• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಸೆಂಟ್ರಲ್ ರೈಲು ನಿಲ್ದಾಣವನ್ನೇ ವಿಶ್ವದರ್ಜೆ ಮಾಡಲು ಸಾಧ್ಯವಿದೆ? ಹೇಗೆ?

Hanumantha Kamath Posted On September 1, 2021


  • Share On Facebook
  • Tweet It

ಪಾಪ, ಮಮತಾ ಬ್ಯಾನರ್ಜಿ ಹೇಳಿ ಹೋದ್ರು. ಒಮ್ಮೆ ಒಂದು ಯೋಜನೆ ಬಜೆಟಿನಲ್ಲಿ ಘೋಷಣೆ ಆದ್ರೆ ಅದು ಆಗಿಯೇ ಆಗುತ್ತದೆ. ಆದರೆ ಯಾವಾಗ ಎಂದು ಮಾತ್ರ ಕೇಳ್ಬೆಡಿ. ಇನ್ನು ನಮ್ಮ ರೈಲ್ವೆಗಳ ಬಜೆಟಿನಲ್ಲಿ ಹೆಚ್ಚಿನ ಸಂದರ್ಭ ಕ್ಲಾರಿಟಿ ಇರುವುದಿಲ್ಲ. ಉದಾಹರಣೆಗೆ ಡಿವಿ ರೈಲ್ವೆ ಸಚಿವರಾಗಿದ್ದಾಗ ಮಂಗಳೂರು-ಬೆಂಗಳೂರು ರೈಲು ಓಡಿಸ್ತೇನೆ ಎಂದರು. ಬೆಳಿಗ್ಗೆನಾ, ರಾತ್ರಿನಾ ಎಂದಿರಲಿಲ್ಲ. ಅದರಿಂದ ಒಂದಿಷ್ಟು ವರ್ಷ ಗೊಂದಲ ಹಾಗೆ ಮುಂದುವರೆಯಿತು. ನಂತರ ಹೇಗೊ ಪ್ರಾರಂಭವಾಯಿತು ಬಿಡಿ. ಅದರ ಮೊದಲು ಮಮತಾ ಬ್ಯಾನರ್ಜಿ ಮಂಗಳೂರಿನಲ್ಲಿ ವಿಶ್ವದರ್ಜೆ ರೈಲು ನಿಲ್ದಾಣ ಎಂದರು. ಸೆಂಟ್ರಲ್ ಅಥವಾ ಜಂಕ್ಷನ್ ಯಾವುದು ಎಂದು ಹೇಳಲಿಲ್ಲ. ಅದರಿಂದ ಒಂದಿಷ್ಟು ಗೊಂದಲ ಮುಂದುವರೆಯುತ್ತಿದೆ.
ನನ್ನ ಪ್ರಕಾರ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣವನ್ನೇ ವಿಶ್ವದರ್ಜೆಗೆ ಏರಿಸಬಹುದು. ಜಂಕ್ಷನ್ ರೈಲು ನಿಲ್ದಾಣವನ್ನು ಮಾಡಿದರೆ ಜನರಿಗೆ ಪುನ: ನಗರದಿಂದ ಹೊರಗೆ ಹೋಗಬೇಕಾಗುತ್ತದೆ. ಅದು ಕಿರಿಕಿರಿ. ಅದನ್ನು ಹಿಂದೆ ವಿವರಿಸಿದ್ದೇನೆ. ಬೆಂಗಳೂರಿನಿಂದ ಮಂಗಳೂರಿಗೆ ಇರುವ ಟ್ರೇನ್ ಟಿಕೆಟ್ ಮತ್ತು ಜಂಕ್ಷನ್ ನಿಂದ ನಗರಕ್ಕೆ ಬರಲು ಟ್ಯಾಕ್ಸಿಗೆ ತಗಲುವ ಖರ್ಚಿನ ಬಗ್ಗೆ ಬೇರೆ ಬೇರೆ ಮಾಧ್ಯಮಗಳಲ್ಲಿಯೂ ಚರ್ಚೆಯಾಗಿದೆ. ಅದ್ದರಿಂದ ಎಲ್ಲರ ಪ್ರಕಾರ ಸೆಂಟ್ರಲ್ ಬೆಸ್ಟ್. ಆದರೆ ಕೆಲವರು ಅಲ್ಲಿ ಬೇಕಾದಷ್ಟು ಜಾಗ ಇಲ್ಲ ಎನ್ನುವ ನೆಪವೊಡ್ಡಿ ತಮ್ಮ ವೈಯಕ್ತಿಕ ಕಾರಣಗಳಿಗಾಗಿ ಅಲ್ಲಿ ಬೇಡಾ ಎನ್ನುತ್ತಿದ್ದಾರೆ.
