• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಮಗನೊಂದಿಗೆ ಮತ್ತೆ ಒಂದಾಗಲು ಸೊಸೆ ನಿಖಾ ಹಲಾಲಕ್ಕೆ ಒಳಗಾಗಬೇಕು ಎಂದ ನೀಚ ಮಾವ!

TNN Correspondent Posted On February 10, 2018


  • Share On Facebook
  • Tweet It

ಲಖನೌ: ಒಂದೆಡೆ ಕೇಂದ್ರ ಸರ್ಕಾರ ತ್ರಿವಳಿ ತಲಾಖ್ ವಿರುದ್ಧ ಕಾನೂನು ರೂಪಿಸಲು ಹೊರಟಿದೆ. ಇನ್ನೊಂದೆಡೆ ನಿಖಾ ಹಲಾಲ (ವಿಚ್ಛೇದನ ಪಡೆದ ಮುಸ್ಲಿಂ ಮಹಿಳೆ ಮತ್ತೆ ತನ್ನ ಮಾಜಿ ಗಂಡನ ಜತೆ ಒಂದಾಗಲು ಇನ್ನೊಬ್ಬರ ಜತೆ ಮದುವೆ ಮಾಡಿಕೊಳ್ಳುವುದು ಅಥವಾ ಒಂದು ರಾತ್ರಿ ಕಳೆಯುವುದು)ವನ್ನು ಅಸಾಂವಿಧಾನಿಕ ಎಂದು ಘೋಷಿಸಲು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಚಿಂತನೆ ನಡೆಸಿದೆ. ಹೀಗಿದ್ದರೂ ಅನಿಷ್ಟವೊಂದು ನಡೆದಿದೆ.

ಹೌದು, ಉತ್ತರ  ಪ್ರದೇಶದ ಬರೇಲಿಯಲ್ಲಿ ಮುಸ್ಲಿಂ ಮಾವನೊಬ್ಬ ಮಗನಿಂದ ವಿಚ್ಛೇದನ ಪಡೆದ ಸೊಸೆ ಮತ್ತೆ ತನ್ನ ಮಾಜಿ ಗಂಡನೊಂದಿಗೆ ಜೀವನ ನಡೆಸಲು ತನ್ನೊಂದಿಗೆ ಲೈಂಗಿಕ ಕ್ರಿಯೆ (ಇದೇ ನಿಖಾ ಹಲಾಲ)ಯಲ್ಲಿ ತೊಡಗು ಎಂದು ಒತ್ತಾಯಿಸುತ್ತಿದ್ದಾನೆ ಎಂದು ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.

ಹೌದು, ನುಸ್ರತ್ ಎಂಬ ಮಹಿಳೆ ಸಲೀಂ ಎಂಬಾತನನ್ನು ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದು, ಮೊದಲು ಎಲ್ಲವೂ ಚೆನ್ನಾಗೇ ಇತ್ತು. ಆದರೆ ಬಳಿಕ ಗಂಡ ಹಾಗೂ ಮಾವ ಇಬ್ಬರೂ ವರದಕ್ಷಿಣೆ ತೆಗೆದುಕೊಂಡು ಬಾ ಎಂದು ಪೀಡಿಸಲು ಆರಂಭಿಸಿದ್ದಾರೆ. ಮಹಿಳೆ ತಂದು ಕೊಡದ ಕಾರಣ ಸಲೀಂ ವಿಚ್ಛೇದನ ನೀಡಿದ್ದಾನೆ.

ವಿಚ್ಛೇದನ ಪಡೆದ ಮಹಿಳೆ ತವರು ಮನೆಯಲ್ಲಿದ್ದು, ಆಕೆಯ ಅಪ್ಪ ಈಗ ಸಲೀಂ ಜತೆ ಮತ್ತೆ ಜೀವನ ನಡೆಸುವಂತೆ ಕೋರಿದ್ದಾರೆ. ಮಹಿಳೆಯೂ ಒಪ್ಪಿದ್ದಾಳೆ. ಆದರೆ ಈ ಕೋರಿಕೆಯನ್ನೇ ದುರುಪಯೋಗಪಡಿಸಿಕೊಳ್ಳುತ್ತಿರುವ ಸಲೀಂ ಅಪ್ಪ, ತನ್ನೊಂದಿಗೆ ನಿಖಾ ಹಲಾಲಕ್ಕೆ ಒಳಗಾಗಬೇಕು ಎಂದು ಷರತ್ತು ವಿಧಿಸಿದ್ದಾನೆ ಎಂದು ಮಹಿಳೆ ಬರೇಲಿಯ ಬರದಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಒಟ್ಟಿನಲ್ಲಿ, ಸಕಲರಿಗೂ ಒಳ್ಳೆಯದಾಗಬೇಕು ಎಂದು ಎಲ್ಲ ಧರ್ಮಗಳೂ ಬಯಸುತ್ತವೆ. ಆದರೆ ಕೆಲವು ಧರ್ಮಪಾಲಕರಿಂದ ಮುಸ್ಲಿಂ ಮಹಿಳೆಯರು ಸಂಕಟ ಅನುಭವಿಸುತ್ತಿದ್ದಾರಲ್ಲ ಎಂಬುದೇ ಬೇಸರದ ಸಂಗತಿ. ದುರದೃಷ್ಟವಶಾತ್, ಇಂತಹ ಸಂಗತಿಗಳು ಮಾಧ್ಯಮಗಳಿಂದಲೂ ದೂರ ಉಳಿಯುತ್ತವೆ ಹಾಗೂ ಅತ್ತ ಮುಸ್ಲಿಂ ಮಹಿಳೆಯರು ನರಳುತ್ತಿರುತ್ತಾರೆ.

