• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಡೊಮಿನಿಕ್ ಚರ್ಚ್ ಆವರಣ ಗೋಡೆ ಕಟ್ಟಲು ನಮ್ಮ ತೆರಿಗೆಯ ಹಣ ಯಾಕೆ ಪಾಲಿಕೆಯವರೇ?

hanumantha kamath Posted On December 1, 2018


  • Share On Facebook
  • Tweet It

ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಯಾರಿಗೂ ಗೊತ್ತಾಗುವುದಿಲ್ಲ ಎಂದು ಅಂದುಕೊಳ್ಳುತ್ತದೆ ಎನ್ನುವ ಮಾತಿದೆ. ಅದಕ್ಕೆ ಹೊಸದಾಗಿ ಇನ್ನೊಂದು ಗಾದೆಯನ್ನು ಸೇರಿಸಬೇಕು. ಅದೇನೆಂದರೆ ಪಾಲಿಕೆ ಜನರ ತೆರಿಗೆಯ ಹಣ ಪೋಲು ಮಾಡಿದರೆ ಯಾರಿಗೂ ಗೊತ್ತಾಗುವುದಿಲ್ಲ ಎಂದು ಅಂದುಕೊಳ್ಳುತ್ತದೆ. ಇವತ್ತು ನಾನು ಹೇಳುತ್ತಿರುವ ವಿಚಾರ ನೀವು ಪಾಲಿಕೆಯ ವ್ಯಾಪ್ತಿಯೊಳಗೆ ವಾಸಿಸುವವರಾದರೆ ಮತ್ತು ರಸ್ತೆ ಅಗಲೀಕರಣದ ವಿಷಯಕ್ಕೆ ಸಂಬಂಧಪಟ್ಟಂತೆ ನೀವು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಭಾದಿತರಾಗುವವರಾದರೆ ನೀವು ಇವತ್ತಿನ ಜಾಗೃತ ಅಂಕಣವನ್ನು ಓದಿ ಮನನ ಮಾಡಿಕೊಳ್ಳಬೇಕು.

