• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಸುರತ್ಕಲ್ ಎನ್ಐಟಿಕೆ ಕಡಲ ನಡುವಿನ ದಿಬ್ಬ ಸಾವಿಗೆ ಕರೆದೊಯ್ಯುತ್ತದೆ!

TNN Correspondent Posted On July 13, 2017


  • Share On Facebook
  • Tweet It

ಸುರತ್ಕಲ್ ಎನ್ ಐಟಿಕೆ ಕಡಲ ತೀರ ಪ್ರವಾಸಿಗರಿಗೆ ಯಾವತ್ತೂ ತನ್ನ ಸೌಂದರ್ಯದಿಂದ ಸೆಳೆಯುವುದು ನಮಗೆಲ್ಲಾ ಗೊತ್ತೇ ಇದೆ. ಅಲ್ಲಿ ಸಿಗುವ ಏಕಾಂತ ಮತ್ತು ಜನಜಂಗುಳಿ ಕಡಿಮೆ ಇರುವ ವಾತಾವರಣ ಯಾವತ್ತಿಗೂ ಮನಸ್ಸಿಗೆ ಮುದ ನೀಡುತ್ತದೆ. ಅದಕ್ಕಾಗಿ ಹೆಚ್ಚಾಗಿ ಯುವಕ, ಯುವತಿಯರು ಅಲ್ಲಿ ಬರುತ್ತಾರೆ. ಅದರಲ್ಲಿಯೂ ಸ್ಥಳೀಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಲಿತು ಹೋದ ಹಳೆ ವಿದ್ಯಾರ್ಥಿಗಳು ಕೂಡ ಅಲ್ಲಿಗೆ ಅಪರೂಪಕ್ಕೊಮ್ಮೆ ಬರುತ್ತಾರೆ. ಹಾಗೆ ಬರುವವರು ಸ್ವಲ್ಪ ಎಚ್ಚರ ತಪ್ಪಿದರೂ ಸಾವಿನೊಂದಿಗೆ ಸಂಬಂಧ ಹೊಂದುವುದು ಗ್ಯಾರಂಟಿ.

ಇತ್ತೀಚೆಗೆ ಬೆಂಗಳೂರಿನ ಕೆಆರ್ ಪುರಂನಿಂದ ಪ್ರವಾಸಕ್ಕೆಂದು ದಕ್ಷಿಣ ಕನ್ನಡ ಜಿಲ್ಲೆಗೆ ಬಂದ ಯುವಕರ ಗುಂಪು ಸುರತ್ಕಲ್ ಕಡಲ ಕಿನಾರೆಯಲ್ಲಿ ದುರಂತಕ್ಕೆ ಸಿಲುಕಿ ಗೃಹರಕ್ಷಕ ದಳದ ಮುಳುಗುತಜ್ಞರ ಸಹಕಾರದಿಂದ ಬದುಕಿ ಉಳಿದ ಘಟನೆ ವರದಿಯಾಗಿದೆ. ಏಳು ಜನ ಪ್ರವಾಸಿಗರಿದ್ದ ತಂಡದಲ್ಲಿ ಐದು ಜನ ಸೋಮವಾರ ಎನ್ ಐಟಿಕೆ ಕಡಲ ಕಿನಾರೆಯ ದಡದಲ್ಲಿ ನಿಂತಿದ್ದರೆ ಇಬ್ಬರು ನೀರಿಗೆ ಇಳಿದಿದ್ದರು. ಆ ಇಬ್ಬರು ಅಲ್ಲಿಯೇ ನೀರಿನ ನಡುವೆ ಇರುವೆ ದಿಬ್ಬವನ್ನು ಏರಿ ಸೆಲ್ಫಿ ತೆಗೆಯುತ್ತಾ ಎಂಜಾಯ್ ಮಾಡುತ್ತಿದ್ದರು. ಅದೇ ಸಮಯಕ್ಕೆ ಸಮುದ್ರದಲ್ಲಿ ನೀರಿನ ಅಬ್ಬರ ಜಾಸ್ತಿಯಾಗುತ್ತಾ ಬಂತು. ಅದರಿಂದ ದಿಬ್ಬ ನೀರಲ್ಲಿ ಮುಳುಗುವ ಸನ್ನಿವೇಶ ನಿರ್ಮಾಣವಾಗಿತ್ತು. ಒಂದಿಷ್ಟು ನೀರಿನ ಪ್ರಮಾಣ ಹೆಚ್ಚಾದಲ್ಲಿ ಇಬ್ಬರು ಕೂಡ ನೀರಿನ ರಭಸಕ್ಕೆ ಸಮುದ್ರದಲ್ಲಿ ಕೊಚ್ಚಿ ಹೋಗುವ ಸಾಧ್ಯತೆ ಸೃಷ್ಟಿಯಾಗಿತ್ತು. ಅಂತಹ ಹೊತ್ತಿನಲ್ಲಿ ಇಬ್ಬರಲ್ಲಿ ಒಬ್ಬ ಯುವಕ ನೀರಿನ ರಭಸ ಕಡಿಮೆಯಾದ ತಕ್ಷಣ ಈಜಿ ದಡ ಸೇರಿದರೆ, ಮತ್ತೊಬ್ಬ ಯುವಕ ದಿಣ್ಣೆಯ ಮೇಲೆಯೇ ನಿಂತು ರಕ್ಷಣೆಗಾಗಿ ಮೊರೆಯಿಡುತ್ತಿದ್ದ. ಸಸಿಹಿತ್ಲುವಿನಲ್ಲಿ ನಡೆದ ದುರ್ಘಟನೆಯಲ್ಲಿ ಕಣ್ಮರೆಯಾಗಿರುವ ಮೂರು ಜನರ ಹೆಣಗಳನ್ನು ಹುಡುಕುವ ಕೆಲಸದಲ್ಲಿ ನಿರತರಾಗಿದ್ದ ಮುಲ್ಕಿ ಗೃಹ ರಕ್ಷಕ ದಳದ ಏಳು ಜನರ ತಂಡ ಹಿಂತಿರುಗುವಾಗ ಈ ಯುವಕ ಜೀವರಕ್ಷಣೆಗಾಗಿ ಕೂಗು ಹಾಕುವುದು ಅವರ ಗಮನಕ್ಕೆ ಬಂದಿದೆ. ಇದರಿಂದ ತಕ್ಷಣ ಜಾಗೃತರಾದ ತಂಡದ ಯುವಕರು ಹಗ್ಗದ ಸಹಾಯದಿಂದ ಯುವಕನನ್ನು ದಡಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ರಕ್ಷಿಸಲ್ಪಟ್ಟ ಯುವಕನನ್ನು ಭರತ್ ಎಂದು ಗುರುತಿಸಲಾಗಿದೆ.