ಈ ಬಗ್ಗೆ ಹಿಂದೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ವಿ ಪೊನ್ನುರಾಜ್ ಅವರಿಗೂ ಗೊಂದಲವಿತ್ತು. ಒಂದು ಸಲ ನಾನು ಅವರನ್ನು ಭೇಟಿಯಾಗಿದ್ದಾಗ ಅವರಿಗೆ ಅಲ್ಲಿರುವ ಜಾಗದ ಬಗ್ಗೆ ವಿಸ್ತ್ರತವಾಗಿ ವಿವರಿಸಿದ್ದೆ. ಅವರಿಗೂ ಹೌದೆಂದು ಅನಿಸಿತ್ತು. ಆದರೆ ಜನಪರ ಜಿಲ್ಲಾಧಿಕಾರಿಯನ್ನು ಬೇಗ ವರ್ಗಾಯಿಸಿದರು. ಅದರ ನಂತರ ಸದರ್ನ ರೈಲ್ವೆಯವರು ಅಲ್ಲಿ ಬಂದು ಸರ್ವೆ ಮಾಡಿ ಹೋಗಿದ್ದಾರೆ. ಅವರಿಗೂ ಸೆಂಟ್ರಲ್ ನಲ್ಲಿಯೇ ಮಾಡಬಹುದು ಇಲ್ಲಿರುವ ಕಲವು ಕಚೇರಿಗಳನ್ನು ಸ್ಥಳಾಂತರಿಸಿದರೆ ವರದಿ ನೀಡಿದರು ಎಂದು ವಿಷಯ ಏನೆಂದರೆ ಯಾವುದೇ ರೈಲು ನಿಲ್ದಾಣ ವಿಶ್ವದರ್ಜೆಯಾಗಬೇಕಾದರೆ ಅಲ್ಲಿ ಕನಿಷ್ಟ ಎಂಟು ಫ್ಲಾಟ್ ಫಾರಂಗಳಿರಲೇಬೇಕು. ಎ ಟು ಝಡ್ ಸೌಲಭ್ಯ ಇರಬೇಕು ಎಂದಿದೆ. ಈಗ ಸೆಂಟ್ರಲ್ ನಲ್ಲಿ 4 ಫ್ಲಾಟ್ ಫಾರಂಗಳಿವೆ. ಅಲ್ಲಿ ಎಂಟನ್ನು ನಿರ್ಮಾಣ ಮಾಡಲು ಒಂದಿಷ್ಟು ಪ್ರಯತ್ನಪಟ್ಟರೆ ಖಂಡಿತ ಸಾಧ್ಯವಿದೆ. ಸೆಂಟ್ರಲ್ ನಲ್ಲಿ ಪೊಲೀಸ್ ಲೈನ್ ಹಿಂದೆ ಮತ್ತು ಅಲ್ಲಿರುವ ಸರಕಾರಿ ಕಾಲೇಜಿನ ಹಿಂದಿನಿಂದ ಸೈಡ್ ನಲ್ಲಿರುವ ಪೂರ್ತಿ ಜಾಗ ರೈಲ್ವೆಯವರದ್ದು. ಈಗ ಅಲ್ಲಿ ಹಳೆ ಆಫೀಸುಗಳಿವೆ. ಅದರಲ್ಲಿ ಸಹಕಾರಿ ಸಂಘದ ಕಚೇರಿಗಳು, ಕಾರ್ಮಿಕ ಕಚೇರಿ ಎಲ್ಲಾ ಇದೆ. ಅವುಗಳನ್ನು ಅಲ್ಲಿಂದ ತೆಗೆದು ಆ ಸೈಡಿನಿಂದ ನಾಲ್ಕು ಫ್ಲಾಟ್ ಫಾರಂ ಮಾಡಬಹುದು. ಇನ್ನು ಫ್ಲಾಟ್ ಫಾರಂ ನಂತರ ಇರುವ ಜಾಗದಲ್ಲಿ ಮುಖ್ಯದ್ವಾರ ಕಟ್ಟಿ ಅಲ್ಲಿ ಕಟ್ಟಡ ನಿರ್ಮಿಸಿ ಟಿಕೆಟ್ ಕೌಂಟರ್ ಮಾಡಬಹುದು. ಈಗ ಇರುವ ದ್ವಾರ, ಟಿಕೆಟ್ ಕೌಂಟರ್ ಗಳನ್ನು ಹೊಂದಿದ ಕಟ್ಟಡವನ್ನು ಪುರಾತತ್ವ ಇಲಾಖೆ ಕೋರಿದ್ದರೆ ಹಾಗೆ ಉಳಿಸಬಹುದು.
