• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ತೋಡಿನಲ್ಲಿ ಕುಳಿತು ಕಮೀಷನ್ ತಿನ್ನುವವರಿಗೆ ಪಾಲಿಕೆ ಅಧಿಕಾರಿಗಳು ಎನ್ನುತ್ತಾರೆ!!

Hanumantha Kamath Posted On May 30, 2019
0


0
Shares
  • Share On Facebook
  • Tweet It

2018 ರಂದು ಇದೇ ತಿಂಗಳ ಅಂತ್ಯಕ್ಕೆ ವರುಣ ಕುಟುಂಬ ಸಮೇತ ಮಂಗಳೂರಿಗೆ ಟೂರ್ ಗೆ ಬಂದಿದ್ದ. ಇಲ್ಲಿಯೇ ಮೂರ್ನಾಕು ದಿನ ಟೆಂಟ್ ಹಾಕಿ ಇಡೀ ನಗರವನ್ನು ಸುತ್ತಾಡಿದ್ದ. ಅವನು ಮಂಗಳೂರನ್ನು ಎಷ್ಟು ಪ್ರೀತಿಸಿದ್ದ ಎಂದರೆ ಅನೇಕ ದಿನಗಳ ತನಕ ಅವನು ಬಂದು ಹೋದ ಕುರುಹು ಇಲ್ಲಿಯೇ ಉಳಿದಿತ್ತು. ಅದೆಲ್ಲಾ ಆಗಿ ಈಗ ಒಂದು ವರ್ಷ. ಮಳೆರಾಯ ಭೂಮಿಗೆ ಕೊಟ್ಟ ಗಿಫ್ಟ್ ಇನ್ನು ಅಲ್ಲಲ್ಲಿ ಹಾಗೆ ಇದೆ. ಈ ಬಾರಿ ಯಾಕೋ ವರುಣನಿಗೆ ಮಂಗಳೂರು ನೆನಪಿಲ್ಲವೇನೋ ಎಂದು ಅನಿಸುತ್ತಿದೆ. ಇವತ್ತಲ್ಲ ನಾಳೆ ಮಕ್ಕಳು ಅಜ್ಜಿಮನೆಗೆ ಬಂದ ಹಾಗೆ ವರುಣ ವಾರದೊಳಗೆ ಮಂಗಳೂರಿಗೆ ಬರಲಿದ್ದಾನೆ. ಅವನ ಬರುವಿಕೆಯನ್ನು ಸ್ವಾಗತಿಸಲು ನಾವು ಸಿದ್ಧರಿದ್ದೆವೆ ಎಂದು ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಹೇಳಿದ್ದಾರೆ. ನನ್ನ ಕೋರಿಕೆ ಇಷ್ಟೇ. ಶಾಸಕರೇ, ದಯವಿಟ್ಟು ಅಧಿಕಾರಿಗಳನ್ನು ಇನ್ನೊಮ್ಮೆ ಕರೆಸಿ ಫೈನಲ್ ವಾರ್ನಿಂಗ್ ಮಾಡಿಬಿಡಿ. ಅವರು ಅಸಡ್ಡೆಯಿಂದ ಹೂಳು ತೆಗೆಸದೆ ರಾಜಕಾಲುವೆಗಳು ತುಂಬಿ ನೀರು ರಸ್ತೆಯ ಮೇಲೆ ಹರಿದರೆ ಜನ ಅಧಿಕಾರಿಗಳನ್ನು ದೂರುವುದಿಲ್ಲ. ಬೈಯುವುದು ಶಾಸಕರಿಗೆ. ಆ ಕಾರಣದಿಂದ ಅಧಿಕಾರಿಗಳಿಂದ ಕೆಲಸ ಮಾಡಿಸುವ ಜವಾಬ್ದಾರಿ ನಿಮ್ಮದು. ಯಾವುದೇ ತೊಂದರೆ ಆಗದೇ ಮಳೆಗಾಲ ಮುಗಿದರೆ ಆಗಲೂ ಕ್ರೆಡಿಟ್ ನಿಮಗೆನೆ ಕೋಡೋಣ.

ಸ್ಪೆಶಲ್ ಗ್ಯಾಂಗ್ ಹುಟ್ಟಿಕೊಳ್ಳುವ ಹೊತ್ತು..

