• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಡುಗೆ-ಆಹಾರ ಸುದ್ದಿ 

ಅಮೆರಿಕದ ಒಕ್ಲಾಹಾಮಾ ನಗರದ ಸೆನೆಟ್ ನಲ್ಲಿ ಮೊಳಗಿದ ಸಂಸ್ಕೃತ ಶ್ಲೋಕ

TNN Correspondent Posted On May 2, 2018
0


0
Shares
  • Share On Facebook
  • Tweet It

ಒಕ್ಲಾಹಾಮಾ: ಭಾರತ ಪುರಾತನ ಶ್ಲೋಕಗಳ ಶಕ್ತಿ ವಿಶ್ವಾದ್ಯಂತ ಅನುರಣಿಸುತ್ತಿದ್ದು, ಇದೀಗ ವಿಶ್ವದ ದೊಡ್ಡಣ್ಣ ಅಮೆರಿಕದ ಒಕ್ಲಾಹಾಮಾ ನಗರದ ಸೆನೆಟ್ ಆರಂಭವನ್ನು ಸಂಸ್ಕೃತ ಶ್ಲೋಕಗಳನ್ನು ಪಠಿಸುವ ಮೂಲಕ ಆರಂಭಿಸಿದ್ದು, ಭಾರತೀಯ, ಹಿಂದೂ ಸಂಸ್ಕೃತಿಯ ತಾಕತ್ತನ್ನು ವಿಶ್ವಕ್ಕೆ ಮತ್ತೊಮ್ಮೆ ಸಾಬೀತು ಪಡಿಸಿದಂತಾಗಿದೆ.

ಏ.30ರಂದು ಒಕ್ಲಾಹಾಮಾ ನಗರದ ಸೆನೆಟ್ ನ ಸಭೆ ಆರಂಭಕ್ಕೂ ಮುನ್ನ ಯೂನಿವರ್ಸಲ್ ಸೊಸೈಟಿ ಆಫ್ ಹಿಂದೂಯಿಸಂ ಅಧ್ಯಕ್ಷ ರಾಜನ್ ಝಡ್ ಪುರಾತನ ಭಾರತೀಯ ಸಂಸ್ಕೃತ ಗ್ರಂಥಗಳಿಂದ ಆಯ್ದ ಶ್ಲೋಕಗಳನ್ನು ಪಠಿಸುವ ಮೂಲಕ ಸೆನೆಟ್ ಆರಂಭಿಸಿದ್ದು ವಿಶೇಷವಾಗಿತ್ತು. ಸಂಸ್ಕೃತ ಶ್ಲೋಕಗಳನ್ನು ಪಠಿಸಿದ ನಂತರ ರಾಜನ್ ಝಡ್ ಅವರು ಶ್ಲೋಕಗಳ  ಮಹತ್ವವನ್ನು, ಅರ್ಥ, ಗೂಡಾರ್ಥಗಳನ್ನು ಇಂಗ್ಲಿಷ್ ನಲ್ಲಿ ತಿಳಿಸುವ ಮೂಲಕ ಸೆನೆಟ್ ಸದಸ್ಯರಿಗೆ ಶ್ಲೋಕಗಳ ಮಹತ್ವವನ್ನು ಅರುಹಿದರು.

ಋಗವೇದ, ಉಪನಿಷತ್, ಭಗವತ್ ಗೀತಾದಲ್ಲಿರುವ ಮಹತ್ವದ ಶ್ಲೋಕಗಳನ್ನು ಓಂ ಮೂಲ ಮಂತ್ರದೊಂದಿಗೆ ಆರಂಭಿಸಿ, ಅದರಿಂದಲೇ ಅಂತ್ಯಗೊಳಿಸಿದ್ದಾರೆ. ರಾಜನ್ ಝಡ್ ಹಿಂದೂ ಮುಖಂಡರಾಗಿದ್ದು, ‘ಅಸತೋಮಾ ಸದ್ಗಮಯ, ತಮಸೋಮಾ ಜ್ಯೋತಿರ್ಗಮಯ, ಮೃತ್ಯೋಮ ಅಮೃತಂಗಮಯ’ ಎಂಬ ಶಾಂತಿ ಮಂತ್ರದ ಮಹತ್ವವನ್ನು ಸೆನೆಟ್ ಸದಸ್ಯರಿಗೆ ಇಂಗ್ಲಿಷ್ ನಲ್ಲಿ ತಿಳಿ ಹೇಳುವ ಮೂಲಕ ಸಮಾಜಸೇವೆ, ಜೀವನದ ಪಾಠವನ್ನು ಕೇವಲ ಒಂದೇ ಶ್ಲೋಕದಲ್ಲಿ ತಿಳಿಹೇಳಿದ್ದು ವಿಶೇಷವಾಗಿತ್ತು.

