• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ವಿನಯ್ ಗುರೂಜಿಗೆ ಬುದ್ಧಿ ಕೊಡು ಭಗವಂತ!!

Hanumantha Kamath Posted On June 9, 2019
0


0
Shares
  • Share On Facebook
  • Tweet It

ಹಿಂದೂ ಧರ್ಮದ ವಿರುದ್ಧ ಮಾತನಾಡಿದರೆ ಸುಲಭದಲ್ಲಿ ಪ್ರಚಾರಕ್ಕೆ ಬರಬಹುದು ಎನ್ನುವುದನ್ನು ಇತ್ತೀಚಿನ ವರ್ಷಗಳಲ್ಲಿ ತೋರಿಸಿಕೊಟ್ಟದ್ದು ಭಗವಾನ್. ಅನಂತಮೂರ್ತಿ, ಗಿರೀಶ್ ಕಾರ್ನಾಡ್ ಅಂತವರು ಹಿಂದೂ ವಿರೋಧಿ ಪಲ್ಲಂಕಿಗೆ ಹೆಗಲುಕೊಟ್ಟರು. ಅನಂತರ ಒಂದಿಷ್ಟು ಕೇಸರಿ ತೊಟ್ಟವರು ಕೂಡ ಹಿಂದೂ ವಿರೋಧಿ ಹೇಳಿಕೆಗಳನ್ನು ನೀಡಿ ಖರ್ಚಿಲ್ಲದೆ ಲೈಮ್ ಲೈಟ್ ನಲ್ಲಿ ಕಾಣಿಸಿಕೊಂಡರು. ಅದಕ್ಕೆ ಈಗ ತಾಜಾ ಉದಾಹರಣೆ ವಿನಯ ಗುರೂಜಿ.

