• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಫೇಸ್ ಬುಕ್ ನಿಂದಲೇ ಪಾಕಿ ಐಎಸ್ ಐ ಮಾಡುತ್ತೇ ಹನಿಟ್ರ್ಯಾಪ್, ಇಲ್ಲಿದೇ ನೋಡಿ ಪ್ರಖರ ಸಾಕ್ಷಿ

TNN Correspondent Posted On March 31, 2018
0


0
Shares
  • Share On Facebook
  • Tweet It

ಅಮೃತಸರ: ಭಾರತದ ವಿರುದ್ಧ ಪಾಕಿಸ್ತಾನದ ಕುತಂತ್ರ ಬುದ್ಧಿ ಮುಂದುವರಿದಿದೆ. ಭಾರತ ಎಷ್ಟೇ ಶಾಂತಿ ಭಯಸಿದರೂ ಒಂದಲ್ಲ ಒಂದು ರೀತಿ ಸದಾ ಕೇಡುವ ಭಯಸುವ ಪಾಕಿಸ್ತಾನ ತನ್ನ ಷಡ್ಯಂತ್ರ ಸದಾ ಕಾಪಿಟ್ಟುಕೊಳ್ಳುತ್ತಿದೆ. ಧರ್ಮದ ಆಧಾರದಲ್ಲಿ ವಿಭಜನೆಯಾದ ನಂತರವೂ ಪಾಕಿಸ್ತಾನ ಸದಾ ಭಾರತದಲ್ಲಿ ದುಷ್ಕೃತ್ಯ ನಡೆಸುವ ಹಳೆ ಚಾಳಿಯಲ್ಲೇ ದಿನ ದೂಡುತ್ತಿದೆ. ಇದೀಗ ಪಾಕಿಸ್ತಾನದ ಷಡ್ಯಂತ್ರದ ಚಾಳಿಗೆ ಮತ್ತೊಂದು ಪ್ರಬಲ ಸಾಕ್ಷಿ ದೊರೆತಿದ್ದು, ಹನಿಟ್ರ್ಯಾಪ್ ಮೂಲಕ ಭಾರತದ ವ್ಯಕ್ತಿಯೊಬ್ಬನನ್ನು ಬಲೆಗೆ ಹಾಕಿಕೊಂಡು ಗುಪ್ತಚರನಂತೆ ಬಳಸಿಕೊಳ್ಳಲಾಗಿದೆ.

ಪಂಜಾಬ್ ನ ರವಿಕುಮಾರ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ ಐ ಗೆ ಹನಿಟ್ರ್ಯಾಪ್ ಗೆ ಒಳಗಾದವರು. ಕಳೆದ ಏಳೆಂಟು ತಿಂಗಳಿಂದ ಫೇಸ್ ಬುಕ್ ಮೂಲಕ ರವಿಕುಮಾರ್ ಅವರನ್ನು ಕುತಂತ್ರದಿಂದ ಸಂಪರ್ಕಿಸಿದ ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್ ಐ ಹನಿಟ್ರ್ಯಾಪ್ ಮಾಡಿದೆ. ಅಲ್ಲದೇ ರವಿಕುಮಾರ ಅವರನ್ನು ಐಎಸ್ ಐ ಎಜೆಂಟ್ ಆಗಿ ಪರಿವರ್ತಿಸಿಕೊಂಡು ಬಳಸಿಕೊಳ್ಳಲಾಗುತ್ತಿತ್ತು.

ಭಾರತೀಯ ಗುಪ್ತಚರ ಸಂಸ್ಥೆ ಪಂಜಾಬ್ ಪೊಲೀಸ್ ಮತ್ತು ಸೈನ್ಯಕ್ಕೆ ಈ ಮಾಹಿತಿ ನೀಡಿದ್ದು, ಪಂಜಾಬ್ ವಿಶೇಷ ತನಿಖಾ ದಳ ಸೈನ್ಯದ ಸಹಾಯದೊಂದಿಗೆ ಕಾರ್ಯಾಚರಣೆ ನಡೆಸಿ, ರವಿಕುಮಾರ್ ನನ್ನು ಅಮೃತಸರ ಜಿಲ್ಲೆಯ ಚಾತಿವಿಂಡ್ ಠಾಣಾ ವ್ಯಾಪ್ತಿಯಲ್ಲಿ ಬಂಧಿಸಿದೆ.

ಮಹತ್ವದ ಮಾಹಿತಿ ನೀಡಿದ್ದ ಭೂಪ: ರವಿಕುಮಾರ ಭಾರತೀಯ ಸೇನೆಯ ವಿಭಾಗಗಳು, ಬಂಕರ್ ಗಳ ರಚನೆ, ಗಡಿಯಲ್ಲಿ ಸೈನ್ಯದ ತಯಾರಿ, ಸೈನ್ಯದ ವಾಹನಗಳ ತಾಕತ್ತು, ತರಬೇತಿ ಶಿಬಿರಗಳ ಕುರಿತು ಮಾಹಿತಿಯನ್ನು ಹಂಚಿಕೊಂಡಿದ್ದಾನೆ ಎನ್ನಲಾಗಿದೆ. ಅಲ್ಲದೇ ಭಾರತೀಯ ಸೈನ್ಯದ ನಿಷೇಧಿತ ಪ್ರದೇಶಗಳ ಚಿತ್ರಗಳನ್ನು ನೀಡಿದ್ದಾನೆ. ಈ ಎಲ್ಲ ಸಂಚಿನ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪಾಕಿಸ್ತಾನದ ಸಂಸ್ಥೆಯೊಂದು ಯುವತಿಯರ ಹೆಸರಲ್ಲಿ ಫೇಸ್ ಬುಕ್ ಅಕೌಂಟ್ ಆರಂಭಿಸಿ, ಭಾರತದ ನಿರುದ್ಯೋಗಿ ಯುವಕರು, ನಿವೃತ್ ಅಧಿಕಾರಿಗಳು, ಸೈನ್ಯದ ಅಧಿಕಾರಿಗಳನ್ನು ಬಲೆಗೆ ಹಾಕಿಕೊಳ್ಳುತ್ತದೆ. ಆ ಮೂಲಕ ಭಾರತದ ಮಹತ್ವದ ಮಾಹಿತಿಗಳನ್ನು ಕಲೆ ಹಾಕುತ್ತದೆ ಎಂದು ಪಂಜಾಬ್ ಪೊಲೀಸರು ತಿಳಿಸಿದ್ದಾರೆ.

