• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಪಾಲಿಕೆಗೆ ಹಣ ವಸೂಲಿ ಮಾಡುವ ಧೈರ್ಯ ಇರುವುದು ಗೂಡಂಗಡಿಯವರದ್ದು ಮಾತ್ರ!!

Hanumantha Kamath Posted On November 4, 2019
0


0
Shares
  • Share On Facebook
  • Tweet It

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಪಕ್ಷ ತನ್ನ ಅಧಿಕಾರವನ್ನು ಮುಗಿಸಿ ಇಳಿದು ಹೋಗುವಾಗ ಗುತ್ತಿಗೆದಾರರಿಗೆ ಕೊಡಬೇಕಾಗಿದ್ದ ಸುಮಾರು 70 ಕೋಟಿ ರೂಪಾಯಿಗಳಷ್ಟು ಹಣವನ್ನು ಕೊಡದೇ ಹಾಗೆ ಬಾಕಿ ಇರಿಸಿ ಹೋಗಿದೆ. ಇನ್ನು ಕಟ್ಟಡ ತೆರಿಗೆ ಸುಮಾರು 29 ಕೋಟಿಯಷ್ಟು ವಸೂಲಾಗಬೇಕಿದೆ. ಅದನ್ನು ಪಾಲಿಕೆ ವಸೂಲಿ ಮಾಡಿಲ್ಲ. ಹಾಗೆ ಬಿಟ್ಟಿದೆ. ಇನ್ನು ಹೋರ್ಡಿಂಗ್ ನವರಿಂದ ಸುಮಾರು ಒಂದೂವರೆ ಕೋಟಿ ರೂಪಾಯಿ ಬರಬೇಕಿದೆ. ಅದು ಕೂಡ ಹಾಗೆ ಇದೆ. ಪಾರ್ಕಿಂಗ್ ಜಾಗವನ್ನು ಗುತ್ತಿಗೆ ತೆಗೆದುಕೊಂಡವರು ಕೂಡ ಬಾಕಿ ಇರಿಸಿದ್ದಾರೆ. ರಸ್ತೆಯ ಕೆಳಗೆ ಟೆಲಿಕಾಂ ಕಂಪೆನಿಗಳ ಕೇಬಲ್ ಗೆ ನೆಲದ ಬಾಡಿಗೆ ವಸೂಲಿ ಮಾಡುವ ಕ್ರಮವೇ ಇಲ್ಲ. ಈ ಎಲ್ಲಾ ಬಾಕಿ ಇರಿಸಿಕೊಂಡ ಮಂಗಳೂರು ಮಹಾನಗರ ಪಾಲಿಕೆ ಯಾರಿಂದ ಒಂದು ಚೂರು ಬಿಡದೆ ವಸೂಲಿ ಮಾಡುವುದು ಗೊತ್ತಾ. ಅದೇ ರಸ್ತೆ ಬದಿ ಚಿಕ್ಕ ಗೂಡಂಗಡಿ ಇಟ್ಟುಕೊಂಡು ಹೊಟ್ಟೆಪಾಡಿಗೆ ವ್ಯಾಪಾರ ಮಾಡುತ್ತಾರಲ್ಲ, ವಿಕಲಚೇತನರು. ಅವರಿಂದ ತಪ್ಪದೆ ಬಾಡಿಗೆ ವಸೂಲಿಯಾಗುತ್ತದೆ.