ಕಾರ್ಯಾಚರಣೆ ಸಂದರ್ಭದಲ್ಲಿ ಉಪಸ್ಥಿತರಿದ್ದ ಮಂಗಳೂರು ತಹಶೀಲ್ದಾರ್ ಮಹದೇವಪ್ಪ ಅವರು ಗೃಹ ರಕ್ಷಕ ದಳದ ಸಿಬ್ಬಂದಿಗಳ ಸಮಯಪ್ರಜ್ಞೆಯಿಂದ ಒಂದು ಜೀವ ಉಳಿಯಲು ಸಾಧ್ಯವಾಯಿತು. ಇಲ್ಲದೆ ಹೋದರೆ ಸಸಿಹಿತ್ಲುವಿನಲ್ಲಿ ಆದ ದುರ್ಘಟನೆ ಮರುಕಳಿಸುತ್ತಿತ್ತು ಎಂದರು. ಮಳೆಗಾಲದ ಸಂದರ್ಭದಲ್ಲಿ ಸಮುದ್ರದಲ್ಲಿ ಅಲೆಯ ಅಬ್ಬರ ಜೋರಾಗಿರುತ್ತವೆ ಎಂದು ಹೇಳಿದ ಅವರು, ಯಾವುದೇ ಪ್ರಕೃತಿ ವಿಕೋಪ ಎದುರಿಸಲು ಜಿಲ್ಲಾಡಳಿತ ಸರ್ವಸನ್ನದ್ಧವಾಗಿದೆ. ಒಟ್ಟು ನಲ್ವತ್ತು ತಂಡಗಳು ಇದಕ್ಕಾಗಿ ರಚಿಸಲಾಗಿದೆ. ಮಳೆಯ ವಿಕೋಪದಿಂದ ಯಾವುದಾದರೂ ಶಾಲೆಗೆ ಸಮಸ್ಯೆಯಾದರೆ ಶಾಲಾ ಆಡಳಿತ ಮಂಡಳಿಗೆ ರಜೆ ಕೊಡುವ ಅಧಿಕಾರವನ್ನು ಜಿಲ್ಲಾಡಳಿತ ಮತ್ತು ಶಿಕ್ಷಣ ಇಲಾಖೆ ನೀಡಿದೆ ಎಂದರು.

