• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಗೋವುಗಳ ಬಗ್ಗೆ ಕಾಳಜಿ ತೋರಿಸಿದ್ದಕ್ಕೆ ಕುಟುಂಬದವರೇ ಹೀಗೆ ಬಹಿಷ್ಕಾರ ಹಾಕುವುದು ಸರೀನಾ?

TNN Correspondent Posted On June 27, 2018


  • Share On Facebook
  • Tweet It

ಭೋಪಾಲ್: ಒಂದು ಗೋವಿನಲ್ಲಿ ಮುಕ್ಕೋಟಿ ದೇವತೆಗಳು ನೆಲೆಸಿರುತ್ತಾರೆ ಎಂಬ ಪ್ರತೀತಿ ಇದೆ. ಒಂದು ಗೋವು ಹಾಲು ಕೊಡುತ್ತೆ, ಆ ಹಾಲು ಮೊಸರಾಗುತ್ತದೆ, ಮೊಸರು ಮಜ್ಜಿಗೆ, ಮಜ್ಜಿಗೆ ಬೆಣ್ಣೆ, ಬೆಣ್ಣೆ ತುಪ್ಪವಾಗಿ ಮನುಷ್ಯನಿಗೆ ಬೇಕಾದ ವಿಟಮಿನ್ ನೀಡುತ್ತದೆ. ಕೃಷಿಕರಿಗೆ ಗೊಬ್ಬರ ನೀಡುತ್ತದೆ. ವಿಭೂತಿಯಾಗಲು ಗೋವಿನ ಸಗಣಿಯೇ ಬೇಕು. ಅಷ್ಟರಮಟ್ಟಿಗೆ ಗೋವು ಬಹುಪಯೋಗಿ.

ಆದರೆ ಮಧ್ಯಪ್ರದೇಶದ ನೀಮೂಚ್ ನಲ್ಲಿ ಮಾತ್ರ ಮಹಿಳೆಯೊಬ್ಬರು ಗೋವುಗಳ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದಕ್ಕೇ ಕುಟುಂಬದಿಂದಲೇ ಬಹಿಷ್ಕಾರ ಎದುರಿಸುವ ಅನಿವಾರ್ಯ ಬಂದೊದಗಿದೆ. ಇದು ಸಮಾಜವೇ ತಲೆ ತಗ್ಗಿಸುವ ಕೃತ್ಯವಾದರೂ ಯಾರೊಬ್ಬರೂ ಮಹಿಳೆ ಬೆಂಬಲಕ್ಕೆ ನಿಲ್ಲದಿರುವುದು ಅಮಾನವೀಯ ಎನಿಸುತ್ತಿದೆ.

ಹೌದು, ನೀಮೂಚ್ ನಲ್ಲಿ ಮೆಹರುನಿಸಾ ಖಾನ್ ಗೋಶಾಲೆ ನಡೆಸುತ್ತಿದ್ದಾರೆ. ರಾಷ್ಟ್ರೀಯ ಗೋಸೇವಾ ಸಂಸ್ಥೆಯ ಅಧ್ಯಕ್ಷೆಯೂ ಆಗಿರುವ ಇವರು ಗೋವುಗಳನ್ನು ರಕ್ಷಣೆ ಮಾಡುತ್ತಿದ್ದಾರೆ. ಆದರೆ ಇದನ್ನೇ ಮಹಾಪರಾಧ ಎಂಬಂತೆ ಭಾವಿಸಿರುವ ಮಹಿಳೆಯ ಗಂಡ ಹಾಗೂ ಆತನ ಕುಟುಂಬಸ್ಥರು ಮಹಿಳೆಯನ್ನು ಮನೆಯಿಂದಲೇ ಹೊರಹಾಕಿದ್ದಲ್ಲದೆ, ಬಹಿಷ್ಕಾರ ಹೇರಿದ್ದಾರೆ.

ಮತ್ತೊಂದು ವಿಪರ್ಯಾಸದ ಸಂಗತಿಯೆಂದರೆ ಮಹಿಳೆಯ ಈ ಅಂತಃಕರಣಕ್ಕೆ ಆಕೆಯ ಸಹೋದರಿ ಹಾಗೂ ಪೋಷಕರು ಸಹ ವಿರೋಧ ವ್ಯಕ್ತಪಡಿಸಿದ್ದು, ಗೋವುಗಳ ರಕ್ಷಣೆ ಮಾಡುವುದು ಬೇಡ ಎಂದು ಒತ್ತಾಯ ಮಾಡುತ್ತಿದ್ದಾರಂತೆ. ಅಲ್ಲದೆ ಗೋಶಾಲೆ ತೆರೆದಾಗಿನಿಂದ ಜೀವ ಬೆದರಿಕೆ ಕರೆಗಳು ಬರುತ್ತಿವೆ ಎಂದು ಮೆಹರುನಿಸಾ ಖಾನ್ ಮಾಹಿತಿ ನೀಡಿದ್ದಾರೆ.

ಗೋರಕ್ಷಣೆ ಮಾಡುವುದರಿಂದ ತಮ್ಮ ಕುಟುಂಬಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ಮನೆಯಿಂದ ಹೊರಹಾಕಿದ್ದಾರೆ. ತವರು ಮನೆಯವರೂ ನನ್ನ ಕೆಲಸಕ್ಕೆ ವಿರೋಧಿಸುತ್ತಾರೆ. ಆದರೆ ನಾನು ಮಾತ್ರ ಗೋವುಗಳ ರಕ್ಷಣೆ ಮಾಡುವುದನ್ನು ನಿಲ್ಲಿಸುವುದಿಲ್ಲ. ಒಂಟಿಯಾಗಿಯೇ ಜೀವನ ಸಾಗಿಸುತ್ತೇನೆ ಎನ್ನುತ್ತಾರೆ ದಿಟ್ಟೆ ಮೆಹರುನಿಸಾ.

ಹೀಗೆ ಮಹಿಳೆಯೊಬ್ಬಳಿಗೆ ಗೋವು ರಕ್ಷಣೆ ಮಾಡುವುದೇ ದೊಡ್ಡ ಅಪರಾಧ ಎಂಬಂತೆ ಭಾವಿಸಿ, ಆಕೆಯನ್ನು ಕುಟುಂಬದಿಂದಲೇ ಬಹಿಷ್ಕಾರ ಹಾಕಿದರೂ, ಇದುವರೆಗೂ ಯಾವುದೇ ಮಹಿಳಾ ಹಕ್ಕುಗಳ ಆಯೋಗ, ಬುದ್ಧಿಜೀವಿಗಳು, ಪ್ರಗತಿಪರರು, ಜೀವಪರರು, ಅಲ್ಪಸಂಖ್ಯಾತರ ಪರರು ಮಹಿಳೆ ನೆರವಿಗೆ ಬಾರದಿರುವುದು ಸಹ ಘೋರ ದುರಂತವಾಗಿದೆ. ಮೆಹರುನಿಸಾಗೆ ಗೋಮಾತೆ ಒಳ್ಳೆಯದನ್ನೇ ಮಾಡಲಿ.

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Tulunadu News May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search