• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಪಚ್ಚನಾಡಿಯ ಡಂಪಿಂಗ್ ಯಾರ್ಡಿಗೆ ಪರ್ಯಾಯ ಜಾಗ ಹುಡುಕುವ ನಾಟಕ ಶುರುವಾಗಲಿದೆ!!

Hanumantha Kamath Posted On January 31, 2020


  • Share On Facebook
  • Tweet It

ಕರ್ನಾಟಕ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಟಿ ಎನ್ ವಿಜಯಭಾಸ್ಕರ್ ಅವರು ಮಂಗಳೂರಿಗೆ ಬಂದು ಪಚ್ಚನಾಡಿಗೆ ಹೋಗಿ ಅಲ್ಲಿನ ಪರಿಸ್ಥಿತಿ ನೋಡಿ “ಡಂಪಿಂಗ್ ಯಾರ್ಡ್ ಗೆ ಪರ್ಯಾಯ ಜಾಗ ಹುಡುಕಿ” ಎಂದು ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಅವರಿಗೆ ಸೂಚಿಸಿ ಹೊರಟು ಹೋಗಿದ್ದಾರೆ. ಅವರು ಸುಲಭದಲ್ಲಿ ಹೇಳಿ ಹೋಗಿರಬಹುದು. ಆದರೆ ಒಂದು ಮಾತು ಹೇಳ್ತಿನಿ. ಇಡೀ ಜಿಲ್ಲಾಡಳಿತ, ಪಾಲಿಕೆಯ ಎಲ್ಲಾ ಅಧಿಕಾರಿಗಳು ತಲೆ ಕೆಳಗೆ ಮಾಡಿ ನಿಂತರೂ ಇವರಿಗೆ ಪರ್ಯಾಯ ಜಾಗ ಸಿಗುವುದು ಅಷ್ಟರಲ್ಲಿಯೇ ಇದೆ. ಏಕೆಂದರೆ ಪಚ್ಚನಾಡಿ, ಕುಡುಪು, ಮಂದಾರದ ಸಹಿತ ಆಸುಪಾಸಿನ ಜನರಿಗೆ ಡಂಪಿಂಗ್ ಯಾರ್ಡ್ ಕಾಲ ಬುಡದ ಕೆಳಗೆ ಇರುವುದರ ಸಂಕಷ್ಟ ಏನು ಎನ್ನುವುದರ ಅರಿವಾಗಿದೆ. ಅದನ್ನು ಮುಕ್ಕಾಲು ವರ್ಷದಿಂದ ಇಡೀ ಮಂಗಳೂರು ನೋಡಿದೆ. ಆದ್ದರಿಂದ ಡಂಪಿಂಗ್ ಯಾರ್ಡ್ ಮಾಡ್ತೀವಿ ಎಂದು ಹೊರಟರೆ ನಗರದ ಆಸುಪಾಸಿನಲ್ಲಿ 50-60 ಏಕರೆ ಜಾಗ ಏಲ್ಲಿಯೂ ಸಿಗುವುದಿಲ್ಲ. ಖಾಸಗಿ ಜಾಗವನ್ನು ಖರೀದಿಸಲು ಇವತ್ತಿನ ಮಾರುಕಟ್ಟೆ ಧಾರಣೆಯ ಪ್ರಕಾರ ಸರಕಾರಕ್ಕೆ ಸಾಧ್ಯವಿಲ್ಲ. ಅದರ ಬದಲು ನಾನು ಈಗ ಹೇಳುವ ಕೆಲವು ಸಲಹೆಗಳನ್ನು ಸರಕಾರ ಪರಾಮರ್ಶಿಸಿದರೆ ಹಿಮಾಲಯದಂತೆ ಕಾಣುತ್ತಿರುವ ಈ ಸಮಸ್ಯೆ ಕರಗಿ ನೀರಾಗಬಹುದು. ಸರಕಾರದ ಗಮನಕ್ಕೆ ತರುವ ಕೆಲಸ ಇಲ್ಲಿನ ಶಾಸಕರದ್ದು.

