• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ

ಪ್ರಕಾಶ್ ರೈ, ನೀವು ಪ್ರಗತಿಪರರೋ, ವಿಚಾರ ನಪುಂಸಕರೋ? ಈ ಹಿಂದೂವಿನ ಹತ್ಯೆಯನ್ನು ಖಂಡಿಸುವಿರೋ?

ವಿಶಾಲ್ ಗೌಡ ಕುಶಾಲನಗರ Posted On February 1, 2018
0


0
Shares
  • Share On Facebook
  • Tweet It

ಕರ್ನಾಟಕದ ಜನ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಕಾವೇರಿ ವಿವಾದ ಕುರಿತು ಟಿವಿ ಆ್ಯಂಕರ್ ಪ್ರಶ್ನೆ ಕೇಳುತ್ತಲೇ ಯಾಕ್ರೀ ವಿವಾದ ಸೃಷ್ಟಿಸುತ್ತೀರಿ ಎಂದು ಕರೆಂಟು ಹೊಡೆಸಿಕೊಂಡ ಕಾಗೆಯಂತೆ ಮೈಕ್ ಬಿಸಾಕಿ ಎದ್ದು ಹೋದ ಪ್ರಕಾಶ್ ರೈ, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗುತ್ತಲೇ, ನರಿಯಂತೆ ಬಂದು ಏನಾಗ್ತಿದೆರೀ ಕರ್ನಾಟಕದಲ್ಲಿ ಎಂದು ಪ್ರಶ್ನೆ ಕೇಳಿದರು.

ಅಲ್ಲಿಂದ ಶುರುವಾಯಿತು, ಈ ಪ್ರಕಾಶ್ ರೈ ಎಂಬ ನಟನ ನಟನೆ. ಕೇರಳದಲ್ಲಿ ಹಿಂದೂ, ಬಿಜೆಪಿ, ಆರೆಸ್ಸೆಸ್ ಕಾರ್ಯಕರ್ತರ ಹತ್ಯೆಯಾಗುತ್ತಿದ್ದರೆ, ಅದನ್ನು ಖಂಡಿಸುವುದನ್ನು ಬಿಟ್ಟು, ಕೇರಳವೇ ಸೇಫ್ ಎಂದರು. ನಾನು ಹಿಂದೂಗಳ ವಿರೋಧಿಯಲ್ಲ, ಬಿಜೆಪಿ, ಮೋದಿ, ಅನಂತಕುಮಾರ ಹೆಗಡೆ ವಿರೋಧಿ ಅಂದರು. ಆದರೆ ಕರ್ನಾಟಕದಲ್ಲಿ ಸಾಲು ಸಾಲು ಹಿಂದೂಗಳ ಕೊಲೆಯಾದರೂ ಖಂಡಿಸುವುದನ್ನು ಮರೆತರು.

ಮೊನ್ನೆಯಷ್ಟೇ ಗೌರಿ ದಿನ ಎಂಬ ಕಾರ್ಯಕ್ರಮ ಆಯೋಜಿಸಿದ ಈ ಉಪದ್ವ್ಯಾಪಿ, ದೇಶದ್ರೋಹಿ ಹೇಳಿಕೆ ನೀಡಿದವರನ್ನು ಕರೆಸಿ ಬಿಜೆಪಿ ವಿರುದ್ಧ ಮಾತನಾಡಿಸಿದರು. ಅಷ್ಟೇ ಅಲ್ಲ, ಬುಧವಾರವಷ್ಟೇ ಮೈಕ್ ಹಿಡಿದ ಈ ನಟ, 2014ರ ಬಳಿಕ ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಾವಿಗೆ ಪ್ರಧಾನಿ ನರೇಂದ್ರ ಮೋದಿಯವರೇ ಕಾರಣ ಎಂದು ತನ್ನ ಎಲುಬಿಲ್ಲದ ನಾಲಗೆಯನ್ನು ಹರಿಬಿಟ್ಟಿದ್ದಾರೆ.

ಇದೆಂಥ ಬೌದ್ಧಿಕ ದಿವಾಳಿತನ ಪ್ರಕಾಶ್ ರೈ ನಿಮ್ದು? ಇದೆಂಥ ವಿಚಾರ ನಪುಂಸಕತನ? ನಿಮ್ಮ ಮಿದುಳಿಗೆ ಏನಾಗಿದೆ? ನೀವ್ಯಾವ ಸೀಮೆ ಪ್ರಗತಿಪರರ ಮಾರ್ರೇ? ನಿಮ್ಮ ತರ್ಕಕ್ಕೆ ಯಾವ ದೆವ್ವ ಮೆಟ್ಟಿಕೊಂಡಿದೆ? ಏನಾಗಿದೆ ನಿಮಗೆ? ಯಾರನ್ನು ಮೆಚ್ಚಿಸಲು ಹೀಗೆ ಮಾತನಾಡುತ್ತಿದ್ದೀರಿ? ನಿಮಗೆ ನಿಜವಾಗಿಯೂ ಬುದ್ಧಿ ಇದೆಯೇ ಪ್ರಕಾಶ್ ರೈ?

