• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಸಂಸತ್ತಿನಲ್ಲಿ ಮೋದಿ ಕಾಂಗ್ರೆಸ್ಸಿಗೆ ಹಿಗ್ಗಾಮುಗ್ಗ ಟೀಕಿಸುವಾಗ ಕಾಂಗ್ರೆಸ್ಸಿಗರು ಗಲಾಟೆ ಮಾಡಿದ್ದರ ಹಿಂದೆ ರಾಹುಲ್ ಕೈವಾಡ?

TNN Correspondent Posted On February 9, 2018
0


0
Shares
  • Share On Facebook
  • Tweet It

ದೆಹಲಿ: ಮೊನ್ನೆ ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನ ಉಭಯ ಸದನಗಳಲ್ಲೂ 90 ಪ್ಲಸ್ 90 ನಿಮಿಷ ಕಾಂಗ್ರೆಸ್ಸಿನ ಮುಖವಾಡ ಬಯಲು ಮಾಡುತ್ತಲೇ ಕಾಂಗ್ರೆಸ್ಸಿಗರು ಸ್ಕೂಲ್ ಮೇಷ್ಟ್ರು ಹೊಡೆಯುವಾಗ ಮಕ್ಕಳು ಬೇಡ ಸರ್, ಕ್ಷಮಿಸಿ ಸರ್ ಎನ್ನುವ ಹಾಗೆ “ಬಂದ್ ಕರೋ, ಬಂದ್ ಕರೋ” ಎಂದು ಗದ್ದಲ ಎಬ್ಬಿಸಿದರು. ಆದರೂ ಮೋದಿ ಅವರು ದೇಶದ ಇತಿಹಾಸ ಬಿಚ್ಚಿಟ್ಟು, ಅದರಲ್ಲಿ ಕಾಂಗ್ರೆಸ್ ಮುಖವಾಡ ಎಂಥಾದ್ದು ಎಂದು ಬಯಲು ಮಾಡಿದರು.

ಆದರೆ ಹೀಗೆ ಮೋದಿ ಅವರು ಭಾಷಣ ಮಾಡುವಾಗ ಕಾಂಗ್ರೆಸ್ ಸಂಸದರು ಗಲಾಟೆ ಎಬ್ಬಿಸಿದ್ದರ ಹಿಂದೆ ರಾಹುಲ್ ಗಾಂಧಿಯವರ ಕೈವಾಡ, ಸೂಚನೆ ಇದೆಯಾ ಎಂಬ ಅನುಮಾನ ಮೂಡಿದೆ.

ಹೌದು, ಕಾಂಗ್ರೆಸ್ಸಿಗರು ಬಂದ್ ಕರೋ, ಬಂದ್ ಕರೋ ಎಂದು ಮೋದಿ ಅವರ ಭಾಷಣಕ್ಕೆ ಅಡ್ಡಿಪಡಿಸಿದರು ಎಂಬುದಕ್ಕೆ ಹಲವು ಸಾಕ್ಷ್ಯ ದೊರೆತಿವೆ. ಮೋದಿ ಅವರು ಭಾಷಣ ಆರಂಭಿಸುತ್ತಲೇ, ನಿಧಾನವಾಗಿ ಕಾಂಗ್ರೆಸ್ಸಿನ ನಿಜಬಣ್ಣ ಬಯಲು ಮಾಡಲು ಮುಂದಾದರು.

ಮೋದಿ ಅವರ ಮಾತುಗಳು ಯಾವಾಗ ಕಾಂಗ್ರೆಸ್ಸಿಗರನ್ನು ಚುಚ್ಚಲು ಆರಂಭಿಸಿದವೋ, ಯಾವಾಗ ಕಾಂಗ್ರೆಸ್ಸಿನ ಬಣ್ಣ ಕಳಚುತ್ತ ಹೋಯಿತೋ, ಅಲ್ಲೇ ಇದ್ದ ರಾಹುಲ್ ಗಾಂಧಿ ಮುಖ ಕೆಂಪಿಟ್ಟಿತು. ಆಗ ಅವರು ಕಾಂಗ್ರೆಸ್ಸಿಗರತ್ತ ಮುಖ ಮಾಡಿ, ಏನಿದು ಮೋದಿ ಎಷ್ಟೆಲ್ಲ ಜಾಡಿಸುತ್ತಿದ್ದರೂ ನೀವು ಸುಮ್ಮನೆ ಇದ್ದಿರಲ್ಲ, ಗದ್ದಲ ಆರಂಭಿಸಿ ಎಂಬಂತಹ ಮುಖಭಾವ ತೋರಿಸಿ, ಗದ್ದಲ ಆರಂಭಿಸಿ ಎಂದು ಹೇಳಿದ ಹಾಗಿತ್ತು. ಸಂಸತ್ತಿನಲ್ಲಿ ರಾಹುಲ್ ಸನ್ನೆ ಮಾಡಿರುವ ಕುರಿತು ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಅಷ್ಟೇ ಅಲ್ಲ, ಮೋದಿ ಅವರು ಲೋಕಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ಟೀಕಾಸ್ತ್ರ ಬಳಸಿ, ರಾಜ್ಯಸಭೆಗೆ ತೆರಳುವ ಮುನ್ನ ರಾಹುಲ್ ಗಾಂಧಿಯವರು ಕಾಂಗ್ರೆಸ್ ಸಂಸದರಿಗೆ ಗದ್ದಲ ಆರಂಭಿಸಿ, ಮೋದಿ ಮಾತನಾಡಲು ಬಿಡಬೇಡಿ ಎಂದು ಸೂಚಿಸದ್ದರು ಎಂದು ಸಹ ತಿಳಿದುಬಂದಿದೆ.

ಒಟ್ಟಿನಲ್ಲಿ ದೇಶದ ಗಂಭೀರ ವಿಷಯಗಳನ್ನಿಟ್ಟುಕೊಂಡು ಸಂಸತ್ತಿನಲ್ಲಿ ಕಾಂಗ್ರೆಸ್ ವಿರುದ್ಧ ಟೀಕಾಸ್ತ್ರ ಬಳಸಿದರೆ, ಅದಕ್ಕೆ ಉತ್ತರ ನೀಡುವ ಬದಲು ಕಾಂಗ್ರೆಸ್ಸಿಗರು ಗದ್ದಲ ಮಾಡಿದ್ದು, ಸಂಸತ್ತಿಗೆ ಮಾಡಿದ ಅವಮಾನ ಹಾಗೂ ಉತ್ತರಿಸಲು ಆಗದ ಪರಿಸ್ಥಿತಿಗೆ ಅವರು ತಲುಪಿದ್ದರು ಎಂಬುದು ಖಾತ್ರಿಯಾಗಿದೆ. ಮೋದಿ ಮಾತಿನ ಅಲೆಗೆ ಕಾಂಗ್ರೆಸ್ ನಾಯಕರು ಕೊಚ್ಚಿ ಹೋದರು ಹಾಗೂ ರಾಹುಲ್ ಗಾಂಧಿ ಬೆಚ್ಚಿಬಿದ್ದರು ಎಂಬುದಂತೂ ಸುಳ್ಳಲ್ಲ.

0
Shares
  • Share On Facebook
  • Tweet It




Trending Now
ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
Tulunadu News November 21, 2025
ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
Tulunadu News November 20, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
    • ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
    • ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!
    • ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
  • Popular Posts

    • 1
      ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
    • 2
      ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ

  • Privacy Policy
  • Contact
© Tulunadu Infomedia.

Press enter/return to begin your search