Policy
  • Contact
© Tulunadu Infomedia.

Press enter/return to begin your search