• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಶಾಂತಿಯುತ ಪ್ರತಿಭಟನೆ- ಟೆಂಪೋದಲ್ಲಿ ಕಲ್ಲು, ಕೈಯಲ್ಲಿ ಪೆಟ್ರೋಲ್ ಬಾಂಬ್, ಗನ್ ಅಂಗಡಿಗೆ ದಾಳಿ!!

Hanumantha Kamath Posted On December 24, 2019
0


0
Shares
  • Share On Facebook
  • Tweet It

ಮೊತ್ತ ಮೊದಲಿಗೆ ಮಂಗಳೂರು ಪೊಲೀಸ್ ಕಮೀಷನರ್ ಡಾ.ಹರ್ಶ ಅವರಿಗೆ ಧನ್ಯವಾದ ಹೇಳಲೇಬೇಕು. ವಿರೋಧಪಕ್ಷಗಳ ನಾಯಕರು ಬಂದು ಗಂಟೆಗಟ್ಟಲೆ ಸುದ್ದಿಗೋಷ್ಟಿ ಮಾಡಿ ಪೊಲೀಸರ ಫೈರಿಂಗ್ ಬಗ್ಗೆ ಟೀಕಿಸಿದರು, ಆರೋಪಿಸಿದರು, ಏನೇನೋ ಹೇಳಿ ಹಂಗಿಸಿದರು. ಮುಖ್ಯಮಂತ್ರಿ ಯಡಿಯೂರಪ್ಪನವರು ಬಂದರು. ಹತ್ತು ಲಕ್ಷ ಘೋಷಣೆ ಸತ್ತವರಿಗೆ ಮಾಡಿದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪೊಲೀಸ್ ಸಿಬ್ಬಂದಿಗಳನ್ನು ಭೇಟಿ ಮಾಡಬೇಕು ಎಂದು ಯಾವ ಮಹಾನ್ ರಾಜಕೀಯ ನಾಯಕರಿಗೂ ಅನಿಸಲಿಲ್ಲ. ಆದರೆ ಪೊಲೀಸ್ ಕಮೀಷನರ್ ಎದೆಗುಂದಲಿಲ್ಲ. ಅವರಿಗೆ ತಾವು ತೆಗೆದುಕೊಂಡ ಕ್ರಮದ ಬಗ್ಗೆ ವಿಶ್ವಾಸವಿತ್ತು. ಅದರೊಂದಿಗೆ ಪ್ರತಿಭಟನಾಕಾರರನ್ನು ಬಿಟ್ಟು ಉಳಿದವರಿಗೆ ಪೊಲೀಸರ ಫೈರಿಂಗ್ ಅನಿವಾರ್ಯತೆಯ ಬಗ್ಗೆ ಗೊತ್ತಿತ್ತು. ಆದರೆ ಏನು ಮಾಡೋಕೆ ಆಗುತ್ತೆ? ಪೊಲೀಸ್ ಕಮೀಷನರ್ ತಮ್ಮ ಟ್ವಿಟರ್ ನಲ್ಲಿ ಸಂದೇಶ ಬರೆದರು. “ದಯವಿಟ್ಟು ನಿಮ್ಮ ಬಳಿ ಗಲಭೆಯ ದೃಶ್ಯಗಳು, ಫೋಟೋಗಳು ಇದ್ದರೆ ನಮಗೆ ಮೇಲ್ ಮಾಡಿ, ವಾಟ್ಸಪ್ ಕಳುಹಿಸಿ” ಅಷ್ಟೇ., ಬಂದ ವಿಡಿಯೋಗಳನ್ನು ನೋಡಿ ಪೊಲೀಸ್ ಇಲಾಖೆಯೇ ಬೆಚ್ಚಿಬಿದ್ದಿದೆ. ಅದರಲ್ಲಿ ಆಯ್ದ ಕೆಲವು ಭಯಾನಕ ದೃಶ್ಯಗಳನ್ನು ಪೊಲೀಸ್ ಕಮೀಷನರೇಟ್ ಕಚೇರಿಯಿಂದ ಸೋಶಿಯಲ್ ಮೀಡಿಯಾಗಳಲ್ಲಿ ಹಾಕಲಾಗಿದೆ. ಅದರ ಕೆಲವು ವಿಡಿಯೋಗಳನ್ನು ನೋಡಿದರೆ ಪ್ರತಿಭಟನಾಕಾರರ ” ಶಾಂತಿಯುತ” ಪ್ರತಿಭಟನೆ ಗೊತ್ತಾಗುತ್ತಿದೆ.

