• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಕಾಶ್ಮೀರದಲ್ಲಿ ಒಂಟಿ ತೋಳ ಮಾದರಿ ದಾಳಿಗೆ ಮುಸ್ಲಿಂ ಉಗ್ರ ಸಂಘಟನೆಗಳ  ಸಂಚು

TNN Correspondent Posted On January 19, 2018


  • Share On Facebook
  • Tweet It

ದೆಹಲಿ: ಕಾಶ್ಮೀರ ಕಣಿವೆಯಲ್ಲಿ ಉಗ್ರ ಸಂಘಟನೆಗಳು ಮತ್ತು ಪ್ರತ್ಯೇಕವಾದಿಗಳ ಹೆಡೆ ಮುರಿ ಕಟ್ಟಿರುವ ಕೇಂದ್ರ ಸರ್ಕಾರ ಮತ್ತು ಸೈನ್ಯದ ಗಟ್ಟಿ ನಿಲುವು ಮುಸ್ಲಿಂ ಉಗ್ರ ಸಂಘಟನೆಗಳ ಅಸ್ತಿತ್ವವನ್ನೇ ಅಲುಗಾಡಿಸಿವೆ. ಆದರೂ ತಮ್ಮ ಕುತಂತ್ರ ಮುಂದುವರಿಸಿರುವ ಮುಸ್ಲಿಂ ಮೂಲಭೂತವಾದಿ ಸಂಘಟನೆಗಳು ಕಾಶ್ಮೀರ ಕಣಿವೆಯ ಯುವಕರಿಗೆ ತೀವ್ರಗಾಮಿ ಚಿಂತನೆಗಳನ್ನು ಬಿತ್ತಿ, ಒಂಟಿ ತೋಳದ ಮಾದರಿಯಲ್ಲಿ ದಾಳಿ ನಡೆಸುವ ಹುನ್ನಾರ ನಡೆಸಿವೆ ಎಂಬ ಮಾಹಿತಿ ಕೇಂದ್ರ ಗೃಹ ಇಲಾಖೆಯಿಂದಲೇ ಹೊರಬಿದ್ದಿದೆ.

ಐಎಸ್ ಐಎಸ್ ದುಷ್ಕೃತ್ಯ ತಡೆಗಟ್ಟಲು ಕೇಂದ್ರ ಗೃಹ ಇಲಾಖೆಯ ಸೈಬರ್ ವಿಭಾಗವು ಜಮ್ಮು ಕಾಶ್ಮೀರ ಪ್ರದೇಶದಲ್ಲಿ ಟೆಲಿಗ್ರಾಮ್ ನಲ್ಲಿ ಯುವಕರನ್ನು ಧರ್ಮದ ಹೆಸರಲ್ಲಿ ಪ್ರಚೋಧಿಸುವ ಲೇಖನ, ಚಿತ್ರಗಳ ಪ್ರಸಾರವನ್ನು ತಡೆಹಿಡಿದಿದೆ. ಈ ಮಾರ್ಗದ ಮೂಲಕ ಯುವಕರಲ್ಲಿ ಮೂಲಭೂತವಾದಿ ಚಿಂತನೆಗಳನ್ನು  ಬಿತ್ತಿ, ದುಷ್ಕೃತ್ಯಕ್ಕೆ ಸೆಳೆಯುವ ಸಂಚು ಐಎಸ್ ಐಎಸ್ ಹೂಡಿದೆ.

ಇತ್ತೀಚೆಗೆ ಸೈಬರ್ ವಿಂಗ್ ಐಸಿಸ್ ಪರವಾದ, ಯುವಕರನ್ನು ದುಷ್ಕೃತ್ಯಗಳಿಗೆ ಪ್ರಚೋಧಿಸುವ ಲೇಖನ, ಚಿತ್ರಗಳನ್ನು ಪ್ರಕಟಿಸುತ್ತಿದ್ದ ಟೆಲಿಗ್ರಾಮ್ ಚಾನಲ್ ವೊಂದನ್ನು ಪತ್ತೆ ಹಚ್ಚಿತ್ತು. ಅದರಲ್ಲಿ ಷರಿಯಾ ಕಾನೂನು ಜಾರಿ ಮಾಡುವ ಕುರಿತು ಯುವಕರಿಗೆ ಬೋಧಿಸಲಾಗುತ್ತಿತ್ತು. 23 ಸೆಪ್ಟೆಂಬರ್ 2017ರಂದು ಟೆಲಿಗ್ರಾಮ್ ಪ್ರಕಟಿಸಲಾಗಿದ್ದು, ಅದೇ ವರ್ಷ ಅಕ್ಟೋಬರ್ 3 ರಂದು ಹೊಸದಾಗಿ ಹೆಸರು ಬದಲಾಯಿಸಲಾಗಿದೆ.

