• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ವಿದ್ಯಾರ್ಥಿಗಳಿಗೆ ಮೋದಿ ಮೇಷ್ಟ್ರು ಬರೆದ ಪುಸ್ತಕದಲ್ಲಿ ಯಾವ ಸೂತ್ರಗಳಿವೆ ತಿಳಿದಿದೆಯೇ?

TNN Correspondent Posted On February 4, 2018
0


0
Shares
  • Share On Facebook
  • Tweet It

ದೆಹಲಿ: ಪ್ರಧಾನಿ ಮೋದಿ ಅವರು ಎಂದರೇನೆ ಹಾಗೆ. ಅವರು ಸೂಟು, ಬೂಟು ಹಾಕಿಕೊಂಡ ವಿದೇಶಕ್ಕೆ ಹೊರಟರೆ ಅವರನ್ನು ಸ್ವಾಗತಿಸಲು ವಿಶ್ವವೇ ತುದಿಗಾಲಲ್ಲಿ ಕಾಯುತ್ತಿರುತ್ತದೆ. ಭಾರತದ ಯಾವ ಮೂಲೆಗೆ ಅವರು ಹೋದರೂ ಲಕ್ಷ ಲಕ್ಷ ಜನ ಸೇರುತ್ತಾರೆ. ಅವರು ಮಾತನಾಡಲು ಹೊರಟರೆ ಇಡೀ ಸಂಸತ್ತು ಮೂಕವಿಸ್ಮಿತವಾಗಿ ಕೂರುತ್ತದೆ.

ಇಂತಿಪ್ಪ ನರೇಂದ್ರ ಮೋದಿ ಈಗ ಮೇಷ್ಟ್ರಾಗಿ  ಬದಲಾಗಿದ್ದಾರೆ. ಹಾಗಂತ ಅವರು ಯಾವುದೋ ಶಾಲೆ ಅಥವಾ ಕಾಲೇಜಿಗೆ ಹೋಗಿ ಉಪನ್ಯಾಸ ನೀಡಿಲ್ಲ. ಬದಲಾಗಿ ಪರೀಕ್ಷೆಗೆ ಸಿದ್ಧರಾಗುವ ವಿದ್ಯಾರ್ಥಿಗಳು ಹಾಗೂ ಮಕ್ಕಳಿಗೆ ಶಿಕ್ಷಣ ನೀಡುವ ಪೋಷಕರಿಗಾಗಿ ಪ್ರಧಾನಿ ಅವರು ಪುಸ್ತಕ ಬರೆದಿದ್ದಾರೆ.

ಪ್ರಧಾನಿ ಬರೆದ ಪುಸ್ತಕವನ್ನು ಪೆಂಗ್ವಿನ್ ರ್ಯಾಂಡಮ್ ಹೌಸ್ ಎಂಬ ಪ್ರಕಾಶವವೊಂದು ಪ್ರಕಟಿಸಿದ್ದು, ಶನಿವಾರ ದೆಹಲಿಯಲ್ಲಿ ಪುಸ್ತಕ ಬಿಡುಗಡೆಯಾಗಿದೆ. ಹಾಗಾದರೆ ಮೋದಿ ಅವರು ಬರೆದ ಪುಸ್ತಕದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಯಾವ ಸಲಹೆ ನೀಡಿದ್ದಾರೆ? ಅವೆಷ್ಟು ಇಬ್ಬರಿಗೂ ಸಹಕಾರಿ? ಆ ಸರಳ ಸಲಹೆಗಳು ಯಾವವು? ಇಲ್ಲಿದೆ ಕಿರುಮಾಹಿತಿ.

ಎಕ್ಸಾಮ್ ವಾರಿಯರ್ ಎಂಬ ಪುಸ್ತಕದ ಮೊದಲ 25 ಚಾಪ್ಟರ್ ಗಳಲ್ಲಿ ವಿದ್ಯಾರ್ಥಿಗಳು ಹೇಗೆ ಪರೀಕ್ಷೆಗೆ ಸಿದ್ಧರಾಗಬೇಕು? ಪರೀಕ್ಷೆ ಭಯ ಹೇಗೆ ತೊಲಗಿಸಬೇಕು ಎಂದು ವಿವರಿಸಿದ್ದಾರೆ. “ಪರೀಕ್ಷೆಗಳು ಹಬ್ಬಗಳಿದ್ದಂತೆ-ಅವುಗಳನ್ನು ಆಚರಿಸಿ”, “ನೀವೇ ನಿಮ್ಮ ನಿರೂಪಕರಾಗಿ, ನಿಮ್ಮ ಶಕ್ತಿ ಸಾಬೀತುಪಡಿಸಿ”, “ಇದು ನಿಮ್ಮ ಸಾಮರ್ಥ್ಯ ತೋರಿಸುವ ಸುಸಮಯ, ಖುಷಿಯಿಂದ ಎದುರಿಸಿ”, “ಪರೀಕ್ಷೆಯಲ್ಲಿ ಚೀಟಿ ಮಾಡುವುದು ಸಣ್ಣತನದ ಕೆಲಸ” ಎಂಬ ಅಧ್ಯಾಯಗಳು ಮಕ್ಕಳಿಗೆ ಸೂಕ್ತ ಸಲಹೆಗಳಾಗುವುದರಲ್ಲಿ ಎರಡು ಮಾತಿಲ್ಲ.

