• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಭಯೋತ್ಪಾದಕ ಬುರ್ಹಾನ ವಾನಿ ಬಂಟರೆಲ್ಲರೂ ಖಲ್ಲಾಸ್

TNN Correspondent Posted On May 7, 2018


  • Share On Facebook
  • Tweet It

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕ ಸಂಘಟನೆಯನ್ನು ಬಲಿಷ್ಠಗೊಳಿಸಿ, ತನ್ನದೇ ತಂಡವನ್ನು ಕಟ್ಟಿಕೊಂಡು ದೇಶವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಭಯೋತ್ಪಾದಕ ಬುರ್ಹಾನ ವಾನಿಯನ್ನು ನಮ್ಮ ಸೇನೆ ಹೊಡೆದುರುಳಿಸಿತು. ನಂತರ ವಾನಿ ಬಂಟರೆಲ್ಲ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿದ್ದರು. ವಾನಿ ಮೃತನಾದ ನಂತರ ಕೆರಳಿದ ಇವರನ್ನು ಸದೆಬಡೆಯುವ ಕೆಲಸವನ್ನು ನಮ್ಮ ಸೈನ್ಯ ನಿರಂತರವಾಗಿ ಮಾಡುತ್ತಿದೆ. ಅದಕ್ಕೆ ಸಾಕ್ಷಿ ಭಾನುವಾರ ನಡೆದ ಭಯೋತ್ಪಾದಕ ಮೇಲಿನ ಯಶಸ್ವಿ ದಾಳಿ ಮತ್ತು ದಾಳಿಯಲ್ಲಿ ವಾನಿ ಬಂಟ ಪದ್ದರ ಹತ್ಯೆ  ನಂತರ ವಾನಿಯ ಎಲ್ಲ ಸಂಘಡಿಗರ ಅಂತ್ಯವಾದಂತಾಗಿದೆ.

ಯಶಸ್ವಿ ಕಾರ್ಯಾಚರಣೆ ನಡೆಸಿರುವ ಸೈನಿಕರು ಮತ್ತು ಜಮ್ಮು ಕಾಶ್ಮೀರ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ವಾನಿ ಮತ್ತು ಆತನ ಸಂಗಡಿಗರ ಗುಂಪುಳ್ಳ ಭಾವಚಿತ್ರದಲ್ಲಿರುವ ಎಲ್ಲ ಭಯೋತ್ಪಾದಕರನ್ನು ಭಾರತೀಯ ಸೈನ್ಯ ಯಶಸ್ವಿಯಾಗಿ ಮುಗಿಸುತ್ತಾ ಬಂದಿದ್ದು, ಇದೀಗ ಶನಿವಾರ, ಭಾನುವಾರ ನಡೆದ ಕಾರ್ಯಾಚರಣೆಯಲ್ಲಿ ಬುರ್ಹಾನ ವಾನಿಯ ಇಡೀ ತಂಡ ಸರ್ವನಾಶ ವಾಗಿರುವ ಶುಭ ಸುದ್ಧಿ ಬೆಳಕಿಗೆ ಬಂದಿದೆ.

ಭಾನುವಾರ ಅಂತ್ಯವಾದ ಕಾರ್ಯಾಚರಣೆಯಲ್ಲಿ ಹೊರ ಬಿದ್ದ ಮಾಹಿತಿ ಪ್ರಕಾರ ಬುರ್ಹಾನ ವಾನಿಯ 11 ಜನರ ತಂಡದ ಎಲ್ಲ ಸದಸ್ಯರ ಅಂತ್ಯವಾಗಿರುವ ಮಾಹಿತಿ ಹೊರ ಬಿದ್ದಿದೆ. ವಾನಿ ಜೊತೆ ಉತ್ತಮ ಸಂಬಂಧ ಹೊಂದಿದ್ದ ಪದ್ದರ ಎಂಬಾತನೂ ಕೂಡ ಕಾರ್ಯಾಚರಣೆಯಲ್ಲಿ ಹತನಾಗಿದ್ದಾನೆ. ಭಾಗಶಃ ವಾನಿ ತಂಡ 11 ಜನರಲ್ಲಿ 10 ಜನರ ಅಂತ್ಯವಾಗಿದೆ. ಇನ್ನೊಬ್ಬ ಜೈಲಿನಲ್ಲಿದ್ದಾನೆ.

ಆದಿಲ್ ಖಂಡೆ, ನಿಸ್ಸಾರ್ ಪಂಡಿತ್, ಅಫಾಕ್ ಭಟ್, ಸಬ್ಜಾರ್ ಭಟ್, ಅನೀಸ್, ಇಷ್ಫಾಕ್ ಧರ್, ವಾಸೀಮ್ ಮಲ್ಹಾ ಮತ್ತು ವಾಸೀಮ್ ಶಾ ಅಂತ್ಯವಾಗಿದ್ದು, ತಾರೀಖ್ ಪಂಡಿತ್ ಜೈಲಿನಲ್ಲಿದ್ದಾನೆ. ಭಾನುವಾರ ನಡೆದ ಕಾರ್ಯಾಚರಣೆಯಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಐದು ಉಗ್ರರು ಹತರಾಗಿದ್ದರು. ಅದರಲ್ಲಿ ವಾನಿ ಸಹಚರರು ಇದ್ದರು. ಇದೀಗ ವಾನಿಯ ಇಡೀ ತಂಡ ಸರ್ವನಾಶವಾಗಿದೆ.

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Tulunadu News May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search