ಮೂಲತ: ಶಿವಮೊಗ್ಗದವರಾದ ವಿನಯ್ ಒಂದು ಹೇಳಿಕೆ ಕೊಡುವ ಮೂಲಕ ತಾವೂ ಕೂಡ ಮಾಧ್ಯಮಗಳಲ್ಲಿ ಮಿಂಚುವ ಕೆಲಸ ಮಾಡಿದ್ದಾರೆ. ದೈವಾರಾಧನೆ, ನಾಗಾರಾಧನೆ, ಬೂತಕೋಲ ಎನ್ನುವಂತಹ ಕೆಲವು ಸಂಪ್ರದಾಯಗಳು ನಮ್ಮ ಹಿಂದೂ ಧರ್ಮದಲ್ಲಿವೆ. ಅದನ್ನು ನಾವು ಅನಾದಿಕಾಲದಿಂದಲೂ ಅನುಸರಿಸಿಕೊಂಡು ಬಂದಿದ್ದೇವೆ. ನಾಗನ ಬಗ್ಗೆ ತುಳುನಾಡಿನವರು ಎಷ್ಟು ಶ್ರದ್ಧೆ ಹೊಂದಿದ್ದಾರೆ ಎಂದರೆ ನಾಗಾನಿಗೆ ದೇವರ ಸ್ಥಾನ ಸಿಕ್ಕಿದೆ. ಇನ್ನೂ ದೈವಗಳ ಬಗ್ಗೆ ತುಳುಮಣ್ಣಿನಲ್ಲಿ ಪೌರಾಣಿಕ ಕಥೆಗಳಿವೆ. ಬೂತಕೋಲದ ಬಗ್ಗೆ ನಾವು ಯಾವತ್ತೂ ನಿಂದನಾತ್ಮಕವಾಗಿ ಮಾತನಾಡುವುದಿಲ್ಲ. ಆದರೆ ವಿನಯ್ ಗುರೂಜಿ ಇದನ್ನೆಲ್ಲ ಅಪ್ಪಟ ವೇಸ್ಟ್ ಎನ್ನುತ್ತಿದ್ದಾರೆ. ಬಹುಶ: ಇದರ ಪರವಾಗಿ ಮಾತನಾಡಿದರೆ ತಮ್ಮನ್ನು ಯಾರೂ ಗುರುತಿಸುವುದು ಇಲ್ಲ ಎಂದು ಅಂದುಕೊಂಡಿರುವುದರಿಂದ ಅದರ ವಿರುದ್ಧ ಮಾತನಾಡಿ ಎಡಪಂಥಿಯರ ಪ್ರೀತಿಗೆ ಪಾತ್ರರಾಗೋಣ ಎಂದು ಅಂದುಕೊಂಡಿದ್ದಾರೆ. ಒಬ್ಬ ಹಿಂದೂ ಆಗಿದ್ದು ಹಿಂದೂ ಧರ್ಮದ ವಿರುದ್ಧ ಮಾತನಾಡುವುದಾದರೆ ವಿನಯ್ ಅವರಿಗೆ ಗುರೂಜಿ ಎನ್ನುವ ಹಿಂದೂ ಬಿರುದು ಯಾಕೆ? ಅವರು ಯಾವುದಾದರೂ ಬೇರೆ ಧರ್ಮದ ಗುರುವಿನ ಸ್ಥಾನ ಅಲಂಕರಿಸಬಹುದಲ್ಲ. ಅವರಿಗೆ ಹಿಂದೂ ಧರ್ಮದ ಪೀಠ ಯಾಕೆ? ಆ ಪೀಠದ ಮೇಲೆ ಕುಳಿತು ಅದರ ತುದಿಯಲ್ಲಿ ಟಿಪ್ಪು ಸುಲ್ತಾನನ ಮುಖವನ್ನು ಇಟ್ಟುಕೊಳ್ಳುವ ಇವರ ಉದ್ದೇಶ ಏನು? ಹಿಂದೂ, ಮುಸ್ಲಿಂ, ಕ್ರೈಸ್ತರು ಎಲ್ಲಾ ಒಂದೇ ಎನ್ನುವ ವಿನಯ ಗುರೂಜಿ(!) ಜಾತ್ಯಾತೀತ ಸಿದ್ಧಾಂತವನ್ನು ಪ್ರತಿಪಾದಿಸುತ್ತಾ ಇರುವ ವಿನಯ್ ಅವರಿಗೆ ಆಯಾ ಧರ್ಮದಲ್ಲಿ ಇರುವ ಆಚರಣೆಗಳು ಆಯಾ ಧರ್ಮದ, ನಂಬಿಕೆಯ ತಳಹದಿಯ ಮೇಲೆ ಆ ಧರ್ಮದ ನಾಗರಿಕರು ಒಪ್ಪಿಕೊಂಡು ಬಂದದ್ದು ಎನ್ನುವುದು ಯಾಕೆ ಅರ್ಥವಾಗುವುದಿಲ್ಲ.
ದೈವಾರಾಧನೆ ಮಾಡುವುದರಿಂದ ಮಾಡಿದ ಕುಟುಂಬಗಳಿಗೆ ಒಳ್ಳೆಯದಾಗಿದೆ ಎನ್ನುವುದಾದರೆ ಅವರು ಮಾಡಲಿ ಬಿಡಿ, ನಾಗಾರಾಧನೆ ಮಾಡುವುದರಿಂದ ನಮಗೆ ಸಮಾಧಾನ ಸಿಕ್ಕಿದೆ ಎಂದು ಅನಿಸಿದರೆ ಅದನ್ನು ವಿರೋಧಿಸುವುದಕ್ಕೆ ವಿನಯ್ ಯಾರು? ಬೂತಕೋಲ ಮಾಡಿರುವುದರಿಂದ ವಿನಯ್ ಎನು ಕಳೆದುಕೊಂಡಿದ್ದಾರೆ? ಯಾರಾದರೂ ಹಿಂದೂಗಳು ಸರದಿಸಾಲಿನಲ್ಲಿ ಬಂದು ವಿನಯ್ ಅವರಿಂದ ಬೂತಕೋಲ, ದೈವಾರಾಧನೆ, ನಾಗಾರಾಧನೆಗೆ ಹಣ ತೆಗೆದುಕೊಂಡು ಹೋಗಿದ್ದಾರೆಯಾ? ಅಥವಾ ಇವರಿಂದ ವಂತಿಗೆ ತೆಗೆದುಕೊಂಡು ಮಾಡಿದ್ದಾರೆಯಾ?