ಅಷ್ಟೇ ಅಲ್ಲ, “ಪರೀಕ್ಷೆಯಲ್ಲಿ ನಿರೂಪಣೆ ಎಂಬುದು ಪ್ರಮುಖ ಪಾತ್ರ, ಅದನ್ನು ನಿರ್ವಹಿಸಿ”, “ನಿರೂಪಣೆ ಚೆನ್ನಾಗಿದ್ದರೆ, ಚೆನ್ನಾಗಿ ಪರೀಕ್ಷೆ ಬರೆದರೆ, ನಿಮ್ಮ ಕೇಕಿನ ಮೇಲೆ ಐಸಿನ ತುಣುಕು ಜೋಡಿಸಿದಂತೆ, ಸಿಹಿಯಾಗಿರುತ್ತದೆ, ಮಜವಾಗಿರುತ್ತದೆ” ಎಂಬ ಅಧ್ಯಾಯಗಳು ಮಕ್ಕಳಿಗೆ ಸಹಕಾರಿಯಾಗುತ್ತವೆ.

ಜತೆಗೆ ಪೋಷಕರಿಗೂ ಸಹ ಪ್ರಧಾನಿಯವರು ಸಲಹೆ ನೀಡಿದ್ದು, ವಿದ್ಯಾರ್ಥಿಗಳ ಮೇಲೆ ಓದು, ಓದು ಎಂದು ಒತ್ತಡ ಹೇರಬೇಡಿ, ಅವರ ಆಸಕ್ತಿಗೆ ನೀರೆರೆಯಿರಿ, ಭಾರತ ಅವಕಾಶಗಳ ಸಾಗರ, ಅವರ ಪ್ರತಿಭೆ ಅನಾವರಣಕ್ಕೆ ಏಣಿಯಾಗಿ ಎಂದು ಮೋದಿ ತಿಳಿಸಿದ್ದಾರೆ.

ಒಟ್ಟಿನಲ್ಲಿ ಪ್ರಧಾನಿ ಎಂದರೆ ಯಾವಾಗಲೂ ಬ್ಯುಸಿಯಾಗಿರುತ್ತಾರೆ, ಸಭೆ, ಸಮಾರಂಭಗಳಲ್ಲಿ ಭಾಗವಹಿಸುತ್ತಾರೆ, ವಿರೋಧ ಪಕ್ಷಗಳಿಗೆ ಟಾಂಗ್ ನೀಡುತ್ತಾರೆ, ರಾಜಕಾರಣವನ್ನಷ್ಟೇ ಮಾಡುತ್ತಾರೆ ಎಂಬ ಮಾತುಕೇಳಿಬರುತ್ತಿರುವ ಪ್ರಸ್ತುತದ ಸನ್ನಿವೇಶದಲ್ಲಿ ದೇಶದ ಪ್ರಧಾನಿಯೊಬ್ಬರು ವಿದ್ಯಾರ್ಥಿಗಳಿಗಾಗಿ ಪುಸ್ತಕ ಬರೆದು ಸಲಹೆ ನೀಡಿದ್ದು ಒಳ್ಳೆಯ ಬೆಳವಣಿಗೆ. ಎಸ್ಎಸ್ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಪುಸ್ತಕದಿಂದ ಒಳ್ಳೆಯದಾಗಲಿ ಎಂಬುದೇ ನಮ್ಮ ಆಶಯ.

0
Shares
  • Share On Facebook
  • Tweet It




Trending Now
ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!
Tulunadu News November 18, 2025
ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
Tulunadu News November 11, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!
    • ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
    • ಕಾಂತಾರಾ ಚಾಪ್ಟರ್ 1 ಒಟಿಟಿಯಲ್ಲಿ ರಿಲೀಸ್! ದಿನ ಫಿಕ್ಸ್!
    • ಜಿಎಸ್ಟಿ ಇಳಿಕೆ ಪರಿಣಾಮ- ದೀಪಾವಳಿಗೆ 6.05 ಲಕ್ಷ ಕೋಟಿ ವಸ್ತು ಮಾರಾಟ!
  • Popular Posts

    • 1
      ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!

  • Privacy Policy
  • Contact
© Tulunadu Infomedia.

Press enter/return to begin your search