0
Shares
  • Share On Facebook
  • Tweet It




Trending Now
ಡ್ರೋಣ್ ಕ್ಷೇತ್ರದ ಬಗ್ಗೆ ರಾಹುಲ್ ಗಾಂಧಿಯವರ ಹೇಳಿಕೆಗೆ ಡಿಎಫ್ ಐ ಅಧ್ಯಕ್ಷರ ಕೌಂಟರ್!
Tulunadu News July 30, 2025
ಧರ್ಮಸ್ಥಳದ ಶವ ಹೂತಿಟ್ಟ ಸ್ಥಳಗಳ ಅಗೆತಕ್ಕೆ ಜೆಸಿಬಿ ಬರಬೇಕಾಯ್ತು!
Tulunadu News July 29, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಡ್ರೋಣ್ ಕ್ಷೇತ್ರದ ಬಗ್ಗೆ ರಾಹುಲ್ ಗಾಂಧಿಯವರ ಹೇಳಿಕೆಗೆ ಡಿಎಫ್ ಐ ಅಧ್ಯಕ್ಷರ ಕೌಂಟರ್!
    • ಧರ್ಮಸ್ಥಳದ ಶವ ಹೂತಿಟ್ಟ ಸ್ಥಳಗಳ ಅಗೆತಕ್ಕೆ ಜೆಸಿಬಿ ಬರಬೇಕಾಯ್ತು!
    • ಸಮಸ್ಯೆ ಬಗೆಹರಿಯದಿದ್ದರೆ ಉಗ್ರ ಹೋರಾಟ ಅನಿವಾರ್ಯ -ನಳಿನ್ ಕುಮಾರ್ ಕಟೀಲ್
    • SSLC ಮಕ್ಕಳಿಗೆ ರಾಜ್ಯ ಸರಕಾರದಿಂದ ಶುಭ ಸುದ್ದಿ!
    • ಬಹುಮುಖ ಪ್ರತಿಭೆ ರಾಜಶ್ರೀ ಪೂಜಾರಿ ಇನ್ನಿಲ್ಲ!
    • ಚಕ್ರವರ್ತಿ ವಿರುದ್ಧದ FIR ರದ್ದು! ಸುಪ್ರೀಂ ಕೋರ್ಟಿನಲ್ಲಿ ಅರುಣ್ ಶ್ಯಾಮ್ ವಾದ
    • 6 ಡ್ರೋನ್ ಗಳಲ್ಲಿ ಪಾಕ್ ನಿಂದ ಪಿಸ್ತೂಲ್, ಹೆರಾಯಿನ್ ಸಾಗಾಟ: ಧರೆಗುರುಳಿಸಿದ ಬಿಎಸ್ ಎಫ್..
    • ಶಿವದೂತ ಗುಳಿಗೆ ನಾಟಕದ "ಭೀಮರಾವ್" ರಮೇಶ್ ಕಲ್ಲಡ್ಕ ನಿಧನ!
    • ನೂರಾರು ಜನರಿಗೆ ಸಾಲಕೊಡಿಸುವ ನೆಪದಲ್ಲಿ ವಂಚನೆ: ರೋಶನ್ ಸಲ್ದಾನಾ ಪ್ರಕರಣ ಸಿಐಡಿಗೆ
    • ಕರ್ನಾಟಕದಲ್ಲಿ "ಮನೆಮನೆಗೆ ಪೊಲೀಸ್" ಏನು ಕಥೆ!
  • Popular Posts

    • 1
      ಡ್ರೋಣ್ ಕ್ಷೇತ್ರದ ಬಗ್ಗೆ ರಾಹುಲ್ ಗಾಂಧಿಯವರ ಹೇಳಿಕೆಗೆ ಡಿಎಫ್ ಐ ಅಧ್ಯಕ್ಷರ ಕೌಂಟರ್!
    • 2
      ಧರ್ಮಸ್ಥಳದ ಶವ ಹೂತಿಟ್ಟ ಸ್ಥಳಗಳ ಅಗೆತಕ್ಕೆ ಜೆಸಿಬಿ ಬರಬೇಕಾಯ್ತು!
    • 3
      ಸಮಸ್ಯೆ ಬಗೆಹರಿಯದಿದ್ದರೆ ಉಗ್ರ ಹೋರಾಟ ಅನಿವಾರ್ಯ -ನಳಿನ್ ಕುಮಾರ್ ಕಟೀಲ್
    • 4
      SSLC ಮಕ್ಕಳಿಗೆ ರಾಜ್ಯ ಸರಕಾರದಿಂದ ಶುಭ ಸುದ್ದಿ!
    • 5
      ಬಹುಮುಖ ಪ್ರತಿಭೆ ರಾಜಶ್ರೀ ಪೂಜಾರಿ ಇನ್ನಿಲ್ಲ!

  • Privacy Policy
  • Contact
© Tulunadu Infomedia.

Press enter/return to begin your search