• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಹಿಂದೂ ಯುವತಿಯನ್ನು ಮದುವೆಯಾದರೆ 2ನೇ ಮದುವೆ ಇಲ್ಲ!?

Hanumantha Kamath Posted On December 2, 2020


  • Share On Facebook
  • Tweet It

ಮುಸ್ಲಿಮರು ನಮ್ಮ ದೇಶದಲ್ಲಿ 600 ವರ್ಷಗಳಿಂದ ವಾಸಿಸುತ್ತಿದ್ದಾರೆ. ಹಿಂದೂ ಮತ್ತು ಮುಸ್ಲಿಮರಲ್ಲಿ ಹಲವರು ಕ್ರಾಸ್ ಆಗಿ ಹುಟ್ಟಿದ್ದಾರೆ ಎಂದು ಘನವೆತ್ತ ಕರ್ನಾಟಕದ ಮಾನ್ಯ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಹೇಳಿದ್ದಾರೆ. ಅದಕ್ಕಾಗಿ ಲವ್ ಜಿಹಾದಿಗೆ ಹೊಸ ಕಾನೂನು ಬೇಡಾ ಎನ್ನುವುದು ಅವರ ಅಭಿಪ್ರಾಯ. ಸ್ವಾಮಿ ಸಿದ್ಧರಾಮಯ್ಯನವರೇ, ಮುಸ್ಲಿಮರು 600 ವರ್ಷಗಳಿಂದ ಇಲ್ಲಿ ಇದ್ದಾರೆ ಎನ್ನುವುದು ನಮಗೆ ಗೊತ್ತಿದೆ. ಭಾರತದ ಮೇಲೆ ದಂಡೆತ್ತಿ ಬಂದ ಮುಸ್ಲಿಂ ರಾಜರು ಮತ್ತು ಅವರ ಸೈನಿಕರು ನಮ್ಮ ಹಿಂದೂ ರಾಣಿಯರಿಂದ ಹಿಡಿದು ಪಾಪದ ಮಹಿಳೆಯರನ್ನು ಬಿಡದೆ ಅತ್ಯಾಚಾರ ಮಾಡಿದ್ದನ್ನು ನೀವೆಷ್ಟು ಓದಿದ್ದಿರೋ ಅಷ್ಟೇ ನಾವು ಓದಿದ್ದೇವೆ.
ಇನ್ನು ಭಾರತದ ಕೆಲವು ಹಿಂದೂ ರಾಜರು ಮುಸ್ಲಿಂ ರಾಜರ ದಬ್ಬಾಳಿಕೆಗೆ ಒಳಗಾಗಿ ಅವರಿಗೆ ಕಪ್ಪ ಕೊಟ್ಟಿರಬಹುದು. ಇದರಿಂದ ಕಾಲಾಂತರದಲ್ಲಿ ದಂಡೆತ್ತಿ ಬಂದ ಮುಸ್ಲಿಂ ರಾಜರು ಮೃತರಾದರೂ ಅವರ ಪಳೆಯುಳಿಕೆಗಳಂತಿದ್ದವರು ಇಲ್ಲಿಯೇ ಉಳಿದು ಸಂತಾನ ಹೆಚ್ಚಿಸಿ ಭಾರತದಲ್ಲಿ ನೆಲೆಸಿರಬಹುದು. ಈಗ ಅಂತವರ ಒಟ್ಟು ಸಂಖ್ಯೆಯೆ ದೇಶದ ಸರಾಸರಿ 18 ಶೇಕಡಾದಷ್ಟು ಇದೆ. ಸಿದ್ದುಜಿ, ಮೊದಲು ನಿಮ್ಮ ಆತಂಕ ಸರಿಮಾಡೋಣ. ಲವ್ ಜಿಹಾದ್ ಕಠಿಣ ಕಾನೂನು ಬಂದರೆ ಮುಸ್ಲಿಮರು ಈ ದೇಶ ಬಿಟ್ಟು ಹೋಗಬೇಕಾಗಿರುವ ಪರಿಸ್ಥಿತಿ ಬರುವುದಿಲ್ಲ. ನಿಮ್ಮ ವೋಟ್ ಬ್ಯಾಂಕ್ ನಿಮ್ಮನ್ನು ಬಿಟ್ಟು ಹೋಗುತ್ತದಾ ಎಂದು ಸಿದ್ಧರಾಮಯ್ಯನವರೇ ನೀವು ಆತಂಕಿತಗೊಳ್ಳಬೇಡಿ. ಅಂತಹ ಕಾನೂನು ಇದಲ್ಲ. ಇನ್ನು ಹಿಂದೂ ಮತ್ತು ಮುಸ್ಲಿಮರು ಒಟ್ಟಾಗಿ ಕ್ರಾಸ್ ಮಕ್ಕಳು ಹುಟ್ಟಿದ್ದಾರೆ ಎಂದು ನಿಮ್ಮ ಮಾತಿನ ತಾತ್ಪರ್ಯವನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ.