ಅಧಿಕಾರಿಗಳಿಗೆ ಈ ಬಾರಿ ಒಳ್ಳೆಯದೇ ಆಗಿತ್ತು. ಪಾಲಿಕೆಯಲ್ಲಿ ಚುನಾಯಿತ ಸರಕಾರ ಇಲ್ಲ. ಮತ್ತೊಂದೆಡೆ ಲೋಕಸಭಾ ಚುನಾವಣೆ. ಇನ್ನೊಂದು ಕಡೆ ರಾಜ್ಯ ಸರಕಾರ ಇವತ್ತು ಬೆಳಿಗ್ಗೆ ಬೀಳುತ್ತೇ, ಮಧ್ಯರಾತ್ರಿ ಬೀಳುತ್ತೇ ಎನ್ನುವ ವಾತಾವರಣ. ರಾಜಕಾಲುವೆ ಕ್ಲೀನಾದರೆಷ್ಟು, ಬಿಟ್ಟರೆಷ್ಟು ಎನ್ನುವ ವಾತಾವರಣ ಇತ್ತು. ಹಾಗಂತ ಕೆಲಸ ಮಾಡದಿದ್ದರೆ ಕಮೀಷನ್ ಬೇಡಾ ಎಂದು ಹೇಳುವ ಮನಸ್ಸು ನಮ್ಮ ಅಧಿಕಾರಿಗಳದ್ದಲ್ಲ. ಅದನ್ನು ಸರಿಯಾಗಿ ವಸೂಲು ಮಾಡುತ್ತಾರೆ. ರಾಜಕಾಲುವೆ ಕ್ಲೀನ್ ಮಾಡುವುದಕ್ಕೆ ಒಂದೂಕಾಲು ಕೋಟಿ ಮೀಸಲಿಡಲಾಗಿದೆ. ಇನ್ನು ಹೂಳು ತೆಗೆಯಲು ಮೂರು ಕೋಟಿ. ರಾಜಕಾಲುವೆ ಸ್ವಚ್ಚವಾಗಲಿ, ಬಿಡಲಿ, ಚರಂಡಿಗಳ ಹೂಳು ತೆಗೆಯಲಿ, ಬಿಡಲಿ ಅಧಿಕಾರಿಗಳಿಗೆ ಸಿಗಬೇಕಾದ ಕಮೀಷನ್ ಸಿಕ್ಕೇ ಸಿಗುತ್ತದೆ. ಕೇಳಿದ್ರೆ ಪಾಲಿಕೆಯ ಕಮೀಷನರ್ ಎಲ್ಲಾ ಕಡೆ ಕ್ಲೀನ್ ಆಗಿದೆ ಎಂದು ಹೇಳುತ್ತಾರೆ. ಪರಿಸರ ಅಭಿಯಂತರರು ಸಣ್ಣಚರಂಡಿಗಳು ಕ್ಲೀನ್ ಆಗಿದೆ ಎಂದೇ ಹೇಳುತ್ತಾರೆ. 10% ತೋಡುಗಳು ಕ್ಲೀನ್ ಆಗಿದೆ. ಉಳಿದ ಕಥೆ ದೇವರಿಗೆ ಮಾತ್ರ ಗೊತ್ತು. ಅಷ್ಟಕ್ಕೂ ಒಂದು ಮೀಟರ್ ಅಗಲದ ಚರಂಡಿಗಳನ್ನು ಕ್ಲೀನ್ ಮಾಡುವ ಗುತ್ತಿಗೆ ಇರುವುದು ಆಂಟೋನಿ ವೇಸ್ಟ್ ಮ್ಯಾನೇಜ್ ಮೆಂಟ್ ನವರಿಗೆ. ಅವರು ಮಾಡುವುದಿಲ್ಲ. ಯಾಕೆಂದರೆ ಅದನ್ನು ಮಾಡುವುದಕ್ಕೆಂದೇ ಮಳೆಗಾಲದಲ್ಲಿ ಒಂದು ಸ್ಪೆಶಲ್ ಗ್ಯಾಂಗ್ ನೇಮಕವಾಗುತ್ತದೆ ಎನ್ನುವುದು ಅವರಿಗೆ ಗೊತ್ತಿದೆ.

ಎಷ್ಟು ಕೋಟಿಯ ಬಿಲ್..

