• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಭಾರತದ ಪಾಕ್ ರಾಯಭಾರಿಯ ಕರೆ ಕದ್ದಾಲಿಸಿ ಐಎಸ್ಐಗೆ ಸಾಥ್ ನೀಡಿದ ಅಡುಗೆ ಸಹಾಯಕನ ಬಂಧನ

TNN Correspondent Posted On May 24, 2018
0


0
Shares
  • Share On Facebook
  • Tweet It

ಲಖನೌ: ಪಾಕಿಸ್ತಾನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಭಾರತದ ರಾಯಭಾರಿ ನಿವಾಸದ ಕದ್ದಾಲಿಕೆ ಮಾಡಿದ ಆರೋಪಿ, ಉತ್ತರ ಖಂಡದ ಪಿತ್ತೋರ್ ಗಡ್ ಮೂಲದ ಅಡುಗೆಯವನನ್ನು ಪೊಲೀಸರು ಬಂಧಿಸಿದ್ದಾರೆ. ಐಎಸ್‌ಐಗೆ ನೆರವು ನೀಡಿರುವ ಮತ್ತು ಹಣಕ್ಕಾಗಿ ಮಹತ್ವದ ಮಾಹಿತಿಯನ್ನು ಸೋರಿಕೆ ಮಾಡಿದ್ದಾನೆ ಎಂಬ ಆರೋಪದಲ್ಲಿ ಈತನನ್ನು ಪೊಲೀಸರು ಬಂಧಿಸಿದ್ದಾರೆ.

ಪಿತ್ತೋರ್‌ಗಢ ದ ಗರಾಲಿ ಗ್ರಾಮದ 35 ವರ್ಷದ ರಮೇಶ್ ಸಿಂಗ್‌ನನ್ನು ಆತನ ನಿವಾಸದಲ್ಲೇ ಬಂಧಿಸಲಾಗಿದೆ. ಉತ್ತರ ಪ್ರದೇಶದ ಭದ್ರತಾ ವಿರೋಧಿ ದಳ, ಸೇನೆ ಗುಪ್ತಚರ ಇಲಾಖೆ ಹಾಗೂ ಉತ್ತರಾಖಂಡ ಪೊಲೀಸರು ಜಂಟಿಯಾಗಿ ಬಂಧಿಸಿದ್ದಾರೆ.  ಪಾಕಿಸ್ತಾನದಲ್ಲಿ ಕೆಲಸ ಮಾಡುತ್ತಿದ್ದ ಭಾರತದ ರಕ್ಷಣಾ ಅಧಿಕಾರಿಯ ನಿವಾಸದಿಂದ ಮಹತ್ವದ ಮಾಹಿತಿಯನ್ನು ಐಎಸ್ ಐ ಸಹಕಾರದಲ್ಲಿ ಕದ್ದಾಲಿಕೆ ಮಾಡುತ್ತಿದ್ದ. ಭಾರತ ರಾಯಭಾರಿ ಮನೆಯಲ್ಲಿ ಅಡುಗೆಯವನಾಗಿ ಕಾರ್ಯ ನಿರ್ವಹಿಸುತ್ತಿದ್ದ. ರಮೇಶ್ ಸಿಂಗ್ ನ ಸಹೋದರ ಭಾರತೀಯ ಸೇನೆಯ ಅಧಿಕಾರಿಯ ಮನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಬುಧವಾರ ಪಿತ್ತೋರ್‌ಗಢ ಕೋರ್ಟ್‌ಗೆ ರಮೇಶ್‌ ಸಿಂಗ್‌ನನ್ನು ಹಾಜರುಪಡಿಸಿದ್ದು, ಲಖನೌಗೆ ಕರೆದೊಯ್ಯಲಾಗಿದೆ. ಈ ಪ್ರಕರಣದ ಬಗ್ಗೆ ಉತ್ತರಾಖಂಡ ಡಿಜಿಪಿ ಉತ್ತರ ಪ್ರದೇಶದ ಎಟಿಎಸ್‌ ಅಧಿಕಾರಿಗಳ ನೆರವು ಕೋರಿದ್ದರು ಎಂದು ಯುಪಿಯ ಎಟಿಎಸ್‌ ಐಜಿ ಆಸಿಮ್ ಅರುಣ್ ಮಾಹಿತಿ ನೀಡಿದ್ದಾರೆ. ಮಿಲಿಟರಿ ಗುಪ್ತಚರ ಇಲಾಖೆಯ ನಿರ್ದೇಶಕರ ನೆರವನ್ನೂ ಪಡೆಯಲಾಗಿದೆ.

ರೈತನಾಗಿರುವ ರಮೇಶ್‌ ಸಿಂಗ್‌ಗೆ ಸಂಬಂಧಿಕರೊಬ್ಬರು ಪಾಕಿಸ್ತಾನದಲ್ಲಿ ಅಡುಗೆ ಕೆಲಸ ಕೊಡಿಸಿದ್ದಾರೆ. ಬಳಿಕ, ಈತ 2015ರ ಮಧ್ಯಭಾಗದಿಂದ 2017 ಸೆಪ್ಟೆಂಬರ್‌ವರೆಗೆ ಭಾರತ ರಕ್ಷಣಾ ಇಲಾಖೆಯ ಅಧಿಕಾರಿಯ ನಿವಾಸದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎನ್ನಲಾಗಿದೆ. ಈ ವೇಳೆ ಐಎಸ್‌ಐ ಸಂಪರ್ಕ ಸಾಧಿಸಿರುವ ಸಿಂಗ್, ಅಧಿಕಾರಿಯ ಮನೆಯಲ್ಲಿ ಪ್ರಮುಖ ದಾಖಲೆ ಸೋರಿಕೆ ಮಾಡಲು ಹಣ ಪಡೆಯುತ್ತಿದ್ದ. ಅಧಿಕಾರಿಯ ಡೈರಿ ಸೇರಿ ಹಲವು ಮಾಹಿತಿ ಐಎಸ್ ಐಗೆ ನೀಡುತ್ತಿದ್ದ ಎನ್ನಲಾಗಿದೆ. ಐಎಸ್‌ಐನಿಂದ ಆರೋಪಿ ಎಷ್ಟು ಹಣ ಪಡೆದಿದ್ದಾನೆ ಎಂದು ಇನ್ನೂ ಗೊತ್ತಾಗಿಲ್ಲ ಎಂದು ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಆನಂದ್ ಕುಮಾರ್ ತಿಳಿಸಿದ್ದಾರೆ.

0
Shares
  • Share On Facebook
  • Tweet It




Trending Now
ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
Tulunadu News September 17, 2025
ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
Tulunadu News September 17, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
    • ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
    • ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
  • Popular Posts

    • 1
      ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
    • 2
      ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
    • 3
      ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • 4
      ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • 5
      ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!

  • Privacy Policy
  • Contact
© Tulunadu Infomedia.

Press enter/return to begin your search