ಜಾಗ ಬಿಟ್ಟುಕೊಟ್ಟು ಗೋಡೆ ಕಟ್ಟಿಸಿದರೆ ಬೇರೆ ವಿಷಯ…

ಮಂಗಳೂರಿನ ಯಾವುದಾದರೂ ರಸ್ತೆ ಅಗಲವಾಗಲೇಬೇಕು ಎಂದು ಪಾಲಿಕೆ ನಿರ್ಧರಿಸಿದೆ ಎಂದು ಇಟ್ಟುಕೊಳ್ಳಿ. ಉದಾಹರಣೆಗೆ ಅದು ನಿಮ್ಮದೇ ಮನೆ ಇರುವ ರಸ್ತೆ ಎಂದೇ ಇಟ್ಟುಕೊಳ್ಳಿ. ಆಗ ನೀವು ಆ ರಸ್ತೆ ಅಗಲೀಕರಣಕ್ಕೆ ನಿಮ್ಮ ಜಾಗ ಬಿಟ್ಟುಕೊಡಬೇಕು ಎಂದು ಮಂಗಳೂರು ಮಹಾನಗರ ಪಾಲಿಕೆ ನಿಮಗೊಂದು ಮನವಿ ಮಾಡುತ್ತದೆ. ನೀವು ಮಂಗಳೂರು ನಗರದ ಅಭಿವೃದ್ಧಿಯ ಬಗ್ಗೆ ನಿಜವಾದ ಕಾಳಜಿ ಹೊಂದಿರುವವರಾದರೆ ಮನವಿಗೆ ಸಕರಾತ್ಮಕವಾಗಿ ಸ್ಪಂದಿಸುತ್ತೀರಿ. ಅದರ ನಂತರ ಎಷ್ಟು ಜಾಗ ಬಿಡಬೇಕು, ಎಲ್ಲಿಯ ತನಕ ಬಿಡಬೇಕು ಎನ್ನುವ ಬಗ್ಗೆ ವಿಚಾರಿಸುತ್ತೀರಿ. ಆಗ ಪಾಲಿಕೆಯ ನಗರ ಯೋಜನಾ ಅಧಿಕಾರಿಗಳು ಒಂದು ನಕ್ಷೆ ತಯಾರಿಸಿ ಅದನ್ನು ನಿಮ್ಮ ಮುಂದೆ ಇಡುತ್ತಾರೆ. ಅದನ್ನು ನೀವು ನೋಡಿ ಅರ್ಥವಾಗದಿದ್ದರೆ ಮತ್ತೊಮ್ಮೆ ಕೇಳಿ, ತಿಳಿದುಕೊಂಡು ನಂತರ ಜಾಗ ಬಿಟ್ಟು ಕೊಡಲು ಒಪ್ಪುತ್ತೀರಿ. ಅದಕ್ಕೆ ಅನುಗುಣವಾಗಿ ನಿಮಗೆ ಟಿಡಿಆರ್ ಸಿಗುತ್ತದೆ. ಅದನ್ನು ನೀವು ಭವಿಷ್ಯದಲ್ಲಿ ನಿಮ್ಮ ಲಾಭಕ್ಕೆ ಹೇಗೆ ಬೇಕೋ ಹಾಗೆ ಅನುಕೂಲಕರವಾಗಿ ಉಪಯೋಗಿಸಿಕೊಳ್ಳಬಹುದು. ಆ ಬಗ್ಗೆ ಸಂಶಯಗಳಿದ್ದಲ್ಲಿ ಟಿಡಿಆರ್ ಅನ್ನು ಹೇಗೆ ಬಳಸುವುದು ಎಂದು ಯಾವುದೇ ಬಿಲ್ಡರ್ ಅವರತ್ರ ಕೇಳಿ. ನೀವು ಜಾಗ ಬಿಟ್ಟುಕೊಡುವ ಬಗ್ಗೆ ಒಪ್ಪಿಗೆ ಪತ್ರ ಕೊಟ್ಟ ಕೂಡಲೇ ನಿಮಗೆ ಪಾಲಿಕೆ ಸಬ್ ರಿಜಿಸ್ಟರ್ ಆಫೀಸಿನ ಕಡೆಯಿಂದ ದಾನಪತ್ರ ಕೊಡಿಸುತ್ತದೆ. ಅಲ್ಲಿಗೆ ಪಾಲಿಕೆ ಮತ್ತು ನಿಮ್ಮ ನಡುವಿನ ಕೊಡು-ಕೊಳ್ಳುವಿಕೆ ಮುಗಿಯುತ್ತದೆ. ಕೆಲವು ಬಾರಿ ನೀವು ಜಾಗ ಬಿಟ್ಟು ಕೊಡಲು ಹಟ ಮಾಡುತ್ತಿರಿ. ಸುಲಭದಲ್ಲಿ ಜಾಗ ಸಿಗುವುದಿಲ್ಲ ಎಂದ ತಕ್ಷಣ ಅಧಿಕಾರಿಗಳು ಒಂದಷ್ಟರ ಮಟ್ಟಿಗೆ ನಿಮ್ಮ ಕೆಲವು ಷರತ್ತುಗಳನ್ನು ಕೇಳುತ್ತಾರೆ. ಅದರಿಂದ ಒಂದು ಜಾಗ ಬಿಟ್ಟುಕೊಟ್ಟ ನಂತರ ಆವರಣಗೋಡೆ ಕಟ್ಟಿಕೊಡಬೇಕು ಎನ್ನುವುದು ಸಾಮಾನ್ಯ ಷರತ್ತು. ಸರಿಯಾಗಿ ನೋಡಿದ್ರೆ ಆವರಣ ಗೋಡೆ ಕಟ್ಟಲೇಬೇಕೆಂಬ ಕಡ್ಡಾಯ ಪಾಲಿಕೆಗೆ ಇಲ್ಲ. ಆದರೆ ಆ ಒಂದು ಕಾರಣದಿಂದ ಜಾಗ ಬಿಟ್ಟುಕೊಡುವ ಪ್ರಕ್ರಿಯೆ ನಿಧಾನವಾಗಿ ಆಗುತ್ತಿದೆ ಎನ್ನುವ ಭಾವನೆ ಇದ್ರೆ ಆಗ ಪಾಲಿಕೆ ಅಧಿಕಾರಿಗಳು ಒಪ್ಪುವುದು ಸಹಜ. ಅದು ಹೆಚ್ಚಿನ ಕಡೆ ನಾವು ಕಾಣಬಹುದು. ಆದರೆ ಜಾಗವನ್ನು ಬಿಟ್ಟುಕೊಡದೆ ತಮ್ಮ ಆವರಣಕ್ಕೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿಸಿ ಪಾಲಿಕೆಯ ವತಿಯಿಂದ ಆವರಣ ಗೋಡೆ ಕಟ್ಟಿಸಿಕೊಳ್ಳುವುದನ್ನು ತಾವು ನೋಡಿದ್ದೀರಾ?

ಚರ್ಚ್ ಮೇಲೆ ಅಷ್ಟು ಪ್ರೀತಿ ಇದ್ದರೆ ಕಾರ್ಪೋರೇಟರ್ ತಮ್ಮ ಕಿಸೆಯಿಂದ ಹಣ ಹಾಕಲಿ..

ಇಂತಹ ಒಂದು ಅಧಿಕ ಪ್ರಸಂಗಕ್ಕೆ ಕಾರಣರಾಗಿರುವುದು ಪಾಲಿಕೆಯ ಅಧಿಕಾರಿಗಳು ಮತ್ತು ಕೋಡಿಕಲ್ ಭಾಗದ ಡೊಮಿನಿಕ್ ಎನ್ನುವ ಚರ್ಚ್ ನ ಆಡಳಿತ ಮಂಡಲಿ. ನಾನು ಇತ್ತೀಚೆಗೆ ಆ ಪ್ರದೇಶಕ್ಕೆ ಹೋಗಿ ಜನರ ತೆರಿಗೆಯ ಹಣದಿಂದ ಪಾಲಿಕೆ ಕಟ್ಟುತ್ತಿರುವ ಆವರಣ ಗೋಡೆಯ ನಿರ್ಮಾಣಕ್ಕೆ ಆಕ್ಷೇಪ ಎತ್ತಿದ್ದೇನೆ. ಈ ಬಗ್ಗೆ ಪಾಲಿಕೆಯ ಅಧಿಕಾರಿಗಳನ್ನು ಕೇಳಿದರೆ ಚರ್ಚ್ ನವರು ರಸ್ತೆಯ ಅಗಲೀಕರಣಕ್ಕೆ ಜಾಗ ಬಿಟ್ಟುಕೊಟ್ಟಿದ್ದಾರೆ ಎಂದು ಹೇಳಿದ್ದಾರೆ. ಅಲ್ಲಂತೂ ಅವರು ರಸ್ತೆಗೆ ಒಂದು ಅಡಿ ಜಾಗ ಕೂಡ ಬಿಟ್ಟುಕೊಟ್ಟಿರುವುದಕ್ಕೆ ಯಾವ ಕುರುಹುಗಳು ಕಾಣಿಸಿಲ್ಲ. ಅಧಿಕಾರಿಗಳು ರಸ್ತೆಯ ಮಧ್ಯಭಾಗದಿಂದ ನಾಲ್ಕುವರೆ ಮೀಟರ್ ಬಿಟ್ಟು ಆವರಣ ಗೋಡೆ ಕಟ್ಟಲಾಗುತ್ತಿದೆ ಎನ್ನುತ್ತಿದ್ದಾರೆ. ಆದರೆ ಅಲ್ಲಿ ಪರಿಶೀಲಿಸಿದರೆ ರಸ್ತೆಯ ಮಧ್ಯಭಾಗದಿಂದ ಮೂರುವರೆ ಮೀಟರ್ ಕೂಡ ರಸ್ತೆ ಅಗಲ ಇಲ್ಲ. ಇನ್ನು ರಸ್ತೆಗೆ ಬಿಡಬೇಕಾದ ಜಾಗದ ನಕ್ಷೆಯನ್ನು ಪಾಲಿಕೆ ಮಾಡಬೇಕಲ್ಲ. ಅದನ್ನು ಕೂಡ ಮಾಡಿಲ್ಲ. ಪಾಲಿಕೆಯಿಂದ ಮನವಿ ಪತ್ರ ಏನಾದರೂ ಹೋಗಿದೆಯಾ ಎಂದು ನೋಡಿದರೆ ಅದು ಕೂಡ ಇಲ್ಲ. ಅಂದರೆ ಅಲ್ಲಿ ರಸ್ತೆಗೆ ಜಾಗ ಬಿಟ್ಟು ಕೊಟ್ಟ ಸುಳಿವೇ ಇಲ್ಲ. ಆದರೂ ಪಾಲಿಕೆಯವರು ಡೊಮಿನಿಕ್ ಚರ್ಚ್ ಆವರಣ ಗೋಡೆಯನ್ನು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕಟ್ಟಿಸಲು ಹೊರಟಿದ್ದಾರೆ. ಹಾಗಾದರೆ ಇದರ ಹಿಂದೆ ಯಾರ “ಕೈ”ವಾಡ ಇದೆ? ಚರ್ಚ್ ನವರ ಮೇಲೆ ಅಷ್ಟು ಪ್ರೀತಿ ಉಕ್ಕಿ ಬರಲು ಕಾರಣವೇನು? ಲಕ್ಷಾಂತರ ರೂಪಾಯಿ ಖರ್ಚಾಗುತ್ತಿರುವ ಆ ಗೋಡೆಗೆ ಇವರು ಬಳಸುತ್ತಿರುವ ತೆರಿಗೆಯ ಹಣ
ಎಲ್ಲಿಯದು?