ಒಂದು ವೇಳೆ ಲವ್ ಜಿಹಾದ್ ಕಾನೂನು ಬಂದರೆ ಈ ಕ್ರಾಸ್ ಗೆ ಹುಟ್ಟಿದ ಮಕ್ಕಳು ದೇಶ ಬಿಟ್ಟು ಹೋಗಬೇಕಾಗಬಹುದು ಎಂದು ಸಿದ್ದು ಭಯಪಟ್ಟುಕೊಂಡಿರುವಂತೆ ಕಾಣುತ್ತದೆ. ಅಂತಹುದು ಏನೂ ಆಗುವುದಿಲ್ಲ ಎಂದು ಈ ಮೂಲಕ ಎಲ್ಲರೂ ಸಿದ್ಧರಾಮಯ್ಯನವರಿಗೆ ಧೈರ್ಯ ಕೊಡೋಣ. ಸರಿಯಾಗಿ ನೋಡಿದರೆ ಭಾರತೀಯ ಜನತಾ ಪಾರ್ಟಿಯಲ್ಲಿಯೇ ಅನೇಕ ಉನ್ನತ ನಾಯಕರುಗಳ ಮಗಳಂದಿರು ಮುಸ್ಲಿಂ ಯುವಕರನ್ನೇ ಮದುವೆಯಾಗಿದ್ದಾರೆ. ಅನೇಕ ಸಿನೆಮಾ ಸ್ಟಾರ್ ಮುಸ್ಲಿಂ ಹೀರೋಗಳು ಹಿಂದೂ ಹೆಣ್ಣುಮಕ್ಕಳನ್ನೇ ಮದುವೆಯಾಗಿದ್ದಾರೆ. ಶಾರೂಕ್ ಖಾನ್, ಅಮೀರ್ ಖಾನ್, ಸೈಫ್ ಅಲಿ ಖಾನ್ ನಂತಹ ಮುಸ್ಲಿಂ ಹೀರೋಗಳ ಹೆಂಡತಿಯರು ಹಿಂದೂಗಳೇ. ವಿಷಯ ಇರುವುದು ಮುಸ್ಲಿಂ ಯುವಕ ಮತ್ತು ಹಿಂದೂ ಯುವತಿ ಮದುವೆಯಾಗುವುದರಲ್ಲಿ ಅಲ್ಲವೇ ಅಲ್ಲ. ಲವ್ ಜಿಹಾದ್ ಕಾನೂನು ಬಂದರೂ ಇಂತಹ ಮದುವೆಗಳಿಗೆ ನಿಷೇಧ ಹಾಕಲು ಸಾಧ್ಯವೇ ಇಲ್ಲ. ಯಾಕೆಂದರೆ ನಮ್ಮ ಸಂವಿಧಾನದಲ್ಲಿಯೇ 18 ತುಂಬಿದ ಯುವತಿ ಮತ್ತು 21 ತುಂಬಿದ ಯುವಕ ಯಾರನ್ನು ಬೇಕಾದರೂ ಮದುವೆಯಾಗಬಹುದು. ಅದನ್ನು ಯಾವ ಹಿಂದೂ ಸಂಘಟನೆಗಳೂ ತಡೆಯಲು ಸಾಧ್ಯವಿಲ್ಲ. ಆದರೆ ಲವ್ ಜಿಹಾದ್ ಮೂಲಕ ಹಿಂದೂ ಯುವತಿಯರನ್ನು ಪ್ರೀತಿಸಿ, ಮೈಂಡ್ ವಾಶ್ ಮಾಡಿ, ತಮ್ಮ ಧರ್ಮಕ್ಕೆ ಮತಾಂತರ ಮಾಡಿಸಿ ನಂತರ ನಿಖಾ ಆಗಿ ಎರಡು ವರ್ಷ ಬಳಸಿ ನಂತರ ಎಂಜಿಲೆಲೆ ತರಹ ಬಿಸಾಡುವುದಿದೆಯಲ್ಲ ಅದು ಕೆಟ್ಟದು. ಅದನ್ನು ತಡೆಯಲು ಈಗ ಕಾನೂನು ಬರಬೇಕಿದೆ.
