• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಹೆಣ್ಣುಮಕ್ಕಳನ್ನು ಭರತನಾಟ್ಯ ತರಗತಿಗೆ ಕಳಿಸುವಷ್ಟೇ ಆಸಕ್ತಿ ಕರಾಟೆ ಕ್ಲಾಸಿಗೂ ಇರಲಿ!!

Hanumantha Kamath Posted On December 13, 2019
0


0
Shares
  • Share On Facebook
  • Tweet It

ಆವತ್ತು ಯಾವಾಗ ಪ್ರಿಯಾಂಕಾ ರೆಡ್ಡಿ ಹಾಗೂ ಉನ್ನಾವೋ ಸಂತ್ರಸ್ತೆಯ ಅತ್ಯಾಚಾರ ಮತ್ತು ಕೊಲೆಯಾದಾಗ ಮೊದಲಿಗೆ ಕೇಳಿ ಬಂದ ಮಾತು ಇನ್ನು ಇಂತಹ ಎಷ್ಟು ಅಮಾಯಾಕ ಜೀವಗಳು ಕಾಮುಕರ ಕೆಟ್ಟ ದೃಷ್ಟಿಗೆ ಬಲಿಯಾಗಬೇಕು ಎನ್ನುವುದು. ಪ್ರತಿ ಬಾರಿ ಬೇರೆ ಬೇರೆ ಅತ್ಯಾಚಾರಗಳು ಮಾಧ್ಯಮಗಳ ಮೂಲಕ ರಾಷ್ಟ್ರಮಟ್ಟದಲ್ಲಿ ಸುದ್ದಿಯಾದಾಗ ಜನ ಈ ಪ್ರಶ್ನೆ ಕೇಳುತ್ತಾರೆ. ಸಂಸತ್ತಿನಲ್ಲಿಯೂ ಈ ಬಗ್ಗೆ ಚರ್ಚೆಯಾಗುತ್ತದೆ. ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಕೇಂದ್ರದ ಮೇಲೆ ಒತ್ತಡ ಬೀಳುತ್ತದೆ. ರಾಜ್ಯ, ರಾಷ್ಟ್ರೀಯ ಮಾಧ್ಯಮಗಳು ನಿರಂತರ ಚರ್ಚೆ ಮಾಡುತ್ತವೆ. ಅದರಿಂದ ಒಂದಿಷ್ಟು ಸಂಚಲನ ಮೂಡುವುದು ಸುಳ್ಳಲ್ಲ. ಹಾಗೇ ಕೇಂದ್ರ ಸರಕಾರ ಕೂಡ ಕಳೆದ ಅವಧಿಯಲ್ಲಿ ಒಂದು ಹೊಸ ಕಾನೂನನ್ನು ಜಾರಿಗೆ ತಂದಿತ್ತು. ಅದರಲ್ಲಿ ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳನ್ನು ಅತ್ಯಾಚಾರ ಮಾಡುವ ಆರೋಪಿಗೆ ಪೊಸ್ಕೋ ಕಾನೂನಿನ ಮೂಲಕ ಜಾಮೀನಿಲ್ಲ ಮತ್ತು ಗರಿಷ್ಟ ಶಿಕ್ಷೆ ನೇಣುಗಂಬಕ್ಕೆ ಏರಿಸುವುದೇ ಆಗಿದೆ. ಪೋಕ್ಸೋ ಕೇಸುಗಳನ್ನು ಆರು ತಿಂಗಳಲ್ಲಿ ಮುಗಿಸಿ ಎಂದು ಎಲ್ಲಾ ರಾಜ್ಯಗಳ ಕೋರ್ಟ್ ನ್ಯಾಯಾಧೀಶರಿಗೆ ಕೇಂದ್ರ ಕಾನೂನು ಖಾತೆ ಸಚಿವ ರವಿಶಂಕರ್ ಪ್ರಸಾದ್ ಮನವಿ ಮಾಡಿದ್ದಾರೆ. ಅಲ್ಲದೆ ಇಂಥ ಪ್ರಕರಣಗಳ ವಿಚಾರಣೆಗಾಗಿ ಈಗಾಗಲೇ ದೇಶಾದ್ಯಂತ 700 ತ್ವರಿತ ನ್ಯಾಯಾಲಯಗಳು ಕಾರ್ಯ ನಿರ್ವಹಿಸುತ್ತಿದ್ದು ಮುಂದಿನ ದಿನಗಳಳ್ಲಿ 1023 ಹೆಚ್ಚುವರಿ ನ್ಯಾಯಾಲಯಗಳ ಸ್ಥಾಪನೆ ಮಾಡಲಾಗುವುದು ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ. ಹಾಗಂತ ಇಂತಹ ಕಾನೂನುಗಳನ್ನು ತರುವುದರಿಂದ ಅಪರಾಧಗಳು ಕಡಿಮೆಯಾಗುತ್ತಾ ಎನ್ನುವ ಪ್ರಶ್ನೆ ಕೂಡ ಉದ್ಭವಿಸುತ್ತದೆ.

