• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ತನ್ನ ಮಗು ಎರಡು ತಿಂಗಳಲ್ಲಿ ಕಣ್ಣು ಬಿಡುವ ಮೊದಲೇ ಹುತಾತ್ಮನಾದ ಹಾಸನದ ಯೋಧ!

TNN Correspondent Posted On March 14, 2018
0


0
Shares
  • Share On Facebook
  • Tweet It

ಹಾಸನ: ಒಂದು ವರ್ಷದ ಹಿಂದೆ ಆ ಯೋಧನ ಮದುವೆಯಾಗಿತ್ತು. ವರ್ಷ ತುಂಬುವ ಮೊದಲೇ ಆ ಯೋಧನಿಗೆ ಸಿಹಿ ಸುದ್ದಿ ಕಾದಿತ್ತು. ಇನ್ನೆರಡು ತಿಂಗಳು ಕಳೆದಿದ್ದರೆ ತಮ್ಮ ದಾಂಪತ್ಯದ ಕುರುಹಾಗಿ ಮನೆ ಹಾಗೂ ಮನಕ್ಕೊಂದು ಕಂದಮ್ಮನ ಪ್ರವೇಶವಾಗುವುದಿತ್ತು. ಆ ಯೋಧನಿಗೂ ಗಡಿಯಲ್ಲಿ ಮಗ ಹುಟ್ಟಿದರೆ ಹೇಗಿರಬಹುದು, ಮಗಳು ಹುಟ್ಟಿದರೆ ಏನು ಹೆಸರಿಡುವುದು ಎಂದು ನೆನಪು ಬರುತ್ತಿತ್ತೇನೋ?

ಆದರೆ ವಿಧಿಯಾಟವೇ ಬೇರೆ ಇತ್ತು. ಅದರ ಲೆಕ್ಕಾಚಾರವೇ ಬೇರೆಯಾಗಿತ್ತು. ಹೊಸ ಚಿಗುರು ಹೊರಬರುವ ಮುನ್ನವೇ ಅಪ್ಪ ಎಂಬ ಆಲದ ಮರವೇ ಇಲ್ಲ ಎಂಬ ಮಾತೇ ಕರಳು ಚುರುಕ್ ಎನಿಸುತ್ತದೆ. ಅಂತಹ ದುರದೃಷ್ಟ ಶತ್ರುವಿನದ್ದೂ ಆಗಬಾರದು ಎನಿಸುತ್ತದೆ.

ಆದರೆ ಹಾಸನದ ಯೋಧರೊಬ್ಬರ ಬಾಳಲ್ಲಿ ವಿಧಿ ಇಂತಹ ಕ್ರೂರ ಆಟವೊಂದು ಆಡಿಬಿಟ್ಟಿದೆ. ಹೌದು, ಛತ್ತೀಸ್ ಗಡದ ಸುಕ್ಮಾದಲ್ಲಿ ನಕ್ಸಲರು ಮಾಡಿದ ಅಟ್ಟಹಾಸದಲ್ಲಿ ಹಾಸನದ ಹರದೂರು ಗ್ರಾಮದ ಯೋಧ, 29 ವರ್ಷದ ಚಂದ್ರು ಹುತಾತ್ಮರಾಗಿದ್ದಾರೆ. ದಾಳಿ ವೇಳೆ ಭಾರತದ ಒಂಬತ್ತು ಯೋಧರು ಹುತಾತ್ಮರಾಗಿದ್ದು, ಹಾಸನದ ಈ ವೀರಯೋಧನೂ ಸೇರಿದ್ದಾನೆ ಎಂಬುದೇ ರಾಜ್ಯವನ್ನು ದುಃಖತಪ್ತರನ್ನಾಗಿಸಿದೆ. ಇನ್ನು ಆ ಕುಟುಂಬದ ಪರಿಸ್ಥಿತಿ ಹೇಗಾಗಿರಬೇಡ?

ಸ್ವಾಮಿ ಗೌಡ ಎಂಬುವವರ ಪುತ್ರನಾಗಿರುವ ಚಂದ್ರು ಐದು ವರ್ಷಗಳ ಹಿಂದೆ ಸೈನ್ಯ ಸೇರಿದ್ದರು. ಕಳೆದ ವರ್ಷವಷ್ಟೇ ಅಕ್ಕನ ಮಗಳ ಜತೆ ಮದುವೆಯಾಗಿದ್ದ ಚಂದ್ರು ಇನ್ನೆರಡು ತಿಂಗಳಲ್ಲಿ ಮಗು ಎತ್ತಿ ಮುದ್ದಾಡುವ ತವಕದಲ್ಲಿದ್ದ. ಆದರೆ ವಿಧಿಯ ಆಟಕ್ಕೆ ಆ ವೀರ ಯೋಧ ಹುತಾತ್ಮನಾಗಿ ಹೋದನಲ್ಲ ಎಂಬ ಬೇಸರ ಎಲ್ಲರಲ್ಲೂ ಕಾಡುತ್ತಿದೆ. ಛೇ!

0
Shares
  • Share On Facebook
  • Tweet It




Trending Now
ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
Tulunadu News November 1, 2025
ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
Tulunadu News October 31, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
    • ಕಾಂತಾರಾ ಚಾಪ್ಟರ್ 1 ಒಟಿಟಿಯಲ್ಲಿ ರಿಲೀಸ್! ದಿನ ಫಿಕ್ಸ್!
    • ಜಿಎಸ್ಟಿ ಇಳಿಕೆ ಪರಿಣಾಮ- ದೀಪಾವಳಿಗೆ 6.05 ಲಕ್ಷ ಕೋಟಿ ವಸ್ತು ಮಾರಾಟ!
    • ಪುತ್ತೂರು: ಅಕ್ರಮ ಗೋಸಾಗಾಟ, ಪೊಲೀಸರಿಂದ ಫೈರಿಂಗ್!
    • ದೀಪಾವಳಿ ಬೋನಸ್ ಕಡಿಮೆ ಕೊಟ್ಟಿದ್ದಕ್ಕೆ ಟೋಲ್ ಸಿಬ್ಬಂದಿಗಳು ಮಾಡಿದ್ದೇನು?

  • Privacy Policy
  • Contact
© Tulunadu Infomedia.

Press enter/return to begin your search