• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ಜಾಹೀರಾತು ಏಜೆನ್ಸಿಗಳು ಪಾಲಿಕೆಯಿಂದ ಅನುಮತಿ ಪಡೆಯದೆ,ಸುಳ್ಳು ದಾಖಲೆ ಸಷ್ಟಿಸಿ ಪಾಲಿಕೆಗೆ ಕೊಟ್ಯಂತರ ರೂಪಾಯಿ ಹಿಡಿಸುತ್ತಾರೆ ಹೊಸ ಸರಕಾರಕ್ಕೆ ಕ್ರಮ ಕೈಗೊಳ್ಳಲು ಧೈರ್ಯ ಇದೆಯಾ?

Hanumantha Kamath Posted On September 9, 2020
0


0
Shares
  • Share On Facebook
  • Tweet It

ಹೊಸ ರಾಜ್ಯ ಸರಕಾರ ಬಂದಿದೆ ಹೊರ್ಡಿಂಗ್ ಗೊಲ್ಮಲ್ ನಿಂದ ಮಂಗಳೂರು ಮಹಾನಗರ ಪಾಲಿಕೆಗೆ ಕೊಟ್ಯಂತರ ರೂಪಾಯಿ ನಷ್ಟವಾಗುತ್ತಿದೆ ಹೊಸ ರಾಜ್ಯ ಸರಕಾರ ಮನಸ್ಸು ಮಾಡಿ ತನಿಖೆ ನಡಿಸಬೇಕು. ಪಾಲಿಕೆ ವ್ಯಾಪ್ತಿಯ ಇಬ್ಬರು ಶಾಸಕರು ತನಿಖೆ ನಡೆಸುವಂತೆ ಸರಕಾರದಿಂದ ಆದೇಶ ಮಾಡಿಸಿ ಪಾಲಿಕೆಯ ಸೋರಿ ಹೋಗುತ್ತಿರುವ ಆದಾಯವನ್ನು ಉಳಿಸುವಂತಹ ಹತ್ತು ಹಲವು ಜವಾಬ್ದಾರಿಗಳು ಇವರುಗಳ ಮುಂದೆ ಇದೆ. ಇಬ್ಬರೂ ಪಾಲಿಕೆ ಕಚೇರಿಯಲ್ಲೇ ತಮ್ಮ ಕಚೇರಿ ಮಾಡಿರುವುದರಿಂದ ಮನಸ್ಸು ಮಾಡಿದರೆ ಪಾಲಿಕೆಯ ಹೊರ್ಡಿಂಗ್ ನಲ್ಲಿ ಅಗುತ್ತಿರುವ ಕೊಟ್ಯಂತರ ರೂಪಾಯಿ ಸೊರಿಕೆಯನ್ನು ತಡೆಗಟ್ಟಬಹುದು ಮೊದಲಾದರೆ ಇವರ ಸರಕಾರ ಇರಲ್ಲಿಲ್ಲ ಇವರದೇ ಸರಕಾರ ಬಂದು ಒಂದು ವರ್ಷ ಕಳೆಯಿತು ಏನು ಮಾಡುತ್ತಿದ್ದಾರೆ ಶಾಸಕದ್ವರುಇಚ್ಚಾಶಕ್ತಿ ಬೇಕು ಅಷ್ಟೆ ಆದರೆ ಮನಪಾ ಬಗ್ಗೆ ಒಂದು ಚಿಕ್ಕ ಪೀಠಿಕೆ ಹೇಳುವುದು ಜವಾಬ್ದಾರಿಯುತ ನಾಗರಿಕನಾಗಿ ನನ್ನ ಕರ್ತವ್ಯ ಅದೆನೆಂದರೆ ಮಾನ್ಯ ಶಾಸಕರುಗಳೇ ನಾನು ಕಳೆದ ಕೆಲವು ದಿನಗಳಿಂದ ಸರಣಿಯಲ್ಲಿ ಬರೆಯುತ್ತಿರುವ ಹೋರ್ಡಿಂಗ್ಸ್ ಗೋಲ್ ಮಾಲ್ ನ ಕೊನೆಯ ಲೇಖನವನ್ನು ನಿಮಗೆ ಒಪ್ಪಿಸಿ, ನಂತರ ನಾನು ಬೇರೆ ವಿಷಯಗಳಿಗೆ ತೆರಳುತ್ತೇನೆ. ನೀವು ಮನಸ್ಸು ಮಾಡಿದರೆ ಈ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಂಡು ಪಾಲಿಕೆಗೆ ಆಗುತ್ತಿರುವ ಆದಾಯ ನಷ್ಟವನ್ನು ತಪ್ಪಿಸಬಹುದು. ಆದರೆ ಒಂದು ವಿಷಯ ನೆನಪಿರಲಿ. ನಿಮಗೆ ಮಂಗಳೂರು ಮಹಾನಗರ ಪಾಲಿಕೆಯಲ್ಲಿಯ ಸೋರಿಕೆಗಳನ್ನು ತಡೆಗಟ್ಟಿ ಆ ಹಣ ವನ್ನು ಅಭಿವ್ರದ್ದಿ ಕಾರ್ಯಗಳಿಗೆ ಉಪಯೋಗಿಸ ಬಹುದುಎನ್ನುವ ಗುರಿ ಇದ್ದರೆ ಹೋರ್ಡಿಂಗ್ ಗೋಲ್ ಮಾಲ್ ವಿರುದ್ಧ ಕ್ರಮ ಕೈಗೊಳ್ಳಿ ಯಾಕೆಂದರೆ ಮನಪಾ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಹೋರ್ಡಿಂಗ್ ಗೋಲ್ ಮಾಲ್ ಮಾಡುತ್ತಾ, ಅದರ ಸುದ್ದಿಗೆ ಬರುವ ಅಧಿಕಾರಿಗಳ ಕೈ ಕಾಲು ಕಟ್ಟಿ ಅಧಿಕಾರದಿಂದ ದೂರ ಬಿಸಾಡುವಷ್ಟು ಶಕ್ತಿವಂತರು ನಮ್ಮ ಊರಿನಲ್ಲಿದ್ದಾರೆ. ಅಷ್ಟು ಪ್ರಬಾವಿಗಳು ಯಾರು ಎಂದು ನೀವು ಕೇಳಬಹುದು. ನಿಮಗೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವ ಧೈರ್ಯ ಇದೆಯೊ, ಇಲ್ಲವೊ. ಆದರೆ ಅಂತವರ ಹೆಸರುಗಳನ್ನು ನೀವು ಹುಡುಕಿ ಹೋಗುವ ಅವಶ್ಯಕತೆ ಇಲ್ಲ. ನಾನೇ ಕೊಡುತ್ತೇನೆ.