ಅಷ್ಟಕ್ಕೂ ಹೋರ್ಡಿಂಗ್ ನವರು ಸಮಾಜಸೇವೆಗಾಗಿ ಹೋರ್ಡಿಂಗ್ ನಿಲ್ಲಿಸಿರುವುದಿಲ್ಲ. ಅವರು ಅದರಿಂದ ಕೋಟಿಗಟ್ಟಲೆ ಹಣವನ್ನು ಸಂಪಾದಿಸುತ್ತಾರೆ. ಆದರೆ ಅವರು ಹಣ ಬಾಕಿ ಇಟ್ಟರೆ ಪಾಲಿಕೆ ಆಡಳಿತ ಕೇಳುವುದಿಲ್ಲ. ಅಷ್ಟಕ್ಕೂ ಹೋರ್ಡಿಂಗ್ ನವರು ಸರಕಾರಿ ಜಾಗವನ್ನು ಬಳಸಿ ಹೋರ್ಡಿಂಗ್ ನಿಲ್ಲಿಸಿರುತ್ತಾರೆ. ಆದರೆ ಅವರು ಹಣ ಬಾಕಿ ಇಟ್ಟರೆ ಅದೊಂದು ವಿಷಯವೇ ಅಲ್ಲದಂತೆ ಪಾಲಿಕೆ ಆಡಳಿತ ವರ್ತಿಸುತ್ತದೆ. ಅವರಿಗೆ ಶುಲ್ಕ ಹೆಚ್ಚಿಸುವುದೂ ಇಲ್ಲ. ಆದರೆ ನಮ್ಮದೇ ಜಾಗದಲ್ಲಿ ನಾವು ಮನೆ ಕಟ್ಟಿದರೆ ಪಾಲಿಕೆಯವರು ಮನೆ ತೆರಿಗೆ ಕಟ್ಟುವುದು ತಡ ಮಾಡಿದರೆ ದಂಡ ವಸೂಲಿ ಮಾಡುತ್ತಾರೆ. ಅದೇ ಹೋರ್ಡಿಂಗ್ ನವರು ಎಷ್ಟೇ ತಡ ಮಾಡಿದರೂ ದಂಡ ಬಿಡಿ ಅವರ ವಿರುದ್ಧ ಒಂದು ಸಣ್ಣ ಕೆಮ್ಮು ಕೂಡ ತೆಗೆಯುವುದಿಲ್ಲ. ಅದೇ ಮನೆ ತೆರಿಗೆ ಕಟ್ಟುವುದು ತಡವಾದರೆ ಪಾಲಿಕೆ ಏನು ಮಾಡುತ್ತದೆ, ಗೊತ್ತಾ?
ಮನೆ ತೆರಿಗೆ ಕಟ್ಟದವರ ಒಂದು ಲಿಸ್ಟ್ ಮಾಡಿ ಪ್ರತಿ ಜೂನ್ ನಲ್ಲಿ ಒಂದು ರಿಕ್ಷಾದಲ್ಲಿ ಸ್ಪೀಕರ್ ಕಟ್ಟಿ ಅನೌನ್ಸ್ ಮಾಡುತ್ತಾ ಹೋಗುವ ವ್ಯವಸ್ಥೆ ಮಾಡುತ್ತಾರೆ. ಆದಷ್ಟು ಬೇಗ ಮನೆ ತೆರಿಗೆ ಕಟ್ಟದಿದ್ದರೆ ಅದು ಮಾಡುತ್ತೇವೆ, ಇದು ಮಾಡುತ್ತೇವೆ ಎಂದು ಪರೋಕ್ಷ ಬೆದರಿಕೆ ಹಾಕುತ್ತಾರೆ. ಹೋರ್ಡಿಂಗ್ ನವರು ಹಣ ಕಟ್ಟದಿದ್ದರೆ ನೋಟಿಸು ಕೂಡ ಪಾಲಿಕೆ ಅದೇ ಮನೆ ತೆರಿಗೆ ಕಟ್ಟದಿದ್ದರೆ ಹೆದರಿಸುವ ರೀತಿಯಲ್ಲಿಯೇ ಗೊತ್ತಾಗುತ್ತದೆ. ಪಾಲಿಕೆ ಕಳೆದ ಅವಧಿಯಲ್ಲಿ ಯಾರ ಪರವಾಗಿ ಇತ್ತು ಅಂತ!
0
Shares
  • Share On Facebook
  • Tweet It




