• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಆಂಧ್ರಪ್ರದೇಶದಲ್ಲೊಂದು ಸ್ವಾಭಿಮಾನಿ ಹಿಂದೂಗಳ ಗ್ರಾಮ

TNN Correspondent Posted On March 25, 2018
0


0
Shares
  • Share On Facebook
  • Tweet It

ಹೈದರಾಬಾದ್: ಆಂಧ್ರಪ್ರದೇಶದ ಕಡಪ ಜಿಲ್ಲೆಯ ಕೇಸಲಿಂಗಯ್ಯಪಳ್ಳಿ ಗ್ರಾಮದಲ್ಲಿ ಹಿಂದೂಗಳನ್ನು ಹೊರತುಪಡಿಸಿ ಬೇರೆ ಧರ್ಮದವರಿಗೆ ಪ್ರವೇಶವಿಲ್ಲ, ಬೇರೆ ಧರ್ಮದವರು ಇಲ್ಲಿ ಪ್ರಚಾರ ಸೇರಿ ಮತ್ತೀತರ ಚಟುವಟಿಕೆಗಳಲ್ಲಿ ಭಾಗವಹಿಸುವುದು ನಿಷೀಧ.

ಕಳೆದ ವರ್ಷದ ಶ್ರೀರಾಮ ನವಮಿಯಂದು ಈ ಗ್ರಾಮ ಸಂಪೂರ್ಣ ಹಿಂದೂ ಗ್ರಾಮ ಎಂದು ಘೋಷಿಸಿಕೊಂಡಿದ್ದು, ಗ್ರಾಮದ ಪ್ರವೇಶ ದ್ವಾರದಲ್ಲೇ ಕೇಸರಿ ಬಣ್ಣದಲ್ಲಿ ದೊಡ್ಡ ಸೂಚನಾ ಫಲಕ ಹಾಕಲಾಗಿದೆ. ಸೂಚನಾ ಫಲಕದಲ್ಲಿ ಸ್ಪಷ್ಟವಾಗಿ ಈ ಗ್ರಾಮಕ್ಕೆ ಅನ್ಯ ಧರ್ಮದವರಿಗೆ ಪ್ರವೇಶವಿಲ್ಲ ಎಂಬ ಸೂಚನೆಯನ್ನು ನೀಡಲಾಗಿದೆ. ಬೇರೆ ಧರ್ಮದವರು ಅಪ್ಪಿ ತಪ್ಪಿ ನಿಯಮಗಳನ್ನು ಮೀರಿ ಗ್ರಾಮದಲ್ಲಿ ಪ್ರವೇಶಿಸಿದರೇ ಶಿಕ್ಷೆ ನೀಡಲಾಗುತ್ತದೆ ಎನ್ನುತ್ತಾರೆ ಗ್ರಾಮಸ್ಥರು.

ಅಲ್ಲದೇ ಸೂಚನಾ ಫಲಕದಲ್ಲಿ ಮತಾಂತರದ ಕುರಿತು ಎಚ್ಚರಿಕೆ ನೀಡಿದ್ದು, ಒಬ್ಬ ವ್ಯಕ್ತಿ ಮತಾಂತರವಾದರೇ, ತನ್ನ ತಾಯಿಯನ್ನು ಬದಲಾಯಿಸಿದಂತೆ ಎಂಬ ಸಂದೇಶವನ್ನು ಸಾರಿದೆ. 1,500 ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ ಪರಿಶಿಷ್ಟ ಪಂಗಡದ ಕಾಪು ಸಮುದಾಯ ಮತ್ತು ಇತರೆ ಹಿಂದುಗಳಿದ ಜಾತಿಗಳಿದ್ದರೂ, ಎಲ್ಲರೂ ಹಿಂದೂಗಳು ಎಂಬ ಭಾವದೊಂದಿಗೆ ಜೀವನ ಸಾಗಿಸುತ್ತಿದ್ದಾರೆ. ಇಡೀ ಗ್ರಾಮದಲ್ಲಿ ಒಂದೇ ಒಂದು ಮುಸ್ಲಿಂ ಅಥವಾ ಕ್ರಿಶ್ಚಿಯನ್ ಧರ್ಮದ ಕುಟುಂಬಗಳಿಲ್ಲದಿರುವುದು ವಿಶೇಷ.

