• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ಪಾಲಿಕೆ ಜಾಗ ಅಡವಿಟ್ಟು ಸಂತ್ರಸ್ತರಿಗೆ ಪರಿಹಾರ ನೀಡುವ ಪರಿಸ್ಥಿತಿ ಇದೆ!!

Tulunadu News Posted On October 15, 2020
0


0
Shares
  • Share On Facebook
  • Tweet It

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಸರಕಾರ ಇದೆ. ರಾಜ್ಯದಲ್ಲಿ ಬಿಜೆಪಿ ಸರಕಾರ ಇದೆ. ಕೇಂದ್ರದಲ್ಲಿ ಬಿಜೆಪಿ ಆಡಳಿತ ಇದೆ. ಇನ್ನೆಲ್ಲಿ ಬರಲು ಮಂದಾರ ಜನ ಕಾಯಬೇಕು. ಕೇಂದ್ರದಲ್ಲಿ ಕುಳಿತು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಉದ್ದಿಮೆ ಚೇತರಿಸಲು ಕ್ಯಾಲ್ಕುಲೇಟರ್ ನಲ್ಲಿ ಬರದಷ್ಟು ಸಂಖ್ಯೆಗಳನ್ನು ಪರಿಹಾರವಾಗಿ ಘೋಷಿಸುತ್ತಿದ್ದಾರೆ. ರಾಜ್ಯದಲ್ಲಿ ಬಡವರ, ರೈತರ ಬಂಧು ಯಡಿಯೂರಪ್ಪನವರಿದ್ದಾರೆ. ಪಾಲಿಕೆ ವ್ಯಾಪ್ತಿಯಲ್ಲಿ ಕಾಮಧೇನು ಶಾಸಕರಿದ್ದಾರೆ. ಇನ್ನೆಷ್ಟು ದಿನ ಕಾದರೆ ಪಚ್ಚನಾಡಿ ತ್ಯಾಜ್ಯದ ಸಮಸ್ಯೆ ಪರಿಹಾರವಾಗುತ್ತದೆ ಎನ್ನುವುದನ್ನು ಯಾರಾದರೂ ಹೇಳಬೇಕು. ಇವರು ಹೇಳುವುದಿಲ್ಲ ಎಂದು ಗೊತ್ತಾದ ಕಾರಣ ರಾಜ್ಯದ ಉಚ್ಚ ನ್ಯಾಯಾಲಯವೇ ಸರಕಾರದ ಬಾಯಿಗೆ ಕೋಲು ಹಾಕಿ ಕೇಳಿದೆ. ಆದರೆ ಪಾಪ ಪಾಲಿಕೆಯ ಬಳಿ ಹಣವಿಲ್ಲ. ಇಷ್ಟು ದಿನ ಅದು ರಾಜ್ಯ ಸರಕಾರದತ್ತ ಮುಖ ಮಾಡಿ ಕುಳಿತಿತ್ತು. ಒಟ್ಟು ಬೇಕಾಗಿದ್ದ ಹಣ 22 ಕೋಟಿ. ಸರಕಾರ ಪಾಲಿಕೆಯ ಗೋಳು ಕಂಡು 8 ಕೋಟಿ ನೀಡಿತ್ತು. ಅಷ್ಟಕ್ಕೂ ಆ 22 ಕೋಟಿ ಯಾವುದಕ್ಕೆ ಎನ್ನುವುದನ್ನು ನಿಮ್ಮ ಗಮನಕ್ಕೆ ತರುತ್ತೇನೆ. ಪಚ್ಚನಾಡಿಯ ತ್ಯಾಜ್ಯ ಭಾರೀ ಮಳೆಗೆ ಜಾರಿ ಹೋಗಿ ಕೆಳಗೆ ಮಂದಾರ ಎನ್ನುವ ಪ್ರದೇಶದ ಅನೇಕ ಕುಟುಂಬಗಳ ಕೃಷಿ ಭೂಮಿಗೆ ಹಾನಿ ಮಾಡಿದೆ. ಅವರ ಮನೆಗಳಿಗೆ ಹಾನಿ ಮಾಡಿದೆ. ಅವರ ಬೆಳೆಗಳಿಗೆ ಹಾನಿ ಮಾಡಿರುವುದು, ಕೃಷಿ ಭೂಮಿಗೆ ಹಾನಿ ಮಾಡಿರುವುದು, ಅವರಿಗೆ ಅಲ್ಲಿಂದ ಬೇರೆ ಸ್ವಂತ ಮನೆಗಳಿಗೆ ಸ್ಥಳಾಂತರ ಮಾಡುವುದು ಅಥವಾ ಅವರ ಜಾಗವನ್ನು ಖರೀದಿ ಮಾಡಿ ಯೋಗ್ಯ ಬೆಲೆ ಕೊಡುವುದು ಹಾಗೂ ಅಂತಿಮವಾಗಿ ಅಲ್ಲೊಂದು ಬೃಹತ್ ತಡೆಗೋಡೆ ಕಟ್ಟುವುದು ಸೇರಿದಂತೆ ಎಲ್ಲಾ ಕೆಲಸಗಳಿಗೆ ಒಟ್ಟು 22 ಕೋಟಿ ರೂಪಾಯಿ ಹಣ ಬೇಕಾಗಲಿದೆ. ಪಾಲಿಕೆಗೆ ರಾಜ್ಯ ಸರಕಾರ ಬಿಡುಗಡೆ ಮಾಡಿದ್ದು 8 ಕೋಟಿ.

