• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ಭಾರತದ ಮೇಲೆ ಎಲ್ ಇಟಿ ಕೆಂಗಣ್ಣು: ನಡೆಯುತ್ತಿದೇ ಭಾರಿ ಸಿದ್ಧತೆ

TNN Correspondent Posted On May 23, 2018
0


0
Shares
  • Share On Facebook
  • Tweet It

ದೆಹಲಿ: 26/11ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್, ಭಯೋತ್ಪಾದಕ ಹಫೀಸ್ ಸಯೀದ್ ನೇತೃತ್ವದ ಉಗ್ರ ಸಂಘಟನೆ ಎಲ್ ಇಟಿ ತನ್ನ ದುಷ್ಕೃತ್ಯಗಳ ಸಂಚು ಮುಂದುವರಿಸಿದ್ದು, ಭಾರತದಲ್ಲಿ ಭಾರಿ ಪ್ರಮಾಣದಲ್ಲಿ ದಾಳಿ ನಡೆಸಲು ಭಾರಿ ಸಂಚು ರೂಪಿಸಿರುವುದು ಎನ್ ಐಎ ತನಿಖೆಯಿಂದ ಬಹಿರಂಗವಾಗಿದ್ದು. ಇಡೀ ತರಬೇತಿಯ ವಿವರವನ್ನು ಇಲ್ಲಿ ಎಳೆ ಎಳೆಯಾಗಿ ಬಿಚ್ಚಿಸಲಾಗಿದೆ.

ಲಷ್ಕರ್ ಈ ತಯ್ಯಬಾ ಸಂಘಟನೆಯ ವಿದ್ಯಾರ್ಥಿ ಘಟಕ ಅಲ್ ಮಹಮ್ಮದಿಯಾ ಸ್ಟುಡೆಂಟ್ ನ ಭಯೋತ್ಪಾದಕರು ಭಾರತೀಯ ಇಂಟಲಿಜನ್ಸಿ ಏಜೇನ್ಸಿಗಳು ಟ್ರೆಸ್ ಮಾಡಲು ಆಗದಂತ ಮೊಬೈಲ್ ಹ್ಯಾಂಡ್ ಸೆಟ್ ಗಳನ್ನು ಸಿದ್ಧಪಡಿಸಿದೆ. ಎಲ್ ಇಟಿಯ ಉಗ್ರರು ದಾಳಿ ವೇಳೆಯಲ್ಲಿ ಪರಸ್ಪರ ಸಂಪರ್ಕ ಸಾಧಿಸಲು ಈ ಸಂಶೋಧನೆ ಕೈಗೊಂಡಿದ್ದು, ಅಪ್ಪಿ ತಪ್ಪಿ ಯಾವುದೇ ಇಂಟಲಿಜನ್ಸಿ ಏಜೇನ್ಸಿಗಳು ಟ್ರೇಸ್ ಮಾಡಿದರೆ ಕೂಡಲೇ ಕರೆ ಕಟ್ ಆಗುವಂತ ತಂತ್ರಜ್ಞಾವನ್ನು ಅಭಿವೃದ್ಧಿಪಡಿಸಿದ್ದು, ಭಾರತೀಯ ಸಂಸ್ಥೆಗಳಿಗೆ ಸವಾಲಾಗಿ ಪರಿಣಮಿಸಿದೆ.

ಏಪ್ರಿಲ್ 7ರಂದು ಕುಪ್ವಾರದ ಜುಗ್ದಿಯಾಲ್ ಪ್ರದೇಶದಲ್ಲಿ ಬಂಧಿತನಾದ ಎಲ್ ಇಟಿ ಉಗ್ರ ಮುಲ್ತಾನ್ ಮೂಲದ ಜೈಬುಲ್ಹಾ ಅಲಿಯಾಸ್ ಹಮ್ಜಾ ಈ ಕುರಿತ ಸ್ಫೋಟಕ ಮಾಹಿತಿಯನ್ನು ಹೊರ ಹಾಕಿದ್ದಾನೆ. ಪಾಕಿಸ್ತಾನದ ತೆರಿಗೆ ಅಧಿಕಾರಿಯೊಬ್ಬರ ಮಗನಾಗಿರುವ ಜೈಬುಲ್ಹಾ ನೀಡಿರುವ ಮಾಹಿತಿ ಪ್ರಕಾರ ಪಾಕಿಸ್ತಾನದಲ್ಲಿ ಭಾರತದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸಲು 450 ಯುವಕರನ್ನು ನೇಮಕ ಮಾಡಿದ್ದು, ಅವರೆಲ್ಲರಿಗೂ ತರಬೇತಿ ನೀಡಲಾಗುತ್ತಿದೆ. ಅದರಲ್ಲಿ ಕೆಲವರಿಗೆ ಆಘಾತಕಾರಿ ಹತ್ಯಾರಗಳ ಬಳಕೆ ಬಗ್ಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. ಬುರ್ಹಾನ್ ವಾನಿ ಹೆಸರಲ್ಲಿ ಅವರಲ್ಲಿ ದೇಶವಿರೋಧಿ ಕೃತ್ಯಕ್ಕೆ ಪ್ರಚೋದನೆ ನೀಡಲಾಗುತ್ತಿದೆ. 15 ರಿಂದ 25 ವರ್ಷದ ಯುವಕರನ್ನು ನೇಮಕ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾನೆ.