ಮೊದಲನೇಯದಾಗಿ ನೀವು ಮಂಗಳೂರು ವಿಮಾನ ನಿಲ್ದಾಣದಿಂದ ಮನಪಾ ಕಚೇರಿಗೆ ಬರುವ ದಾರಿಯಲ್ಲಿ ಕಾವೂರು ರಸ್ತೆಯಲ್ಲಿ ಅತೀ ಹೆಚ್ಚು ಹೋರ್ಡಿಂಗ್ಸ್ ನೋಡಿರಬಹುದು. ಅದರಲ್ಲಿ 90% ಹೋರ್ಡಿಂಗ್ಸ್ CILA. ಅಂದರೆ ಅತೀ ಹೆಚ್ಚು ಅನಧಿಕ್ರತ ಹೋರ್ಡಿಂಗ್ ಇವರದ್ದು ಇವರ ಅಕ್ರಮದ ವಿರುದ್ಧ ಕ್ರಮ ಕೈಗೊಳ್ಳಲು ಏನು ಹೆದರಿಕೆ ಎಂದು ಕೇಳಬಹುದು. ಸ್ವಾಮಿ, ಕಥೆ ಅಷ್ಟೇ ಅಲ್ಲ. ಇವರು ಮಂಗಳೂರು ನಗರ ಕಾಂಗ್ರೆಸ್ನ ಮಾಜಿ ಶಾಸಕರ ಹತ್ತಿರದ ಸಂಬಂದಿ ಈಗ ಹೇಳಿ, ಕ್ರಮ ತೆಗೆದುಕೊಳ್ಳಲು ಸಾಧ್ಯಾನಾ? ಯಾಕೆಂದರೆ ನೀವು ಕೈ ಹಾಕಲು ಹೊರಡುವ ಹೋರ್ಡಿಂಗ್ ಗೋಲ್ ಮಾಲ್ ವಿಷಯ ಚಿಕ್ಕದಲ್ಲವೇ ಅಲ್ಲ. ಬೇಕಾದರೆ ಒಂದು ಉದಾಹರಣೆ ಕೊಡುತ್ತೇನೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಮೂರು ಸಾವಿರ ಕೋಟಿ ಹೋರ್ಡಿಂಗ್ಸ್ ಗೋಲ್ ಮಾಲ್ ಆಗಿದೆ ಎನ್ನುವ ದೂರು ಈ ಹಿಂದೆ ಲೋಕಾಯುಕ್ತರಿಗೆ ಹೋಗಿತ್ತು. ಲೋಕಾಯುಕ್ತರು ಆ ಕಡತಗಳನ್ನು ತರಿಸಿ ಪರಿಶೀಲಿಸಿದರು. ಆದರೆ ಆ ಬಗ್ಗೆ ತನಿಖೆ ಯಾಕೋ ಪ್ರಾರಂಭವಾಗಲು ತಡವಾಗುತ್ತಿತ್ತು. ನಂತರ ಈ ಬಗ್ಗೆ ಶೀಘ್ರ ತನಿಖೆ ಆಗಬೇಕೆಂದು ಮತ್ತೊಂದು ದೂರು ಲೋಕಾಯುಕ್ತರಿಗೆ ಹೋಯಿತು. ಆಗ ಲೋಕಾಯುಕ್ತರು ಈ ಬಗ್ಗೆ ತನಿಖೆ ಮಾಡಿ ವರದಿ ಕೊಡುವಂತೆ ಬಿಬಿಎಂಪಿ ಕಮೀಷನರ್ ಅವರಿಗೆ ಆದೇಶ ನೀಡಿದರು. ಕಮೀಷನರ್ ಅವರು ಬಿಬಿಎಂಪಿ ಸಹಾಯಕ ಆಯುಕ್ತ ಮಥಾಯಿ ಅವರಿಗೆ ಈ ಜವಾಬ್ದಾರಿ ಹೊರಿಸಿದರು. ತನಗೆ ಸಿಕ್ಕ ಹೊಣೆಯ ಅಂದಾಜು ಮಥಾಯಿ ಅವರಿಗೆ ಇತ್ತು. ಮೂರು ಸಾವಿರ ಕೋಟಿಯ ಹಗರಣವನ್ನು ಎಲ್ಲಿಂದ ಪ್ರಾರಂಭಿಸುವುದು ಎನ್ನುವುದೇ ಅವರ ಮುಂದಿದ್ದ ದೊಡ್ಡ ಸವಾಲಾಗಿತ್ತು. ಅವರು ಮೊದಲು ಕೈ ಹಾಕಿದ್ದೇ ಬೆಂಗಳೂರಿನ ಶಾಂತಿ ನಗರ ವಿಧಾನಸಭಾ ಕ್ಷೇತ್ರದ ಒಂದು ward ನ survey ಮಾಡುವ ಮೂಲಕ. ತನಿಖೆಯ ಬಳಿಕ ಬಂದ ವರದಿ ನೋಡಿ ಇಡೀ ಬಿಬಿಎಂಪಿ ಒಮ್ಮೆ ದಂಗಾಯಿತು. ಕೇವಲ ಒಂದು wardನಲ್ಲಿ ಹಾಕಿರುವ ಅನಧಿಕೃತ ಹೋರ್ಡಿಂಗ್ಸ್ ನಿಂದ ಪಾಲಿಕೆಗೆ ಸೋರಿ ಹೋಗುತ್ತಿರುವ ವರ್ಷದ ಆದಾಯ ಕನಿಷ್ಟ ಮೂರರಿಂದ ನಾಲ್ಕುವರೆ ಕೋಟಿ ರೂಪಾಯಿ ಗಳು. ಒಂದು ವಿಧಾನಸಭಾ ಕ್ಷೇತ್ರದ ಒಂದು ward ನ ಕಥೆಯೇ ಹೀಗಾದರೆ ಇಡೀ ಬಿಬಿಎಂಪಿಯಲ್ಲಿ ಲೆಕ್ಕಕ್ಕೆ ಸಿಗದ ಆದಾಯ ಎಷ್ಟಿರಬಹುದು ಎನ್ನುವುದು. ಬೆಂಗಳೂರಿನ ಒಟ್ಟು ವಿಸ್ತ್ರೀಣದ ಅಂದಾಜು ಇರುವವರಿಗೆ ಗೊತ್ತೇ ಇರುತ್ತದೆ. ಮಂಗಳೂರು ಪಾಲಿಕೆಯಲ್ಲಿ ವಾರ್ಷಿಕ ಒಟ್ಟು ಸುಮರು ನಾಲ್ಕು ಕೋಟಿ ರೂಪಾಯಿ ಸೋರಿಕೆ ಯಾಗುತ್ತಿದೆ .ಅದೇನೆ ಇರಲಿ, ನೀವು ಒಳ್ಳೆಯ ಕೆಲಸ ಮಾಡಿದರೆ ನಿಮ್ಮ ಬೆಂಬಲಕ್ಕೆ ಮಂಗಳೂರಿನ ಪ್ರಜ್ಞಾವಂತ ನಾಗರಿಕರು ಇದ್ದೇ ಇರುತ್ತಾರೆ. ನೀವಿಬ್ಬರೂ ಅಕ್ರಮ ಹೋರ್ಡಿಂಗ್ಸ್ಗೆ ಕೈ ಹಾಕಲು ರೆಡಿ ಎಂದರೆ ಅದರ ಸಂಪೂರ್ಣ ದಾಖಲೆ ಹಿಡಿದು ನಾನೇ ನಿಮ್ಮ ಬಳಿ ಬರುತ್ತೇನೆ. ಅಂದ ಹಾಗೆ CILA ಬಿಟ್ಟರೆ ಇನ್ನೂ ಕೂಡ ಮೂರ್ನಾಕ್ಕು ಜಾಹೀರಾತು ಏಜೆನ್ಸಿಯವರು ಕೂಡ ಈ ಹೋರ್ಡಿಂಗ್ಸ್ ಗೋಲ್ ಮಾಲ್ ನಲ್ಲಿ ಇದ್ದಾರೆ ಎಲ್ಲ ದಾಖಲೆಗಳೂ ಕೂಡ ಇದೆ Gee Dee, JYOTHI ADVT , Kalkura Advt . ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?ಹೊಸ ಅಯುಕ್ತರು ಮನಸ್ಸು ಮಾಡುವರೆ?

