• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ನಿನ್ನೆಯ ಸಂತೆ ಇಳಿದ ಮೇಲೆ ಕಲಿತ ಪಾಠಗಳೇನು?

Hanumantha Kamath Posted On April 1, 2020


  • Share On Facebook
  • Tweet It

ಇಂದು ರಾತ್ರಿಯಿಂದ ನಾಳೆ ಬೆಳಿಗ್ಗೆ 4 ಗಂಟೆಯವರೆಗೆ ಮಂಗಳೂರಿನ ಸೆಂಟ್ರಲ್ ಮಾರುಕಟ್ಟೆ ತೆರೆದಿರುತ್ತದೆ ಎನ್ನುವ ಮಾಹಿತಿ ಇದೆ. ಇದರಿಂದ ಏನಾಗುತ್ತದೆ? ಚಿಲ್ಲರೆ ಅಂಗಡಿಯವರು ಅಲ್ಲಿ ಬಂದು ರಖಂ ವಸ್ತುಗಳನ್ನು ಖರೀದಿಸಿ ಅದನ್ನು ತಮ್ಮ ಅಂಗಡಿಗಳಿಗೆ ತೆಗೆದುಕೊಂಡು ಹೋಗಿ ಅಲ್ಲಿ ಮರುದಿನ ಮಾರುವುದಕ್ಕೆ ಅನುಕೂಲವಾಗಲಿ ಎನ್ನುವ ಕಾರಣಕ್ಕೆ ಈ ವ್ಯವಸ್ಥೆ ಮಾಡಲಾಗಿದೆ. ಮಂಗಳವಾರ ಮಂಗಳೂರು ಇಡೀ ಸಂತೆಯ ಮೂಡಿಗೆ ಬಂದಿತ್ತು. ಜನ ಮನೆಯಲ್ಲಿ ಬೇರೆ ಕೆಲಸ ಇಲ್ಲದೆ ಇರುವುದರಿಂದ ತಿನ್ನುವುದನ್ನು ಮಾತ್ರ ಕೆಲಸ ಮಾಡಿಕೊಂಡಿದ್ದಾರೋ ಎನ್ನುವಂತೆ ಒಂದು ದಿನ ಫ್ರೀ ಕೊಟ್ಟ ಕೂಡಲೇ ಮಂಗಳೂರಿಗೆ ಮಂಗಳೂರು ರಸ್ತೆಗೆ ಬಂದಿತ್ತು. ಅನೇಕರು ಮೊದಲ ಬಾರಿ ಅಂಗಡಿಗಳನ್ನು ನೋಡುತ್ತಿದ್ದಾರೋ ಎನ್ನುವಂತೆ ಅಂಗಡಿಗಳಿಗೆ ಮುಗಿಬಿದ್ದರು. ಅಕ್ಕಿ ಮತ್ತು ಬೇಳೆ ಮನೆಯಲ್ಲಿ ಇದ್ದರೆ ಒಂದೀಡಿ ವಾರ ಕಳೆಯಬಹುದು ಎಂದು ಗೊತ್ತಿದ್ದರೂ ಅನೇಕರು ಬಾದಾಮ್, ಪಿಸ್ತಾ ಸಹಿತ ಪಿಕ್ ನಿಕ್ ಗೆ ಹೋಗುವಾಗ ಖರೀದಿಸುವಂತೆ ವಸ್ತುಗಳನ್ನು ಖರೀದಿಸಿದರು. ಅನೇಕರು ಕುಟುಂಬವನ್ನು ಕಾರಿನಲ್ಲಿ ಜಾಲಿ ರೈಡ್ ಗೆ ಕರೆದುಕೊಂಡು ಬಂದರು. ಮೀನು, ಮಾಂಸ ಸಹಿತ ಚಿಪ್ಸ್, ವ್ಯಾಪರ್ಸ್ ತುಂಬಿಕೊಂಡು ಹೋಗಲಾಯಿತು. ಒಂದು ದೊಡ್ಡ ಸಂತೆ ಮಂಗಳವಾರದ ಸೂರ್ಯ ಮುಳುಗುತ್ತಿದ್ದಂತೆ ಮುಗಿದಿತ್ತು.