ಸಮುದ್ರ ತೀರದಲ್ಲಿ ಅಪಾಯಕಾರಿ ಜಾಗ ಎಂದು ಬೋರ್ಡರ್ ಹಾಕಿದ್ದರೂ ಪರವೂರಿನಿಂದ ಬರುವ ಪ್ರವಾಸಿಗರಿಗೆ ಇದರ ಪ್ರಾಮುಖ್ಯತೆ ಗೊತ್ತಿರುವುದಿಲ್ಲ. ಆದ್ದರಿಂದ ಇಂತಹ ಸಂದರ್ಭದಲ್ಲಿ ನೀರಿನ ಆಳಕ್ಕೆ ಇಳಿಯುವುದು ಅಪಾಯಕ್ಕೆ ಆಹ್ವಾನ ಕೊಟ್ಟಂತೆ ಎಂದು ಮಹದೇವಪ್ಪ ತಿಳಿಸಿದರು.

 

  • Share On Facebook
  • Tweet It


- Advertisement -


Trending Now
ಮಳೆ ಕಥೆ ಅಲ್ಲ ವ್ಯಥೆ! ಅದಕ್ಕಿದೆ ಇಷ್ಟು ಕಾರಣಗಳು?
Tulunadu News July 1, 2022
ಮಾಣಿಪ್ಪಾಡಿ ವರದಿಯ 4 ಲಕ್ಷ ಕೋಟಿಯಲ್ಲಿ ಬಿಜೆಪಿಗೆ ಸಿಕ್ಕಿದ ಸೊನ್ನೆ ಎಷ್ಟು?
Tulunadu News June 30, 2022
Leave A Reply

  • Recent Posts

    • ಮಳೆ ಕಥೆ ಅಲ್ಲ ವ್ಯಥೆ! ಅದಕ್ಕಿದೆ ಇಷ್ಟು ಕಾರಣಗಳು?
    • ಮಾಣಿಪ್ಪಾಡಿ ವರದಿಯ 4 ಲಕ್ಷ ಕೋಟಿಯಲ್ಲಿ ಬಿಜೆಪಿಗೆ ಸಿಕ್ಕಿದ ಸೊನ್ನೆ ಎಷ್ಟು?
    • ಕನ್ನಯ್ಯ ಹತ್ಯೆ ಮಾಡಿದವರಿಗೆ ಮೂರೇ ತಿಂಗಳಲ್ಲಿ ಗಲ್ಲಾಗಬಹುದಾ?
    • ರಾಹುಲ್ ಕಚೇರಿ ಧ್ವಂಸವಾದರೂ ಕಾಂಗ್ರೆಸ್ ಪ್ರತಿಭಟಿಸಲಿಲ್ಲ, ಯಾಕೆ?
    • ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?
    • ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!
    • ರಾಜಕೀಯ ಆತ್ಮಹತ್ಯೆ ಎಂದರೆ ಏನು ಉದ್ಧವ್!
    • ಮಂಗಳೂರಿನಲ್ಲಿ ಐಲ್ಯಾಂಡ್ ಪ್ಲಾನ್ ಹಾಕಿದ ಬುದ್ಧಿವಂತ ಯಾರು?
    • ಉತ್ತರ ಭಾರತದಲ್ಲಿ ಸೇನೆಗೆ ಸೇರಿಸುವುದು ಉದ್ಯಮ!!
    • ನೂಪುರ್ ಹೇಳಿಕೆಗೆ ಮುಸ್ಲಿಮರು ದೇಶದಲ್ಲಿ ಬೆಂಕಿ ಇಟ್ಟರು, ಶೈಲಜಾ ಹೇಳಿಕೆಗೆ??
  • Popular Posts

    • 1
      ಮಳೆ ಕಥೆ ಅಲ್ಲ ವ್ಯಥೆ! ಅದಕ್ಕಿದೆ ಇಷ್ಟು ಕಾರಣಗಳು?
    • 2
      ಮಾಣಿಪ್ಪಾಡಿ ವರದಿಯ 4 ಲಕ್ಷ ಕೋಟಿಯಲ್ಲಿ ಬಿಜೆಪಿಗೆ ಸಿಕ್ಕಿದ ಸೊನ್ನೆ ಎಷ್ಟು?
    • 3
      ಕನ್ನಯ್ಯ ಹತ್ಯೆ ಮಾಡಿದವರಿಗೆ ಮೂರೇ ತಿಂಗಳಲ್ಲಿ ಗಲ್ಲಾಗಬಹುದಾ?
    • 4
      ರಾಹುಲ್ ಕಚೇರಿ ಧ್ವಂಸವಾದರೂ ಕಾಂಗ್ರೆಸ್ ಪ್ರತಿಭಟಿಸಲಿಲ್ಲ, ಯಾಕೆ?
    • 5
      ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search