• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ನಿತ್ಯ ರಾಷ್ಟ್ರಗೀತೆಗೆ ಇಡೀ ಊರೇ ಎದ್ದು ನಿಲ್ಲುತ್ತದೇ.. ಥೇಟರ್ ನಲ್ಲಿ ಕೆಲ ಸೆಂಕೆಂಡ್ ನಿಲ್ಲದವರು ಓದಲೇಬೇಕು..!

TNN Correspondent Posted On January 5, 2018
0


0
Shares
  • Share On Facebook
  • Tweet It

ಚಂಡಿಗಡ್: ಆ ಗ್ರಾಮದಲ್ಲಿ ಬೆಳಗ್ಗೆ 8 ಗಂಟೆಯಾದರೇ ಇಡೀ ಊರು ಕೆಲವು ಕ್ಷಣಗಳ ಮಟ್ಟಿಗೆ ಶಾಂತವಾಗಿರುತ್ತದೆ, ಪ್ರತಿಯೊಬ್ಬರ ಮನದಲ್ಲೂ ರಾಷ್ಟ್ರ ಭಕ್ತಿಯ ಸಂಚನವಾಗುತ್ತದೆ. 500 ಸಾವಿರ ಜನ ಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ ನಿತ್ಯ ಬೆಳಗ್ಗೆ ಎಂಟು ಗಂಟೆಗೆ ರಾಷ್ಟ್ರಗೀತೆಯ ಅನುರಣನವಾಗುತ್ತದೆ. ರಾಷ್ಟ್ರ ಗೀತೆಗೆ ಗ್ರಾಮದ ಪ್ರತಿಯೊಬ್ಬರು ಎದ್ದು ನಿಂತು ಗೌರವ ಸಲ್ಲಿಸುತ್ತಾರೆ.

ಬನಕಪುರ

ಚಂಡಿಗಡ್ ರಾಜ್ಯದ ಫರಿದಾಬಾದ್ ಜಿಲ್ಲೆಯ ಈ ಗ್ರಾಮದಲ್ಲಿ ನಿತ್ಯ ಬೆಳಗ್ಗೆ 8 ಗಂಟೆಗೆ ರಾಷ್ಟ್ರಗೀತೆಯನ್ನು ಮೈಕನಲ್ಲಿ ಪ್ರಸಾರ ಮಾಡಲಾಗುತ್ತದೆ. ರಾಷ್ಟ್ರಗೀತೆ ಪ್ರಸಾರವಾಗುತ್ತಿದ್ದಂತೆ ಗ್ರಾಮದ ಎಲ್ಲರು ಜಾತಿ, ಮತ, ಧರ್ಮದ ಭೇದ ಮರೆತು ಗೌರವ ಸೂಚಿಸುತ್ತಿದ್ದಾರೆ. ಗ್ರಾಮದ ನಾನಾ ಕಡೆ 20 ಮೈಕ್ ಗಳನ್ನು ಅಳವಡಿಸಿದ್ದು, ಇಡೀ ಗ್ರಾಮಸ್ಥರು ಏಕಕಾಲಕ್ಕೆ ರಾಷ್ಟ್ರಗೀತೆ ಹಾಡಲು ಅವಕಾಶ ಮಾಡಿಕೊಡಲಾಗಿದೆ.

ಗ್ರಾಮ ಸರ್ಪಂಚ್ ಸಚಿನ್ ಮಡೋತಿಯಾ ಈ ಪದ್ಧತಿಯನ್ನು ಜಾರಿಗೆ ತಂದಿದ್ದು, ಉದ್ಘಾಟನೆ ಕಾರ್ಯಕ್ರಮದಲ್ಲಿ ಬಹುಜನ ಸಮಾಜ ಪಕ್ಷದ ಶಾಸಕ ತೆಕ್ ಚಂದ ಶರ್ಮಾ, ಫರಿದಾಬಾದ್ ಮ್ಯಾಜಿಟ್ರೆಟ್ ಪ್ರತಾಪ್ ಶಂಕರ್ ಮತ್ತು ಆರ್ ಎಸ್ ಎಸ್ ಹರ್ಯಾಣದ ಮುಖಂಡ ಗಂಗಾ ಶಂಕರ ಹಾಜರಿದ್ದು, ರಾಷ್ಟ್ರಗೀತೆ ಇಡೀ ಗ್ರಾಮಕ್ಕೆ ಅಳವಡಿಸುವ ಮಹತ್ತರ ಯೋಜನೆಗೆ ಚಾಲನೆ ನೀಡಿದರು.

