• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಗೋವುಗಳ ಬಗ್ಗೆ ಕಾಳಜಿ ತೋರಿಸಿದ್ದಕ್ಕೆ ಕುಟುಂಬದವರೇ ಹೀಗೆ ಬಹಿಷ್ಕಾರ ಹಾಕುವುದು ಸರೀನಾ?

TNN Correspondent Posted On June 27, 2018
0


0
Shares
  • Share On Facebook
  • Tweet It

ಭೋಪಾಲ್: ಒಂದು ಗೋವಿನಲ್ಲಿ ಮುಕ್ಕೋಟಿ ದೇವತೆಗಳು ನೆಲೆಸಿರುತ್ತಾರೆ ಎಂಬ ಪ್ರತೀತಿ ಇದೆ. ಒಂದು ಗೋವು ಹಾಲು ಕೊಡುತ್ತೆ, ಆ ಹಾಲು ಮೊಸರಾಗುತ್ತದೆ, ಮೊಸರು ಮಜ್ಜಿಗೆ, ಮಜ್ಜಿಗೆ ಬೆಣ್ಣೆ, ಬೆಣ್ಣೆ ತುಪ್ಪವಾಗಿ ಮನುಷ್ಯನಿಗೆ ಬೇಕಾದ ವಿಟಮಿನ್ ನೀಡುತ್ತದೆ. ಕೃಷಿಕರಿಗೆ ಗೊಬ್ಬರ ನೀಡುತ್ತದೆ. ವಿಭೂತಿಯಾಗಲು ಗೋವಿನ ಸಗಣಿಯೇ ಬೇಕು. ಅಷ್ಟರಮಟ್ಟಿಗೆ ಗೋವು ಬಹುಪಯೋಗಿ.

ಆದರೆ ಮಧ್ಯಪ್ರದೇಶದ ನೀಮೂಚ್ ನಲ್ಲಿ ಮಾತ್ರ ಮಹಿಳೆಯೊಬ್ಬರು ಗೋವುಗಳ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದಕ್ಕೇ ಕುಟುಂಬದಿಂದಲೇ ಬಹಿಷ್ಕಾರ ಎದುರಿಸುವ ಅನಿವಾರ್ಯ ಬಂದೊದಗಿದೆ. ಇದು ಸಮಾಜವೇ ತಲೆ ತಗ್ಗಿಸುವ ಕೃತ್ಯವಾದರೂ ಯಾರೊಬ್ಬರೂ ಮಹಿಳೆ ಬೆಂಬಲಕ್ಕೆ ನಿಲ್ಲದಿರುವುದು ಅಮಾನವೀಯ ಎನಿಸುತ್ತಿದೆ.

ಹೌದು, ನೀಮೂಚ್ ನಲ್ಲಿ ಮೆಹರುನಿಸಾ ಖಾನ್ ಗೋಶಾಲೆ ನಡೆಸುತ್ತಿದ್ದಾರೆ. ರಾಷ್ಟ್ರೀಯ ಗೋಸೇವಾ ಸಂಸ್ಥೆಯ ಅಧ್ಯಕ್ಷೆಯೂ ಆಗಿರುವ ಇವರು ಗೋವುಗಳನ್ನು ರಕ್ಷಣೆ ಮಾಡುತ್ತಿದ್ದಾರೆ. ಆದರೆ ಇದನ್ನೇ ಮಹಾಪರಾಧ ಎಂಬಂತೆ ಭಾವಿಸಿರುವ ಮಹಿಳೆಯ ಗಂಡ ಹಾಗೂ ಆತನ ಕುಟುಂಬಸ್ಥರು ಮಹಿಳೆಯನ್ನು ಮನೆಯಿಂದಲೇ ಹೊರಹಾಕಿದ್ದಲ್ಲದೆ, ಬಹಿಷ್ಕಾರ ಹೇರಿದ್ದಾರೆ.