ಆ ಹಣದಲ್ಲಿ ಪಾಲಿಕೆಯವರು ಮೊದಲು ನಾಲ್ಕು ಕೋಟಿ ರೂಪಾಯಿ ವೆಚ್ಚದಲ್ಲಿ ತಡೆಗೋಡೆ ಕಟ್ಟಿಬಿಟ್ಟರು. ಉಳಿದ ಹಣದಲ್ಲಿ ಆ ಸಂತ್ರಸ್ತರ ಬೆಳೆ ನಾಶಕ್ಕೆ ಆದ 2 ಕೋಟಿ 52 ಲಕ್ಷ ರೂಪಾಯಿಗಳನ್ನು ಕೊಟ್ಟರು. ಹೇಗೂ ಅಲ್ಲಿ ಸಂತ್ರಸ್ತರಾದವರನ್ನು ಅಲ್ಲಿಂದ ಸರಕಾರದ ಹೌಸಿಂಗ್ ಬೋರ್ಡ್ ಅಪಾರ್ಟ್ ಮೆಂಟಿಗೆ ಸ್ಥಳಾಂತರಿಸಿ ಕೈತೊಳೆದುಕೊಂಡು ಬಿಟ್ಟಿದ್ದರು. ಆದರೆ ಇಲ್ಲಿ ಮೊದಲು ಆಗಬೇಕಾದದ್ದನ್ನು ಮಾಡಲೇ ಇಲ್ಲ. ಕೊನೆಯಲ್ಲಿ ಆಗಬೇಕಾದ ತಡೆಗೋಡೆಯನ್ನು ಮೊದಲು ಕಟ್ಟಿಬಿಟ್ಟರು. ಯಾಕೆ ಹೇಳಿ? ಗೋಡೆ ಕಟ್ಟಿದರೆ ನಾಲ್ಕು ಕೋಟಿಯಲ್ಲಿ ಬೇಕಾದಷ್ಟು ತಿನ್ನಲು ಹಣ ಹೊಡೆಯುವ ಅವಕಾಶ ಇದೆ. ಅದೇ ನಾಲ್ಕು ಕೋಟಿಯಲ್ಲಿ ಸಂತ್ರಸ್ತರಿಗೆ ಮನೆ ಕಟ್ಟಿಸಿಕೊಳ್ಳಲು ಹಣ ಕೊಟ್ಟರೆ ಸಂತ್ರಸ್ತರು ಹತ್ತು ರೂಪಾಯಿ ಕೂಡ ಕೊಡುವುದಿಲ್ಲ. ಈ ಎಲ್ಲಾ ನಾಟಕಗಳಿಂದ ಬೇಸತ್ತ ಸಂತ್ರಸ್ತರು ಕೋರ್ಟಿಗೆ ಹೋಗಿದ್ದಾರೆ.
ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಮೊತ್ತ ನೀಡುವುದಕ್ಕಾಗಿ ಅಗತ್ಯ ಮೊತ್ತ ಕ್ರೋಢಿಕರಿಸಲು ಪಾಲಿಕೆಯ ಸ್ಥಿರಾಸ್ತಿಯನ್ನು ಅಡವು ಇರಿಸಿ ಬ್ಯಾಂಕಿನಿಂದ ಸಾಲ ಪಡೆಯಲು ಮಂಗಳೂರು ಮಹಾನಗರ ಪಾಲಿಕೆಗೆ ಅನುಮತಿ ನೀಡಿ ಎಂದು ಹೈಕೋರ್ಟ್ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ. ಅಷ್ಟೇ ಅಲ್ಲದೆ ಇದು ಒಂದು ವಾರದಲ್ಲಿ ಆಗಬೇಕು ಎಂದು ಕೂಡ ಹೇಳಿದೆ. ಅದರೊಂದಿಗೆ 22 ಕೋಟಿ ರೂಪಾಯಿಗಳಲ್ಲಿ 14 ಕೋಟಿ ರೂಪಾಯಿಗಳನ್ನು ಯಾಕೆ ಪಾವತಿಸಿಲ್ಲ ಎಂದು ಹೇಳಬೇಕು ಎಂದು ಸೂಚನೆ ನೀಡಿದೆ. ಇಲ್ಲಿ ರಾಜ್ಯ ಸರಕಾರದ ನಿರ್ಲಕ್ಷ್ಯ ಎದ್ದು