• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ

ಪತ್ರಕರ್ತರಲ್ಲೂ ಅಲ್ಪಸಂಖ್ಯಾತರನ್ನು ಹುಡುಕಿ, ಅವರನ್ನು ಒಡೆಯುವ ಸಿದ್ದರಾಮಯ್ಯನವರೇ ನಿಮಗೆ ಜ್ಞಾನ ಇಲ್ಲವೇ?

ವಿಶಾಲ್ ಗೌಡ ಕುಶಾಲನಗರ Posted On March 7, 2018
0


0
Shares
  • Share On Facebook
  • Tweet It

ಈ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯಾಕೆ ಹೀಗೆ? ಇವರಿಗೆ ಏನಾಗಿದೆ? ಸಮಾಜವಾದದ ತಕ್ಕಡಿ ಹಿಡಿದು ಅಧಿಕಾರಕ್ಕೆ ಬಂದ ಇವರು, ಆ ತಕ್ಕಡಿಯ ಒಂದು ಬದಿ ಅಲ್ಪಸಂಖ್ಯಾತರನ್ನೇ ಏಕೆ ಜಾಸ್ತಿ ಇಟ್ಟು ತೂಗಬೇಕು? ಯಾಕೆ ಇಂತಹ ಕೀಳು ರಾಜಕಾರಣ ಮಾಡಬೇಕು?

ಇಂತಹ ಕುತ್ಸಿತ ಮನಸ್ಸಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆರಂಭದಿಂದಲೇ ಮುನ್ನುಡಿ ಬರೆದರು. ಮುಸ್ಲಿಂ ಸಮುದಾಯದವರಿಗಷ್ಟೇ ಶಾದಿಭಾಗ್ಯ ತಂದು ಟೀಕೆಗೊಳಗಾದರು. ಒಂದೇ ಸಮುದಾಯ ವಿದ್ಯಾರ್ಥಿಗಳಿಗೆ ಪ್ರವಾಸ ಭಾಗ್ಯ ಕಲ್ಪಿಸಿ ಮಕ್ಕಳಲ್ಲೂ ಜಾತಿಯ ವಿಷ ಬೀಜ ಬಿತ್ತಲು ಮುಂದಾದರು.

ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರಕರ್ತರಲ್ಲೂ ಜಾತಿ, ಅಲ್ಪಸಂಖ್ಯಾತರನ್ನು ಹುಡುಕಿ ಸೌಲಭ್ಯ ನೀಡಲು ಮುಂದಾಗಿದ್ದಾರೆ. ಹೌದು, ಸಿಎಂ ಸಿದ್ದರಾಮಯ್ಯನವರು, ಅಲ್ಪಸಂಖ್ಯಾತರ ನಿರ್ದೇಶನಾಲಯದ ಮೂಲಕ ಅಲ್ಪಸಂಖ್ಯಾತರ ಒಡೆತನದ ಮಾಧ್ಯಮ ಸಂಸ್ಥೆ ಹಾಗೂ ಪತ್ರಕರ್ತರಿಗೆ ಚುನಾವಣೆ ಹೊಸ್ತಿಲಲ್ಲಿ ಭಾರಿ ಉಡುಗೊರೆ ನೀಡಲು ಹೊರಟಿದ್ದಾರೆ.

ಅಲ್ಪಸಂಖ್ಯಾತರ ಒಡೆತನದ ಮಾಧ್ಯಮ ಸಂಸ್ಥೆಗಳಿಗೆ ಪ್ರತಿ ತಿಂಗಳು ಎರಡು ಪುಟ ಜಾಹೀರಾತು, ಹಾಗೂ ಈ ಸಂಸ್ಥೆಗಳಲ್ಲಿ ಕೆಲಸ ಮಾಡುವ ಪತ್ರಕರ್ತರಿಗೆ ಲ್ಯಾಪ್ ಟಾಪ್, ಕ್ಯಾಮೆರಾ ಸೇರಿ ಮಾಧ್ಯಮ ಕಿಟ್ ನೀಡಲು ಸರ್ಕಾರ ಆದೇಶ ಹೊರಡಿಸಿದೆ.

