• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಜಾಹೀರಾತು ಏಜೆನ್ಸಿಗಳು ಪಾಲಿಕೆಯಿಂದ ಅನುಮತಿ ಪಡೆಯದೆ,ಸುಳ್ಳು ದಾಖಲೆ ಸಷ್ಟಿಸಿ ಪಾಲಿಕೆಗೆ ಕೊಟ್ಯಂತರ ರೂಪಾಯಿ ಹಿಡಿಸುತ್ತಾರೆ ಹೊಸ ಸರಕಾರಕ್ಕೆ ಕ್ರಮ ಕೈಗೊಳ್ಳಲು ಧೈರ್ಯ ಇದೆಯಾ?

Hanumantha Kamath Posted On September 9, 2020


  • Share On Facebook
  • Tweet It

ಹೊಸ ರಾಜ್ಯ ಸರಕಾರ ಬಂದಿದೆ ಹೊರ್ಡಿಂಗ್ ಗೊಲ್ಮಲ್ ನಿಂದ ಮಂಗಳೂರು ಮಹಾನಗರ ಪಾಲಿಕೆಗೆ ಕೊಟ್ಯಂತರ ರೂಪಾಯಿ ನಷ್ಟವಾಗುತ್ತಿದೆ ಹೊಸ ರಾಜ್ಯ ಸರಕಾರ ಮನಸ್ಸು ಮಾಡಿ ತನಿಖೆ ನಡಿಸಬೇಕು. ಪಾಲಿಕೆ ವ್ಯಾಪ್ತಿಯ ಇಬ್ಬರು ಶಾಸಕರು ತನಿಖೆ ನಡೆಸುವಂತೆ ಸರಕಾರದಿಂದ ಆದೇಶ ಮಾಡಿಸಿ ಪಾಲಿಕೆಯ ಸೋರಿ ಹೋಗುತ್ತಿರುವ ಆದಾಯವನ್ನು ಉಳಿಸುವಂತಹ ಹತ್ತು ಹಲವು ಜವಾಬ್ದಾರಿಗಳು ಇವರುಗಳ ಮುಂದೆ ಇದೆ. ಇಬ್ಬರೂ ಪಾಲಿಕೆ ಕಚೇರಿಯಲ್ಲೇ ತಮ್ಮ ಕಚೇರಿ ಮಾಡಿರುವುದರಿಂದ ಮನಸ್ಸು ಮಾಡಿದರೆ ಪಾಲಿಕೆಯ ಹೊರ್ಡಿಂಗ್ ನಲ್ಲಿ ಅಗುತ್ತಿರುವ ಕೊಟ್ಯಂತರ ರೂಪಾಯಿ ಸೊರಿಕೆಯನ್ನು ತಡೆಗಟ್ಟಬಹುದು ಮೊದಲಾದರೆ ಇವರ ಸರಕಾರ ಇರಲ್ಲಿಲ್ಲ ಇವರದೇ ಸರಕಾರ ಬಂದು ಒಂದು ವರ್ಷ ಕಳೆಯಿತು ಏನು ಮಾಡುತ್ತಿದ್ದಾರೆ ಶಾಸಕದ್ವರುಇಚ್ಚಾಶಕ್ತಿ ಬೇಕು ಅಷ್ಟೆ ಆದರೆ ಮನಪಾ ಬಗ್ಗೆ ಒಂದು ಚಿಕ್ಕ ಪೀಠಿಕೆ ಹೇಳುವುದು ಜವಾಬ್ದಾರಿಯುತ ನಾಗರಿಕನಾಗಿ ನನ್ನ ಕರ್ತವ್ಯ ಅದೆನೆಂದರೆ ಮಾನ್ಯ ಶಾಸಕರುಗಳೇ ನಾನು ಕಳೆದ ಕೆಲವು ದಿನಗಳಿಂದ ಸರಣಿಯಲ್ಲಿ ಬರೆಯುತ್ತಿರುವ ಹೋರ್ಡಿಂಗ್ಸ್ ಗೋಲ್ ಮಾಲ್ ನ ಕೊನೆಯ ಲೇಖನವನ್ನು ನಿಮಗೆ ಒಪ್ಪಿಸಿ, ನಂತರ ನಾನು ಬೇರೆ ವಿಷಯಗಳಿಗೆ ತೆರಳುತ್ತೇನೆ. ನೀವು ಮನಸ್ಸು ಮಾಡಿದರೆ ಈ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಂಡು ಪಾಲಿಕೆಗೆ ಆಗುತ್ತಿರುವ ಆದಾಯ ನಷ್ಟವನ್ನು ತಪ್ಪಿಸಬಹುದು. ಆದರೆ ಒಂದು ವಿಷಯ ನೆನಪಿರಲಿ. ನಿಮಗೆ ಮಂಗಳೂರು ಮಹಾನಗರ ಪಾಲಿಕೆಯಲ್ಲಿಯ ಸೋರಿಕೆಗಳನ್ನು ತಡೆಗಟ್ಟಿ ಆ ಹಣ ವನ್ನು ಅಭಿವ್ರದ್ದಿ ಕಾರ್ಯಗಳಿಗೆ ಉಪಯೋಗಿಸ ಬಹುದುಎನ್ನುವ ಗುರಿ ಇದ್ದರೆ ಹೋರ್ಡಿಂಗ್ ಗೋಲ್ ಮಾಲ್ ವಿರುದ್ಧ ಕ್ರಮ ಕೈಗೊಳ್ಳಿ ಯಾಕೆಂದರೆ ಮನಪಾ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಹೋರ್ಡಿಂಗ್ ಗೋಲ್ ಮಾಲ್ ಮಾಡುತ್ತಾ, ಅದರ ಸುದ್ದಿಗೆ ಬರುವ ಅಧಿಕಾರಿಗಳ ಕೈ ಕಾಲು ಕಟ್ಟಿ ಅಧಿಕಾರದಿಂದ ದೂರ ಬಿಸಾಡುವಷ್ಟು ಶಕ್ತಿವಂತರು ನಮ್ಮ ಊರಿನಲ್ಲಿದ್ದಾರೆ. ಅಷ್ಟು ಪ್ರಬಾವಿಗಳು ಯಾರು ಎಂದು ನೀವು ಕೇಳಬಹುದು. ನಿಮಗೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವ ಧೈರ್ಯ ಇದೆಯೊ, ಇಲ್ಲವೊ. ಆದರೆ ಅಂತವರ ಹೆಸರುಗಳನ್ನು ನೀವು ಹುಡುಕಿ ಹೋಗುವ ಅವಶ್ಯಕತೆ ಇಲ್ಲ. ನಾನೇ ಕೊಡುತ್ತೇನೆ.