ಇದರಿಂದ ಏನು ತೊಂದರೆ ಎಂದು ಅನೇಕರಿಗೆ ಗೊತ್ತಿಲ್ಲ. ಕೊರೊನಾ ನಮ್ಮ ಜಿಲ್ಲೆಗೆ ಕಾಲಿಟ್ಟಿದೆ ಎಂದು ಅನೇಕರಿಗೆ ಮಂಗಳವಾರ ಬೆಳಿಗ್ಗೆಯಿಂದ ಸಂಜೆಯ ತನಕ ನೆನಪೇ ಇರಲಿಲ್ಲ. ಸೆಂಟ್ರಲ್ ಮಾರುಕಟ್ಟೆ ಮದುವೆ ಮನೆಯ ರೂಪವನ್ನು ಪಡೆದುಕೊಂಡಿತ್ತು. ಇನ್ನು ರಸ್ತೆಗಳಲ್ಲಿ ವಾಹನಗಳನ್ನು ನಿಲ್ಲಿಸಿದ ರೀತಿ ನೋಡಿದರೆ ರಸ್ತೆಯ ಕೊನೆಯಲ್ಲಿ ಮದುವೆಯ ಪೆಂಡಾಲ್ ಹಾಕಿದಂತೆ ಭಾಸವಾಗುತ್ತಿತ್ತು. ಕೆಲವರು ಅಂಗಡಿಗಳ ಹೊರಗೆ ಹೇಗೆ ಗುಂಪುಗೂಡಿದ್ದರೆಂದರೆ ಒಳಗೆ ಸ್ಟಾರ್ ನಟನೊಬ್ಬನ ಸಿನೆಮಾ ಶೂಟಿಂಗ್ ನಡೆಯುತ್ತಿದೆ ಎಂದು ಅನಿಸುತ್ತಿತ್ತು. ಇನ್ನು ಮಂಗಳವಾರ ಮನೆಯಲ್ಲಿಯೇ ಉಳಿದವರು ಬೇರೆಯವರ ದೃಷ್ಟಿಯಲ್ಲಿ ಮೂರ್ಖರಾದರು. ಯಾಕೆಂದರೆ ” ಸಿಕ್ಕಿದ್ದೇ ಒಂದು ದಿನ, ಅದರಲ್ಲಿಯೂ ಹೊರಗೆ ಬರಲ್ವಾ?” ಎಂದು ಪಕ್ಕದ ಮನೆಯವರು ಹೀಯಾಳಿಸುವ ಮಟ್ಟಿಗೆ ನಡೆದಿತ್ತು. ಬನ್ನಿ, ಸ್ವಲ್ಪ ಸಾಮಾನು ತೆಗೆದುಕೊಂಡು ಹಾಗೆ ಒಂದು ಸುತ್ತು ಸುತ್ತಾಡಿ ಬರೋಣ ಎಂದು ಹೇಳಿದ್ದು ಎಷ್ಟೋ ಜನ. ಇದರಿಂದ ನಿಜಕ್ಕೂ ಖುಷಿ ಪಟ್ಟಿದ್ದು ಕರೋನಾ ವೈರಸ್. ಅದಕ್ಕೆ ಮಂಗಳೂರಿಗೆ ಸೆಂಟ್ರಲ್ ಮಾರ್ಕೆಟ್ ಗೆ ಬಂದದ್ದು ಬೆಕ್ಕಿಗೆ ಮೀನು ಮಾರುಕಟ್ಟೆಗೆ ಬಂದಂತೆ ಆಗಿತ್ತು. ಜನಪ್ರತಿನಿಧಿಗಳು, ವೈದ್ಯರು ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಹೇಳಿದರೂ ಮಂಗಳೂರಿನವರ ತಲೆಗೆ ಎಳ್ಳಷ್ಟು ಹೋಗಲ್ಲವಲ್ಲ ಎಂದು ಕೊರೊನಾ ವೈರಸ್ ಮನದಲ್ಲಿಯೇ ನಕ್ಕಿರಬಹುದು.

https://tulunadunews.com/wp-content/uploads/2020/04/WhatsApp-Video-2020-04-01-at-1.37.19-PM.mp4