ಒಂದು ಪ್ರಾಪ್ತ ವಯಸ್ಸಿನ ತರುಣಿ ತನ್ನದೇ ಜಾತಿಯ ಯುವಕನನ್ನು ಮದುವೆಯಾದರೆ ವಿಚ್ಚೇದನ ಆಗಲ್ವಾ ಎಂದು ಕೆಲವರು ಕೇಳಬಹುದು. ವಿವಾಹ ವಿಚ್ಚೇದನ ಎನ್ನುವುದು ಎಲ್ಲಾ ಕಡೆ ಆಗುತ್ತದೆ. ಆದರೆ ಹಿಂದೂ ಧರ್ಮದಲ್ಲಿ ತನ್ನ ಗಂಡನಿಂದ ದೌರ್ಜನ್ಯ ಆಗಿದೆ ಎಂದು ಹೆಂಡತಿ ನ್ಯಾಯಾಲಯದಲ್ಲಿ ವಾದಿಸಿ ಗೆದ್ದರೆ ಆಗ ಕೋರ್ಟ್ ಅವಳಿಗೆ ಜೀವನಾಂಶ ಕೊಡಲು ಹೇಳುತ್ತದೆ. ಆದರೆ ಇಲ್ಲಿ ನಿಖಾ ಆಗುವ ಮಹಿಳೆಗೆ ತಾನು ಇಂತಿಂತಹ ವ್ಯಕ್ತಿಯನ್ನು ಮದುವೆಯಾಗಿದ್ದೇನೆ ಎಂದು ಆಯಾ ಮಸೀದಿಯವರು ಪ್ರಮಾಣ ಪತ್ರ ನೀಡಿದರೆ ಮಾತ್ರ ಅವಳಿಗೆ ಮದುವೆಯಾಗಿರುವುದಕ್ಕೆ ದಾಖಲೆ ಇರುತ್ತದೆ. ಅನೇಕ ಸಂದರ್ಭದಲ್ಲಿ ಮತಾಂತರ ಆಗಿ ಮದುವೆಯಾಗುವ ಮಹಿಳೆಗೆ ಆಯಾ ಮಸೀದಿಯವರು ಇಂತಹ ಪತ್ರ ನೀಡುವುದೇ ಇಲ್ಲ. ಎರಡು ವರ್ಷ ಬಳಿಕ ಆಕೆಯ ಬಳಿ ಇನ್ನು ದೋಚಲು ಏನೂ ಇಲ್ಲ ಎಂದಾಗ ಗಂಡ ಅವಳಿಗೆ ಬೇರೆ ಗಂಡಸಿನೊಂದಿಗೆ ಲೈಂಗಿಕ ಕ್ರಿಯೆಗೆ ಸಹಕರಿಸು ಎಂದು ಒತ್ತಾಯ ಮಾಡಿದರೆ ಅವಳು ತಾನೆ ಏನು ಮಾಡಿಯಾಳು. ಒಪ್ಪದೇ ಹೋದರೆ ಮನೆ ಬಿಟ್ಟು ತೊಲಗು ಎಂದರೆ ಅವಳಿಗೆ ಏನು ಗತಿ? ಅವನು ಸುಲಭವಾಗಿ ಇನ್ನೊಂದು ಮದುವೆಯಾಗುತ್ತಾನೆ. ಇವಳು ಬೀದಿಗೆ ಬೀಳುತ್ತಾಳೆ. ಇದನ್ನು ತಪ್ಪಿಸಲು ಒಂದು ವೇಳೆ ಹಿಂದೂ ಯುವತಿ ಮುಸ್ಲಿಂ ಯುವಕನನ್ನು ಪ್ರೀತಿಸಿ ಮದುವೆನೆ ಆದರೆ ಅವಳಿಗೆ ಆರ್ಥಿಕ ಮತ್ತು ಸಾಮಾಜಿಕ ರಕ್ಷಣೆ ಸಿಗಬೇಕು ಎನ್ನುವುದು ಹೊಸ ಕಾನೂನಿನ ಉದ್ದೇಶ. ಇನ್ನು ಮದುವೆಯಾಗುವುದಕ್ಕಾಗಿ ಮತಾಂತರ ಆಗಬೇಕು ಎಂದು ಒತ್ತಾಯಪಡಿಸುವ ನಿಯಮ ಕೂಡ ರದ್ದಾಗಬೇಕಾಗುತ್ತದೆ. ಅದರೊಂದಿಗೆ ಎರಡು ವರ್ಷ ಬಳಸಿ ನಂತರ ಕಿರುಕುಳ ಕೊಟ್ಟರೆ ಅವಳು ವಿಚ್ಚೇದನ ಬಯಸಿದರೆ ಅವಳಿಗೆ ಇಂತಿಷ್ಟು ಲಕ್ಷ ಹಣವನ್ನು ದಂಡವಾಗಿ ನೀಡಬೇಕು ಎನ್ನುವ ಅಂಶ ಕೂಡ ಅಡಕವಾಗಬೇಕು. ಎಲ್ಲದರ ಜೊತೆಗೆ ಹಿಂದೂ ಯುವತಿಯರನ್ನು ಮದುವೆಯಾಗುವ ಮುಸಲ್ಮಾನ ಯುವಕರು ಎರಡನೇ ಮದುವೆಯ ಅವಕಾಶದಿಂದ ವಂಚಿತರಾಗುತ್ತಾರೆ ಎನ್ನುವ ನಿಯಮ ಬಂದರೆ ಎಲ್ಲವೂ ಸರಿಯಾಗುತ್ತದೆ. ಮತ್ತೆ ಬೇಕಾದರೆ ನೋಡಿ, ಯಾವ ಮುಸ್ಲಿಮ್ ತರುಣ ಇಂತಹ ರಿಸ್ಕ್ ತೆಗೆದುಕೊಳ್ಳುವುದಿಲ್ಲ!!
  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search