• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » ಸುದ್ದಿ 

ಕರಾವಳಿಯಲ್ಲಿ ಬಹಳ ದಿನಗಳವರೆಗೆ ಮೀನುಗಳು ಕೆಡದಂತೆ ಕೆಮಿಕಲ್ ಲೇಪಿಸಿ ಮಾರುಕಟ್ಟೆಗಳಲ್ಲಿ ಮಾರಾಟ ಆರೋಪ!

Tulunadu News Posted On June 25, 2018
0


0
Shares
  • Share On Facebook
  • Tweet It

ಮಂಗಳೂರು : ಹಣ್ಣುಗಳು ಕೆಡದಂತೆ, ತರಕಾರಿಗಳು ತಾಜಾ ಕಾಣುವಂತೆ ಮಾಡಲು ಕೆಮಿಕಲ್ ಲೇಪನ ಮಾಡಿ ಮಾರಾಟ ಮಾಡುವ ಘಟನೆಗಳು ಈಗಾಗಲೇ ಬಯಲಾಗಿವೆ. ಈಗ ಮೀನಿನ ಸರದಿ. ಹೌದು ಇಂತಹದೊಂದು ಆರೋಪ ಕೆಲವು ದಿನಗಳಿಂದ ಕೇಳಿಬರುತ್ತಿದೆ. ಬಹಳ ದಿನಗಳವರೆಗೆ ಮೀನುಗಳು ಕೆಡದಂತೆ ಕೆಮಿಕಲ್ ಲೇಪಿಸಿ ತಂದು ಮಾರುಕಟ್ಟೆಗಳಲ್ಲಿ ಮಾರಟ ಮಾಡಲಾಗುತ್ತಿದೆ ಎಂಬ ಆರೋಪ ಕರಾವಳಿಯಲ್ಲಿ ಕೇಳಿಬರುತ್ತಿದೆ. ಇದು ಮೀನು ಪ್ರಿಯರಲ್ಲಿ ಆತಂಕ ಮೂಡಿಸಿದೆ. ಈ ಕುರಿತ ವಿಡಿಯೋ ಒಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ತಿಂಗಳುಗಟ್ಟಲೆ ಹಾಳಾಗದಂತೆ ಹಣ್ಣುಗಳಿಗೆ ಕೆಮಿಕಲ್ ಹಾಕಿ ಮಾರಾಟ ಮಾಡುವಂತೆ ಈಗ ಮೀನಿಗೂ ವಿಷಕಾರಿ ಅಮೋನಿಯಾ ಬೆರೆಸಿ ವಾರಗಟ್ಟಲೆ ಮಾರಾಟವಾಗುವಂತೆ ನೋಡಿಕೊಳ್ಳುವ ದಂಧೆ ಕರಾವಳಿಯ ಎಲ್ಲೆಡೆ ಆರಂಭವಾಗಿದೆ ಎಂದು ಆರೋಪಿಸಲಾಗಿದೆ. ವಾರಗಟ್ಟಲೆ ಐಸ್ ನಲ್ಲಿಟ್ಟ ಮೀನುಗಳನ್ನು ಗಿರಾಕಿಗಳಿಗೆ ಫ್ರೆಶ್ ಎಂದು ತೋರಿಸಿ ಮಾರಾಟ ಮಾಡಲಾಗುತ್ತಿದೆ ಎಂದು ವಿಡಿಯೋದಲ್ಲಿ ತೋರಿಸಲಾಗಿದೆ. ಕೆಮಿಕಲ್ ಲೇಪನದ ಕುರಿತು ಗ್ರಾಹಕ ಹಾಗೂ ಮೀನು ಚಿಲ್ಲರೆ ಮಾರಾಟಗಾರನ ನಡುವೆ ನಡೆದ ವಾಗ್ವಾದ ಈ ವಿಡಿಯೋದಲ್ಲಿದೆ. ಅದರ ಪ್ರಕಾರ “ಈ ಕೆಮಿಕಲ್ ನಾವು ಹಾಕುವುದಿಲ್ಲ ಬೇರೆ ಯಾರೋ ಹಾಕುತ್ತಾರೆ ” ಎಂದು ಮೀನು ಮಾರಾಟಗಾರ ಸಮಜಾಯಿಸಿ ನೀಡುತ್ತಾನೆ. ಆದರೆ ಕೆಮಿಕಲ್ ಹಾಕುವವರು ಯಾರು ಎಂಬುದನ್ನು ಮೀನು ಮಾರಾಟಗಾರ ಹೇಳಲು ಹಿಂದೇಟು ಹಾಕುವ ಪ್ರಸಂಗ ಈ ವಿಡಿಯೋದಲ್ಲಿದೆ.