ಹಾಗಿದ್ದರೆ ಇದಕ್ಕೆ ಏನು ಮಾಡಬಹುದು. ಮೊದಲನೇಯದಾಗಿ ಸಾರ್ವಜನಿಕರು ಸೆಂಟ್ರಲ್ ಮಾರುಕಟ್ಟೆಗೆ ಬರಬಾರದು ಎಂದು ಕಟ್ಟುನಿಟ್ಟಾಗಿ ಮಾಡಬೇಕು. ಆದರೆ ನಿನ್ನೆ ಹಾಗೇ ಇರಲಿಲ್ಲ. ಇನ್ನು ಇವತ್ತಿನಿಂದ ಕೇವಲ ಚಿಲ್ಲರೆ ಅಂಗಡಿಯವರು ಅಥವಾ ಸೂಪರ್ ಬಜಾರ್ ನಂತರವರು ಮಾತ್ರ ಖರೀದಿಗೆ ಬರಬೇಕು ಎಂದು ಹೇಳಲಾಗಿದೆ. ಅವರಿಗೆ ಪಾಸ್ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಅದರ ನಂತರ ಆ ಅಂಗಡಿಯವರು ಸಾಮಾನುಗಳನ್ನು ತೆಗೆದುಕೊಂಡು ಅವರ ಅಂಗಡಿಯಲ್ಲಿ ಮಾರಬಹುದು ಎಂದು ಸೂಚನೆ ನೀಡಲಾಗಿದೆ. ಆ ಅಂಗಡಿಗಳು ನಿತ್ಯ 7 ರಿಂದ 12 ರ ತನಕ ತೆರೆದಿದ್ದು ಜನ ಅಲ್ಲಿಗೆ ಬರಬಹುದು. ಬಂದವರು ಸಾಮಾಜಿಕ ಅಂತರ ಕಾಪಾಡಿಕೊಂಡು ನಿಂತರೆ ಅಲ್ಲಿಗೆ ಒಂದು ಸವಾಲು ಮುಗಿಯುತ್ತದೆ. ಅದೇ ಜನಸಿ ಅಂಗಡಿಯವರು ತರಕಾರಿ ಮಾರುವುದಿದ್ದರೆ ಒಕೆ. ಆದರೆ ಸೆಂಟ್ರಲ್ ಮಾರುಕಟ್ಟೆ ಮೊದಲೇ ಕಿಷ್ಕಿಂದೆ. ಅದನ್ನು ಚೆಂದ ಶಿಸ್ತುಬದ್ಧವಾಗಿ ಕಟ್ಟಲು ನಮ್ಮ ಜನಪ್ರತಿನಿಧಿಗಳಿಗೆ ಇನ್ನು ಎಷ್ಟು ವರ್ಷ ಬೇಕೋ ಗೊತ್ತಿಲ್ಲ. ಅಲ್ಲಿ ತರಕಾರಿ ಖರೀದಿಸಲು ಚಿಲ್ಲರೆ ಅಂಗಡಿಯವರು ಹೋದರೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಬಹಳ ಕಷ್ಟ. ಹಾಗಿರುವಾಗ ಸೆಂಟ್ರಲ್ ಮಾರುಕಟ್ಟೆಯನ್ನು 15 ದಿನ ನೆಹರೂ (!) ಮೈದಾನಕ್ಕೆ ಶಿಫ್ಟ್ ಮಾಡಿದ್ದರೆ ತುಂಬಾ ಉತ್ತಮ. ಅಲ್ಲಿ ಸಾಕಷ್ಟು ಅಂತರದಲ್ಲಿ ಅಂಗಡಿಗಳನ್ನು ಇಡಬಹುದು. ಬರುವವರಿಗೆ ನಿಲ್ಲಲು ಮಾರ್ಕ್ ಮಾಡಬಹುದು. ಅಲ್ಲಿಂದ ತರಕಾರಿಗಳನ್ನು ತೆಗೆದುಕೊಂಡ ಚಿಲ್ಲರೆ ಅಂಗಡಿಯವರು ತಮ್ಮ ವಾರ್ಡುಗಳ ಸಣ್ಣಪುಟ್ಟ ಮೈದಾನಗಳಲ್ಲಿ ಅಥವಾ ಸರಕಾರಿ ಶಾಲೆಗಳ ಗ್ರೌಂಡುಗಳಲ್ಲಿ ಸರಕಾರ ಮಾಡುವ ವ್ಯವಸ್ಥೆಯ ಮೂಲಕ ಮಾರಿದರೆ ಆಗ ಸಮಸ್ಯೆಯನ್ನು ಹತ್ತಿಕ್ಕಲು ಸಾಧ್ಯ. ಇದನ್ನೆಲ್ಲಾ ನೋಡಿಕೊಳ್ಳಲು ಅಲ್ಲಲ್ಲಿ ಪೊಲೀಸರು ಹಾಕುವುದು ಕೂಡ ಅತ್ಯಗತ್ಯ. ಯಾಕೆಂದರೆ ನಾವು ಎಷ್ಟೇ ಜಾಗೃತಿ ಮೂಡಿದರೂ ರಸ್ತೆಗೆ ಇಳಿದ ಮೇಲೆ ಕೊರೊನಾವನ್ನು ಮರೆತುಬಿಡುತ್ತೇವೆ!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search