ಮುಸ್ಲಿಮರು ಎಲ್ಲಿ ಬೇಕಾದರೂ ಒಂದು ಚಿಕ್ಕ ಚಾಪೆ ಸಿಕ್ಕಿದರೂ ಅದರ ಮೇಲೆ ಕುಳಿತು ಪ್ರಾರ್ಥನೆ ಮಾಡುತ್ತಾರೆ. ಕ್ರೈಸ್ತರಿಗೆ ಒಂದು ಶಿಲುಬೆಯ ಎದುರು ಪ್ರಾರ್ಥನೆ ಸಲ್ಲಿಸಿದರೆ ಮನಸ್ಸಿಗೆ ಸಮಾಧಾನ ಸಿಗುತ್ತದೆ. ಆದರೆ ಹಿಂದೂಗಳಿಗೆ ಮುಕ್ಕೋಟಿ ದೇವರುಗಳಿವೆ. ನಮ್ಮದೇ ರೀತಿಯಲ್ಲಿ ಆರಾಧನಾ ಪದ್ಧತಿಗಳಿವೆ. ಹೋಮ, ಹವನ, ಪೂಜಾ ವಿಧಾನಗಳಿವೆ. ಅದನ್ನು ವೇಸ್ಟ್ ಎಂದು ಹೇಳಿದರೆ ಅರ್ಥ ಇದೆಯಾ?

ಒಂದು ವೇಳೆ ದೊಡ್ಡ ರೀತಿಯಲ್ಲಿ ಸಂಪ್ರದಾಯ ಅನುಷ್ಟಾನ ಮಾಡಲಾಗದಿದ್ದರೆ ಅವರವರ ಆರ್ಥಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಮಾಡುವವರಿದ್ದಾರೆ. ಹಾಗಂತ ಅವರ ಮನದಲ್ಲಿ ಹುಳಿ ಹಿಂಡುವ ಕೆಲಸ ಯಾರೂ ಮಾಡಬಾರದು. ಜಾಕೀರ್ ನೈಕ್ ಎನ್ನುವ ವ್ಯಕ್ತಿ ಮಾಡಿರುವ ಕಂದರವನ್ನು ಮುಚ್ಚುವಲ್ಲಿಯೇ ನಮಗೆ ಸಾಕಾಗಿದೆ. ಹಿಂದೂ ವಿರೋಧಿ ಹೇಳಿಕೆಗಳನ್ನು ನೀಡುವವರಿಗೆ ತಮಗೆ ಬಹುಸಂಖ್ಯಾತರು ವಿರೋಧ ಮಾಡಿಯೇ ಮಾಡುತ್ತಾರೆ ಎನ್ನುವುದು ಗೊತ್ತಿದೆ. ಅದರಿಂದ ತಾವು ಪ್ರವರ್ಧಮಾನಕ್ಕೆ ಬರಬಹುದು ಎಂದು ಅಂದುಕೊಂಡಿದ್ದಾರೆ. ಯಾವಾಗ ಹಿಂದೂಗಳು ತಕ್ಕ ಉತ್ತರ ಕೊಡುತ್ತಾರೋ ಆಗ ಬುದ್ಧಿ ಬರುತ್ತದೆ. ಬರದಿದ್ದರೆ ದೇವರೇ ಬುದ್ಧಿ ಕೊಡುತ್ತಾನೆ!!!

0
Shares
  • Share On Facebook
  • Tweet It




Trending Now
ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
Hanumantha Kamath September 11, 2025
ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
Hanumantha Kamath September 11, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
    • ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ
    • ನಂಗೆ ಸ್ವಲ್ಪ ವಿಷ ಕೊಡಿ ಎಂದು ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟ ದರ್ಶನ್ ಗೆ ಅಗತ್ಯ ಸೌಕರ್ಯ ನೀಡುವಂತೆ ನ್ಯಾಯಾಲಯ ಆದೇಶ!
    • ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟಲು ಆಸೆ- ಕೈ ಶಾಸಕ ಬಿ.ಕೆ.ಸಂಗಮೇಶ್ವರ್
    • ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ರಾಜೀನಾಮೆ!
    • ಸೌಜನ್ಯ ಕೊಲೆ ಮಾಡಿದ್ದೇ ಮಾವ ವಿಠಲ ಗೌಡ - ಸ್ನೇಹಮಯಿ ಕೃಷ್ಣರಿಂದ ಎಸ್ಪಿಗೆ ದೂರು ಅರ್ಜಿ!
    • ಸೆಪ್ಟೆಂಬರ್ 9 ರಂದು ಮದ್ದೂರು ಸ್ವಯಂಪ್ರೇರಿತ ಬಂದ್ ಗೆ ಹಿಂದೂ ಮುಖಂಡರ ಕರೆ!
  • Popular Posts

    • 1
      ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • 2
      ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • 3
      ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • 4
      ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
    • 5
      ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ

  • Privacy Policy
  • Contact
© Tulunadu Infomedia.

Press enter/return to begin your search