• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಹೀಗೆ ನಾವು ನಿರ್ಲಕ್ಷ್ಯ ಮಾಡಿದರೆ ಮುಂದಿನ ಜನ್ಮದಲ್ಲಿ ಅನುಭವಿಸಬೇಕಾಗುತ್ತದೆ!!

Hanumantha Kamath Posted On February 27, 2019


  • Share On Facebook
  • Tweet It

ಫೆಬ್ರವರಿ ಮಧ್ಯದಿಂದಲೇ ಮಂಗಳೂರಿನಲ್ಲಿ ಬಿಸಿಗಾಳಿ ಬೀಸುತ್ತಿದೆ. ಇನ್ನೂ ಮೂರು ತಿಂಗಳುಗಳನ್ನು ನಾವು ಈ ಬಿಸಿಯಲ್ಲಿಯೇ ತೆಗೆಯಬೇಕು. ಎಲ್ಲಿ ಹೋದರೂ ಎಲ್ಲರದ್ದೂ ಒಂದೇ ಮಾತು. ಎಂಚಿನ ಬೆಚ್ಚ ಮಾರ್ರೆ ಕುಡ್ಲ. ಎಂತಹ ಬಿಸಿ ಮಂಗಳೂರಿನಲ್ಲಿ. ಅಷ್ಟಕ್ಕೂ ಮಂಗಳೂರಿನಲ್ಲಿ ಈ ಪ್ರಮಾಣದಲ್ಲಿ ಸೆಕೆ, ಬಿಸಿ ಗಾಳಿ, ಉಷ್ಣಹವೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಲು ಕಾರಣವೇನು? ಸಂಶಯವೇ ಇಲ್ಲ. ಮಂಗಳೂರು ಕಾಂಕ್ರೀಟ್ ಕಾಡಾಗಿ ಬೆಳೆಯುತ್ತಿದೆ. ಕಟ್ಟಡಗಳು ಕಾಂಕ್ರೀಟ್, ರೋಡ್ ಕಾಂಕ್ರೀಟ್. ಎಲ್ಲವೂ ಕಾಂಕ್ರೀಟ್. ಇದರಿಂದ ಏನಾಗುತ್ತಿದೆ ಎಂದರೆ ಮಧ್ಯಾಹ್ನ ಸೂರ್ಯ ನೆತ್ತಿಯ ಮೇಲೆ ಇದ್ದಾಗ ವಾತಾವರಣ ಎಷ್ಟು ಬಿಸಿ ಇರುತ್ತದೋ ಅಷ್ಟೇ ಬಿಸಿ ಮಧ್ಯಾಹ್ನ ಕಳೆದು ಸಂಜೆ ಐದು ಗಂಟೆಯ ತನಕ ಇರುತ್ತದೆ. ಹಿಂದೆ ಹೇಗಿತ್ತು ಎಂದರೆ ಮಧ್ಯಾಹ್ನದ ಸೂರ್ಯ ಊಟ ಮುಗಿಸಿ ಸಂಜೆ ಚಾ ಸಮಯದ ಒಳಗೆ ಪ್ರಖರತೆ ಕಡಿಮೆ ಮಾಡಿಕೊಳ್ಳುತ್ತಿದ್ದ. ಈಗ ಏನು ಎಂದರೆ ಸೂರ್ಯ ಹೇಗೆ ಇರಬೇಕೋ ಇವತ್ತಿಗೂ ಹಾಗೆ ಇದ್ದಾನೆ. ಆದರೆ ನಾವು ಬದಲಾಗಿದ್ದೇವೆ. ಹಿಂದೆ ಡಾಮರು ಇದ್ದ ರಸ್ತೆಗಳು, ಕಡಿಮೆ ಇದ್ದ ಬಿಲ್ಡಿಂಗ್ ಗಳು ಈಗ ಬದಲಾಗಿವೆ. ಈಗ ಏನಿದ್ದರೂ ಆಧುನಿಕತೆ. ಹಾಗಂತ ಕಾಂಕ್ರೀಟ್ ರೋಡ್ ಬೇಡಾ ಎನ್ನಲು ಆಗುತ್ತದಾ? ಬೇಡಾ ಎಂದು ನಮ್ಮ ಶಾಸಕರೋ, ಸಂಸದರೋ ಹೇಳಿದರೆ ಜನ ಅವರಿಗೆನೆ ಟೀಕೆ ಮಾಡಿಯಾರು. ಬೈಯಬಹುದು. ಹಾಗಾದರೆ ಇದನ್ನು ತಡೆಯಲು ಆಗುವುದಿಲ್ಲ. ಹಾಗಿದ್ದರೆ ನಾವು ಏನು ಮಾಡಬೇಕು. ಅದೇ ಪರಿಹಾರದ ಬಗ್ಗೆ ಇವತ್ತು ಮಾತನಾಡಲೇ ಬೇಕಾದ ಅವಶ್ಯಕತೆ ಇದೆ. ಕಾಂಕ್ರೀಟ್ ಕಾಡುಗಳ ನಡುವೆ ಹಸಿರು ಕಾಡನ್ನು ನಿರ್ಮಿಸಲು ನಾವು ಶುರು ಮಾಡಬೇಕು. ಇವತ್ತಿನ ದಿನ ಏನಾಗಿದೆ ಎಂದರೆ ನಗರದಲ್ಲಿ ನಾಲ್ಕು ಮರಗಳನ್ನು ನೋಡುವುದೂ ಒಂದೇ, ಮರುಭೂಮಿಯಲ್ಲಿ ಮಳೆ ನೋಡುವುದೂ ಒಂದೇ. ಹೀಗಾಗಿದೆ.