ಮತ್ತೊಂದು ವಿಪರ್ಯಾಸದ ಸಂಗತಿಯೆಂದರೆ ಮಹಿಳೆಯ ಈ ಅಂತಃಕರಣಕ್ಕೆ ಆಕೆಯ ಸಹೋದರಿ ಹಾಗೂ ಪೋಷಕರು ಸಹ ವಿರೋಧ ವ್ಯಕ್ತಪಡಿಸಿದ್ದು, ಗೋವುಗಳ ರಕ್ಷಣೆ ಮಾಡುವುದು ಬೇಡ ಎಂದು ಒತ್ತಾಯ ಮಾಡುತ್ತಿದ್ದಾರಂತೆ. ಅಲ್ಲದೆ ಗೋಶಾಲೆ ತೆರೆದಾಗಿನಿಂದ ಜೀವ ಬೆದರಿಕೆ ಕರೆಗಳು ಬರುತ್ತಿವೆ ಎಂದು ಮೆಹರುನಿಸಾ ಖಾನ್ ಮಾಹಿತಿ ನೀಡಿದ್ದಾರೆ.

ಗೋರಕ್ಷಣೆ ಮಾಡುವುದರಿಂದ ತಮ್ಮ ಕುಟುಂಬಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ಮನೆಯಿಂದ ಹೊರಹಾಕಿದ್ದಾರೆ. ತವರು ಮನೆಯವರೂ ನನ್ನ ಕೆಲಸಕ್ಕೆ ವಿರೋಧಿಸುತ್ತಾರೆ. ಆದರೆ ನಾನು ಮಾತ್ರ ಗೋವುಗಳ ರಕ್ಷಣೆ ಮಾಡುವುದನ್ನು ನಿಲ್ಲಿಸುವುದಿಲ್ಲ. ಒಂಟಿಯಾಗಿಯೇ ಜೀವನ ಸಾಗಿಸುತ್ತೇನೆ ಎನ್ನುತ್ತಾರೆ ದಿಟ್ಟೆ ಮೆಹರುನಿಸಾ.

ಹೀಗೆ ಮಹಿಳೆಯೊಬ್ಬಳಿಗೆ ಗೋವು ರಕ್ಷಣೆ ಮಾಡುವುದೇ ದೊಡ್ಡ ಅಪರಾಧ ಎಂಬಂತೆ ಭಾವಿಸಿ, ಆಕೆಯನ್ನು ಕುಟುಂಬದಿಂದಲೇ ಬಹಿಷ್ಕಾರ ಹಾಕಿದರೂ, ಇದುವರೆಗೂ ಯಾವುದೇ ಮಹಿಳಾ ಹಕ್ಕುಗಳ ಆಯೋಗ, ಬುದ್ಧಿಜೀವಿಗಳು, ಪ್ರಗತಿಪರರು, ಜೀವಪರರು, ಅಲ್ಪಸಂಖ್ಯಾತರ ಪರರು ಮಹಿಳೆ ನೆರವಿಗೆ ಬಾರದಿರುವುದು ಸಹ ಘೋರ ದುರಂತವಾಗಿದೆ. ಮೆಹರುನಿಸಾಗೆ ಗೋಮಾತೆ ಒಳ್ಳೆಯದನ್ನೇ ಮಾಡಲಿ.

0
Shares
  • Share On Facebook
  • Tweet It




Trending Now
ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
Tulunadu News November 1, 2025
ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
Tulunadu News October 31, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
    • ಕಾಂತಾರಾ ಚಾಪ್ಟರ್ 1 ಒಟಿಟಿಯಲ್ಲಿ ರಿಲೀಸ್! ದಿನ ಫಿಕ್ಸ್!
    • ಜಿಎಸ್ಟಿ ಇಳಿಕೆ ಪರಿಣಾಮ- ದೀಪಾವಳಿಗೆ 6.05 ಲಕ್ಷ ಕೋಟಿ ವಸ್ತು ಮಾರಾಟ!
    • ಪುತ್ತೂರು: ಅಕ್ರಮ ಗೋಸಾಗಾಟ, ಪೊಲೀಸರಿಂದ ಫೈರಿಂಗ್!
    • ದೀಪಾವಳಿ ಬೋನಸ್ ಕಡಿಮೆ ಕೊಟ್ಟಿದ್ದಕ್ಕೆ ಟೋಲ್ ಸಿಬ್ಬಂದಿಗಳು ಮಾಡಿದ್ದೇನು?

  • Privacy Policy
  • Contact
© Tulunadu Infomedia.

Press enter/return to begin your search