ಸರ್ಪಂಚ್ ಸಚಿನ್ ಮಡೊತಿಯಾ ಮಾತನಾಡಿ, ‘ಗ್ರಾಮದಲ್ಲಿ 2.97 ಲಕ್ಷ ವೆಚ್ಚದಲ್ಲಿ 20 ಮೈಕ್ ಗಳನ್ನು ಅಳವಡಿಸಲಾಗಿದೆ. ನನ್ನ ಮನೆಯಲ್ಲಿ ನಿಯಂತ್ರಣ ಕೋಠಡಿಯಿದ್ದು, ತೆಲಂಗಾಣದ ಜಮಿಕುಂಟಾ ಗ್ರಾಮದಲ್ಲಿ ಇಂತಹ ಯೋಜನೆ ಜಾರಿಯಲ್ಲಿದ್ದೆ. ಅಲ್ಲಿ ನಿತ್ಯ ಗ್ರಾಮದ ಎಲ್ಲರೂ ರಾಷ್ಟ್ರಗೀತೆ ಹೇಳುತ್ತಾರೆ. ಅಲ್ಲಿಂದ ಪ್ರೇರಣೆ ಪಡೆದು ನಮ್ಮ ಗ್ರಾಮದಲ್ಲೂ ಜಾರಿಗೆ ತರಲಾಗಿದೆ ಎಂದು ಹೇಳಿದರು.

ರಾಷ್ಟ್ರದಲ್ಲೇ ಇಡೀ ಗ್ರಾಮದಲ್ಲಿ ನಿತ್ಯ ರಾಷ್ಟ್ರಗೀತೆ ಹಾಡುವ ಪದ್ಧತಿ ಜಾರಿಗೆ ಬಂದಿರುವುದರಲ್ಲಿ ಬಂಕಾಪುರ ಎರಡನೇ ಸ್ಥಾನದಲ್ಲಿದೆ. ಬಂಕಾಪುರ ಗ್ರಾಮದಲ್ಲಿ 22 ಸಿಸಿವಿ ಅಳವಡಿಸಿದ್ದು, ರಕ್ಷಣಾ ವ್ಯವಸ್ಥೆಯನ್ನು ಹದ್ದುಬಸ್ತಿನಲ್ಲಿಡಲು ಹಳ್ಳಿಯೊಂದು ಮುಂದಾಗಿರುವುದು ಶ್ಲಾಘನೆ ವ್ಯಕ್ತವಾಗಿದೆ.

0
Shares
  • Share On Facebook
  • Tweet It




Trending Now
ಮಹಾನಗರ ಪಾಲಿಕೆ ಮೇ 1ರಿಂದ ನೀರಿನ ರೇಷನಿಂಗ್ ಘೋಷಣೆ!
Tulunadu News April 27, 2026
ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
Tulunadu News April 14, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮಹಾನಗರ ಪಾಲಿಕೆ ಮೇ 1ರಿಂದ ನೀರಿನ ರೇಷನಿಂಗ್ ಘೋಷಣೆ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
    • ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಸಲ್ಲಿಸಿದ ನಟ!
  • Popular Posts

    • 1
      ಮಹಾನಗರ ಪಾಲಿಕೆ ಮೇ 1ರಿಂದ ನೀರಿನ ರೇಷನಿಂಗ್ ಘೋಷಣೆ!

  • Privacy Policy
  • Contact
© Tulunadu Infomedia.

Press enter/return to begin your search