ಅಮೆರಿಕದಲ್ಲಿ 1.1 ಮಿಲಿಯನ್ ಹಿಂದೂಗಳು ವಾಸ ಮಾಡುತ್ತಿದ್ದು, ಹಿಂದೂತ್ವದ ಶಕ್ತಿ ವಿಶ್ವದೆಲ್ಲೆಡೆ ಪಸರಿಸುತ್ತಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿ ನಿಂತಿದೆ.

0
Shares
  • Share On Facebook
  • Tweet It




Trending Now
ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
Tulunadu News October 6, 2025
ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
Tulunadu News October 6, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
    • ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
    • "ಒಂದು ಶೋಗಾಗಿ ಕೈಕಾಲು ಹಿಡಿಯುತ್ತಿದ್ದ ಕಾಲದಿಂದ..." ರಿಷಬ್ ಶೆಟ್ಟಿ 2016 ರ ಘಟನೆಯನ್ನು ನೆನಪಿಸಿಕೊಂಡದ್ದು ಯಾಕೆ?
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಕಸಾಯಿಖಾನೆ ಮುಟ್ಟುಗೋಲು ಹಾಕಿದ ಪ್ರಥಮ ಪ್ರಕರಣ ದಾಖಲು - ಎಸ್ಪಿ
    • ಗೆದ್ದರೂ ಟ್ರೋಫಿ ಪಡೆಯದೇ ದಿಟ್ಟ ಉತ್ತರ ನೀಡಿದ ಭಾರತೀಯ ತಂಡಕ್ಕೆ ಭೇಷ್!
    • ಕೇವಲ ₹100 ಲಂಚದ ಪ್ರಕರಣದಲ್ಲಿ 39 ವರ್ಷಗಳ ಬಳಿಕ ನಿರ್ದೋಷಿ ಘೋಷಣೆ!
    • ನಮ್ಮ ಜಿಲ್ಲೆಗೆ ಕಳುಹಿಸಬೇಡಿ, ಬೇಕಾದರೆ ಕಾಡಿಗೆ ಕಳುಹಿಸಿ ಎಂದು ರಾಯಚೂರಿನಲ್ಲಿ ತಿಮರೋಡಿ ವಿರುದ್ಧ ಪ್ರತಿಭಟನೆ!
    • ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ: 6 ತಿಂಗಳಲ್ಲಿ ಕತ್ರೀನಾ ಕೈಪ್ ಸಂತಾನ ಭಾಗ್ಯ!
    • ಪ್ರಧಾನ ಮಂತ್ರಿಯವರ ನಿವಾಸದ ಮುಂಭಾಗದಲ್ಲಿಯೂ ಸಹ ಗುಂಡಿಗಳು ಇವೆ- ಡಿಸಿಎಂ ಡಿಕೆಶಿ.
    • ಹಿಂದೂ ದೇವರ ಹಾಡನ್ನು ಹಾಡಿದ್ದ ಸುಹಾನಾ ತಮ್ಮ ಭಾವಿ ಪತಿಯ ಬಗ್ಗೆ ಹೇಳಿದ್ದಾರೆ! ಆ ಹಿಂದೂ ಯುವಕ ಯಾರು ಗೊತ್ತಾ!
  • Popular Posts

    • 1
      ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
    • 2
      ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!

  • Privacy Policy
  • Contact
© Tulunadu Infomedia.

Press enter/return to begin your search