ಜಾಮೀನು ಸಿಗುತ್ತೆ ಎನ್ನುವ ಧೈರ್ಯವೇ ಅತ್ಯಾಚಾರಕ್ಕೆ ಕಾರಣ!

ಪ್ರಿಯಾಂಕ ರೆಡ್ಡಿಯ ಆರೋಪಿಗಳನ್ನು ಶುಕ್ರವಾರ ಬೆಳಿಗ್ಗೆಯ ಜಾವ ಪೊಲೀಸ್ ಬಸ್ಸಿನಲ್ಲಿ ತಾವು ಸಂತ್ರಸ್ತೆಯನ್ನು ಸುಟ್ಟು ಹಾಕಿದ ಸ್ಥಳಕ್ಕೆ ಸ್ಥಳ ಮಹಜರು ಪ್ರಕ್ರಿಯೆಗಾಗಿ ಕರೆದುಕೊಂಡು ಹೋಗಲಾಗುತ್ತಿತ್ತು. ಹಿಂದೆ ಪೊಲೀಸ್ ಅಧಿಕಾರಿಗಳು ಪೊಲೀಸ್ ವ್ಯಾನಿನಲ್ಲಿ ಇದ್ದರು. ಅಲ್ಲಿ ಸಮಯದ ಅವಕಾಶ ಸಿಕ್ಕಿದ ತಕ್ಷಣ ಆರೋಪಿಗಳಲ್ಲಿ ಒಬ್ಬ ಮೊಹಮದ್ ಪಾಷ ಪೊಲೀಸ್ ಸಿಬ್ಬಂದಿಯೊಬ್ಬರ ಗನ್ ಕಿತ್ತುಕೊಳ್ಳಲು ಯತ್ನಿಸಿದ್ದಾನೆ. ಉಳಿದವರು ಪೊಲೀಸರತ್ತ ಕಲ್ಲು ತೂರಾಟ ನಡೆಸಿದರು. ಆರೋಪಿಗಳಲ್ಲಿ ಇನ್ನೊಬ್ಬ ಪೊಲೀಸರ ಶಸ್ತ್ರಾಸ್ತ ಕಿತ್ತು ಪೊಲೀಸರ ಮೇಲೆ ಫೈರಿಂಗ್ ಮಾಡಲು ಶುರು ಮಾಡುವಾಗ ಆತ್ಮರಕ್ಷಣೆಗಾಗಿ ಆಗ ಅನಿವಾರ್ಯವಾಗಿ ಎನ್ ಕೌಂಟರ್ ಮಾಡಲಾಯಿತು ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಇನ್ನು ಸತ್ತ ಆರೋಪಿಗಳು ಈ ಹಿಂದೆಯೂ ಕೆಲವು ಪ್ರಕರಣಗಳಲ್ಲಿ ಭಾಗಿಯಾಗಿ ಜೈಲಿನ ರುಚಿ ಕಂಡು ನಂತರ ಜಾಮೀನಿನಲ್ಲಿ ಹೊರಗೆ ಬಂದಿದ್ದರು. ತಾವು ಎಂತಹ ಅಪರಾಧ ಮಾಡಿದರೂ ಜಾಮೀನು ಸಿಗುತ್ತೆ ಎನ್ನುವ ಅಹಂ ಅವರಲ್ಲಿತ್ತು. ಆದರೆ ಈ ಪ್ರಕರಣದಲ್ಲಿ ಅಷ್ಟು ಸುಲಭವಾಗಿ ಬಿಟ್ಟುಹೋಗಲ್ಲ. ತಮಗೆ ಶಿಕ್ಷೆ ಆಗುತ್ತೆ ಎನ್ನುವುದು ಅವರ ಅರಿವಿಗೆ ಬಂದಿತ್ತು. ಅದಕ್ಕಾಗಿ ತಪ್ಪಿಸಿಕೊಂಡು ಹೋಗುವ ಯತ್ನದಲ್ಲಿ ಸಿಕ್ಕಿಬಿದ್ದಿದ್ದಾರೆ.