ಲಷ್ಕರ್ ಸಂಘಟನೆಯ ಪೋಷಕ ವಿಭಾಗ ಜಮಾತ್ ಉದ್ ದಾವಾ ಕೂಡ ಪಾಕ್ ಆಕ್ರಮಿತ ಕಾಶ್ಮೀರದ ಮಷ್ಕರ್ ಕೈಬರ್ ಪ್ರದೇಶದ ಅರಣ್ಯದಲ್ಲಿ ಕೆಲವು ತಂಡಗಳಿಗೆ ತರಬೇತಿ ನೀಡುತ್ತಿದೆ. ವಿಶೇಷವಾಗಿ ಈ ತರಬೇತಿ ಕೇಂದ್ರದಲ್ಲಿ ಆತ್ಮಾಹುತಿ ಬಾಂಬರ್ ಗಳನ್ನು ತಯಾರು ಮಾಡಲಾಗುತ್ತಿದೆ ಎಂಬ ಮಾಹಿತಿಯನ್ನು ಜೈಬುಲ್ಹಾ ತಿಳಿಸಿದ್ದಾನೆ.

ಪ್ರಸ್ತುತ ಭಾರತದ ಮೇಲೆ ದುಷ್ಕೃತ್ಯ ನಡೆಸಲು ಏಳು ಕ್ಯಾಂಪ್ ಗಳನ್ನು ಭಯೋತ್ಪಾದಕರು ನಡೆಸುತ್ತಿದ್ದಾರೆ. ತಬುಕ್ ಇನ್ ಮನ್ಸೇರಾ(ದೈಹಿಕ ತರಬೇತಿ), ಮುಜಾಫರಬಾದ್ ನಲ್ಲಿ ಅಕ್ಸಾ ಮಸ್ಕಾರ್(ಹತ್ಯಾರಗಳ ತರಬೇತಿ), ಕರಾಚಿಯಲ್ಲಿ ಫುಡ್ ಸೇಂಟ್ರ (ಆಹಾರ ಪೂರೈಕೆ ತರಬೇತಿ), ಮುಜಾಫರಬಾದನಲ್ಲಿ ದಖನ್(ಗುಡ್ಡಗಾಡಿನಲ್ಲಿ ಹೋರಾಡುವ ತರಬೇತಿ) ಮುರಿದ್ಕೆನಲ್ಲಿ ದೌರಾ ಬೈಟ್ ಉಲ್ ರಿಜ್ವಾನ್ (ಯುದ್ಧ ತಂತ್ರ), ಮುಜಾಫರಬಾದ್ ನಗರದಲ್ಲೇ ಖಲೀದ್ ಬಿನ್ ವಲೀದ್ (ಮುಖ್ಯ ಕಚೇರಿ ಇಲ್ಲಿಂದಲೇ ಆಹಾರ, ಬಟ್ಟೆ, ಆಯುದ್ಧಗಳು, ವಾಹನಗಳು ಪೂರೈಕೆಯಾಗುತ್ತವೆ). ಕೈಬರ್ ಪ್ರದೇಶದಲ್ಲಿ ಆತ್ಮಾಹುತಿ ತರಬೇತಿ ಕೇಂದ್ರಗಳನ್ನು ನಡೆಸಲಾಗುತ್ತಿದೆ.

0
Shares
  • Share On Facebook
  • Tweet It




Trending Now
ಕರ್ನಾಟಕದಲ್ಲಿ ಮುಸ್ಲಿಮರಿಲ್ಲದ ಊರಿನಲ್ಲಿ ಹಿಂದೂ ಸಮಾಜದಿಂದ ಮೊಹರಂ ಆಚರಣೆ!
Tulunadu News July 7, 2025
ಗ್ಯಾರಂಟಿ ಅಥವಾ ಅಭಿವೃದ್ಧಿ: ಸಿಎಂ ಆರ್ಥಿಕ ಸಲಹೆಗಾರ ರಾಯರೆಡ್ಡಿ ಜನರ ಮುಂದೆ ಆಯ್ಕೆ ಇಟ್ರಾ?
Tulunadu News July 7, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಕರ್ನಾಟಕದಲ್ಲಿ ಮುಸ್ಲಿಮರಿಲ್ಲದ ಊರಿನಲ್ಲಿ ಹಿಂದೂ ಸಮಾಜದಿಂದ ಮೊಹರಂ ಆಚರಣೆ!
    • ಗ್ಯಾರಂಟಿ ಅಥವಾ ಅಭಿವೃದ್ಧಿ: ಸಿಎಂ ಆರ್ಥಿಕ ಸಲಹೆಗಾರ ರಾಯರೆಡ್ಡಿ ಜನರ ಮುಂದೆ ಆಯ್ಕೆ ಇಟ್ರಾ?
    • 20 ವರ್ಷಗಳ ಬಳಿಕ ರಾಜ್ ಠಾಕ್ರೆ ಹಾಗೂ ಉದ್ದವ್ ಠಾಕ್ರೆ ಸಮ್ಮಿಲನ!
    • 20, 30 ವಯಸ್ಸಿನಲ್ಲಿ ಮಗು ಬೇಕೆನ್ನುವ ಆಸೆ ಹುಟ್ಟಿರಲಿಲ್ಲ, 40 ರಲ್ಲಿ ಬಂತು! ಖ್ಯಾತ ನಟಿಯ ಮನದಿಂಗಿತ...
    • ಸ್ಯಾನಿಟರಿ ಪ್ಯಾಡ್ ಪ್ಯಾಕೆಟ್ ಮೇಲೆ ರಾಹುಲ್ ಗಾಂಧಿ ಫೋಟೋಗೆ ಜೆಡಿಯು-ಬಿಜೆಪಿ ವ್ಯಂಗ್ಯ!
    • ಪರಸ್ಪರ ಸಮ್ಮತಿಯಿಂದ ನಡೆದ ಲೈಂಗಿಕ ಕ್ರಿಯೆ ನಂತರ ರೇಪ್ ಎನ್ನಲಾಗುವುದಿಲ್ಲ - ಕೇರಳ ಹೈಕೋರ್ಟ್ ಆದೇಶ
    • ಭಾರತದ ಇತಿಹಾಸದಲ್ಲಿ 2025ರ ಹಜ್ ಯಾತ್ರಾ ಆಯೋಜನೆ ಅತ್ಯಂತ ಯಶಸ್ವಿ - ಕೇಂದ್ರ ಸಚಿವ ಕಿರಣ್ ರಿಜ್ಜು
    • ಈ ಬಾರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಮಹಿಳೆಗೆ ಪಟ್ಟ?
    • ರೇಪ್ ಕೇಸಿನಲ್ಲಿ ಕಾಂಪ್ರಮೈಸ್ ಆದರೆ ಸಂತ್ರಸ್ತೆಯ ವಿರುದ್ಧವೇ ದೂರು ದಾಖಲು - ಬಾಂಬೆ ಹೈಕೋರ್ಟ್ ಪೀಠ!
    • ದೆಹಲಿಯಲ್ಲಿ 10 ವರ್ಷ ದಾಟಿದ ಕಾರುಗಳು ಕಡಿಮೆ ದರದಲ್ಲಿ ಸಿಗಲಿವೆ! ಯಾಕ್ ಗೊತ್ತಾ?
  • Popular Posts

    • 1
      ಕರ್ನಾಟಕದಲ್ಲಿ ಮುಸ್ಲಿಮರಿಲ್ಲದ ಊರಿನಲ್ಲಿ ಹಿಂದೂ ಸಮಾಜದಿಂದ ಮೊಹರಂ ಆಚರಣೆ!
    • 2
      ಗ್ಯಾರಂಟಿ ಅಥವಾ ಅಭಿವೃದ್ಧಿ: ಸಿಎಂ ಆರ್ಥಿಕ ಸಲಹೆಗಾರ ರಾಯರೆಡ್ಡಿ ಜನರ ಮುಂದೆ ಆಯ್ಕೆ ಇಟ್ರಾ?
    • 3
      20 ವರ್ಷಗಳ ಬಳಿಕ ರಾಜ್ ಠಾಕ್ರೆ ಹಾಗೂ ಉದ್ದವ್ ಠಾಕ್ರೆ ಸಮ್ಮಿಲನ!
    • 4
      20, 30 ವಯಸ್ಸಿನಲ್ಲಿ ಮಗು ಬೇಕೆನ್ನುವ ಆಸೆ ಹುಟ್ಟಿರಲಿಲ್ಲ, 40 ರಲ್ಲಿ ಬಂತು! ಖ್ಯಾತ ನಟಿಯ ಮನದಿಂಗಿತ...
    • 5
      ಸ್ಯಾನಿಟರಿ ಪ್ಯಾಡ್ ಪ್ಯಾಕೆಟ್ ಮೇಲೆ ರಾಹುಲ್ ಗಾಂಧಿ ಫೋಟೋಗೆ ಜೆಡಿಯು-ಬಿಜೆಪಿ ವ್ಯಂಗ್ಯ!

  • Privacy Policy
  • Contact
© Tulunadu Infomedia.

Press enter/return to begin your search