ಮೊದಲನೇಯದಾಗಿ ನೀವು ಮಂಗಳೂರು ವಿಮಾನ ನಿಲ್ದಾಣದಿಂದ ಮನಪಾ ಕಚೇರಿಗೆ ಬರುವ ದಾರಿಯಲ್ಲಿ ಕಾವೂರು ರಸ್ತೆಯಲ್ಲಿ ಅತೀ ಹೆಚ್ಚು ಹೋರ್ಡಿಂಗ್ಸ್ ನೋಡಿರಬಹುದು. ಅದರಲ್ಲಿ 90% ಹೋರ್ಡಿಂಗ್ಸ್ CILA. ಅಂದರೆ ಅತೀ ಹೆಚ್ಚು ಅನಧಿಕ್ರತ ಹೋರ್ಡಿಂಗ್ ಇವರದ್ದು ಇವರ ಅಕ್ರಮದ ವಿರುದ್ಧ ಕ್ರಮ ಕೈಗೊಳ್ಳಲು ಏನು ಹೆದರಿಕೆ ಎಂದು ಕೇಳಬಹುದು. ಸ್ವಾಮಿ, ಕಥೆ ಅಷ್ಟೇ ಅಲ್ಲ. ಇವರು ಮಂಗಳೂರು ನಗರ ಕಾಂಗ್ರೆಸ್ನ ಮಾಜಿ ಶಾಸಕರ ಹತ್ತಿರದ ಸಂಬಂದಿ ಈಗ ಹೇಳಿ, ಕ್ರಮ ತೆಗೆದುಕೊಳ್ಳಲು ಸಾಧ್ಯಾನಾ? ಯಾಕೆಂದರೆ ನೀವು ಕೈ ಹಾಕಲು ಹೊರಡುವ ಹೋರ್ಡಿಂಗ್ ಗೋಲ್ ಮಾಲ್ ವಿಷಯ ಚಿಕ್ಕದಲ್ಲವೇ ಅಲ್ಲ. ಬೇಕಾದರೆ ಒಂದು ಉದಾಹರಣೆ ಕೊಡುತ್ತೇನೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಮೂರು ಸಾವಿರ ಕೋಟಿ ಹೋರ್ಡಿಂಗ್ಸ್ ಗೋಲ್ ಮಾಲ್ ಆಗಿದೆ ಎನ್ನುವ ದೂರು ಈ ಹಿಂದೆ ಲೋಕಾಯುಕ್ತರಿಗೆ ಹೋಗಿತ್ತು. ಲೋಕಾಯುಕ್ತರು ಆ ಕಡತಗಳನ್ನು ತರಿಸಿ ಪರಿಶೀಲಿಸಿದರು. ಆದರೆ ಆ ಬಗ್ಗೆ ತನಿಖೆ ಯಾಕೋ ಪ್ರಾರಂಭವಾಗಲು ತಡವಾಗುತ್ತಿತ್ತು. ನಂತರ ಈ ಬಗ್ಗೆ ಶೀಘ್ರ ತನಿಖೆ ಆಗಬೇಕೆಂದು ಮತ್ತೊಂದು ದೂರು ಲೋಕಾಯುಕ್ತರಿಗೆ ಹೋಯಿತು. ಆಗ ಲೋಕಾಯುಕ್ತರು ಈ ಬಗ್ಗೆ ತನಿಖೆ ಮಾಡಿ ವರದಿ ಕೊಡುವಂತೆ ಬಿಬಿಎಂಪಿ ಕಮೀಷನರ್ ಅವರಿಗೆ ಆದೇಶ ನೀಡಿದರು. ಕಮೀಷನರ್ ಅವರು ಬಿಬಿಎಂಪಿ ಸಹಾಯಕ ಆಯುಕ್ತ ಮಥಾಯಿ ಅವರಿಗೆ ಈ ಜವಾಬ್ದಾರಿ ಹೊರಿಸಿದರು. ತನಗೆ ಸಿಕ್ಕ ಹೊಣೆಯ ಅಂದಾಜು ಮಥಾಯಿ ಅವರಿಗೆ ಇತ್ತು. ಮೂರು ಸಾವಿರ ಕೋಟಿಯ ಹಗರಣವನ್ನು ಎಲ್ಲಿಂದ ಪ್ರಾರಂಭಿಸುವುದು ಎನ್ನುವುದೇ ಅವರ ಮುಂದಿದ್ದ ದೊಡ್ಡ ಸವಾಲಾಗಿತ್ತು. ಅವರು ಮೊದಲು ಕೈ ಹಾಕಿದ್ದೇ ಬೆಂಗಳೂರಿನ ಶಾಂತಿ ನಗರ ವಿಧಾನಸಭಾ ಕ್ಷೇತ್ರದ ಒಂದು ward ನ survey ಮಾಡುವ ಮೂಲಕ. ತನಿಖೆಯ ಬಳಿಕ ಬಂದ ವರದಿ ನೋಡಿ ಇಡೀ ಬಿಬಿಎಂಪಿ ಒಮ್ಮೆ ದಂಗಾಯಿತು. ಕೇವಲ ಒಂದು wardನಲ್ಲಿ ಹಾಕಿರುವ ಅನಧಿಕೃತ ಹೋರ್ಡಿಂಗ್ಸ್ ನಿಂದ ಪಾಲಿಕೆಗೆ ಸೋರಿ ಹೋಗುತ್ತಿರುವ ವರ್ಷದ ಆದಾಯ ಕನಿಷ್ಟ ಮೂರರಿಂದ ನಾಲ್ಕುವರೆ ಕೋಟಿ ರೂಪಾಯಿ ಗಳು. ಒಂದು ವಿಧಾನಸಭಾ ಕ್ಷೇತ್ರದ ಒಂದು ward ನ ಕಥೆಯೇ ಹೀಗಾದರೆ ಇಡೀ ಬಿಬಿಎಂಪಿಯಲ್ಲಿ ಲೆಕ್ಕಕ್ಕೆ ಸಿಗದ ಆದಾಯ ಎಷ್ಟಿರಬಹುದು ಎನ್ನುವುದು. ಬೆಂಗಳೂರಿನ ಒಟ್ಟು ವಿಸ್ತ್ರೀಣದ ಅಂದಾಜು ಇರುವವರಿಗೆ ಗೊತ್ತೇ ಇರುತ್ತದೆ. ಮಂಗಳೂರು ಪಾಲಿಕೆಯಲ್ಲಿ ವಾರ್ಷಿಕ ಒಟ್ಟು ಸುಮರು ನಾಲ್ಕು ಕೋಟಿ ರೂಪಾಯಿ ಸೋರಿಕೆ ಯಾಗುತ್ತಿದೆ .ಅದೇನೆ ಇರಲಿ, ನೀವು ಒಳ್ಳೆಯ ಕೆಲಸ ಮಾಡಿದರೆ ನಿಮ್ಮ ಬೆಂಬಲಕ್ಕೆ ಮಂಗಳೂರಿನ ಪ್ರಜ್ಞಾವಂತ ನಾಗರಿಕರು ಇದ್ದೇ ಇರುತ್ತಾರೆ. ನೀವಿಬ್ಬರೂ ಅಕ್ರಮ ಹೋರ್ಡಿಂಗ್ಸ್ಗೆ ಕೈ ಹಾಕಲು ರೆಡಿ ಎಂದರೆ ಅದರ ಸಂಪೂರ್ಣ ದಾಖಲೆ ಹಿಡಿದು ನಾನೇ ನಿಮ್ಮ ಬಳಿ ಬರುತ್ತೇನೆ. ಅಂದ ಹಾಗೆ CILA ಬಿಟ್ಟರೆ ಇನ್ನೂ ಕೂಡ ಮೂರ್ನಾಕ್ಕು ಜಾಹೀರಾತು ಏಜೆನ್ಸಿಯವರು ಕೂಡ ಈ ಹೋರ್ಡಿಂಗ್ಸ್ ಗೋಲ್ ಮಾಲ್ ನಲ್ಲಿ ಇದ್ದಾರೆ ಎಲ್ಲ ದಾಖಲೆಗಳೂ ಕೂಡ ಇದೆ Gee Dee, JYOTHI ADVT , Kalkura Advt . ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?ಹೊಸ ಅಯುಕ್ತರು ಮನಸ್ಸು ಮಾಡುವರೆ?

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search