ಸಿದ್ದರಾಮಯ್ಯನವರೇ ಇಂತಹ ಒನ್ ವೇ ಯೋಜನೆಗಳನ್ನು ಜಾರಿಗೆ ತಂದು ಯಾರನ್ನು ಮೆಚ್ಚಿಸಲು ಹೊರಟಿದ್ದೀರಿ? ಯಾಕೆ ಹೀಗೆ ಒಂದೇ ಸಮುದಾಯಕ್ಕೆ ಸೌಲಭ್ಯ ನೀಡಿ, ನಿಮ್ಮ ಪರ ಕೆಲಸ ಮಾಡಿ ಎಂದು ಪರೋಕ್ಷವಾಗಿ ಆಮಿಷ ಒಡ್ಡುತ್ತಿದ್ದೀರಿ? ಯಾಕೆ ಪತ್ರಕರ್ತರನ್ನೂ ನಿಮ್ಮ ಬುಟ್ಟಿಗೆ ಹಾಕಿಕೊಳ್ಳಲು ಮುಂದಾಗಿದ್ದೀರಿ? ಹೀಗೆ ಮಾಡುವ ನೀವೆಂತಹ ಜನನಾಯಕ ಸ್ವಾಮಿ?

ಖಂಡಿತ, ನೀವು ಒಬ್ಬ ಮುಖ್ಯಮಂತ್ರಿಯಾಗಿ ಪತ್ರಕರ್ತರಿಗೆ ಸರ್ಕಾರದಿಂದ ಸೌಲಭ್ಯ ನೀಡುವುದು ಒಳ್ಳೆಯದು. ಕಳೆದ ಬಜೆಟ್ಟಿನಲ್ಲಿ ಪತ್ರಕರ್ತರಿಗೆ ವಿಮಾ ಸೌಲಭ್ಯ ನೀಡಿರುವುದು ಸಹ ಸ್ವಾಗತಾರ್ಹವೇ? ಆದರೆ ಇದೆಂತಹ ಓಲೈಕೆಯ ಯೋಜನೆ ಸ್ವಾಮಿ?

ಯಾವ ಪತ್ರಿಕಾ ಸಂಸ್ಥೆಯೂ ಜಾಹೀರಾತು ಪಡೆಯದಷ್ಟು ಸಾಮರ್ಥ್ಯ ಹೊಂದಿಲ್ಲ ಎಂದಲ್ಲ. ಯಾವ ಪತ್ರಕರ್ತರೂ ವರದಿ ಮಾಡಲು ಕ್ಯಾಮೆರಾ, ಲ್ಯಾಪ್ ಟಾಪ್, ಕಂಪ್ಯೂಟರ್ ಹೊಂದಿಲ್ಲ ಎಂದಲ್ಲ. ಹೀಗಿರುವಾಗ ಈಗ ಇರುವ ಸೌಲಭ್ಯಗಳನ್ನೇ ನೀಡಿ ನೀವು ಏನು ಸಾಧಿಸಲು ಹೊರಟಿದ್ದೀರಿ?

ನೀವೇನೋ ಅಹಿಂದ ಪರ ಮುಖ್ಯಮಂತ್ರಿ ಎಂದು ಈಗ ನಾನೂ ಹಿಂದೂ ಎಂದು ಚುನಾವಣೆ ಹಿನ್ನೆಲೆಯಲ್ಲಿ ಮಾತನಾಡುತ್ತಿದ್ದೀರಿ. ಆದರೆ ನಿಮ್ಮ ಅಜೆಂಡಾಯುತ ಯೋಜನೆ ಜಾರಿಯಿಂದ ಪತ್ರಕರ್ತರು ನಿಮ್ಮ ಪರ ಕೆಲಸ ಮಾಡಬೇಕೇ? ನಿಮ್ಮನ್ನು ಹಾಡಿ ಹೊಗಳಬೇಕೆ? ಅದಕ್ಕಾಗಿಯೇ ಈ ಅಲ್ಪಸಂಖ್ಯಾತ ಪತ್ರಕರ್ತರ ಪರವಾಗಿ ಯೋಜನೆ ಜಾರಿಗೊಳಸಿದ್ದೀರಾ? ನಿಮಗೆ ಬುದ್ಧಿ, ಜ್ಞಾನ ಎರಡೂ ಇಲ್ಲವೇ ಸಿಎಂ ಅಥವಾ ನಿಮ್ಮ ಒಳಮರ್ಮ ಅರಿಯದಷ್ಟು ದಡ್ಡರೇ ಜನ?

0
Shares
  • Share On Facebook
  • Tweet It




Trending Now
ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
ವಿಶಾಲ್ ಗೌಡ ಕುಶಾಲನಗರ September 17, 2025
ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
ವಿಶಾಲ್ ಗೌಡ ಕುಶಾಲನಗರ September 17, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
    • ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
    • ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
  • Popular Posts

    • 1
      ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
    • 2
      ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
    • 3
      ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • 4
      ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • 5
      ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!

  • Privacy Policy
  • Contact
© Tulunadu Infomedia.

Press enter/return to begin your search