ಅಷ್ಟಕ್ಕೂ ವಿಶ್ವದರ್ಜೆ ಮಾಡಲೇಬೇಕಾದರೆ ವಿದೇಶಗಳಲ್ಲಿ ಇರುವಂತೆ ಒಂದು ಫ್ಲಾಟ್ ಫಾರಂನ ಮೇಲೆ ಮತ್ತೊಂದು ಫ್ಲಾಟ್ ಫಾರಂ ಇರುವಂತೆ ನಿರ್ಮಾಣ ಮಾಡಬೇಕು. ಅದು ನಮ್ಮ ಮಂಗಳೂರಿನಲ್ಲಿ ಸದ್ಯದ ಮಟ್ಟಿಗೆ ಸಾಧ್ಯವಿಲ್ಲ ಎನ್ನುವುದು ಬೇರೆ ವಿಷಯ. ಆದರೂ ವಿಶ್ವದರ್ಜೆ, ವಿಶ್ವದರ್ಜೆ ಎಂದು ಎಲ್ಲರೂ ಹೇಳುವ ಕಾರಣ ಹಾಗೆ ಹೇಳುತ್ತಿದ್ದೇನೆ. ವಿಷಯ ಏನೆಂದರೆ ಮಂಗಳೂರು ನಮ್ಮದು, ಅಲ್ಲಿ ವಿಶ್ವದರ್ಜೆ ರೈಲ್ವೆ ನಿಲ್ದಾಣವಾದರೆ ನಮಗೆ ಹೆಮ್ಮೆ ಎಂದು ಅಂದುಕೊಂಡು ಎಲ್ಲರೂ ಕೆಲಸ ಮಾಡಿದರೆ ಏನಾದರೂ ಸಾಧ್ಯವಿದೆ. ಅದು ಬಿಟ್ಟು ರೈಲು ಅವರದ್ದು, ಜಾಗ ನಾವು ಕೊಡಬೇಕಾ ಎಂದುಕೊಂಡರೆ ಯಾವುದೇ ಕೆಲಸ ಕಷ್ಟ. ಅದರ ಬದಲು ರಾಜ್ಯ ಸರಕಾರದ ಜಾಗದ ನಿರೀಕ್ಷೆ ಬಿಟ್ಟು ರೈಲ್ವೆಯವರು ತಮ್ಮ ಜಾಗವನ್ನು ಸರಿಯಾಗಿ ಬಳಸಿಕೊಂಡರೆ ಸೆಂಟ್ರಲ್ ರೈಲು ನಿಲ್ದಾಣವೇ ವಿಶ್ವದರ್ಜೆಯನ್ನಾಗಿ ಮಾಡಬಹುದು. ಆದರೆ ಕೆಲವೊಮ್ಮೆ ಈ ರೈಲ್ವೆ ಅಧಿಕಾರಿಗಳು “ಇಂಗ್ಲೀಷ್” ನಲ್ಲಿ ಮಾತನಾಡುತ್ತಾರೆ. ತಮ್ಮ ಕಂಕನಾಡಿ ಪ್ರೀತಿ ವಿಪರೀತ ತೋರಿಸುತ್ತಾರೆ. ಅಲ್ಲಿಯೇ ಮಾಡುವ ಸುಳಿವು ಕೊಡುತ್ತಾರೆ. ಅಂತಹ ಸಲಹೆಯನ್ನು ಪಡೆದುಕೊಂಡು ನಮ್ಮ ಊರಿನ ಜನಪ್ರತಿನಿಧಿಗಳು ರೈಲ್ವೆ ಅಧಿಕಾರಿಗಳ ತಾಳಕ್ಕೆ ಕುಣಿದರೆ ಆಗ ನಾವು ಕೂಡ ನಮಗೆ ಗೊತ್ತಿರುವ ಬೇರೆ ಭಾಷೆಯಲ್ಲಿ ಮಾತನಾಡಬೇಕಾಗುತ್ತದೆ. ದಯಮಾಡಿ ಕಾಂಗ್ರೆಸ್,ಬಿಜೆಪಿ ಎಂದು ನಮ್ಮ ಜನರಿಗೆ ಸಿಗಲಿರುವ ಸೌಲಭ್ಯ ಗಳು ಸಿಗದ ಹಾಗೆ ಮಾಡಬೇಡಿ ಈಗಾಗಲೇ ಹಲವು ವರ್ಷಗಳೇ ಕಳೆದುಹೋಯಿತ್ತು ವಿಶ್ವದರ್ಜೆ, ವಿಶ್ವದರ್ಜೆ ಎಂದು.
  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search