ಕೇಂದ್ರ ಗೃಹ ಇಲಾಖೆ ವರದಿ ಪ್ರಕಾರ ‘ಟೆಲಿಗ್ರಾಮ್ ಚಾನೆಲ್ ನಲ್ಲಿ ಒಂಟಿ ತೋಳ ಮಾದರಿಯಲ್ಲಿ ಹೇಗೆ ದಾಳಿ ನಡೆಸಬೇಕು, ದಾಳಿಯಲ್ಲಿರಬೇಕಾದ ವರ್ತನೆಗಳು, ಬಾಂಬ್ ದಾಳಿಗಳ ಕುರಿತು ಮಾಹಿತಿ ನೀಡಲಾಗುತ್ತಿದೆ. ಅಲ್ಲದೇ ಕಾಶ್ಮೀರದಲ್ಲಿ ಮುಸ್ಲಿಂ ರಾಷ್ಟ್ರಕ್ಕೆ ಬೆಂಬಲಿಸಿ ಎಂಬ ಹ್ಯಾಷ್ ಟ್ಯಾಗ್ ಕೂಡ ರಚಿಸಲಾಗಿದೆ. ಇದೇ ಮಾದರಿಯ ಹ್ಯಾಷ್ ಟ್ಯಾಗ್ ನ್ನು 2014ರಲ್ಲಿ ಇರಾಕ್ ಮತ್ತು ಸಿರಿಯಾದಲ್ಲಿ ಬಳಸಲಾಗಿತ್ತು. ಅದು ಭಾರಿ ಪರಿಣಾಮ ಬೀರಿತ್ತು.

ಸಾಮಾಜಿಕ ಜಾಲತಾಣಗಳಲ್ಲಿ ಭಯೋತ್ಪಾದನೆ ಹರಡುವ ಪೇಜ್ ಗಳ ಅಡ್ಮಿನ್ ಗಳ ಬಗ್ಗೆ ನಿಗಾಯಿರಿಸಲಾಗುವುದು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

  • Share On Facebook
  • Tweet It


- Advertisement -


Trending Now
ಇಲ್ಲಿ ಭಾವನೆ, ಅನಿವಾರ್ಯತೆ ಮತ್ತು ವಾಸ್ತವಕ್ಕೆ ಜಾಗ ಇಲ್ಲ!
Tulunadu News September 27, 2023
ಅಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಟೆ ಡೇಟ್ ಫಿಕ್ಸ್!
Tulunadu News September 27, 2023
Leave A Reply

  • Recent Posts

    • ಇಲ್ಲಿ ಭಾವನೆ, ಅನಿವಾರ್ಯತೆ ಮತ್ತು ವಾಸ್ತವಕ್ಕೆ ಜಾಗ ಇಲ್ಲ!
    • ಅಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಟೆ ಡೇಟ್ ಫಿಕ್ಸ್!
    • ಮಾಂಸಾಹಾರಕ್ಕೆ ಹಲಾಲ್, ಸಸ್ಯಾಹಾರಕ್ಕೆ ಸಾತ್ವಿಕ್!
    • ಮದ್ಯ: ಗೋವಾ ಕನಿಷ್ಟ, ಕರ್ನಾಟಕ ಗರಿಷ್ಟ!
    • ರೈಲು ಬೋಗಿಗಳು ಆವತ್ತು ಮತ್ತು ಇವತ್ತು!
    • ಕಾಂಗ್ರೆಸ್ಸಿಗೆ ಇ.0.ಡಿ.ಯಾ ಮೈತ್ರಿಕೂಟದ ಒಳಗೆನೆ ಸ್ಪರ್ಧೆ!
    • ರಾಮ ಮಂದಿರ ಉದ್ಘಾಟನೆಯ ಬಳಿಕ ಗೋಧ್ರಾ ಹತ್ಯಾಕಾಂಡ ನಡೆಯಬಹುದು - ಠಾಕ್ರೆ
    • ಮಂಗಳೂರು - ಗೋವಾ ವಂದೇ ಭಾರತ್ ರೈಲು ಸೇವೆ
    • ಕುಕ್ಕರ್ ಬಾಂಬ್ ಸಂಚಿನ ಹಿಂದಿನ ಮಾಸ್ಟರ್ ಮೈಂಡ್ ಅರಾಫತ್ ಆಲಿ ಬಂಧನ
    • ಅಂದು ಸಿದ್ದು, ಇಂದು ಹರಿ!
  • Popular Posts

    • 1
      ಇಲ್ಲಿ ಭಾವನೆ, ಅನಿವಾರ್ಯತೆ ಮತ್ತು ವಾಸ್ತವಕ್ಕೆ ಜಾಗ ಇಲ್ಲ!
    • 2
      ಅಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಟೆ ಡೇಟ್ ಫಿಕ್ಸ್!
    • 3
      ಮಾಂಸಾಹಾರಕ್ಕೆ ಹಲಾಲ್, ಸಸ್ಯಾಹಾರಕ್ಕೆ ಸಾತ್ವಿಕ್!
    • 4
      ಮದ್ಯ: ಗೋವಾ ಕನಿಷ್ಟ, ಕರ್ನಾಟಕ ಗರಿಷ್ಟ!
    • 5
      ರೈಲು ಬೋಗಿಗಳು ಆವತ್ತು ಮತ್ತು ಇವತ್ತು!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search