ಹೌದು, ಹೀಗಂತ ಈ ನಟನನ್ನು ಪ್ರಶ್ನಿಸಲೇಬೇಕಾಗಿದೆ. ಕಠೋರ ಪ್ರಶ್ನೆಗಳ ಮೂಲಕ ತರಾಟೆಗೆ ತೆಗೆದುಕೊಳ್ಳಲೇಬೇಕಾಗಿದೆ. ನೀವೇ ಯೋಚನೆ ಮಾಡಿ. “ಗೌರಿದಿನ” ಎಂಬ ಕಾರ್ಯಕ್ರಮ ಗೌರಿ ಲಂಕೇಶ್ ಜನ್ಮದಿನದ ಪ್ರಯುಕ್ತ ಆಚರಿಸಿದ್ದು. ಅದರಲ್ಲಿ ಗೌರಿ ಲಂಕೇಶ್ ಸಾವಿನ ತನಿಖೆಯಾಗಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಬೇಕಿತ್ತು. ಸಿಬಿಐಗೆ ವಹಿಸಿ ಪ್ರಕರಣವನ್ನು ಎಂದು ಆಗ್ರಹಿಸಬಹುದಿತ್ತು. ಆದರೆ ಅದನ್ನು ಬಿಟ್ಟು ಇಡೀ ಕಾರ್ಯಕ್ರಮವನ್ನು ಬಿಜೆಪಿ ವಿರುದ್ಧದ ಸಮಾವೇಶ ಮಾಡಿಬಿಟ್ಟರು. ಅದಕ್ಕೆ ಜೆಎನ್ ಯು ವಿದ್ಯಾರ್ಥಿಗಳ ಸಾಥ್ ಬೇರೆ ಇತ್ತು. ನಮ್ಮ ದೊರೆಸ್ವಾಮಿ ಅವರೂ ಕಾಂಗ್ರೆಸ್ ವಕ್ತಾರರಂತೆ ಮಾತನಾಡಿಬಿಟ್ಟರು.

ಇನ್ನು ಈ ರೈ ಎಂಬ ತಥಾಕಥಿಕ ಬಿಜೆಪಿ ವಿರೋಧಿಯ, ಕಾಂಗ್ರೆಸ್ ಮನಸ್ಸಿನ, ಆದರೂ ವಿತಂಡವಾದ ಮಂಡಿಸುವ ಮಹಾಶಯನ ತರ್ಕ ನೋಡಿ. 2014ರ ಬಳಿಕ ದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಾವಿಗೆ ಮೋದಿಯವರೇ ಕಾರಣವಂತೆ.

ಅಲ್ಲ ಸ್ವಾಮಿ ಕರ್ನಾಟಕ ಹೊರತುಪಡಿಸಿ ಬೇರೆ ಯಾವ ರಾಜ್ಯದಲ್ಲಿ ಎಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ? ಮಾಡಿಕೊಂಡರೂ, ಅದನ್ನು ತಡೆಯುವುದು ರಾಜ್ಯ ಸರ್ಕಾರದ ಜವಾಬ್ದಾರಿಯಲ್ಲವೇ? ನಿಮಗೆ ಕೇಂದ್ರದ ಮೋದಿ ಕಾಣುತ್ತಾರೆಯೇ ಹೊರತು, ರಾಜ್ಯದಲ್ಲಿ 3500 ರೈತರು ಆತ್ಮಹತ್ಯೆ ಮಾಡಿಕೊಂಡರೂ, ಸಾಲ ಮನ್ನಾ ಮಾಡಲು ಮೀನಮೇಷ ಎಣಿಸಿದ ಸಿದ್ದರಾಮಯ್ಯನವರು ಕಾಣುವುದಿಲ್ಲ? ಇದೆಂಥ ಇಬ್ಬಂದಿತನ ಸ್ವಾಮಿ?

ಕರ್ನಾಟದಕಲ್ಲಿ 3500 ರೈತರು ಆತ್ಮಹತ್ಯೆ ಮಾಡಿಕೊಂಡರೂ ರಾಜ್ಯ ಸರ್ಕಾರವನ್ನು ಟೀಕಿಸದ ನೀವು, ರಾಜ್ಯದಲ್ಲಿ 22 (ಸಂತೋಷ್ ಸೇರಿ) ಹಿಂದೂಗಳ ಹತ್ಯೆಯಾದರೂ ಸರ್ಕಾರದ ವಿರುದ್ಧ ಕನಿಷ್ಠ ಗುಟುರು ಹಾಕದ ನೀವು, ಮೋದಿ ಅವರ ವಿರುದ್ಧ ಬರೀ ಬೊಂಬ ಹೊಡೆದುಕೊಂಡು ತಿರುಗಾಡಿದರೆ, ಕೇಳಲು ಇಲ್ಯಾರೂ ಮೂರ್ಖರಿಲ್ಲ ಪ್ರಕಾಶ್ ರೈ!

 

 

0
Shares
  • Share On Facebook
  • Tweet It




Trending Now
ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
ವಿಶಾಲ್ ಗೌಡ ಕುಶಾಲನಗರ September 15, 2025
ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
ವಿಶಾಲ್ ಗೌಡ ಕುಶಾಲನಗರ September 15, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
    • ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ
    • ನಂಗೆ ಸ್ವಲ್ಪ ವಿಷ ಕೊಡಿ ಎಂದು ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟ ದರ್ಶನ್ ಗೆ ಅಗತ್ಯ ಸೌಕರ್ಯ ನೀಡುವಂತೆ ನ್ಯಾಯಾಲಯ ಆದೇಶ!
    • ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟಲು ಆಸೆ- ಕೈ ಶಾಸಕ ಬಿ.ಕೆ.ಸಂಗಮೇಶ್ವರ್
    • ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ರಾಜೀನಾಮೆ!
  • Popular Posts

    • 1
      ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • 2
      ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • 3
      ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • 4
      ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • 5
      ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ

  • Privacy Policy
  • Contact
© Tulunadu Infomedia.

Press enter/return to begin your search