ಗಿಡ ನೆಡುವ ಸೂಚನೆ ಜಾರಿಗೆ ಬರುವುದೇ ಇಲ್ಲ.

ಅತ್ತ ಇತ್ತ ಮರಗಳನ್ನು ರಸ್ತೆ ಅಗಲ ಮಾಡುವಾಗ ಇವರು ಕಡಿಯುತ್ತಾರೆ. ಆದರೆ ಪ್ರಶ್ನೆ ಏನೆಂದರೆ ಇವರು ಮರಗಳನ್ನು ಕಡಿಯುವಾಗ ಎಷ್ಟು ಉತ್ಸಾಹ ತೋರಿಸುತ್ತದೆಯೋ ಅಷ್ಟೇ ಉತ್ಸಾಹವನ್ನು ರಸ್ತೆ ಅಗಲವಾದ ನಂತರ ಅಲ್ಲಿ ಗಿಡಗಳನ್ನು ನೆಡಲು ತೋರಿಸುವುದಿಲ್ಲ. ಪಾಲಿಕೆ ರಸ್ತೆ ಅಗಲ ಮಾಡುವಾಗ ಮರಗಳನ್ನು ಕಡಿಯಬಹುದಾ ಎಂದು ಅರಣ್ಯ ಇಲಾಖೆಯಿಂದ ಅನುಮತಿ ಕೇಳುತ್ತದೆ. ಆದರೆ ಅನುಮತಿ ಕೊಡುವಾಗ ಅರಣ್ಯ ಇಲಾಖೆ ಕಾಮಗಾರಿ ಮುಗಿದ ನಂತರ ಒಂದು ಮರ ಕಡಿದ ಜಾಗದಲ್ಲಿ ಎರಡು ಗಿಡಗಳನ್ನು ನೆಡಬೇಕು ಎಂದು ಹೇಳಿರುತ್ತದೆ. ಅದನ್ನು ಮಾತ್ರ ಇವರು ಯಾವ ಕಾರಣಕ್ಕೂ ಪಾಲಿಸಲು ಆಸಕ್ತಿ ತೋರಿಸುವುದಿಲ್ಲ.