ಮೊದಲನೇ ದೃಶ್ಯ: ಒಂದು ಟೆಂಪೋ ಬಂದು ನಿಲ್ಲುತ್ತದೆ. ಆ ಟೆಂಪೋದಲ್ಲಿ ಹತ್ತಾರು ಗೋಣಿಗಳು. ಪ್ರತಿ ಗೋಣಿಗಳು ಭರ್ತಿ. ಗೋಣಿಯಲ್ಲಿ ತುಂಬಿದ್ದದ್ದು ಫುಲ್ ಜಲ್ಲಿಕಲ್ಲುಗಳು. ಟೆಂಪೋ ಬಂದು ನಿಲ್ಲುತ್ತಿದ್ದಂತೆ ಶಾಂತಿಯುತ ಪ್ರತಿಭಟನಾಕಾರರು ಒಂದೊಂದೇ ಗೋಣಿಚೀಲವನ್ನು ಕೆಳಗೆ ಹಾಕಿ ಅದರಿಂದ ಕಲ್ಲುಗಳನ್ನು ಕೆಳಗೆ ರಾಶಿ ಹಾಕಿ ಅದನ್ನು ಪೊಲೀಸರ ಮೇಲೆ ಬಿಸಾಡುತ್ತಾರೆ.
ಎರಡನೇ ದೃಶ್ಯ: ಮಂಗಳೂರಿನ ಬಂದರು ಪೊಲೀಸ್ ಠಾಣೆಯ ಹತ್ತಿರದ ದೃಶ್ಯ. ಜುಮ್ಮಾ ಮಸೀದಿ ರಸ್ತೆ. ಎಂಎಂ ಕಿಣಿ, ಗನ್ಸ್ ಮತ್ತು ಬುಲೆಟ್ಸ್ ಪೂರೈಕೆ ಮಾಡುವ ಅಂಗಡಿ. ಆ ಅಂಗಡಿಯ ಒಳಗೆ ನುಗ್ಗಿ ಗನ್ಸ್ ಮತ್ತು ಬುಲೆಟ್ಸ್ ದೋಚಿ ಅದನ್ನು ಬಳಸಲು ಪ್ರತಿಭಟನಾಕಾರರು ಪ್ರಯತ್ನ ಮಾಡಿದ್ದರು. ಅಂಗಡಿ ಶಟರ್ ಲಾಕ್ ಆಗಿದ್ದ ಕಾರಣ ಪ್ರತಿಭಟನಾಕಾರರು ಯಶಸ್ವಿಯಾಗಿರಲಿಲ್ಲ. ಒಂದು ವೇಳೆ ಒಳಗೆ ನುಗ್ಗಿದ್ದಿದ್ದರೆ ಪೊಲೀಸರ, ಜನಸಾಮಾನ್ಯರ ಮೇಲೆ ಆ ಬುಲೆಟ್ಸ್ ಅನ್ನು ಪ್ರತಿಭಟನಾಕಾರರು ಪ್ರಯೋಗಿಸಿದಿದ್ದರೆ ಏನಾಗುತ್ತಿತ್ತು ಎಂದು ಊಹಿಸುವುದು ಕಷ್ಟ. ಲೆಕ್ಕವಿಲ್ಲದಷ್ಟು ಹೆಣಗಳು ಉರುಳುತ್ತಿದ್ದದ್ದರಲ್ಲಿ ಸಂಶಯವಿಲ್ಲ.

ದೃಶ್ಯ 3: ತಾವು ಪೊಲೀಸರ ಮೇಲೆ ಕಲ್ಲು ತೂರುತ್ತಾ ಇರುವ ತಮ್ಮ ದುಷ್ಕತ್ಯ ಹೊರಪ್ರಪಂಚಕ್ಕೆ ಗೊತ್ತಾಗದೇ ಇರಲು ಪ್ರತಿಭಟನಾಕಾರರು ಏನು ಮಾಡಿದ್ದರು, ಗೊತ್ತಾ? ಆ ರಸ್ತೆಯಲ್ಲಿ ಎಲ್ಲೆಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತೋ ಆ ಸಿಸಿಟಿವಿಗಳನ್ನು ತಿರುಗಿಸಿ ರಸ್ತೆಯಲ್ಲಿ ಆಗುತ್ತಿರುವ ಘಟನೆ ಚಿತ್ರಣ ಆಗದಂತೆ ನೋಡಿಕೊಂಡಿದ್ದಾರೆ.

ದೃಶ್ಯ 4: ಬಾಟಲಿಯಲ್ಲಿ ಪೆಟ್ರೋಲ್ ಬಾಂಬ್ ಹಾಕಿ ಬಂದರು ಠಾಣೆಯ ಒಳಗೆ ಬಿಸಾಡಿ ಠಾಣೆಯನ್ನು ಉಡಾಯಿಸಲು ಪ್ರಯತ್ನಇಂತಹ ನೂರಾರು ದೃಶ್ಯಗಳನ್ನು ಎದುರಿಗೆ ಇಟ್ಟು ಒಮ್ಮೆ ನೋಡಿದರೂ ಸಾಕು, ಪೊಲೀಸರು ಫೈರಿಂಗ್ ಮಾಡಿದ್ದು ನೂರಕ್ಕೆ ನೂರರಷ್ಟು ಅನಿವಾರ್ಯವಾಗಿತ್ತು ಎಂದು ಗ್ಯಾರಂಟಿಯಾಗುತ್ತದೆ.

