• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಹಣೆಗೆ ತಿಲಕ ಇಟ್ಟುಕೊಂಡಿದ್ದೇ ಈ ಮುಸ್ಲಿಂ ಬಾಲಕಿಯ ತಪ್ಪಾಯಿತೇ?

TNN Correspondent Posted On July 8, 2018


  • Share On Facebook
  • Tweet It

ತಿರುವನಂತಪುರ: ದೇಶದಲ್ಲಿ ಮದರಸಾಗಳು ಎಂದರೆ ಧಾರ್ಮಿಕ ಶಿಕ್ಷಣ ಸಂಸ್ಥೆ, ಧರ್ಮ ಬೋಧನೆಗಾಗಿ ನಿರ್ಮಿಸಿರುವ ಸಂಸ್ಥೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಅದು ಸಂವಿಧಾನ ಬದ್ಧವಾಗಿದ್ದರೆ ಕಾನೂನೇ ನೋಂದಣಿ ಮಾಡಿಸಿಕೊಳ್ಳುತ್ತದೆ ಎಂಬುದು ಜಾತ್ಯತೀತ ದೇಶದ ಹೆಗ್ಗಳಿಕೆಯೇ ಸರಿ. ಆದರೆ ಇಂಥ ಮದರಸಾದ ಮೂಲಕ ಇತ್ತೀಚೆಗೆ ಉಗ್ರ ಸಂಘಟನೆಗಳಿಗೆ ವ್ಯಕ್ತಿಗಳನ್ನು ಕಳುಹಿಸಲಾಗುತ್ತಿದೆ ಎಂಬ ಸುದ್ದಿ ಇತ್ತೀಚೆಗೆ ಹರಿದಾಡಿತ್ತು.

ಏನೋ ಕೆಲವು ಮದರಸಾಗಳು ಸಗಣಿ ತಿನ್ನುವ ಕೆಲಸ ಮಾಡಿದವು ಎಂದು ಸುಮ್ಮನಾಗಿಬಿಡಬಹುದು. ಉಳಿದ ಮದರಸಾಗಳು ಚೆನ್ನಾಗಿವೆ ಎಂದು ಸಮಾಧಾನಪಡಬಹುದು. ಆದರೆ ಈ ಕೆಲವು ಮದರಸಾಗಳು ನಮ್ಮನ್ನು ಸುಮ್ಮನಿರಲು ಬಿಡಲ್ಲ. ಉಪಟಳ, ಉದ್ಧಟತನದ ಮೂಲಕ ಎಲ್ಲರ ಹೊಟ್ಟೆ ಉರಿಸುತ್ತವೆ.

ಇದಕ್ಕೆ ನಿದರ್ಶನವಾಗುವಂತಹ ಘಟನೆಯೊಂದು ಕೇರಳದಲ್ಲಿ ನಡೆದಿದ್ದು, ಐದು ವರ್ಷದ ಪುಟ್ಟ ಬಾಲಕಿಯೊಬ್ಬಳು ಹಣೆಗೆ ಗಂಧದ ಬೊಟ್ಟು ಇಟ್ಟುಕೊಂಡಳು ಎಂದು ಮದರಸಾದಿಂದಲೇ ವಜಾಗೊಳಿಸುವ ಮೂಲಕ ಧಾರ್ಮಿಕ ಅಸಹಿಷ್ಣುತೆ ಮೆರೆಯಲಾಗಿದೆ.

ಹೌದು, ಕೇರಳದ ಮದರಸಾವೊಂದರಲ್ಲಿ ಐದನೇ ತರಗತಿ ಓದುತ್ತಿದ್ದ ಹೆನ್ನಾ ಮಲಾಯಿಲ್ ಎಂಬ ಮುಸ್ಲಿಂ ಬಾಲಕಿ ಇತ್ತೀಚೆಗೆ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಣೆಗೆ ಗಂಧದ ಬೊಟ್ಟು ಇಟ್ಟುಕೊಂಡು ನಟನೆ ಮಾಡಿದ್ದಳು. ಆದರೆ ಇದಕ್ಕೆ ಆಡಳಿತ ಮಂಡಳಿ ವಿರೋಧ ವ್ಯಕ್ತಪಡಿಸಿದ್ದು, ಇಸ್ಲಾಂ ಧರ್ಮವನ್ನು ಬೇರೆ ರೀತಿಯಲ್ಲಿ ತೋರಿಸಲಾಗಿದೆ ಎಂದು ಬಾಲಕಿಯನ್ನು ಶಾಲೆಯಿಂದ ಹೊರಹಾಕಲಾಗಿದೆ.

ಬಾಲಕಿಯ ತಂದೆ-ತಾಯಿ ಬಡವರಾಗಿದ್ದು, ಈಗ ಬಾಲಕಿಯ ಭವಿಷ್ಯ ಏನು ಎಂಬ ಕುರಿತು ಚಿಂತೆ ಮಾಡುವ ಹಾಗಾಗಿದೆ. ಹೇಳಿ ಐದು ವರ್ಷದ ಪುಟ್ಟ ಕಂದಮ್ಮಳಿಗೆ ಧರ್ಮದ ಯಾವ ನಿಯಮ ಅರ್ಥವಾಗುತ್ತದೆ? ಧಾರ್ಮಿಕ ವಿಧಿವಿಧಾನ ಹೇಗೆ ಅರ್ಥವಾಗುತ್ತವೇ? ಅಷ್ಟಕ್ಕೂ ಹಣೆಗೆ ಬೊಟ್ಟುಇಟ್ಟುಕೊಂಡರೆ ಯಾವ ಅಪರಾಧ? ಬಾಲಕಿಯ ಮುಗ್ಧತೆಯನ್ನೇ ಅರಿಯದಷ್ಟು ಕುರುಡಾದರೆ ಈ ಧರ್ಮಪಾಲಕರು?

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Tulunadu News May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search