ಇನ್ನು ಎಷ್ಟೋ ವಸತಿ ಸಮುಚ್ಚಯ ಈಗ ಬೆಳೆದು ನಿಂತಿರುವ ಜಾಗದಲ್ಲಿ ಅದು ಕಟ್ಟುವ ಮೊದಲು ಅನೇಕ ಹಳೆಯ ಮರಗಳು ಇದ್ದವು. ಆದರೆ ದೊಡ್ಡ ಅಪಾರ್ಟ್ ಮೆಂಟ್ ಕಟ್ಟಬೇಕಾದರೆ ಆ plot ಇರುವ ಜಾಗದಲ್ಲಿ ಮರಗಳನ್ನು ತೆರವುಗೊಳಿಸದೇ ಏನೂ ಕಟ್ಟಲು ಆಗುವುದಿಲ್ಲ. ಅದಕ್ಕೆ ಬಿಲ್ಡಿಂಗ್ ಕಟ್ಟುವ ಮೊದಲೇ ಬಿಲ್ಡರ್ ಗೆ ಪಾಲಿಕೆ ಒಂದು ಕಂಡೀಷನ್ ಹಾಕಿರುತ್ತದೆ. ಅದೇನೆಂದರೆ ಆ ವಸತಿ ಸಮುಚ್ಚಯದ ಆವರಣದಲ್ಲಿ ಗಿಡಗಳನ್ನು ನೆಡಬೇಕು ಎನ್ನುವುದು. ಒಂದು ಮರ ಕಟ್ ಮಾಡಿದರೆ ಎರಡು ಗಿಡಗಳನ್ನು ನೆಡಬೇಕು ಎನ್ನುವುದು. ಆದರೆ ಯಾವ ಬಿಲ್ಡರ್ ತಾನೆ ಈ ನಿಯಮಗಳನ್ನು ಅನುಸರಿಸುತ್ತಾರೆ. ಯಾರೂ ಇಲ್ಲ. ಎಲ್ಲರೂ ಎಷ್ಟು ಫ್ಲಾಟ್ ಕಟ್ಟುವುದು, ಎಷ್ಟು ಜಾಗವನ್ನು ಅತಿಕ್ರಮಣ ಮಾಡುವುದು. ಎಷ್ಟು ಅನಧಿಕೃತ ಮಹಡಿಗಳನ್ನು ಎತ್ತರಿಸುವುದು, ಎಷ್ಟು ಅಕ್ರಮ ಮಾಡಿ ಡಬ್ಬಲ್ ಟ್ಯಾಕ್ಸ್ ಕಟ್ಟಿ ಆದರೂ ಅಲ್ಲಿ ವ್ಯಾಪಾರ ವಹಿವಾಟು ಮಾಡಿ ಹಣ ಮಾಡುವುದು, ಇದೇ ಯೋಚನೆಯಲ್ಲಿ ಎಲ್ಲರೂ ಇರುತ್ತಾರೆ ವಿನ: ಗಿಡಗಳನ್ನು ನೆಡುವ ಬಗ್ಗೆ ಯಾರೂ ಕೂಡ ಟೆನ್ಷನ್ ಮಾಡುವುದಿಲ್ಲ. ಇ ನ್ನು ಅಲ್ಲಿಗೆ ಬರುವ ಗ್ರಾಹಕರು ಕೂಡ ಬಿಲ್ಡರ್ ಓನರ್ ಬಳಿ ಯಾಕೆ ಇಲ್ಲಿ ಗಿಡಗಳನ್ನು ನೆಟ್ಟಿಲ್ಲ. ಮುಂಚೆ ಇಲ್ಲಿ ಸಾಕಷ್ಟು ಮರಗಳು ಇದ್ದವಲ್ಲ ಎಂದು ಕೂಡ ಕೇಳುವುದಿಲ್ಲ. ಬಿಲ್ಡರ್ ಹೋಗಲಿ, ಅವರು ಹಣ ಮಾಡುವುದಕ್ಕಾಗಿಯೇ ಹುಟ್ಟಿರುವುದು ಎಂದೇ ಇಟ್ಟುಕೊಳ್ಳೋಣ, ಆ ಅಪಾರ್ಟ್ ಮೆಂಟಿನಲ್ಲಿ ವಾಸಿಸಲು ಬರುವ ಜನರಾದರೂ ನಾವು ನಮ್ಮ ಕೈಲಾದಷ್ಟು, ಇಲ್ಲಿ ಲಭ್ಯವಿರುವಷ್ಟು ಜಾಗದಲ್ಲಿ ಗಿಡ ನೆಡಬಹುದಲ್ಲ ಎಂದು ಯೋಚಿಸುವುದಿಲ್ಲ.

ಆದ್ದರಿಂದ ಒಂದಂತೂ ನಿಜ. ನಾವು ಆದಷ್ಟು ಬೇಗ ಎಚ್ಚೆತ್ತುಕೊಳ್ಳಲೇಬೇಕು. ಈಗಾಗಲೇ ಮರಗಳು ಮಂಗಳೂರಿನಲ್ಲಿ ಖಾಲಿಯಾಗುತ್ತಾ ಬಂದಿವೆ. ಸೆಕೆ, ಉಷ್ಣ ಹವೆ ತಾರಕಕ್ಕೆ ಏರಿದೆ. ನಾವು ಯೋಚಿಸದೇ ಹೋದರೆ ಒಂದು ದಿನ ನಾವು ಅತ್ಯಂತ ಕೆಟ್ಟ ಭೂಮಿಯನ್ನು ನಮ್ಮ ಮುಂದಿನ ತಲೆಮಾರಿಗೆ ಬಿಟ್ಟು ಹೋಗುತ್ತೇವೆ. ಯಾರಿಗೆ ಗೊತ್ತು, ಮುಂದಿನ ಜನ್ಮದಲ್ಲಿ ನಾವು ಮತ್ತೆ ಇದೇ ಭೂಮಿಯಲ್ಲಿ ಹುಟ್ಟಿದರೆ ಹಿಂದಿನ ಜನ್ಮದಲ್ಲಿ ಮಾಡಿದ ಪಾಪವನ್ನು ಅನುಭವಿಸಬೇಕಾಗುತ್ತದೆ!!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search