• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » ಅಭಿಪ್ರಾಯ ಸುದ್ದಿ 

ಮಾತನಾಡದೆಯೇ ಮಾಡಿ ತೋರಿಸುವ ನರೇಂದ್ರ ಮೋದಿಗೆ ಮಾತಾಡಿ ಮಾತಾಡಿ ಎಂದು ಘೀಳಿಡುವುದೇಕೆ?

ವಿಶಾಲ್ ಗೌಡ ಕುಶಾಲನಗರ Posted On April 14, 2018
0


0
Shares
  • Share On Facebook
  • Tweet It

ಈ ಕಾಂಗ್ರೆಸ್ಸಿಗರೇ ಹಾಗೆ. ದೇಶವನ್ನು 60 ವರ್ಷ ಆಳುವ ಜತೆಗೆ ಹಾಳೂ ಮಾಡಿ ಈಗ ಸುಬಗರಂತೆ ಮಾತನಾಡುತ್ತಾರೆ. ಈ ದೇಶದ ಪ್ರಧಾನಿಯೊಬ್ಬರು 10 ವರ್ಷ ಮಾತೇ ಆಡದೆ ಆಳ್ವಿಕೆ ನಡೆಸಿದರೂ, ದೇಶದಲ್ಲಿ ಲಕ್ಷಾಂತರ ಕೋಟಿ ರೂ. ಹಗರಣ ನಡೆದರೂ, ನಿರ್ಭಯಾ ಮೇಲೆ ನಡೆದ ಅತ್ಯಾಚಾರ ಪ್ರಕರಣಗಳು ನಡೆದರೂ ಪ್ರಧಾನಿಯೊಬ್ಬರು ಬಾಯಿಗೆ ಫೆವಿಕಾಲ್ ಹಾಕಿಕೊಂಡಂತೆ ಕೂತಿದ್ದರೂ ಕಾಂಗ್ರೆಸ್ಸಿಗರು ಸೊಲ್ಲೆತ್ತಲಿಲ್ಲ.

ಆದರೆ ಈಗ ನೋಡಿ, ದೇಶದ ಯಾವ ರಾಜ್ಯದಲ್ಲಿ ಅನಾಹುತ ನಡೆದರೂ ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೇ ಕಾರಣ ಎಂಬಂತೆ ಬೊಬ್ಬೆ ಹೊಡೆಯುತ್ತಾರೆ. ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆಯ ವೈಫಲ್ಯದಿಂದ ಡಾ.ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶ್ ಹತ್ಯೆಯಾದರೂ, ಮೋದಿ ಅವರ ವಿರುದ್ಧವೇ ಆರೋಪಿಸುವ ಮೂಲಕ ಕಾಂಗ್ರೆಸ್ ತಾನೆಂತ ಕುತ್ಸಿತ ಮನಸ್ಸಿನ ಪಕ್ಷ ಎಂಬುದು ಸಾಬೀತುಪಡಿಸುತ್ತದೆ.

ಈಗಲೂ ಅಷ್ಟೇ, ಉನ್ನಾವೋ, ಕಥುವಾ ಎಂಬಲ್ಲಿ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಎಲ್ಲ ಕ್ರಮ ಕೈಗೊಳ್ಳುತ್ತಿದೆ. ಆರೋಪಿಗಳಿಗೆ ಶಿಕ್ಷೆ ವಿಧಿಸದೇ ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥರೇ ಹೇಳಿದ್ದಾರೆ. ಹೀಗಿದ್ದರೂ, ಕಾಂಗ್ರೆಸ್ಸಿಗರು, ಕೆಲವು ಸೋ ಕಾಲ್ಡ್ ಬುದ್ಧಿಜೀವಿಗಳು ಮಾತ್ರ ಮೋದಿ ಈ ಕುರಿತು ಮಾತನಾಡುತ್ತಿಲ್ಲ, ಬಾಯಿಯೇ ಬಿಡುತ್ತಿಲ್ಲ ಎಂದು ಬೊಬ್ಬೆ ಹಾಕಿದರು.

ಹಾಗಾದರೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಯಾವ ಮೂಲೆಯಲ್ಲಿ ಅನಾಹುತ ನಡೆದರೂ, ಏನೇ ಆದರೂ ಮೊದಲು ಪ್ರತಿಕ್ರಿಯಿಸಬೇಕೆ? ಆಗೋ ಅನಿಷ್ಠಕ್ಕೆಲ್ಲ ಅವರೇ ಕಾರಣವೇ? ಅಥವಾ ಅವರ ಮೇಲೆಯೇ ಎಲ್ಲ ಹೊಣೆ ಇದೆಯೇ? ಮೋದಿ ಅವರೇ ಎಲ್ಲದಕ್ಕೂಉತ್ತರಿಸಬೇಕು ಎಂದು ಆಯಾ ರಾಜ್ಯ ಸರ್ಕಾರಗಳು ಇರುವುದು ಏಕೆ? ಅಷ್ಟಕ್ಕೂ ಮೋದಿ ಅವರು ಮಾತನಾಡದೆಯೇ ಎಲ್ಲ ಕೆಲಸ ಮಾಡುತ್ತಿದ್ದಾರಲ್ಲ, ಅದಕ್ಕೇನೆನ್ನುತ್ತಾರೆ ಈ ಕಾಂಗ್ರೆಸ್ಸಿಗರು?

ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಹೇಗೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದರ ಕುರಿತು ಹಾಗೇ ಯೋಚನೆ ಮಾಡಿ ನೋಡಿ. 60 ವರ್ಷ ದೇಶವನ್ನು ಆಳಿದರೂ ಕಾಂಗ್ರೆಸ್ ಸ್ವಚ್ಛತೆ ಮಾಡುವುದು ಬಿಡಿ, ಆ ಕುರಿತು ಸಣ್ಣ ಜಾಗೃತಿ ಸಹ ಮೂಡಿಸಿರಲಿಲ್ಲ. ಭ್ರಷ್ಟಾಚಾರದ ಬೇರುಗಳು ದೇಶದ ಆಳಕ್ಕೆ ಹೋಗಿದ್ದವು. ತೆರಿಗೆ ವ್ಯವಸ್ಥೆ ದಲ್ಲಾಳಿಗಳಿಂದ ನಲುಗುತ್ತಿತ್ತು.

ಅದರೆ ನರೇಂದ್ರ ಮೋದಿ ಅವರು ಪ್ರಧಾನಿಯಾಗುತ್ತಲೇ ಮೊದಲು ಕೈಗೊಂಡ ಪ್ರಮುಖ ನಿರ್ಧಾರವೇ ಸ್ವಚ್ಛ ಭಾರತ್ ಅಭಿಯಾನ. ಅದರ ಪರಿಣಾಮವಾಗಿ ಇಂದು ದೇಶಾದ್ಯಂತ ಕೋಟ್ಯಂತರ ಶೌಚಾಲಯ ನಿರ್ಮಿಸಲಾಗಿದೆ. ಇನ್ನು ನೋಟು ನಿಷೇಧಗೊಳಿಸಿ ಭ್ರಷ್ಟರನ್ನು ಹೆಡೆಮುರಿಕಟ್ಟಿದ್ದು ಇದೇ ನರೇಂದ್ರ ಮೋದಿ. ಸರಕು ಮತ್ತು ಸೇವಾ ತೆರಿಗೆ ಮೂಲಕ ದೇಶದ ತೆರಿಗೆ ವ್ಯವಸ್ಥೆಯನ್ನು ಸುಧಾರಣೆಯತ್ತ ಕೊಂಡೊಯ್ಯುತ್ತಿರುವುದು ಇದೇ ಮೋದಿ ಅವರೇ.

ಮಾತನಾಡದೆಯೇ ದೇಶದ ಹಿತಕ್ಕಾಗಿ ಇಷ್ಟೆಲ್ಲ ಮಾಡುತ್ತಿರುವ ನರೇಂದ್ರ ಮೋದಿ ಅವರು, ಯಾವುದೇ ಅವಾಂತರ ಸಹ ಸಹಿಸಿಕೊಳ್ಳುವುದಿಲ್ಲ. ಮಾತನಾಡದೆಯೇ ಕ್ರಮ ಕೈಗೊಂಡು ಬಿಡುತ್ತಾರೆ.

ಇದಕ್ಕೆ ಜಮ್ಮು ಕಾಶ್ಮೀರದಲ್ಲಿ ಉಪಟಳ ಮಾಡುತ್ತಿದ್ದ ಪಾಕಿಸ್ತಾನಕ್ಕೆ ಸರ್ಜಿಕಲ್ ಸ್ಟ್ರೈಕ್ ಮೂಲಕ ತಿರುಗೇಟು ನೀಡಿದ್ದು, ಡೋಕ್ಲಾಂ ಬಿಕ್ಕಟ್ಟು ಸೃಷ್ಟಿಸಿದ್ದ ಚೀನಾಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ನೀಡಿದ್ದು ಇದಕ್ಕೆ ಪ್ರಮುಖ ಉದಾಹರಣೆ.

ಇನ್ನು ತೀರಾ ಇತ್ತೀಚೆಗೆ ಬ್ಯಾಂಕುಗಳಿಗೆ ಮೋಸ ಮಾಡಿ ವಿದೇಶಕ್ಕೆ ಹಾರುವವರಿಗೂ ಮೋದಿ ಅವರು ಇದೇ ಗತಿ ಕಾಣಿಸಿದ್ದಾರೆ. ಅದಕ್ಕೆ ನೀರವ್ ಮೋದಿ ಆಸ್ತಿ ಮುಟ್ಟುಗೋಲು ಹಾಕಿಕೊಂಡಿದ್ದೇ ನಿದರ್ಶನ. ಹೇಳಿ ಮಾತನಾಡದೆಯೇ ಮೋದಿ ಇಷ್ಟೆಲ್ಲ ಮಾಡಲಿಲ್ಲವೇ?