0
Shares
  • Share On Facebook
  • Tweet It


- Advertisement -


Trending Now
ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಅರ್ಜಿ: ಅರುಣ್ ಶ್ಯಾಮ್ ವಾದ...
Hanumantha Kamath June 20, 2025
ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
Hanumantha Kamath June 18, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಅರ್ಜಿ: ಅರುಣ್ ಶ್ಯಾಮ್ ವಾದ...
    • ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
    • ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
    • ಭೀಕರ ರಸ್ತೆ ಅಪಘಾತ- ದಕ ಜಿಲ್ಲಾ NSUI ಉಪಾಧ್ಯಕ್ಷ ಸೇರಿ ಇಬ್ಬರು ಯುವಕರು ಸಾವು!
    • ವಿಮಾನ ದುರಂತ ಸ್ಥಳದಲ್ಲಿ ಸಿಕ್ಕಿವೆ ಸಾಕಷ್ಟು ಚಿನ್ನ, ಹಣ, ಭಗವದ್ಗೀತೆ!
    • ಲಂಡನ್ನಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಕೊನೆಯ ಕ್ಷಣದಲ್ಲಿ ಪ್ರಯಾಣ ರದ್ದು!
    • ಗಿರೀಶ್ ಭಾರದ್ವಾಜ್ ಮನವಿಗೆ ಸ್ಪಂದನೆ: ಹಿಂದೂ ಮುಖಂಡರ ರಾತ್ರಿ ಮನೆ ಭೇಟಿಯ ಬಗ್ಗೆ ವರದಿ ಕೇಳಿದ ಪೊಲೀಸ್ ದೂರು ಪ್ರಾಧಿಕಾರ!
    • ಹಿಂದೂಗಳು 3 ಮಕ್ಕಳನ್ನು ಹೆರಲು ಕೊಪ್ಪಳದಲ್ಲಿ ತೊಗಾಡಿಯಾ ಕರೆ!
    • ಬೈಕ್ ಟ್ಯಾಕ್ಸಿ ಬ್ಯಾನ್ ನಿಂದ ಬೆಂಗಳೂರಿನ 1 ಲಕ್ಷ ಯುವಕರ ಉದ್ಯೋಗಕ್ಕೆ ಕುತ್ತು!
    • ಯುಪಿಐನಲ್ಲಿ ಇನ್ನು ಹಣ ವರ್ಗಾವಣೆಗೆ 15 ಸೆಕೆಂಡ್ ಸಾಕು!
  • Popular Posts

    • 1
      ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಅರ್ಜಿ: ಅರುಣ್ ಶ್ಯಾಮ್ ವಾದ...
    • 2
      ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
    • 3
      ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
    • 4
      ಭೀಕರ ರಸ್ತೆ ಅಪಘಾತ- ದಕ ಜಿಲ್ಲಾ NSUI ಉಪಾಧ್ಯಕ್ಷ ಸೇರಿ ಇಬ್ಬರು ಯುವಕರು ಸಾವು!
    • 5
      ವಿಮಾನ ದುರಂತ ಸ್ಥಳದಲ್ಲಿ ಸಿಕ್ಕಿವೆ ಸಾಕಷ್ಟು ಚಿನ್ನ, ಹಣ, ಭಗವದ್ಗೀತೆ!

  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search