ಕಲಿಕೆಯಲ್ಲಿಯೇ ತಪ್ಪಿದೆ!
ಹಾಗಾದರೆಅತ್ಯಾಚಾರ ಪ್ರಕರಣಗಳಲ್ಲಿ ಸಂತ್ರಸ್ತೆ ಮತ್ತು ಆಕೆಯ ಮನೆಯವರಿಗೆ ಶೀಘ್ರದಲ್ಲಿ ನ್ಯಾಯ ಕೊಡಿಸುವುದು ಹೇಗೆ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಇಲ್ಲಿ ಮುಖ್ಯವಾಗಿರುವುದು ಸಮಯದ ಪರಿಧಿ. ನಿರ್ದಿಷ್ಟ ಅವಧಿಯ ಒಳಗೆ ಪ್ರತಿ ಅತ್ಯಾಚಾರ ಪ್ರಕರಣ ಅಂತ್ಯ ಕಾಣಬೇಕು ಎಂದು ಕಾನೂನು ತಂದರೆ ಆಗ ವರ್ಷಗಟ್ಟಲೆ ಪ್ರಕರಣ ಎಳೆದುಕೊಂಡು ಹೋಗುವುದಿಲ್ಲ. ಇನ್ನು ಅತ್ಯಾಚಾರ ಪ್ರಕರಣಗಳ ವಿಚಾರಣೆಗೆ ಪ್ರತ್ಯೇಕ ನ್ಯಾಯಾಲಯಗಳ ಸ್ಥಾಪನೆ ಆಗಬೇಕು. ಅಲ್ಲಿ ಸಂತ್ರಸ್ತೆಗೆ ಯಾವುದೇ ಮುಜಗರ ಆಗದಂತೆ ವಿಚಾರಣೆ ನಡೆದು ನ್ಯಾಯಾಧೀಶರು ತೀರ್ಪು ಕೊಡುವಂತಿರಬೇಕು. ಮೇಲ್ಮನವಿ ಸಹಿತ ವಿವಿಧ ಪ್ರಕ್ರಿಯೆಗಳ ಬಗ್ಗೆ ಒಂದು ಸ್ಪಷ್ಟ ನೀತಿನಿಯಮಾವಳಿಗಳನ್ನು ಕಾನೂನು ತಜ್ಞರು ರಚಿಸಬೇಕು. ಅದರಿಂದ ಯಾವುದೇ ಪ್ರಕರಣ ವಿಳಂಬ ಆಗುವುದು ತಪ್ಪಿಸಬಹುದು. ಇದೆಲ್ಲ ಇನ್ನೊಂದು ಅಂಗ.
ಕೊನೆಯದಾಗಿ ನಾವು ನೋಡಬೇಕಾಗಿರುವುದು ಮೂರನೇ ಆಯಾಮ. ಕಠಿಣ ಶಿಕ್ಷೆ ಕೊಡುವುದು ಹೇಗೆ ಮುಖ್ಯವೋ, ನಿರ್ಭಯಾ ಫಂಡ್ ಮೂಲಕ ಮಹಿಳಾ ಸುರಕ್ಷತೆ ಹೇಗೆ ಅಗತ್ಯವೋ, ಕಾನೂನು ರಚಿಸಿ ಶೀಘ್ರದಲ್ಲಿ ಪ್ರಕರಣಕ್ಕೆ ಅಂತ್ಯ ಹಾಡುವುದು ಎಷ್ಟು ಅನಿವಾರ್ಯವೋ ಹಾಗೆ ಮೂಲದಲ್ಲಿಯೇ ಒಂದಿಷ್ಟು ಬದಲಾವಣೆ ತರುವುದು ಕೂಡ ಅಗತ್ಯ. ಬೇಕಾದರೆ ನಮ್ಮ ಬಾಲ್ಯವನ್ನು ನಾವು ಇಲ್ಲಿ ಸ್ಮರಿಸಬಹುದು. ಹೆಣ್ಣು ಅಬಲೆ ಎನ್ನುವುದನ್ನು ಚಿಕ್ಕವಯಸ್ಸಿನಲ್ಲಿ ಯಾವಾಗ ನಮ್ಮ ಕಿವಿಗೆ ಹಾಕುತ್ತಾ ಈ ವಿಷಯದ ಮೇಲೆ ಪ್ರಬಂಧವನ್ನು ಬರೆಸಲಾಗುತ್ತದೆಯೋ ಆವಾಗಲೇ ಮಕ್ಕಳ ಮನಸ್ಸಿನಲ್ಲಿ ಹೆಣ್ಣು ಪುರುಷನಷ್ಟು ಶಕ್ತಿವಂತಳಲ್ಲ ಎನ್ನುವುದು ಬಂದು ಬಿಡುತ್ತದೆ. ವಿಷಯ ಆರಂಭವಾಗುವುದೇ ಅಲ್ಲಿಂದ. ನಾವು ವೀರರಾಣಿ ಅಬ್ಬಕ್ಕ, ಕಿತ್ತೂರು ಚೆನ್ನಮ್ಮ, ಒನಕೆ ಓಬವ್ವ ಕಥೆಗಳನ್ನು ಪರೀಕ್ಷೆಗೆ ಅಂಕಗಳಿಸಲು ಓದಿರುತ್ತೇವೆ ವಿನ: ನಮ್ಮ ಸಮಾಜ ತಮ್ಮ ಹೆಣ್ಣುಮಕ್ಕಳನ್ನು ಕೂಡ ಆ ಐತಿಹಾಸಿಕ ವನಿತೆಯರಂತೆ ಬೆಳೆಸುವುದು ಅಪರೂಪ. ಒಂದು ಹೆಣ್ಣುಮಗುವಿಗೆ ಧೈರ್ಯ ಇದ್ದರೂ ನೀನು ಗಂಡುಬೀರಿಯಂತೆ ವರ್ತಿಸಬೇಡಾ ಎಂದು ಜೋರು ಮಾಡುವವರೇ ಹೆಚ್ಚು. ಈಗೀಗ ಕಾನ್ವೆಂಟ್ ಶಾಲೆಗಳಲ್ಲಿ ಗುಡ್ ಟಚ್, ಬ್ಯಾಡ್ ಟಚ್ ಎನ್ನುವುದನ್ನು ಪುಟ್ಟ ಮಕ್ಕಳಿಗೆ ಹೇಳಿಕೊಡಲಾಗುತ್ತಿದೆಯಾದರೂ ನಮ್ಮ ಸಮಾಜ ಹೆಣ್ಣನ್ನು ನೀನು ತಗ್ಗಿಬಗ್ಗಿಯೇ ನಡೆಯಬೇಕು ಎಂದು ಬೋಧಿಸುತ್ತದೆಯೇ ಹೊರತು ವಿಭಿನ್ನವಾಗಿ ಏನು ಹೇಳಿಕೊಡುವುದೇ ಇಲ್ಲ. ಎರಡನೇಯದಾಗಿ ಕತ್ತಲಾದ ನಂತರ ನೀನು ಮನೆಯ ಹೊರಗೆ ಹೋಗಬೇಡಾ. ನೀನು ಸುರಕ್ಷಿತಳಲ್ಲ, ಅಲ್ಲಿ ಗುಮ್ಮ ಬರುತ್ತದೆ ಎಂದು ಚಿಕ್ಕ ಹೆಣ್ಣುಮಕ್ಕಳನ್ನು ಹೆದರಿಸಿ ಒಳಗೆ ಕುಳ್ಳಿರಿಸಿಕೊಳ್ಳುವಾಗಲೇ ಅವಳು ಮಾನಸಿಕವಾಗಿ ಕುಸಿದು ಹೋಗುತ್ತಾಳೆ. ಅವಳಿಗೆ ತಾನು ಪುರುಷರಷ್ಟೇ ಸಾಮರ್ತ್ಯ ಉಳ್ಳವಳು ಎಂದು ಅನಿಸುವುದೇ ಇಲ್ಲ. ಇನ್ನು ಹೆಣ್ಣುಮಕ್ಕಳನ್ನು ಭರತನಾಟ್ಯ ತರಗತಿಗೆ ಸೇರಿಸಲು ಆಸಕ್ತಿ ತೋರಿಸುವ ನಮ್ಮ ಸಮಾಜ ಕರಾಟೆ ತರಗತಿಗೂ ಸೇರಿಸಲು ಕೂಡ ಆಸಕ್ತಿ ತೋರಿಸಬೇಕು. ಎಲ್ಲಕ್ಕಿಂತ ಹೆಚ್ಚಾಗಿ ನೀನು ನಿನ್ನ ಮೇಲೆ ನಡೆಯಬಹುದಾದ ಅನ್ಯಾಯವನ್ನು ಎದುರಿಸಲು ಸಜ್ಜಾಗಿರಬೇಕು ಎಂದು ಹೇಳಿಕೊಡಬೇಕು. ಇನ್ನು ಹೆಣ್ಣುಮಕ್ಕಳಿಗೆ ಮಾತ್ರವಲ್ಲ ಗಂಡುಮಕ್ಕಳಿಗೂ ಸಣ್ಣವಯಸ್ಸಿನಿಂದಲೇ ನೀವು ಬೆಳೆದು ದೊಡ್ಡವರಾಗಿ ಸಮಾಜದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂದು ಹೇಳಿಕೊಡಬೇಕು. ಗಂಡು ಮನೆಯಲ್ಲಿ ಯೋಗ್ಯ ಸಂಸ್ಕಾರವನ್ನು ಪಡೆದುಕೊಂಡರೆ ಆತ ಮುಂದೆ ಬೆಳೆದು ಸಮಾಜದ ಆಸ್ತಿಯಾಗುತ್ತೇನೆ ವಿನ: ಕಂಟಕನಾಗಲ್ಲ. ಹೆಣ್ಣಿಗೆ ಮಾನಸಿಕ, ದೈಹಿಕ ಸಬಲತೆ ಕೊಡಲು ಆಸಕ್ತಿ ತೋರಿಸುತ್ತಾ ಹೆಣ್ಣಿಗೆ ಗೌರವ ಕೊಡುವುದೇ ನಿಜವಾದ ಪುರುಷತ್ವ ಎನ್ನುವುದನ್ನು ಗಂಡಿಗೆ ಮನವರಿಕೆ ಮಾಡುವಲ್ಲಿ ನಮ್ಮ ಸಮಾಜ ಯಶಸ್ವಿಯಾದಷ್ಟು ಅತ್ಯಾಚಾರಗಳು ಇಳಿಮುಖವಾಗುತ್ತಾ ಹೋಗುತ್ತವೆ. ಅಷ್ಟಾಗಿಯೂ ಒಂದಿಷ್ಟು ಕ್ರಿಮಿಗಳು ಉಳಿದುಬಿಟ್ಟರೂ ವಿಶ್ವನಾಥ್ ಸಜ್ಜನ್ನರ್ ನಂತಹ ಪೊಲೀಸ್ ಅಧಿಕಾರಿಗಳು ನೋಡಿಕೊಳ್ಳುತ್ತಾರೆ. ಆ ವಿಷಯದಲ್ಲಿ ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಗ್ರೇಟ್. ಬಹಿರಂಗವಾಗಿ ಪೊಲೀಸ್ ಅಧಿಕಾರಿಗಳಿಗೆ ಭೇಷ್ ಎಂದಿದ್ದಾರೆ.
0
Shares
  • Share On Facebook
  • Tweet It




Trending Now
ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
Hanumantha Kamath September 17, 2025
ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
Hanumantha Kamath September 17, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
    • ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
    • ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
  • Popular Posts

    • 1
      ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
    • 2
      ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
    • 3
      ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • 4
      ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • 5
      ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!

  • Privacy Policy
  • Contact
© Tulunadu Infomedia.

Press enter/return to begin your search