ಸಂಸತ್ ಅಧಿವೇಶನಕ್ಕೆ ಅಡ್ಡಿಪಡಿಸಿದ ಹಿನ್ನೆಲೆ ನರೇಂದ್ರ ಮೋದಿ ಅವರು ಉಪವಾಸ ಮಾಡಿ ಕಾಂಗ್ರೆಸ್ಸಿಗರಿಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದು, ಜನರ ಗಮನ ಬೇರೆಡೆ ಸೆಳೆಯಲು ಕಾಂಗ್ರೆಸ್ ಉನ್ನಾವೋ, ಕಥಾವೋ ಅತ್ಯಾಚಾರ ಪ್ರಕರಣದ ಕುರಿತು ಮೋದಿ ಮಾತಾಡಿಲ್ಲ ಮಾತಾಡಿಲ್ಲ ಎಂದು ಬೊಬ್ಬೆ ಹಾಕಿತು. ಕೊನೆಗೂ ಅಪರಾಧಿಗಳಿಗೆ ಶಿಕ್ಷೆ ವಿಧಿಸದೆ ಬಿಡುವುದಿಲ್ಲ ಎಂದು ಮೋದಿ ಅವರು ತಿಳಿಸಿದ್ದಾರೆ. ಈಗ ಕಾಂಗ್ರೆಸ್ ಬಾಯಿ ಮುಚ್ಚಿಕೊಂಡು ತೆಪ್ಪಗಾಗಿದೆ.

 

0
Shares
  • Share On Facebook
  • Tweet It




Trending Now
ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
ವಿಶಾಲ್ ಗೌಡ ಕುಶಾಲನಗರ December 27, 2025
ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
ವಿಶಾಲ್ ಗೌಡ ಕುಶಾಲನಗರ December 23, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
    • ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
    • ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
    • ಭಾರತ ಒಂದು ‘ಹಿಂದೂ ರಾಷ್ಟ್ರ’ – ಸಂವಿಧಾನಿಕ ಮಾನ್ಯತೆ ಅಗತ್ಯವಿಲ್ಲ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
    • ಸೋನಿಯಾ ಗಾಂಧಿ ಕುರಿತು ರೇವಂತ್ ರೆಡ್ಡಿ ಹೇಳಿಕೆ: ಬಿಜೆಪಿ ತೀವ್ರ ಟೀಕೆ
    • ಬಾಂಡ್ ರದ್ದಾದ ಬಳಿಕ ರಾಜಕೀಯ ಪಕ್ಷಗಳಿಗೆ ಬಂದ 3811 ಕೋಟಿಯಲ್ಲಿ ಬಿಜೆಪಿಯ ಪಾಲು 82%!
    • ಭಕ್ತಿಗೀತೆ ಹಾಡುತ್ತಿದ್ದ ಗಾಯಕಿಯ ಮೇಲೆ ದರ್ಪ! ಜಾತ್ಯಾತೀತ ಗೀತೆ ಹಾಡಲು ಒತ್ತಾಯ!
    • ರೈತರ ಮಕ್ಕಳನ್ನು ಮದುವೆಯಾಗುವ ಹೆಣ್ಮಕ್ಕಳಿಗೆ 10 ಲಕ್ಷ ನೀಡಿ - ಸರಕಾರಕ್ಕೆ ಶಾಸಕ ಆಗ್ರಹ!
    • ವಿಡಿಯೋ ಕಾಲ್ ನಲ್ಲಿ ನಿಶ್ಚಿತಾರ್ಥ-ಎಲ್ ಇಡಿ ಸ್ಕ್ರೀನ್ ಗೆ ಆರತಿ!
    • ಅಜಾನ್ ಚರ್ಚೆಯ ಸಂದರ್ಭದಲ್ಲಿ ದೀಪಾವಳಿ ಪಟಾಕಿ ವಿಷಯ ಎತ್ತಿದ ಸಚಿವ!
  • Popular Posts

    • 1
      ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
    • 2
      ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
    • 3
      ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
    • 4
      ಭಾರತ ಒಂದು ‘ಹಿಂದೂ ರಾಷ್ಟ್ರ’ – ಸಂವಿಧಾನಿಕ ಮಾನ್ಯತೆ ಅಗತ್ಯವಿಲ್ಲ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
    • 5
      ಸೋನಿಯಾ ಗಾಂಧಿ ಕುರಿತು ರೇವಂತ್ ರೆಡ್ಡಿ ಹೇಳಿಕೆ: ಬಿಜೆಪಿ ತೀವ್ರ ಟೀಕೆ

  • Privacy Policy
  • Contact
© Tulunadu Infomedia.

Press enter/return to begin your search