Trending Now
ಕ್ರಿಮಿನಾಲಜಿ ಕಲಿತವಳು ಕ್ರಿಮಿಯ ಬಯೋಲಜಿಗೆ ಮರಳಾದದ್ದೇ ಆಶ್ಚರ್ಯ!
Hanumantha Kamath February 12, 2026
ಹಲವಾರು ಯುವತಿಯರ ಗಂಡ ಮಂಗಳೂರಿನ ಸುಶಾಂತ್ ಪೂಜಾರಿ ಅಂದರ್!
Hanumantha Kamath February 12, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಕ್ರಿಮಿನಾಲಜಿ ಕಲಿತವಳು ಕ್ರಿಮಿಯ ಬಯೋಲಜಿಗೆ ಮರಳಾದದ್ದೇ ಆಶ್ಚರ್ಯ!
    • ಹಲವಾರು ಯುವತಿಯರ ಗಂಡ ಮಂಗಳೂರಿನ ಸುಶಾಂತ್ ಪೂಜಾರಿ ಅಂದರ್!
    • 'ವಂದೇ ಮಾತರಂ' ಅವಮಾನ ಮಾಡಿದವರಿಗೆ ಕಾದಿದೆ 3 ವರ್ಷಗಳ ಜೈಲು! ಕೇಂದ್ರ ಸರಕಾರದ ನೂತನ ನಿಯಮಾವಳಿ ಬಿಡುಗಡೆ
    • ಪುತ್ತೂರಿನ ಹಿಂದೂ ಸಂಘಟನೆ ಮುಖಂಡ ಅಜಿತ್ ರೈ ಹೊಸಮನೆ ಗಡಿಪಾರು ವಿಚಾರಣೆಗೆ ಹಾಜರಾಗುವಂತೆ ನೋಟೀಸ್
    • ‘ನಾನು ಆ ಸಮಿತಿಯಲ್ಲಿ ಇಲ್ಲ’ – ಸಾವರ್ಕರ್‌ಗೆ ಭಾರತ ರತ್ನ ವಿಳಂಬ ಕುರಿತು ಮೋಹನ್ ಭಾಗವತ್
    • ವೈಯಕ್ತಿಕ ಕಾರಣದಿಂದ ಪಕ್ಷ ನೀಡಿದ ಹೊಣೆಗಾರಿಕೆಯಿಂದ ಹಿಂದೆ ಸರಿದ ಅಣ್ಣಾಮಲೈ!
    • ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
    • ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
    • ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು
    • ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
  • Popular Posts

    • 1
      ಕ್ರಿಮಿನಾಲಜಿ ಕಲಿತವಳು ಕ್ರಿಮಿಯ ಬಯೋಲಜಿಗೆ ಮರಳಾದದ್ದೇ ಆಶ್ಚರ್ಯ!
    • 2
      ಹಲವಾರು ಯುವತಿಯರ ಗಂಡ ಮಂಗಳೂರಿನ ಸುಶಾಂತ್ ಪೂಜಾರಿ ಅಂದರ್!
    • 3
      'ವಂದೇ ಮಾತರಂ' ಅವಮಾನ ಮಾಡಿದವರಿಗೆ ಕಾದಿದೆ 3 ವರ್ಷಗಳ ಜೈಲು! ಕೇಂದ್ರ ಸರಕಾರದ ನೂತನ ನಿಯಮಾವಳಿ ಬಿಡುಗಡೆ
    • 4
      ಪುತ್ತೂರಿನ ಹಿಂದೂ ಸಂಘಟನೆ ಮುಖಂಡ ಅಜಿತ್ ರೈ ಹೊಸಮನೆ ಗಡಿಪಾರು ವಿಚಾರಣೆಗೆ ಹಾಜರಾಗುವಂತೆ ನೋಟೀಸ್
    • 5
      ‘ನಾನು ಆ ಸಮಿತಿಯಲ್ಲಿ ಇಲ್ಲ’ – ಸಾವರ್ಕರ್‌ಗೆ ಭಾರತ ರತ್ನ ವಿಳಂಬ ಕುರಿತು ಮೋಹನ್ ಭಾಗವತ್

  • Privacy Policy
  • Contact
© Tulunadu Infomedia.

Press enter/return to begin your search