ಇನ್ನು ಮುಖಕ್ಕೆ ಬಟ್ಟೆ ಕಟ್ಟಿ ಕಲ್ಲು ಬಿಸಾಡುತ್ತಿರುವ ಶಾಂತಿಯುತ ಪ್ರತಿಭಟನಾಕಾರರ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡುರಾವ್ ಹೇಳುವುದೇನೆಂದರೆ ಅವರು ಆಶ್ರುವಾಯುವಿನಿಂದ ತಪ್ಪಿಸಲು ಹಾಗೆ ಮಾಡಿದರು ಎನ್ನುತ್ತಿದ್ದಾರೆ. ನಿಜವಾದ ವಿಷಯವೇನೆಂದರೆ ಆಶ್ರುವಾಯು ಸಿಡಿಸುವ ಮುನ್ನವೇ ಪ್ರತಿಭಟನೆಗೆ ಬಂದವರು ಮುಖಕ್ಕೆ ಬಟ್ಟೆ ಕಟ್ಟಿಯೇ ಫೀಲ್ಡಿಗೆ ಇಳಿದಿದ್ದರು. ಇನ್ನು ಬೆಂಗಳೂರು ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ಮಾಡುತ್ತಾ ಯುಟಿ ಖಾದರ್ ” ಈ ಗಲಭೆ ಬಿಜೆಪಿಯೊಳಗಿರುವ ಯಡಿಯೂರಪ್ಪನವರ ಶತ್ರುಗಳು ಮಾಡಿ ಯಡಿಯೂರಪ್ಪನವರ ಹೆಸರು ಹಾಳು ಮಾಡಲು ಯತ್ನಿಸುತ್ತಿದ್ದಾರೆ” ಎನ್ನುತ್ತಿದ್ದಾರೆ. ಬಹುಶ: ಖಾದರ್ ದಕ್ಷಿಣ ಕನ್ನಡ ಜಿಲ್ಲೆಯವರಾಗಿರುವುದರಿಂದ ಒಂದಿಷ್ಟು ಪ್ರಬುದ್ಧತೆ ಇರಬಹುದು ಎಂದುಕೊಳ್ಳಲಾಗಿತ್ತು. ಆದರೆ ಯಾವಾಗ ಅವರು ಇಂತಹ ಹೇಳಿಕೆಗಳನ್ನು ಕೊಡಲು ಶುರು ಮಾಡಿದರೋ ಅವರಿಂದಲೇ ಮಂಗಳೂರಿನಲ್ಲಿ ಈ ಪ್ರಮಾಣದ ಗಲಭೆ ಆಗಿರುವುದು ಸ್ಪಷ್ಟವಾಗಿದೆ. ಅವರು ತಾವು ಬೆಂಕಿ ಕೊಡುವ ಹೇಳಿಕೆ ಕೊಟ್ಟು ಅದನ್ನು ನಿಜ ಮಾಡಲು ಷಡ್ಯಂತ್ರ ಹೆಣೆದಿರುವುದು ಅವರ ಹೇಳಿಕೆಯಿಂದಲೇ ನಿಜವಾಗಿದೆ. ಇನ್ನೊಂದು ವಿಷಯ ಖಾದರ್ ಗಮನದಲ್ಲಿ ಇರಲಿ. ಪೊಲೀಸರಿಗೆ ಬಂದ ಗುಪ್ತಚರ ಮಾಹಿತಿ ಪ್ರಕಾರ ಮಂಗಳೂರಿನಲ್ಲಿ ದೊಡ್ಡ ವಿಧ್ವಂಸಕ ಕೃತ್ಯ ಮಾಡಲು ಹೊರಗಿನಿಂದ ಜನ ಬಂದಿದ್ದಾರೆ. ಕರ್ಪ್ಯೂ ಹಾಕದಿದ್ದರೆ ಮಂಗಳೂರು ಹಿಂದೆಂದೂ ಕಂಡು ಕೇಳರಿಯದ ದುರಂತಕ್ಕೆ ಕಾರಣವಾಗಲಿದೆ. ಪೊಲೀಸ್ ಕಮೀಷನರ್ ಯಾವುದೇ ರಿಸ್ಕ್ ತೆಗೆದುಕೊಳ್ಳದೇ ಜನರ ಪ್ರಾಣ ಉಳಿಸಿಕೊಳ್ಳಲು ಕರ್ಫರ್ೂ ಘೋಷಿಸಬೇಕಾಯಿತು!

ಪೂರ್ಣ ವಿಡಿಯೋ ನೋಡಿ

https://www.facebook.com/TulunaduNews/videos/750127638811711/

https://www.facebook.com/TulunaduNews/videos/607780153312720/

https://www.facebook.com/TulunaduNews/videos/514395056092183/

0
Shares
  • Share On Facebook
  • Tweet It




Trending Now
ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
Hanumantha Kamath September 17, 2025
ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
Hanumantha Kamath September 17, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
    • ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
    • ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
  • Popular Posts

    • 1
      ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
    • 2
      ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
    • 3
      ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • 4
      ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • 5
      ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!

  • Privacy Policy
  • Contact
© Tulunadu Infomedia.

Press enter/return to begin your search