ಮೀನಿಗೆ ಅಮೋನಿಯ ಹಾಕುವುದರಿಂದ ಅದು ಬೇಗ ಹಾಳಾಗುವುದಿಲ್ಲ. ಮೀನು ಸ್ವಲ್ಪ ಹಳದಿ ಬಣ್ಣ ಅಥವಾ ಬಿಳಿಚಿದಂತೆ ಕಾಣುವುದು. ತಾಜಾ ಮೀನಿನಲ್ಲಿ ಕಣ್ಣು ಹಾಗೂ ಕಿವಿರಿನ ಬಳಿ ಸ್ವಲ್ಪ ರಕ್ತ ಇರುತ್ತದೆ. ಅಮೋನಿಯಾ ಹಾಕಿದ ಮೀನಿನಲ್ಲಿ ಇದು ಕಾಣುವುದಿಲ್ಲ ಹಾಗೂ ಈ ಭಾಗಗಳು ಬಿಳಿಯಾಗಿರುತ್ತವೆ. ಅದರಲ್ಲೂ ಮುಖ್ಯವಾಗಿ ಅಮೋನಿಯ ಹಾಕಿದ ಮೀನಿಗೆ ನೊಣ ಕುಳಿತುಕೊಳ್ಳುವುದಿಲ್ಲ. ಆದರೆ ಇಂತಹ ಅಮೋನಿಯಾ ಬೆರೆಸಿ ಮಾರುವ ಮೀನಿನ ಸೇವನೆಯಿಂದ ಆರೋಗ್ಯದ ಮೇಲೆ ತೀವ್ರ ದುಷ್ಪರಿಣಾಮ ಬೀರುತ್ತದೆ ಎಂದು ಹೇಳಲಾಗಿದೆ. ಈ ಕುರಿತು ಆರೋಗ್ಯ ಇಲಾಖೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯ ಕೂಡ ಕೇಳಿಬರುತ್ತಿದೆ.

0
Shares
  • Share On Facebook
  • Tweet It




Trending Now
ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
Tulunadu News October 6, 2025
ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
Tulunadu News October 6, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
    • ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
    • "ಒಂದು ಶೋಗಾಗಿ ಕೈಕಾಲು ಹಿಡಿಯುತ್ತಿದ್ದ ಕಾಲದಿಂದ..." ರಿಷಬ್ ಶೆಟ್ಟಿ 2016 ರ ಘಟನೆಯನ್ನು ನೆನಪಿಸಿಕೊಂಡದ್ದು ಯಾಕೆ?
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಕಸಾಯಿಖಾನೆ ಮುಟ್ಟುಗೋಲು ಹಾಕಿದ ಪ್ರಥಮ ಪ್ರಕರಣ ದಾಖಲು - ಎಸ್ಪಿ
    • ಗೆದ್ದರೂ ಟ್ರೋಫಿ ಪಡೆಯದೇ ದಿಟ್ಟ ಉತ್ತರ ನೀಡಿದ ಭಾರತೀಯ ತಂಡಕ್ಕೆ ಭೇಷ್!
    • ಕೇವಲ ₹100 ಲಂಚದ ಪ್ರಕರಣದಲ್ಲಿ 39 ವರ್ಷಗಳ ಬಳಿಕ ನಿರ್ದೋಷಿ ಘೋಷಣೆ!
    • ನಮ್ಮ ಜಿಲ್ಲೆಗೆ ಕಳುಹಿಸಬೇಡಿ, ಬೇಕಾದರೆ ಕಾಡಿಗೆ ಕಳುಹಿಸಿ ಎಂದು ರಾಯಚೂರಿನಲ್ಲಿ ತಿಮರೋಡಿ ವಿರುದ್ಧ ಪ್ರತಿಭಟನೆ!
    • ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ: 6 ತಿಂಗಳಲ್ಲಿ ಕತ್ರೀನಾ ಕೈಪ್ ಸಂತಾನ ಭಾಗ್ಯ!
    • ಪ್ರಧಾನ ಮಂತ್ರಿಯವರ ನಿವಾಸದ ಮುಂಭಾಗದಲ್ಲಿಯೂ ಸಹ ಗುಂಡಿಗಳು ಇವೆ- ಡಿಸಿಎಂ ಡಿಕೆಶಿ.
    • ಹಿಂದೂ ದೇವರ ಹಾಡನ್ನು ಹಾಡಿದ್ದ ಸುಹಾನಾ ತಮ್ಮ ಭಾವಿ ಪತಿಯ ಬಗ್ಗೆ ಹೇಳಿದ್ದಾರೆ! ಆ ಹಿಂದೂ ಯುವಕ ಯಾರು ಗೊತ್ತಾ!

  • Privacy Policy
  • Contact
© Tulunadu Infomedia.

Press enter/return to begin your search