• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಛತ್ತೀಸ್ ಗಡದ ನಕ್ಸಲ್ ಪೀಡಿತ ಪ್ರದೇಶದ ಮಕ್ಕಳಿಗೆ ಉಚಿತ ಪಾಠ ಮಾಡುವ ಸಿಆರ್ ಪಿಎಫ್ ಯೋಧರಿಗೆ ಸಲಾಂ!

TNN Correspondent Posted On February 6, 2018


  • Share On Facebook
  • Tweet It

ರಾಯಪುರ: ಛತ್ತೀಸ್ ಗಡ ಎಂದರೇನೆ ಹಾಗೆ. ಅದು ನಕ್ಸಲ್ ಪೀಡಿತ ಪ್ರದೇಶ. ಹಲವು ಪ್ರದೇಶಗಳಂತೂ ನಕ್ಸಲರ ಹಾವಳಿಯಿಂದ ಅಭಿವೃದ್ಧಿ ಮೆರೆತಿವೆ. ಜನರಿಗೆ ಊಟ-ತಿಂಡಿ, ಶಾಲೆ, ವಸತಿ… ಹೂಂ ಹೂಂ. ಯಾವ ಸೌಲಭ್ಯವೂ ಇಲ್ಲ. ಜತೆಗೆ ನೆಮ್ಮದಿಯಾದರೂ ಇದೆಯಾ ಅದೂ ಇಲ್ಲ.

ಏಕೆಂದರೆ, ಕೆಂಪು ಉಗ್ರರು ಅಭಿವೃದ್ಧಿ ಕುಂಠಿತಗೊಳಿಸುವ ಜತೆಗೆ ಜನರ ಬಡತನವನ್ನೇ ಬಂಡವಾಳವನ್ನಾಗಿಸಿಕೊಂಡು ಅವರನ್ನೂ ಕೆಂಪು ಉಗ್ರರನ್ನಾಗಿ ಮಾಡುತ್ತಾರೆ. ತರಬೇತಿ ನೀಡಿ, ಮನವೊಲಿಸಿ ಅವರನ್ನು ನಕ್ಸಲರನ್ನಾಗಿ ಮಾಡುತ್ತಾರೆ.

ಆದರೆ, ಇದನ್ನು ಮನಗಂಡ ನಮ್ಮ ಹೆಮ್ಮೆಯ ಕೇಂದ್ರೀಯ ಸಶಸ್ತ್ರ ಮೀಸಲು ಪಡೆಯ ಯೋಧರು ನಕ್ಸಲ್ ಪೀಡಿತ ಗ್ರಾಮವೊಂದರಲ್ಲಿ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡಲು, ದಿನಾಲೂ ತರಗತಿ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಆ ಮೂಲಕ ಜನರನ್ನು ಕಾಯುವ ಯೋಧರು, ಜನರ ಏಳಿಗೆಗೂ ಕಾರಣವಾಗುತ್ತಿದ್ದಾರೆ.

ಹೌದು, ಬಿಜಾಪುರದಿಂದ 8 ಕಿಲೋಮೀಟರ್ ದೂರದಲ್ಲಿರುವ, ನಕ್ಸಲರ ಅಟ್ಟಹಾಸಕ್ಕೆ ಸುದ್ದಿಯಾಗುವ ಚೆರ್ಪಾಲ್ ಎಂಬಲ್ಲಿ 85ನೇ ಬೆಟಾಲಿಯನ್ ನ ಯೋಧರು ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ಸೇನೆಯ ನೆಲೆಯೇ ಪಾಠಶಾಲೆಯಾಗಿದ್ದು, ಪ್ರತಿದಿನ ಸುಮಾರು 40 ವಿದ್ಯಾರ್ಥಿಗಳು ತರಗತಿಗೆ ಹಾಜರಾಗುತ್ತಿದ್ದಾರೆ.

ಬರೀ ಪಾಠವೊಂದನ್ನೇ ಮಾಡುತ್ತಿಲ್ಲ. ನಾವು ಸಮಾಜಮುಖಿಗಳಾಗಿ ಕೆಲಸ ಮಾಡುತ್ತಿದ್ದೇವೆ. ಈ ವಿದ್ಯಾರ್ಥಿಗಳು ನೂರಕ್ಕೆ ನೂರರಷ್ಟು ಜ್ಞಾನ ಸಂಪಾದಿಸುತ್ತಾರೆ ಎಂಬ ವಿಶ್ವಾಸವಿದೆ. ಇವರೆಗೆ ಪ್ರೊಜೆಕ್ಟರ್ ಮೂಲಕ ಸ್ಫೂರ್ತಿ ತುಂಬುವ ಸಿನಿಮಾ ಸಹ ತೋರಿಸಿ ಪಾಠದತ್ತ ಸೆಳೆಯುತ್ತಿದ್ದೇವೆ ಎಂದು ಸಹಾಯಕ ಕಮಾಂಡಂಟ್ ಅವಿನಾಶ್ ತಿಳಿಸಿದ್ದಾರೆ.

