• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಚುನಾವಣೆಯಲ್ಲಿ ಸಿಪಿಎಂ ಸೋಲುತ್ತಲೇ ಮಾಣಿಕ್ ಸರ್ಕಾರ್ ಗೆ ಬಂಗಲೆ ಆಸೆ ಹುಟ್ಟಿತೇ?

TNN Correspondent Posted On April 18, 2018


  • Share On Facebook
  • Tweet It

ಕೋಲ್ಕತ್ತಾ: ಮಾಣಿಕ್ ಸರ್ಕಾರ್ ಸುಮಾರು ಎರಡು ದಶಕಕ್ಕೂ ಹೆಚ್ಚು ಅವಧಿಗೆ ತ್ರಿಪುರಾದ ಮುಖ್ಯಮಂತ್ರಿಯಾದರೂ ಸ್ವಂತದ್ದೊಂದು ಮನೆ ಹೊಂದಿಲ್ಲ, ಇನ್ನೂ ಬಸ್ಸಿನಲ್ಲಿಯೇ ಓಡಾಡುತ್ತಾರೆ ಎಂಬುದು ಎಲ್ಲರೂ ಅಭಿಮಾನಪಡುವ ವಿಷಯವಾಗಿತ್ತು. ಅವರೂ ಸಾಧಾರಣವಾಗಿ ಹೀಗೆಯೇ ಇದ್ದ ಕಾರಣ ಜನ ಮತ ಹಾಕುತ್ತಿದ್ದರು. ಅಷ್ಟಕ್ಕೂ ಗ್ರಾಪಂ ಅಧ್ಯಕ್ಷನೇ ಕಾರಿನಲ್ಲಿ ತಿರುಗಾಡುವ ಈ ಕಾಲದಲ್ಲಿ ಮುಖ್ಯಮಂತ್ರಿಯಾದರೂ ಆಟೋ ಬಸ್ಸಿನಲ್ಲಿ ಓಡಾಡುವುದು ಶ್ಲಾಘನೀಯ ಸಂಗತಿಯೇ ಆಗಿತ್ತು.

ಆದರೆ ಇಂತ ಮಾಣಿಕ್ ಸರ್ಕಾರ್ ಅವರಿಗೆ ಸಿಪಿಎಂ ಚುನಾವಣೆಯಲ್ಲಿ ಮಕಾಡೆ ಮಲಗಿದ ಬಳಿಕ, ಸೋಲುಂಡ ಬಳಿಕ ಬಂಗಲೆ, ಕಾರಿನ ಅವಶ್ಯಕತೆ ಬಿತ್ತೇ? ಇಷ್ಟು ದಿನ ಇಲ್ಲದೆ ಇದ್ದ ಬಯಕೆಗಳು ಈಗ ಏಕೆ ಜನ್ಮತಾಳಿವೆ? ಏಕೆ ಮಾಣಿಕ್ ಸರ್ಕಾರ್ ಕಾರು, ಬಂಗಲೆ ಬಯಸುತ್ತಿದ್ದಾರೆ? ಅಂದರೆ ಇಷ್ಟು ದಿನ ಅವರು ನಡೆಸಿದ ಸರಳ ಜೀವನ ಮತ ಪಡೆಯಲು, ಜನರ ಓಲೈಸಲು ಮಾಡಲಾಗುತ್ತಿತ್ತೇ? ಎಂಬ ಪ್ರಶ್ನೆಗಳು ಕಾಡುತ್ತಿವೆ.

ಹೌದು, ಚುನಾವಣೆಯಲ್ಲಿ ಸಿಪಿಎಂ ಸೋಲುಂಡು ಬಿಜೆಪಿ-ಐಪಿಎಫ್ ಟಿ ಸರ್ಕಾರ ರಚನೆಯಾದ ಬಳಿಕ ಮನೆಯೇ ಇಲ್ಲದ ಮಾಣಿಕ್ ಸರ್ಕಾರ ಸಿಪಿಎಂ ಪಕ್ಷದ ಕಚೇರಿಯಲ್ಲಿ ಪತ್ನಿ ಜತೆ ಹೋಗಿ ವಾಸವಿದ್ದರು. ಆದರೆ ಈಗ ತಮಗೊಂದು ಬಂಗಲೆ ಹಾಗೂ ಕಾರಿನ ವ್ಯವಸ್ಥೆ ಮಾಡಬೇಕು ಎಂದು ಮಾಣಿಕ್ ಸರ್ಕಾರ್ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

ಖಂಡಿತವಾಗಿಯೂ ಪ್ರತಿಪಕ್ಷದ ನಾಯಕನಾಗಿ ಮಾಣಿಕ್ ಸರ್ಕಾರ್ ಅವರು ತಮಗೊಂದು ನಿವಾಸ, ವಾಹನ ಪಡೆಯಲು, ಅದಕ್ಕಾಗಿ ಸರ್ಕಾರಕ್ಕೆ ಮನವಿ ಮಾಡುವ ಎಲ್ಲ ಹಕ್ಕುಗಳೂ ಇವೆ. ಆದರೆ, ವಾಸ ಮಾಡಲು ಬಂಗಲೆಯೇ ಬೇಕು, ಓಡಾಡಲು ಕಾರೇ ಬೇಕು ಹಾಗೂ ಆ ನಿವಾಸ ಮುಖ್ಯಮಂತ್ರಿ ನಿವಾಸದ ಬಳಿಯೇ ಬೇಕು ಎಂದು ಮಾಣಿಕ್ ಸರ್ಕಾರ್ ಬೇಡಿಕೆ ಇಟ್ಟಿರುವುದು ಜನ ಅಚ್ಚರಿಪಡುವಂತಾಗಿದೆ,

ಅದರಲ್ಲೂ ಎರಡು ದಶಕದವರೆಗೆ ಒಂದು ರಾಜ್ಯದ ಮುಖ್ಯಮಂತ್ರಿಯಾಗಿ ಸ್ವಂತದ ಮನೆ ಇಲ್ಲದೆ, ಆಟೋದಲ್ಲಿ ಓಡಾಡಿ ಈಗ ಚುನಾವಣೆಯಲ್ಲಿ ಸೋತ ಬಳಿಕ ಮಾಣಿಕ್ ಸರ್ಕಾರ್ ಅವರಲ್ಲಿದ್ದ ಸರಳ ವ್ಯಕ್ತಿತ್ವ, ಸರಳತನ ಸತ್ತುಹೋಗಿ ಐಷಾರಾಮಿ ಜೀವನ ಬಯಸುತ್ತಿದೆಯಾ ಎಂಬ ಅನುಮಾನ ಬಲವಾಗಿ ಕಾಡುತ್ತಿದೆ. ಇದಕ್ಕೆ ಮಾಣಿಕ್ ಸರ್ಕಾರ್ ಅವರೇ ಉತ್ತರಿಸಬೇಕು.

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Tulunadu News May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search