ಕಾಣುತ್ತದೆ. ಅಲ್ಲಿ ಈ ಪರಿಸ್ಥಿತಿ ಬರಲು ಹಿಂದಿನ ಕಾಂಗ್ರೆಸ್ ಆಡಳಿತದ ಪಾಲಿಕೆ ಕಾರಣ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ಆ ದುರ್ಘಟನೆ ನಡೆಯುವಾಗ ರಾಜ್ಯದಲ್ಲಿ ಚೌಚೌ ಸರಕಾರ ಇತ್ತು. ಅವರಿಗಂತೂ ನಮ್ಮ ಮಂಗಳೂರಿನ ಮೇಲೆ ಒಂದು ಚೂರು ಪ್ರೀತಿ ಇಲ್ಲ ಎನ್ನುವುದನ್ನು ನಾವು ನೋಡಿದ್ದೇವೆ. ಅದರಿಂದ ಬೇಸತ್ತ ಮತದಾರರು ಈ ಬಾರಿ ಎಂಟರಲ್ಲಿ ಏಳು ಬಿಜೆಪಿ ಶಾಸಕರನ್ನು ಆರಿಸಿದ್ದು. ಮೊದಲಿಗೆ ಒಂದು ವರ್ಷ ಇವರ ನಸೀಬಿನಲ್ಲಿ ಆಡಳಿತ ಸಿಕ್ಕಿಲ್ಲ. ಈಗ ಆಡಳಿತ ದೊರಕಿ 15 ತಿಂಗಳು ಕಳೆದಿದೆ.
ಪಾಲಿಕೆಯಲ್ಲಿ ಅಷ್ಟು ಹಣ ಇಲ್ಲ ಎನ್ನುವುದು ನಿಜ, ಆದರೆ ರಾಜ್ಯ ಸರಕಾರ ಮಲಗಿದೆಯಾ? ತಿಂಗಳಿಗೊಮ್ಮೆ ಗುಜರಾತ್, ಇಂದೋರ್, ಕೊಯಂಬೂತ್ತೂರು ಸಹಿತ ವಿವಿದೆಡೆಯಿಂದ ತಜ್ಞರು ಬಂದು ಇದನ್ನು ನೋಡಿ ಇದನ್ನು ಹೇಗೆ ಸರಿ ಮಾಡಬಹುದು ಎನ್ನುವುದರ ಕುರಿತು ತಾಂತ್ರಿಕ ಮಾರ್ಗದರ್ಶನ ನೀಡಿ ಹೋಗುತ್ತಾರೆ. ಆದರೆ ಇನ್ನು ಕೂಡ ಏನೂ ಆಗಿಲ್ಲ. ಸದ್ಯ ಪಾಲಿಕೆ ತನ್ನ ಆಸ್ತಿ ಅಡವಿಟ್ಟು ಹಣ ಸಂತ್ರಸ್ತರಿಗೆ ನೀಡಲು ತಯಾರಾಗಿದೆ. ಒಪ್ಪಿಗೆ ನೀಡದೆ ರಾಜ್ಯ ಸರಕಾರಕ್ಕೂ ವಿಧಿಯಿಲ್ಲ. ಅದರ ನಂತರ ಆ ತ್ಯಾಜ್ಯ ಎತ್ತಿ ಅಲ್ಲಿ ಪರಿಸ್ಥಿತಿಯನ್ನು ಸರಿ ಮಾಡಬೇಕು. ಇದೆಲ್ಲ ಆಗುವಾಗ ಇನ್ನೆಷ್ಟು ತಿಂಗಳು ಬೇಕೋ? ರಾಜ್ಯ ಸರಕಾರದ ಮುಂದೆ ಎರಡೂವರೆ ವರ್ಷ ಇದೆ. ಅದರ ಒಳಗೆ ಆದರೆ ಬಚಾವ್. ಈ ನಡುವೆ ತುಂಬೆಯ ಸಂತ್ರಸ್ತರಿಗೂ ಪರಿಹಾರ ಕೊಡಲು ಇದೆ. ಅದಕ್ಕೆ 40 ಕೋಟಿ ನೀಡಲು ಪಾಲಿಕೆ ಇನ್ನಷ್ಟು ಆಸ್ತಿ ಅಡವು ಇಡಬೇಕಾದಿತು. ಕೊನೆಗೆ ಅರ್ಧ ಮಂಗಳೂರು ಬ್ಯಾಂಕಿನಲ್ಲಿ ಅಡವು!