ಪಾಲಿಕೆ ವ್ಯಾಪ್ತಿಯಲ್ಲಿ ಇರುವ ಒಟ್ಟು ವಾರ್ಡ್ 60. ಒಂದೊಂದು ವಾರ್ಡಿಗೂ ಮಳೆಗಾಲದ ಮೂರು ತಿಂಗಳಿಗೆ ಒಂದೊಂದು ಸ್ಪೆಶಲ್ ಗ್ಯಾಂಗ್ ಇಡಲಾಗುತ್ತದೆ. ಪ್ರತಿ ಸ್ಪೆಶಲ್ ಗ್ಯಾಂಗ್ ಗೂ ತಿಂಗಳಿಗೆ ಒಂದು ಲಕ್ಷ ಬಿಲ್ ಆಗುತ್ತದೆ. ಅದರರ್ಥ ಮೂರು ತಿಂಗಳಿಗೆ ಮೂರು ಲಕ್ಷ ಆಯಿತು. ಹಾಗೆ ಅರವತ್ತು ವಾರ್ಡಿಗೆ ಮೂರು ಲಕ್ಷದಂತೆ ಎಷ್ಟಾಯಿತು. ಒಂದು ಕೋಟಿ ಎಂಭತ್ತು ಲಕ್ಷವಾಯಿತು. ಒಂದು ವೇಳೆ ಆಂಟೋನಿ ವೇಸ್ಟ್ ನವರು ಕ್ಲೀನ್ ಮಾಡಿದ್ದರೆ ಇವರಿಗೆ ಅಂದರೆ ಸ್ಪೆಶಲ್ ಗ್ಯಾಂಗ್ ಗೆ ಕೊಡುವ ಹಣ ಉಳಿಯುತ್ತಿತ್ತಾ? ಕೇಳುವವರು ಯಾರು? ಒಟ್ಟಿನಲ್ಲಿ ಮಳೆಗಾಲ ಬಂತೆಂದರೆ ಮದುವೆ ಶುಭಸಮಾರಂಭಗಳ ಸೀಸನ್ ಮುಗಿದಂತೆ. ಆದರೆ ಪಾಲಿಕೆಗೆ ಕಮೀಷನ್ ಹಣವನ್ನು ತಿನ್ನಲು ಇಡೀ ವರ್ಷ ಸೀಸನ್!

0
Shares
  • Share On Facebook
  • Tweet It




Trending Now
ಹೇರ್ ಪಿನ್ ಹಾಗೂ ಪಾಕೆಟ್ ಚಾಕು ಬಳಸಿ ಪ್ಲಾಟ್ ಫಾರಂನಲ್ಲಿ ಹೆರಿಗೆ ಮಾಡಿದ ವೈದ್ಯ!
Hanumantha Kamath July 8, 2025
ಅನ್ನಭಾಗ್ಯ ಅಕ್ಕಿ ಸಾಗಿಸಿದ ಮಾಲೀಕರಿಗೆ ಹಣ ಬಾಕಿ.. ರಾಜ್ಯ ಸರಕಾರದ ವಿರುದ್ಧ ಅನಿರ್ದಿಷ್ಟಾವಧಿ ಲಾರಿ ಮುಷ್ಕರ!
Hanumantha Kamath July 8, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಹೇರ್ ಪಿನ್ ಹಾಗೂ ಪಾಕೆಟ್ ಚಾಕು ಬಳಸಿ ಪ್ಲಾಟ್ ಫಾರಂನಲ್ಲಿ ಹೆರಿಗೆ ಮಾಡಿದ ವೈದ್ಯ!
    • ಅನ್ನಭಾಗ್ಯ ಅಕ್ಕಿ ಸಾಗಿಸಿದ ಮಾಲೀಕರಿಗೆ ಹಣ ಬಾಕಿ.. ರಾಜ್ಯ ಸರಕಾರದ ವಿರುದ್ಧ ಅನಿರ್ದಿಷ್ಟಾವಧಿ ಲಾರಿ ಮುಷ್ಕರ!
    • ನನಗಾಗಿ ಚಿಂತಿಸಬೇಡಾ, ದೇಶಕ್ಕಾಗಿ ಆಡು.. ಆಕಾಶ್ ದೀಪ್ ತಂಗಿಯ ಭಾವನಾತ್ಮಕ ಮಾತು! ಏನಾಗಿದೆ ಆಕೆಗೆ...
    • ಕನ್ನಯ್ಯ ಲಾಲ್ ಹತ್ಯಾ ಕಥೆಯುಳ್ಳ ಉದಯಪುರ್ ಫೈಲ್ ಸಿನೆಮಾ ಬಿಡುಗಡೆಗೆ ತಡೆ ಕೋರಿ ಜಮಿಯತ್ ಉಲ್ಮಾ ಐ ಹಿಂದ್ ಉಚ್ಚನ್ಯಾಯಾಲಯಕ್ಕೆ!
    • ಕರ್ನಾಟಕದಲ್ಲಿ ಮುಸ್ಲಿಮರಿಲ್ಲದ ಊರಿನಲ್ಲಿ ಹಿಂದೂ ಸಮಾಜದಿಂದ ಮೊಹರಂ ಆಚರಣೆ!
    • ಗ್ಯಾರಂಟಿ ಅಥವಾ ಅಭಿವೃದ್ಧಿ: ಸಿಎಂ ಆರ್ಥಿಕ ಸಲಹೆಗಾರ ರಾಯರೆಡ್ಡಿ ಜನರ ಮುಂದೆ ಆಯ್ಕೆ ಇಟ್ರಾ?
    • 20 ವರ್ಷಗಳ ಬಳಿಕ ರಾಜ್ ಠಾಕ್ರೆ ಹಾಗೂ ಉದ್ದವ್ ಠಾಕ್ರೆ ಸಮ್ಮಿಲನ!
    • 20, 30 ವಯಸ್ಸಿನಲ್ಲಿ ಮಗು ಬೇಕೆನ್ನುವ ಆಸೆ ಹುಟ್ಟಿರಲಿಲ್ಲ, 40 ರಲ್ಲಿ ಬಂತು! ಖ್ಯಾತ ನಟಿಯ ಮನದಿಂಗಿತ...
    • ಸ್ಯಾನಿಟರಿ ಪ್ಯಾಡ್ ಪ್ಯಾಕೆಟ್ ಮೇಲೆ ರಾಹುಲ್ ಗಾಂಧಿ ಫೋಟೋಗೆ ಜೆಡಿಯು-ಬಿಜೆಪಿ ವ್ಯಂಗ್ಯ!
    • ಪರಸ್ಪರ ಸಮ್ಮತಿಯಿಂದ ನಡೆದ ಲೈಂಗಿಕ ಕ್ರಿಯೆ ನಂತರ ರೇಪ್ ಎನ್ನಲಾಗುವುದಿಲ್ಲ - ಕೇರಳ ಹೈಕೋರ್ಟ್ ಆದೇಶ
  • Popular Posts