ಕಳೆದ ವರ್ಷದ ಕೆಲವು ಕ್ರಿಶ್ಚಯನ್ ಮಷಿನರಿಗಳು ನಮ್ಮ ಗ್ರಾಮಕ್ಕೆ ಬಂದು ಕ್ರಿಸ್ತನನ್ನು ಪ್ರಾರ್ಥಿಸಿದರೇ ರೋಗಗಳು ಗುಣಮುಖವಾಗುತ್ತವೆ ಎಂದು ಬೊಗಳೇ ಬಿಟ್ಟು ಮತಾಂತರಕ್ಕೆ ಪ್ರಯತ್ನಿಸುತ್ತಿದ್ದರು. ಆಗ ಗ್ರಾಮದ ಎಲ್ಲರೂ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ, ಅವರನ್ನು ಗ್ರಾಮದಿಂದ ಹೊರ ದಬ್ಬಿದ್ದೇವು. ಅಲ್ಲದೇ ಕಳೆದ ವರ್ಷ ಶ್ರೀರಾಮನವಮಿ ದಿನ ಗ್ರಾಮವನ್ನು ಹಿಂದೂಗಳ ಗ್ರಾಮ ಎಂದು ಘೋಷಿಸಿದ್ದೇವೆ ಎನ್ನುತ್ತಾರೆ ಗ್ರಾಮದ ಬಿ.ರಾಮಣ್ಣ.

ಗ್ರಾಮದ ಕೆಲವರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಿದ್ದರು. ಅವರನ್ನು ಬ್ರಹ್ಮಗಿರಿ ಮಠದ  ಸ್ವಾಮಿ ಅಚಲಾನಂದರ ಬಳಿ ಕರೆದುಕೊಂಡು ಹೋಗಿ, ಜ್ಞಾನೋದಯ ಮಾಡಿ ಹಿಂದೂ ಧರ್ಮಕ್ಕೆ ಮರಳಿ ಕರೆದುಕೊಂಡು ಬರಲಾಗಿದೆ ಎಂದು ಗ್ರಾಮಸ್ಥ ರಾಮಣ್ಣ ತಿಳಿಸಿದ್ದಾರೆ.

ಗ್ರಾಮವನ್ನು ಪ್ರವೇಶಿಸಿಸುವ ಅನ್ಯಧರ್ಮದವರಿಗೆ ಮಹಿಳೆಯರಿಂದ ಪೊರಕೆ ಸೇವೆ ಮಾಡುತ್ತೇವೆ. ಅಲ್ಲದೇ ಜೈ ಶ್ರೀರಾಮ ಘೋಷಣೆ ಕೂಗುತ್ತೇವೆ. ಅದಕ್ಕೂ ಮೀರಿ ನಾವು ನಮ್ಮ ಧರ್ಮದ ಶ್ರೇಷ್ಠತೆ ಬಗ್ಗೆ ಚರ್ಚಿಸಲು ಸಿದ್ಧ ಎನ್ನುತ್ತಾರೆ ಗ್ರಾಮಸ್ಥರು.

 

 

 

0
Shares
  • Share On Facebook
  • Tweet It




Trending Now
ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
Tulunadu News September 17, 2025
ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
Tulunadu News September 17, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
    • ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
    • ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
  • Popular Posts

    • 1
      ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
    • 2
      ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
    • 3
      ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • 4
      ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • 5
      ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!

  • Privacy Policy
  • Contact
© Tulunadu Infomedia.

Press enter/return to begin your search