 

0
Shares
  • Share On Facebook
  • Tweet It




Trending Now
7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!
Tulunadu News July 12, 2025
ತರಗತಿಯಲ್ಲಿ ಲಾಸ್ಟ್ ಬೆಂಚ್ ಎನ್ನುವುದು ಕೇರಳದಲ್ಲಿ ಇನ್ನು ಇಲ್ಲ!
Tulunadu News July 12, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • 7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!
    • ತರಗತಿಯಲ್ಲಿ ಲಾಸ್ಟ್ ಬೆಂಚ್ ಎನ್ನುವುದು ಕೇರಳದಲ್ಲಿ ಇನ್ನು ಇಲ್ಲ!
    • ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
    • ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!
    • ನಾಯಕರು 75 ಆಗುತ್ತಿದ್ದಂತೆ ಅಧಿಕಾರದಿಂದ ಕೆಳಗಿಳಿದು ಬೇರೆಯವರಿಗೆ ದಾರಿ ಮಾಡಿಕೊಡಲಿ - ಮೋಹನ್ ಭಾಗವತ್!
    • ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕದ್ರಿ ಸಂಚಾರ ಪೊಲೀಸ್ ಕಾನ್‌ಸ್ಟೆಬಲ್ ತಸ್ಲೀಮ್ …!
    • ಬೀದಿನಾಯಿಗಳಿಗೆ ನಿತ್ಯ ಚಿಕನ್, ಮೊಟ್ಟೆ ನೀಡಲು ಬಿಬಿಎಂಪಿ ನಿರ್ಧಾರ!
    • ಜನಸಾಮಾನ್ಯರ ಕೈಗೆಟಕುತ್ತಿಲ್ಲ ತೆಂಗಿನಕಾಯಿ ದರ... ಪುತ್ತೂರಿನಲ್ಲಿ ಹೆಚ್ಚಿದ ಕಳವು!
    • ವಿಎಚ್ ಪಿ ಶರಣ್, ನವೀನ್ ಗೆ ರಿಲೀಫ್: ಅರುಣ್ ಶ್ಯಾಮ್ ವಾದ
    • ಯುಕೆ ಪ್ರಧಾನಿ ಪದದಿಂದ ಇಳಿದ ಬಳಿಕ ಖಾಸಗಿ ಉದ್ಯೋಗಕ್ಕೆ ಮರಳಿದ ರಿಶಿ ಸುನಾಕ್!
  • Popular Posts

    • 1
      7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!
    • 2
      ತರಗತಿಯಲ್ಲಿ ಲಾಸ್ಟ್ ಬೆಂಚ್ ಎನ್ನುವುದು ಕೇರಳದಲ್ಲಿ ಇನ್ನು ಇಲ್ಲ!
    • 3
      ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
    • 4
      ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!
    • 5
      ನಾಯಕರು 75 ಆಗುತ್ತಿದ್ದಂತೆ ಅಧಿಕಾರದಿಂದ ಕೆಳಗಿಳಿದು ಬೇರೆಯವರಿಗೆ ದಾರಿ ಮಾಡಿಕೊಡಲಿ - ಮೋಹನ್ ಭಾಗವತ್!

  • Privacy Policy
  • Contact
© Tulunadu Infomedia.

Press enter/return to begin your search