ಮಂಗಳೂರಿಗೆ ಅಗತ್ಯವಿರುವ ರಸ್ತೆ ಅಗಲೀಕರಣವಾಗಲೇಬೇಕಾದ ಬಲ್ಮಠ-ಕಲೆಕ್ಟರ್ ಗೇಟ್ ಬಳಿಯ ಕಾಂಗ್ರೆಸ್ ಮಾಜಿ ನಾಯಕಿ ಮಾರ್ಗರೇಟ್ ಆಳ್ವರ ಸಂಬಂಧಿಕರ ಜಾಗ, ಮಣ್ಣಗುಡ್ಡೆಯ ಸರಕಾರಿ ಶಾಲೆಯ ಪಾಶ್ವಭಾಗದಲ್ಲಿರುವ ರಸ್ತೆ ಅಗಲೀಕರಣಕ್ಕೆ ತೊಡಕಾಗಿರುವ ಜಾಗ ಇದನ್ನೆಲ್ಲ ಮಾತುಕತೆಯಿಂದ ಸರಿ ಮಾಡಿ ರಸ್ತೆ ಅಗಲೀಕರಣ ಮಾಡುವುದು ಬಿಟ್ಟು ರಸ್ತೆಗೆ ಜಾಗವನ್ನೇ ಬಿಟ್ಟುಕೊಡದವರಿಗೆ ಆವರಣ ಗೋಡೆ ಕಟ್ಟಿಸಿಕೊಡಲು ಹೊರಟಿದ್ದಾರಲ್ಲ, ಮಹಾನುಭಾವರು, ಅವರನ್ನು ನೋಡಿಯೇ ಹೇಳಿದ್ದು “ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಯಾರಿಗೂ ಗೊತ್ತಾಗುತ್ತದೆಯೋ ಇಲ್ಲವೋ, ಪಾಲಿಕೆ ಅಕ್ರಮವಾಗಿ ಏನಾದರೂ ಮಾಡಿದರೆ ನನಗಂತೂ ಇವತ್ತಲ್ಲ ನಾಳೆ ಗೊತ್ತಾಗಿಯೇ ಆಗುತ್ತದೆ”

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
hanumantha kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
hanumantha kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search