• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಛತ್ತೀಸ್ ಗಡದ ನಕ್ಸಲ್ ಪೀಡಿತ ಪ್ರದೇಶದ ಮಕ್ಕಳಿಗೆ ಉಚಿತ ಪಾಠ ಮಾಡುವ ಸಿಆರ್ ಪಿಎಫ್ ಯೋಧರಿಗೆ ಸಲಾಂ!

TNN Correspondent Posted On February 6, 2018


  • Share On Facebook
  • Tweet It

ರಾಯಪುರ: ಛತ್ತೀಸ್ ಗಡ ಎಂದರೇನೆ ಹಾಗೆ. ಅದು ನಕ್ಸಲ್ ಪೀಡಿತ ಪ್ರದೇಶ. ಹಲವು ಪ್ರದೇಶಗಳಂತೂ ನಕ್ಸಲರ ಹಾವಳಿಯಿಂದ ಅಭಿವೃದ್ಧಿ ಮೆರೆತಿವೆ. ಜನರಿಗೆ ಊಟ-ತಿಂಡಿ, ಶಾಲೆ, ವಸತಿ… ಹೂಂ ಹೂಂ. ಯಾವ ಸೌಲಭ್ಯವೂ ಇಲ್ಲ. ಜತೆಗೆ ನೆಮ್ಮದಿಯಾದರೂ ಇದೆಯಾ ಅದೂ ಇಲ್ಲ.

ಏಕೆಂದರೆ, ಕೆಂಪು ಉಗ್ರರು ಅಭಿವೃದ್ಧಿ ಕುಂಠಿತಗೊಳಿಸುವ ಜತೆಗೆ ಜನರ ಬಡತನವನ್ನೇ ಬಂಡವಾಳವನ್ನಾಗಿಸಿಕೊಂಡು ಅವರನ್ನೂ ಕೆಂಪು ಉಗ್ರರನ್ನಾಗಿ ಮಾಡುತ್ತಾರೆ. ತರಬೇತಿ ನೀಡಿ, ಮನವೊಲಿಸಿ ಅವರನ್ನು ನಕ್ಸಲರನ್ನಾಗಿ ಮಾಡುತ್ತಾರೆ.

ಆದರೆ, ಇದನ್ನು ಮನಗಂಡ ನಮ್ಮ ಹೆಮ್ಮೆಯ ಕೇಂದ್ರೀಯ ಸಶಸ್ತ್ರ ಮೀಸಲು ಪಡೆಯ ಯೋಧರು ನಕ್ಸಲ್ ಪೀಡಿತ ಗ್ರಾಮವೊಂದರಲ್ಲಿ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡಲು, ದಿನಾಲೂ ತರಗತಿ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಆ ಮೂಲಕ ಜನರನ್ನು ಕಾಯುವ ಯೋಧರು, ಜನರ ಏಳಿಗೆಗೂ ಕಾರಣವಾಗುತ್ತಿದ್ದಾರೆ.

ಹೌದು, ಬಿಜಾಪುರದಿಂದ 8 ಕಿಲೋಮೀಟರ್ ದೂರದಲ್ಲಿರುವ, ನಕ್ಸಲರ ಅಟ್ಟಹಾಸಕ್ಕೆ ಸುದ್ದಿಯಾಗುವ ಚೆರ್ಪಾಲ್ ಎಂಬಲ್ಲಿ 85ನೇ ಬೆಟಾಲಿಯನ್ ನ ಯೋಧರು ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ಸೇನೆಯ ನೆಲೆಯೇ ಪಾಠಶಾಲೆಯಾಗಿದ್ದು, ಪ್ರತಿದಿನ ಸುಮಾರು 40 ವಿದ್ಯಾರ್ಥಿಗಳು ತರಗತಿಗೆ ಹಾಜರಾಗುತ್ತಿದ್ದಾರೆ.

ಬರೀ ಪಾಠವೊಂದನ್ನೇ ಮಾಡುತ್ತಿಲ್ಲ. ನಾವು ಸಮಾಜಮುಖಿಗಳಾಗಿ ಕೆಲಸ ಮಾಡುತ್ತಿದ್ದೇವೆ. ಈ ವಿದ್ಯಾರ್ಥಿಗಳು ನೂರಕ್ಕೆ ನೂರರಷ್ಟು ಜ್ಞಾನ ಸಂಪಾದಿಸುತ್ತಾರೆ ಎಂಬ ವಿಶ್ವಾಸವಿದೆ. ಇವರೆಗೆ ಪ್ರೊಜೆಕ್ಟರ್ ಮೂಲಕ ಸ್ಫೂರ್ತಿ ತುಂಬುವ ಸಿನಿಮಾ ಸಹ ತೋರಿಸಿ ಪಾಠದತ್ತ ಸೆಳೆಯುತ್ತಿದ್ದೇವೆ ಎಂದು ಸಹಾಯಕ ಕಮಾಂಡಂಟ್ ಅವಿನಾಶ್ ತಿಳಿಸಿದ್ದಾರೆ.