ಮೊದಲನೇಯದಾಗಿ ಈಗ ಸರಾಸರಿ 200 ಟನ್ ತ್ಯಾಜ್ಯ ಉತ್ಪತ್ತಿಯಾಗಿ ಪಚ್ಚನಾಡಿ ಡಂಪಿಂಗ್ ಯಾರ್ಡ್ ಸೇರುತ್ತಿದೆ. ಇನ್ನೊಂದು 15-20 ವರ್ಷಗಳಲ್ಲಿ ತ್ಯಾಜ್ಯದ ಒಟ್ಟು ಪ್ರಮಾಣ 500 ಟನ್ ಗೆ ಬಂದು ನಿಲ್ಲಬಹುದು. ಈ ತ್ಯಾಜ್ಯದಿಂದ ಡಾಮರು ಉತ್ಪಾದನೆ ಮಾಡಿ ಕೊಡ್ತಿವೆ. ಅವಕಾಶ ಮಾಡಿ ಕೊಡಿ ಎಂದು ಖಾಸಗಿ ಸಂಸ್ಥೆಗಳು ಈಗಾಗಲೇ ಮುಂದೆ ಬಂದಿವೆ. ಅದೇ ರೀತಿ ವೆಟ್ ವೇಸ್ಟ್ ನಿಂದ ಬಯೋ ಗ್ಯಾಸ್ ತಯಾರಿಸಿ ವಿದ್ಯುತ್ ಉತ್ಪಾದನೆ ಮಾಡಬಹುದು. ಡ್ರೈ ವೇಸ್ಟ್ ನಿಂದ ಗೊಬ್ಬರ ತಯಾರಿಸಬಹುದು. ಗೊಬ್ಬರ ಉತ್ಪಾದನೆ ಅದೀಗ ಸರಿಯಾದ ಸಮರ್ಪಕ ಪ್ರಮಾಣದಲ್ಲಿ ಆಗುತ್ತಿಲ್ಲ. ಇದೆಲ್ಲವನ್ನು ಖಾಸಗಿಯವರಿಗೆ ವಹಿಸಿ ಕೊಡಿ. ಅವರು ಮಾಡಲು ರೆಡಿ ಇದ್ದಾರೆ.

ಎರಡನೇಯದಾಗಿ ಈಗ ಡಂಪಿಂಗ್ ಯಾರ್ಡ್ ಇರುವ ರಸ್ತೆಯ ಒಂದು ಪಾಶ್ವದಲ್ಲಿ ಸುಮಾರು 20 ವರ್ಷದಿಂದ ಹಾಕುತ್ತಿರುವ ತ್ಯಾಜ್ಯ ಗೊಬ್ಬರ ಆಗಿದೆ. ಅದನ್ನು ವಿಲೇವಾರಿ ಮಾಡಿದರೆ ಆ ಜಾಗ ಸರಕಾರಕ್ಕೆ ಸಿಗುತ್ತದೆ. ಇನ್ನು ಈಗ ಬರುವ ತ್ಯಾಜ್ಯವನ್ನು ನಾನು ಮೇಲೆ ಹೇಳಿದಂತೆ ಡಾಮರು, ಬಯೋ ಗ್ಯಾಸ್ ವಿದ್ಯುತ್, ಗೊಬ್ಬರ ಮಾಡಲು ವೈಜ್ಞಾನಿಕವಾಗಿ ಬಳಸಿದರೆ ಆಗ ಡಂಪ್ ಮಾಡುವ ಜಾಗ ಈಗ ಇರುವ ರೂಪಕ್ಕೆ ತಿರುಗುವುದಿಲ್ಲ. ಇನ್ನು ಮಂದಾರದ ಆಸುಪಾಸಿನಲ್ಲಿ ಈಗ ಸಂಕಷ್ಟ ಅನುಭವಿಸುತ್ತಿರುವ ಜನ ಜಾಗವನ್ನು ಸರಕಾರಕ್ಕೆ ಮಾರಲು ತಯಾರಾಗಿದ್ದಾರೆ. ಅದನ್ನು ಖರೀದಿಸಿದರೆ ಆಗ ಇನ್ನಷ್ಟು ಜಾಗ ಸಿಗುತ್ತದೆ. ಇದರಿಂದ ಡಂಪಿಂಗ್ ಯಾರ್ಡ್ ಅನ್ನು ಅಲ್ಲಿಯೇ ಉಳಿಸಬಹುದು. ಆದರೆ ನಮ್ಮ ಪಾಲಿಕೆ, ಜಿಲ್ಲಾಡಳಿತ ಇಂತಹ ಐಡಿಯಾಗಳನ್ನು ಅನುಷ್ಟಾನ ಮಾಡಲು ಹೋಗುವುದಿಲ್ಲ. ನನ್ನಂತವರು ಕೊಡಲು ಹೋದರೆ ನಮ್ಮ ಬಾಯಿಯನ್ನು ಕೆಲವರು ಮುಚ್ಚಿ ಹಾಕುತ್ತಾರೆ. ನಾನು ವಿಜಯ ಭಾಸ್ಕರ್, ಸಿಂಧೂ ರೂಪೇಶ್, ಅಜಿತ್ ಕುಮಾರ್ ಹೆಗ್ಡೆಯವರಷ್ಟು ವಿದ್ಯಾಭ್ಯಾಸ ಪಡೆಯದೇ ಇರಬಹುದು. ಆದರೆ ಸಮಸ್ಯೆಯನ್ನು ಹೊದ್ದುಕೊಂಡು ವರ್ಷಗಟ್ಟಲೆ ಮಲಗುವುದಕ್ಕಿಂತ ಔಟ್ ಆಫ್ ದಿ ಬಾಕ್ಸ್ ಪರಿಹರಿಸಲು ಪ್ರಯತ್ನಿಸಬಹುದಲ್ಲ.

