• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಮುಂದುವರಿದ ಮಮತಾ ಬ್ಯಾನರ್ಜಿಯವರ ಹಿಂದೂ ದ್ವೇಷ, ಸರಸ್ವತಿ ಪೂಜೆಗಿಲ್ಲ ರಜೆ

TNN Correspondent Posted On January 15, 2018
0


0
Shares
  • Share On Facebook
  • Tweet It

ಕೋಲ್ಕತ್ತಾ: ಹಿಂದೂಗಳು ಹಾಗೂ ಹಿಂದೂಗಳ ಆಚರಣೆಗಳು ಎಂದರೆ ಮಮತಾ ಬ್ಯಾನರ್ಜಿಯವರಿಗೇಕೆ ಇಷ್ಟು ಕೋಪ, ದ್ವೇಷ, ಅಸಹಿಷ್ಣುತೆಯೋ ಗೊತ್ತಿಲ್ಲ. ಅವಕಾಶ ಸಿಕ್ಕಾಗಲೆಲ್ಲ ಹಿಂದೂಗಳ ಆಚರಣೆಗಳಿಗೆ ಮಮತಾ ಅಡ್ಡಿಯಾಗುತ್ತಲೇ ಬಂದಿದ್ದಾರೆ. ಅದು ಸರಸ್ವತಿ ಪೂಜೆ ಇರಬಹುದು ಅಥವಾ ದುರ್ಗಾ ಪೂಜೆ ಇರಬಹುದು, ಆಗೆಲ್ಲ ಮಮತಾ ಬ್ಯಾನರ್ಜಿಯವರು ಅಡ್ಡಗಾಲು ಹಾಕುತ್ತಲೇ ಇದ್ದಾರೆ.

ಇದರ ಮುಂದುವರಿದ ಭಾಗವಾಗಿ ಮಮತಾ ಬ್ಯಾನರ್ಜಿಯವರು ಮತ್ತೆ ಅಸಹಿಷ್ಣುತೆ ತೋರಿದ್ದು,  ಪಶ್ಚಿಮ ಬಂಗಾಳದಲ್ಲಿ ಶಾಲೆಗಳಿಗೆ ಸರಸ್ವತಿ ಪೂಜೆಗೆ ನೀಡುತ್ತಿದ್ದ ರಜೆಯನ್ನು ರಜೆಗಳ ವೇಳಾಪಟ್ಟಿಯಿಂದ ತೆಗೆದುಹಾಕಲಾಗಿದೆ.

ಪಶ್ಚಿಮ ಬಂಗಾಳ ಉತ್ತರ ದಿನಾಜ್ ಪುರ ಜಿಲ್ಲೆಯ ಪ್ರಾಥಮಿಕ ಶಿಕ್ಷಣ ಮಂಡಳಿ ಈ ನಿರ್ಧಾರ ಕೈಗೊಂಡಿದ್ದು, ಜನವರಿ 22ರಂದು ಸರಸ್ವತಿ ಪೂಜೆ ಹಿನ್ನೆಲೆಯಲ್ಲಿ ನೀಡಬೇಕಾಗಿದ್ದ ರಜೆಯನ್ನು ವೇಳಾಪಟ್ಟಿಯಿಂದ ಕಿತ್ತೆಸೆಯಲಾಗಿದೆ.

ದಿನಾಜ್ ಪುರ ಜಿಲ್ಲೆಯಲ್ಲಿ ಶೇ.49.92ರಷ್ಟು ಹಿಂದೂಗಳು ಹಾಗೂ ಶೇ..49.32ರಷ್ಟು ಮುಸ್ಲಿಮರು ವಾಸವಿರುವ ಕಾರಣ ಮೊದಲು ಶಿಕ್ಷಣ ಮಂಡಳಿ ಸರಸ್ವತಿ ಪೂಜೆಯನ್ನೇ ನಿಷೇಧಿಸಿತ್ತು. ಈಗ ಮಂಡಳಿಗೆ ಮೊಹಮ್ಮದ್ ಜಾಹೀರ್ ಆಲಂ ಅರ್ಜು ಅಧ್ಯಕ್ಷರಾಗಿದ್ದು, ಸರಸ್ವತಿ ಪೂಜೆಯ ರಜೆ ರದ್ದುಗೊಳಿಸಿದ್ದಾರೆ.

ಅಲ್ಲದೆ ಕಳೆದ ವರ್ಷ ಹೌರಾ ಜಿಲ್ಲೆಯ ಹೈಸ್ಕೂಲುಗಳಲ್ಲಿ ಸರಸ್ವತಿ ಪೂಜೆಯ ಬದಲಿಗೆ ವಿಶ್ವ ನಾಬಿ ದಿನ (ಮೊಹಮ್ಮದ್ ಪೈಗಂಬರರ ದಿನ)ವನ್ನಾಗಿ ಆಚರಿಸಲಾಗಿತ್ತು. ಇಷ್ಟಾದರೂ ಇಂಥ ಪ್ರಕರಣಗಳಿಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿರುವ ಮಮತಾ ಬ್ಯಾನರ್ಜಿಯವರು ಒಂದೇ ಒಂದು ಆಕ್ಷೇಪ ವ್ಯಕ್ತಪಡಿಸಿಲ್ಲ.

0
Shares
  • Share On Facebook
  • Tweet It




Trending Now
ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
Tulunadu News November 1, 2025
ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
Tulunadu News October 31, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
    • ಕಾಂತಾರಾ ಚಾಪ್ಟರ್ 1 ಒಟಿಟಿಯಲ್ಲಿ ರಿಲೀಸ್! ದಿನ ಫಿಕ್ಸ್!
    • ಜಿಎಸ್ಟಿ ಇಳಿಕೆ ಪರಿಣಾಮ- ದೀಪಾವಳಿಗೆ 6.05 ಲಕ್ಷ ಕೋಟಿ ವಸ್ತು ಮಾರಾಟ!
    • ಪುತ್ತೂರು: ಅಕ್ರಮ ಗೋಸಾಗಾಟ, ಪೊಲೀಸರಿಂದ ಫೈರಿಂಗ್!
    • ದೀಪಾವಳಿ ಬೋನಸ್ ಕಡಿಮೆ ಕೊಟ್ಟಿದ್ದಕ್ಕೆ ಟೋಲ್ ಸಿಬ್ಬಂದಿಗಳು ಮಾಡಿದ್ದೇನು?

  • Privacy Policy
  • Contact
© Tulunadu Infomedia.

Press enter/return to begin your search