ನಾನು ಕಠಿಣ ಪರಿಶ್ರಮದಿಂದ ಓದಿ ಮುಂದೊಂದು ದಿನ ಸಿಆರ್ ಪಿಎಫ್ ಯೋಧರ ಹಾಗೆ ಶಿಕ್ಷಕನಾಗುತ್ತೇನೆ. ನಮ್ಮ ರೀತಿಯೇ ಪಕ್ಕದ ಗ್ರಾಮಗಳ ವಿದ್ಯಾರ್ಥಿಗಳೂ ಶಾಲೆಗೆ ಹೋಗಬೇಕು ಎಂಬುದೇ ನನ್ನಾಸೆ ಎನ್ನುತ್ತಾನೆ 14 ವರ್ಷದ ಬಾಲಕನೊಬ್ಬ.

ಒಟ್ಟಿನಲ್ಲಿ ದೇಶ ಕಾಯುವ ಯೋಧರು ಸಮಾಜವನ್ನೂ ಕಾಯುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಯೋಧರ ಶ್ರಮ ಫಲ ನೀಡಲಿ, ಮಕ್ಕಳು ಶಿಕ್ಷಣವಂತರಾಗಿ ನಕ್ಸಲಿಸಂ ತೊಲಗಿಸಲಿ. ಎಂಬುದೇ ನಮ್ಮ ಆಶಯ. ಯೋಧರ ಶ್ರಮಕ್ಕೊಂದು ಸಲಾಂ ಇರಲಿ.

  • Share On Facebook
  • Tweet It


- Advertisement -


Trending Now
ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
Tulunadu News January 27, 2023
ಮುತಾಲಿಕ್ ಖಡ್ಗಕ್ಕೆ ಸಾಣೆ ಹಾಕಿಸಿಕೊಟ್ಟ ಚಾಣಾಕ್ಷ ಯಾರು?
Tulunadu News January 26, 2023
Leave A Reply

  • Recent Posts

    • ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
    • ಮುತಾಲಿಕ್ ಖಡ್ಗಕ್ಕೆ ಸಾಣೆ ಹಾಕಿಸಿಕೊಟ್ಟ ಚಾಣಾಕ್ಷ ಯಾರು?
    • ವೆನಲಾಕ್ ನಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ ಯಾಕಿಲ್ಲ!!
    • ನಕಲಿ ಕಾಂತಾರಗಳು ನಮ್ಮ ನಂಬಿಕೆಗೆ ಪೆಟ್ಟು ಕೊಡಬಾರದು!!
    • ಶರದ್ ಪವಾರ್ ಕೂಡ ಗಡಿಯಲ್ಲಿ ಕಡ್ಡಿ ಅಲ್ಲಾಡಿಸಲು ಹೊರಟಿದ್ದಾರೆ!
    • ಮಂಗಳಾ ಕ್ರೀಡಾಂಗಣದ ಹೊರಗೆ ಸಿಂಗಾರ, ಒಳಗೆ ಗೋಳಿಸೊಪ್ಪು!!
    • ಹಿಂದೂಗಳ ಫಲವತ್ತತೆಯ ತಾಕತ್ತು ಪರೀಕ್ಷಿಸುತ್ತೀಯಾ ಬದ್ರುದ್ದೀನ್?
    • ಮಕ್ಕಳ ಬ್ಯಾಗಿನಲ್ಲಿ ಕಾಂಡೋಮ್ ಉತ್ತಮ ಲಕ್ಷಣವಲ್ಲ!!
    • ಬೊಮ್ಮಾಯಿ ಕಣ್ಣು ಮುಚ್ಚಿ ಕೊಟ್ಟ ಮುಸ್ಲಿಂ ಕಾಲೇಜು ಪ್ರಪಂಚ ನೋಡಿತು!!
    • ವಕ್ಫ್ ಬೋರ್ಡ್ ಅಧ್ಯಕ್ಷರ ಕ್ಲೈಮ್ಯಾಕ್ಸ್ ಆಟದಿಂದ ಬಿಜೆಪಿಗೆ ಟೆನ್ಷನ್!
  • Popular Posts

    • 1
      ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
    • 2
      ಮುತಾಲಿಕ್ ಖಡ್ಗಕ್ಕೆ ಸಾಣೆ ಹಾಕಿಸಿಕೊಟ್ಟ ಚಾಣಾಕ್ಷ ಯಾರು?


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search