ಆದರೆ ಸಮಸ್ಯೆ ಪರಿಹಾರ ಆಗುವುದು ಪಾಲಿಕೆಯ ಕೆಳಹಂತದ ಅಧಿಕಾರಿಗಳಿಂದ ಜಿಲ್ಲಾಡಳಿತವನ್ನು ಸೇರಿಸಿ ನಮ್ಮ ರಾಜ್ಯ ಸರಕಾರಕ್ಕೂ ಬೇಕಾಗಿಲ್ಲ. ಯಾಕೆಂದರೆ ಒಮ್ಮೆ ಸಮಸ್ಯೆ ಮುಗಿದರೆ ಇವರು ಹಬ್ಬ ಮಾಡುವುದು ಹೇಗೆ? ಇತ್ತೀಚೆಗೆ ನಾನು ಒಬ್ಬರನ್ನು ಭೇಟಿಯಾಗಿದ್ದೆ. ಅವರು ಮಂಗಳೂರಿನ ಮನೆಮನೆಗಳಿಂದ ತ್ಯಾಜ್ಯ ಸಂಗ್ರಹಿಸಿ ಅದರಿಂದ ಪ್ಲಾಸ್ಟಿಕ್ ಬೇರ್ಪಡಿಸಿ ಡಾಮರು ಮಾಡಲು ಸಾಧ್ಯವಿರುವ ಟೆಕ್ನಾಲಜಿಯನ್ನು ಸಂಶೋಧಿಸಿದ್ದಾರೆ. ಒಂದು ವೇಳೆ ಜನರು ಇವರ ಘಟಕಕ್ಕೆ ತ್ಯಾಜ್ಯ ತಂದುಕೊಟ್ಟರೆ ಇವರು ತೂಕ ಹಾಕಿ ನಿಗದಿಗೊಳಿಸಲಾಗುವ ಹಣವನ್ನು ಕೂಡ ಸಂದಾಯ ಮಾಡುವ ಸಾಧ್ಯತೆ ಇದೆಯಂತೆ. ಸರಕಾರ ಇವರಿಗೆ ಪಚ್ಚನಾಡಿಯಲ್ಲಿ ಅದಕ್ಕೆ ಅವಕಾಶ ಮಾಡಿಕೊಡಬೇಕು. ಕೊಡುತ್ತದೆಯಾ? ಇಲ್ಲಾ. ಯಾಕೆ? ಮೊದಲನೇಯದಾಗಿ ಸಮಸ್ಯೆ ಎಲ್ಲರಿಗೂ ಜೀವಂತವಾಗಿರಬೇಕು. ಕಾಲಕಾಲಕ್ಕೆ ಆಂಟೋನಿಯವರ ಕಪ್ಪ ಸಂದಾಯವಾಗುತ್ತಲೇ ಇರಬೇಕು. ಇನ್ನು ಆಗಾಗ ಪಚ್ಚನಾಡಿ ಡಂಪಿಂಗ್ ಯಾರ್ಡಿಗೆ ಬೆಂಕಿ ಬೀಳುತ್ತಲೇ ಇರಬೇಕು. ಇವರು ನಂದಿಸುತ್ತಲೇ ಇರಬೇಕು. ಬಿಲ್ ದೊಡ್ಡದಾಗುತ್ತಲೇ ಇರಬೇಕು. ಇನ್ನು ಏನೇನೋ ಇದೆ. ಒಂದು ವ್ಯವಸ್ಥೆಯಲ್ಲಿ ನಾಟಕ ಮಾಡುವವರೇ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿರುವಾಗ ನಾವು ನೀವು ವಾಸ್ತವವನ್ನು ನಂಬಿ ಕಾಯುವುದೇ ದೊಡ್ಡ ತಮಾಷೆ!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search