ನಾನು ಕಠಿಣ ಪರಿಶ್ರಮದಿಂದ ಓದಿ ಮುಂದೊಂದು ದಿನ ಸಿಆರ್ ಪಿಎಫ್ ಯೋಧರ ಹಾಗೆ ಶಿಕ್ಷಕನಾಗುತ್ತೇನೆ. ನಮ್ಮ ರೀತಿಯೇ ಪಕ್ಕದ ಗ್ರಾಮಗಳ ವಿದ್ಯಾರ್ಥಿಗಳೂ ಶಾಲೆಗೆ ಹೋಗಬೇಕು ಎಂಬುದೇ ನನ್ನಾಸೆ ಎನ್ನುತ್ತಾನೆ 14 ವರ್ಷದ ಬಾಲಕನೊಬ್ಬ.

ಒಟ್ಟಿನಲ್ಲಿ ದೇಶ ಕಾಯುವ ಯೋಧರು ಸಮಾಜವನ್ನೂ ಕಾಯುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಯೋಧರ ಶ್ರಮ ಫಲ ನೀಡಲಿ, ಮಕ್ಕಳು ಶಿಕ್ಷಣವಂತರಾಗಿ ನಕ್ಸಲಿಸಂ ತೊಲಗಿಸಲಿ. ಎಂಬುದೇ ನಮ್ಮ ಆಶಯ. ಯೋಧರ ಶ್ರಮಕ್ಕೊಂದು ಸಲಾಂ ಇರಲಿ.

  • Share On Facebook
  • Tweet It


- Advertisement -


Trending Now
ಕೇರಳ ಸ್ಟೋರಿ ಸಿನೆಮಾ ಕಾಲ್ಪನಿಕ ಕಥೆ ಅಲ್ಲ!!
Tulunadu News May 31, 2023
ಕಾಂಗ್ರೆಸ್ ಸರಕಾರ ಹೊಸ ಸಂಸತ್ ಭವನ ನಿರ್ಮಿಸಿದ್ದರೆ ಏನಾಗುತ್ತಿತ್ತು?
Tulunadu News May 30, 2023
Leave A Reply

  • Recent Posts

    • ಕೇರಳ ಸ್ಟೋರಿ ಸಿನೆಮಾ ಕಾಲ್ಪನಿಕ ಕಥೆ ಅಲ್ಲ!!
    • ಕಾಂಗ್ರೆಸ್ ಸರಕಾರ ಹೊಸ ಸಂಸತ್ ಭವನ ನಿರ್ಮಿಸಿದ್ದರೆ ಏನಾಗುತ್ತಿತ್ತು?
    • ಗ್ಯಾರಂಟಿ ಇಲ್ಲದ ಸರಕಾರದಿಂದ ದ್ವೇಷದ ಆಡಳಿತ: ವೇದವ್ಯಾಸ್ ಕಾಮತ್
    • ನಾವು ಬೇರೆ ಧರ್ಮದ ಯುವಕರ ಜಾಲಕ್ಕೆ ಬಲಿಯಾಗಲ್ಲ!
    • ಗೆದ್ದ ಕೂಡಲೇ ಕಾಂಗ್ರೆಸ್ಸಿಗರ ದಬ್ಬಾಳಿಕೆ ಶುರು!!
    • ಮೇ ಮಳೆ ತೆರೆದಿಟ್ಟಿತ್ತು ಹಣೆಬರಹ!
    • ಚುನಾವಣೆ ಪ್ರಜಾಪ್ರಭುತ್ವದ ಹಬ್ಬ ಬೆಟ್ಟಿಂಗ್ ನವರಿಗೆ!!
    • ಕೇರಳ ಸ್ಟೋರಿ ಮೇ ಮೇರಾ ಅಬ್ದುಲ್ಲಾ ಅಲಗ್ ಹೇ?
    • ಪ್ರಣಾಳಿಕೆಯಲ್ಲಿ ಪಾರ್ಕಿಂಗ್ ಸಮಸ್ಯೆ ಪರಿಹರಿಸಲು ಮೂರು ಸೂತ್ರ!!
    • ಫೇಕ್ ನ್ಯೂಸ್ ಜಮಾನದಲ್ಲಿ ಸಂತೋಷ್ ವಿರುದ್ಧ ಷಡ್ಯಂತ್ರ!!
  • Popular Posts

    • 1
      ಕೇರಳ ಸ್ಟೋರಿ ಸಿನೆಮಾ ಕಾಲ್ಪನಿಕ ಕಥೆ ಅಲ್ಲ!!
    • 2
      ಕಾಂಗ್ರೆಸ್ ಸರಕಾರ ಹೊಸ ಸಂಸತ್ ಭವನ ನಿರ್ಮಿಸಿದ್ದರೆ ಏನಾಗುತ್ತಿತ್ತು?
    • 3
      ಗ್ಯಾರಂಟಿ ಇಲ್ಲದ ಸರಕಾರದಿಂದ ದ್ವೇಷದ ಆಡಳಿತ: ವೇದವ್ಯಾಸ್ ಕಾಮತ್
    • 4
      ನಾವು ಬೇರೆ ಧರ್ಮದ ಯುವಕರ ಜಾಲಕ್ಕೆ ಬಲಿಯಾಗಲ್ಲ!
    • 5
      ಗೆದ್ದ ಕೂಡಲೇ ಕಾಂಗ್ರೆಸ್ಸಿಗರ ದಬ್ಬಾಳಿಕೆ ಶುರು!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search