• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಎಂಥಾ ವ್ಯತ್ಯಾಸ: 25 ವರ್ಷದ ನಂತರ ತ್ರಿಪುರಾ ಸಿಎಂ ಕಚೇರಿಯಲ್ಲಿ ಹಾರಿತು ತ್ರಿವರ್ಣ ಧ್ವಜ

TNN Correspondent Posted On May 3, 2018
0


0
Shares
  • Share On Facebook
  • Tweet It

ಅಗರ್ತಲಾ: ತ್ರಿಪುರಾದಲ್ಲಿ 25 ವರ್ಷಗಳ ಕಮ್ಯುನಿಸ್ಟ್ ಆಡಳಿತಕ್ಕೆ ಅಂತ್ಯ ಹಾಡಿದ ಬಿಜೆಪಿ ಕ್ರಾಂತಿಕ್ರಾರಿ ನಿರ್ಧಾರಗಳ ಮೂಲಕ ಗಮನ ಸೆಳೆಯುತ್ತಿದೆ. ರಾಜ್ಯದಲ್ಲಿ ಹೊಸ ಹೊಸ ಬದಲಾವಣೆಗಳನ್ನು ಜಾರಿಗೆ ತರುತ್ತದೆ. ಜೊತೆ ಜೊತೆ ದೇಶ ಭಕ್ತಿಯನ್ನು, ರಾಷ್ಟ್ರಪ್ರೇಮವನ್ನು ಬಿತ್ತುವಲ್ಲಿ ತ್ರಿಪುರಾ ಸಿಎಂ ಮೊದಲ ಸಾಲಿನಲ್ಲಿ ನಿಂತಿದ್ದು, ಅಭಿವೃದ್ಧಿಯ ಜೊತೆಗೆ ರಾಷ್ಟ್ರಪ್ರೇಮವನ್ನು ಬಿತ್ತುತ್ತಿದ್ದಾರೆ. ಅದಕ್ಕೆ ಸಾಕ್ಷಿಯಾಗಿ ನಿಂತಿರುವುದು 25 ವರ್ಷದ ನಂತರ ತ್ರಿಪುರಾ ಸಿಎಂ ಕಚೇರಿಯಲ್ಲಿ ತ್ರಿವರ್ಣ ಧ್ವಜ ಅಳವಡಿಸಿರುವುದು.

ತ್ರಿಪುರಾದಲ್ಲಿ 25 ವರ್ಷ ಆಡಳಿತ ನಡೆಸಿದ ಕಮ್ಯುನಿಸ್ಟರು ರಾಷ್ಟ್ರಪ್ರೇಮಕ್ಕಿಂತ ತನ್ನ ಪಕ್ಷದ ಪ್ರೇಮವೇ ಹೆಚ್ಚು ಎಂಬಂತೆ ವರ್ತಿಸಿದ್ದರು. ರಾಷ್ಟ್ರಧ್ವಜ, ರಾಷ್ಟ್ರಗೀತೆಗೆ ಕಮ್ಯುನಿಸ್ಟರು ಗೌರವ ನೀಡುವುದು, ಸೂಕ್ತ ಸ್ಥಾನ ಮಾನ ನೀಡಿದ್ದು ಕಡಿಮೆಯೇ. ಇದೀಗ ತ್ರಿಪುರಾದಲ್ಲಿ ರಾಷ್ಟ್ರಪ್ರೇಮಿ ಪಕ್ಷ ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ತ್ರಿಪುರಾದ ಚಿತ್ರಣವೇ ಬದಲಾಯಿಸುವತ್ತ ಚಿತ್ತ ಇಟ್ಟಿರುವುದು ಗಮನಾರ್ಹ.

ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ದೇಬ್ ಸಿಎಂ ಕಚೇರಿಯಲ್ಲಿ ತ್ರಿವರ್ಣ ಧ್ವಜವನ್ನು ಅಳವಡಿಸುವ ಮೂಲಕ ಗಮನ ಸೆಳೆದಿದ್ದಾರೆ. ಅಲ್ಲದೇ ಕಮ್ಯುನಿಸ್ಟರು 25 ವರ್ಷದಿಂದ ರಾಷ್ಟ್ರಧ್ವಜಕ್ಕೆ ನೀಡಿದ ಗೌರವ ಎಂಥಾದ್ದು ಎಂಬುದನ್ನು ಸೂಚ್ಯವಾಗಿ ಸಾರಿದ್ದಾರೆ.

ಕಮ್ಯುನಿಸ್ಟರಿಂದ ದೇಶದ್ರೋಹದ ಆರೋಪ

ಚೀನಾ ಪ್ರಭಾವಕ್ಕೆ ಒಳಗಾಗಿರುವ ಭಾರತದ ಕಮ್ಯುನಿಸ್ಟ್ ಪಕ್ಷ ಬಹುತೇಕ ಬಾರಿ ದೇಶವಿರೋಧಿ ನಿಲುವುಗಳಿಗೆ ಬೆಂಬಲ ನೀಡುತ್ತಲೇ ಬಂದಿದೆ. ಅಲ್ಲದೇ ಚೀನಾ ಜೊತೆಗೆ ಸಂಬಂಧವಿಟ್ಟುಕೊಂಡು, ದೇಶದ್ರೋಹಿ ಚಟುವಟಿಕೆಗೆ ಪರೋಕ್ಷ ಪ್ರೇರಣೆ ನೀಡುತ್ತಿದೆ. ಅಲ್ಲದೇ 1946ರಲ್ಲಿ ಭಾರತದ ಕಮ್ಯುನಿಸ್ಟ್ ಪಕ್ಷ ಪಾಕಿಸ್ತಾನ ವಿಭಜನೆಗೆ ಬೆಂಬಲ ನೀಡಿತ್ತು. ಇದು ಕಮ್ಯುನಿಸ್ಟರ್ ದೇಶ ವಿರೋಧಿ ನೀತಿಗೆ ಪ್ರಮುಖ ಸಾಕ್ಷಿಯಾಗಿ ನಿಲ್ಲುತ್ತದೆ.

0
Shares
  • Share On Facebook
  • Tweet It




Trending Now
ಮಹಾನಗರ ಪಾಲಿಕೆ ಮೇ 1ರಿಂದ ನೀರಿನ ರೇಷನಿಂಗ್ ಘೋಷಣೆ!
Tulunadu News April 27, 2026
ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
Tulunadu News April 14, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮಹಾನಗರ ಪಾಲಿಕೆ ಮೇ 1ರಿಂದ ನೀರಿನ ರೇಷನಿಂಗ್ ಘೋಷಣೆ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
    • ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಸಲ್ಲಿಸಿದ ನಟ!
  • Popular Posts

    • 1
      ಮಹಾನಗರ ಪಾಲಿಕೆ ಮೇ 1ರಿಂದ ನೀರಿನ ರೇಷನಿಂಗ್ ಘೋಷಣೆ!

  • Privacy Policy
  • Contact
© Tulunadu Infomedia.

Press enter/return to begin your search