  • Share On Facebook
  • Tweet It


- Advertisement -


Trending Now
ಯಾರು ಯಾವ ಕ್ಷೇತ್ರದಲ್ಲಿ ಎಂದು ಯಾರಿಗೂ ಗೊತ್ತಿಲ್ಲ!!
Tulunadu News March 21, 2023
ಗುಳಿಗನಿಗೆ ತಮಾಷೆ ಮಾಡಿ ಬದುಕುವುದುಂಟೆ!!
Tulunadu News March 20, 2023
Leave A Reply

  • Recent Posts

    • ಯಾರು ಯಾವ ಕ್ಷೇತ್ರದಲ್ಲಿ ಎಂದು ಯಾರಿಗೂ ಗೊತ್ತಿಲ್ಲ!!
    • ಗುಳಿಗನಿಗೆ ತಮಾಷೆ ಮಾಡಿ ಬದುಕುವುದುಂಟೆ!!
    • ನಾವು ಅಂಡರ್ ಸ್ಟ್ಯಾಂಡಿಂಗ್ ಮಾಡಿಕೊಂಡಿದ್ದೇವು ಎಂದು ಒಪ್ಪಿದ ಎಸ್ ಡಿಪಿಐ!!
    • ಲೋಕಾಯುಕ್ತ ಬಲಗೊಂಡಿದೆ ಎನ್ನುವ ಸ್ಯಾಂಪಲ್!
    • ಚುನಾವಣಾ ಪೂರ್ವದ ಕೊನೆಯ ನಾಟಕಕ್ಕೆ ಕಾಂಗ್ರೆಸ್ ರೆಡಿ!!
    • ಲೋಕಾಯುಕ್ತದಲ್ಲಿ ಸಿದ್ದು ಕೇಸ್ ಯಾಕೆ ಮುಚ್ಚಿಹೋದವು!!
    • ಹಿಂದೂ ರಾಷ್ಟ್ರ ಸಮ್ಮೇಳನ ಮಾಡುವುದು ಗ್ಯಾರಂಟಿ ರಿಯಾಜ್!!
    • ಯಾವ ಮುಸ್ಲಿಂ ರಾಜ ಜಾಗ ಕೊಟ್ಟಿದ್ದು ಮಿಥುನ್ ರೈ!!
    • ಮೇಯರ್ ಇನ್ನೆಷ್ಟು ದಿನ ತುಂಬೆಯಲ್ಲಿ ನೀರಿದೆ?
    • ಜೆಎನ್ ಯು ದಂಡದ ಮೂಲಕವಾದರೂ ಸ್ವಚ್ಛವಾಗಲಿ!!
  • Popular Posts

    • 1
      ಯಾರು ಯಾವ ಕ್ಷೇತ್ರದಲ್ಲಿ ಎಂದು ಯಾರಿಗೂ ಗೊತ್ತಿಲ್ಲ!!
    • 2
      ಗುಳಿಗನಿಗೆ ತಮಾಷೆ ಮಾಡಿ ಬದುಕುವುದುಂಟೆ!!
    • 3
      ನಾವು ಅಂಡರ್ ಸ್ಟ್ಯಾಂಡಿಂಗ್ ಮಾಡಿಕೊಂಡಿದ್ದೇವು ಎಂದು ಒಪ್ಪಿದ ಎಸ್ ಡಿಪಿಐ!!
    • 4
      ಲೋಕಾಯುಕ್ತ ಬಲಗೊಂಡಿದೆ ಎನ್ನುವ ಸ್ಯಾಂಪಲ್!
    • 5
      ಚುನಾವಣಾ ಪೂರ್ವದ ಕೊನೆಯ ನಾಟಕಕ್ಕೆ ಕಾಂಗ್ರೆಸ್ ರೆಡಿ!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search