    • 1
      ಹೇರ್ ಪಿನ್ ಹಾಗೂ ಪಾಕೆಟ್ ಚಾಕು ಬಳಸಿ ಪ್ಲಾಟ್ ಫಾರಂನಲ್ಲಿ ಹೆರಿಗೆ ಮಾಡಿದ ವೈದ್ಯ!
    • 2
      ಅನ್ನಭಾಗ್ಯ ಅಕ್ಕಿ ಸಾಗಿಸಿದ ಮಾಲೀಕರಿಗೆ ಹಣ ಬಾಕಿ.. ರಾಜ್ಯ ಸರಕಾರದ ವಿರುದ್ಧ ಅನಿರ್ದಿಷ್ಟಾವಧಿ ಲಾರಿ ಮುಷ್ಕರ!
    • 3
      ನನಗಾಗಿ ಚಿಂತಿಸಬೇಡಾ, ದೇಶಕ್ಕಾಗಿ ಆಡು.. ಆಕಾಶ್ ದೀಪ್ ತಂಗಿಯ ಭಾವನಾತ್ಮಕ ಮಾತು! ಏನಾಗಿದೆ ಆಕೆಗೆ...
    • 4
      ಕನ್ನಯ್ಯ ಲಾಲ್ ಹತ್ಯಾ ಕಥೆಯುಳ್ಳ ಉದಯಪುರ್ ಫೈಲ್ ಸಿನೆಮಾ ಬಿಡುಗಡೆಗೆ ತಡೆ ಕೋರಿ ಜಮಿಯತ್ ಉಲ್ಮಾ ಐ ಹಿಂದ್ ಉಚ್ಚನ್ಯಾಯಾಲಯಕ್ಕೆ!
    • 5
      ಕರ್ನಾಟಕದಲ್ಲಿ ಮುಸ್ಲಿಮರಿಲ್ಲದ ಊರಿನಲ್ಲಿ ಹಿಂದೂ ಸಮಾಜದಿಂದ ಮೊಹರಂ ಆಚರಣೆ!

  • Privacy Policy
  • Contact
© Tulunadu Infomedia.

Press enter/return to begin your search