• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಶರಣ್-ಉದಯ್ ನಡುವೆ ಮಧ್ಯಸ್ಥಿಕೆ ಎಷ್ಟು ಬೇಗ ಆಗುತ್ತೋ ಅಷ್ಟು ಒಳ್ಳೆಯದು!

Hanumantha Kamath Posted On November 18, 2021


  • Share On Facebook
  • Tweet It

ಶರಣ್ ಪಂಪ್ವೆಲ್ ಒಂದು ಕಾಲದಲ್ಲಿ ಸಂಘ ಪರಿವಾರದ ಸಾಮಾನ್ಯ ಕಾರ್ಯಕರ್ತ. ಅವರಲ್ಲಿದ್ದ ಹಿಂದೂತ್ವದ ಕಿಚ್ಚು, ಧೈರ್ಯದಿಂದ ಬಜರಂಗದಳದ ಮುಖಂಡರಾಗಿ, ಅಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿ, ನಂತರ ಈಗ ವಿಶ್ವ ಹಿಂದೂ ಪರಿಷತ್ ನ ವಿಭಾಗ ಪ್ರಮುಖರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಹುಶ: ಇನ್ನು ಇದೇ ಸಂಘಟನೆಯಲ್ಲಿ ಅವರು ಉನ್ನತ ಜವಾಬ್ದಾರಿಗಳನ್ನು ಹೊತ್ತುಕೊಳ್ಳುವ ಅವಕಾಶ ಸಿಗಬಹುದು. ಇನ್ನೊಬ್ಬರು ಉದಯ್ ಪೂಜಾರಿ ಬಳ್ಳಾಲ್ ಭಾಗ್. ಕೆಲವು ವರ್ಷಗಳ ಹಿಂದೆ ಬಿರುವೆರ್ ಕುಡ್ಲ ಎನ್ನುವ ಸಂಘಟನೆಯನ್ನು ಹುಟ್ಟು ಹಾಕಿ ಅದರ ವಿವಿಧ ಘಟಕಗಳನ್ನು ಕರಾವಳಿಯಾದ್ಯಂತ ಆರಂಭಿಸಲು ಯುವಕರಿಗೆ ಪ್ರೋತ್ಸಾಹ ನೀಡುತ್ತಾ ಬರುತ್ತಿದ್ದಾರೆ. ಪ್ರತಿ ತಿಂಗಳು ಸಾವಿರಾರು ರೂಪಾಯಿಗಳನ್ನು ಸ್ವತ: ಕೈಯಿಂದ ಮತ್ತು ಯುವಕರಿಂದ ಸಂಗ್ರಹಿಸಿ ಗಣ್ಯರ ಉಪಸ್ಥಿತಿಯಲ್ಲಿ ಅನಾರೋಗ್ಯ ಪೀಡಿತರಾಗಿರುವ ಅರ್ಹ ಫಲಾನುಭವಿಗಳಿಗೆ ನೀಡುತ್ತಾ ಬರುತ್ತಿದ್ದಾರೆ. ಬಡವರಿಗೆ ಮನೆ ಕಟ್ಟಿಕೊಟ್ಟು ಅವರ ಬಾಳಿಗೆ ಆಧಾರವಾಗಿರುವುದರಿಂದ ಹಿಡಿದು ದಸರಾ ಸಮಯದಲ್ಲಿ ಹುಲಿ ವೇಷಗಳಿಗೆ ಪ್ರೋತ್ಸಾಹ ಕೊಡುವ ಕಾರ್ಯದಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಶರಣ್ ಅವರು ಸಂಘ ಪರಿವಾರದ ಒಂದು ಅಂಗ ಸಂಘಟನೆಯಲ್ಲಿ ಬರುವುದರಿಂದ ಅವರು ತಾವು ಏನು ಕಾರ್ಯಕ್ರಮಗಳನ್ನು ಸಂಘಟನೆಯ ಬ್ಯಾನರ್ ಅಡಿ ಮಾಡಿದರೂ ಅದಕ್ಕೆ ಹಿರಿಯರ ಅನುಮತಿ ತೆಗೆದುಕೊಳ್ಳಬೇಕಾಗುತ್ತದೆ. ಅವರು ಯಾವುದೇ ಹೇಳಿಕೆ ಕೊಟ್ಟರೂ ಅದನ್ನು ವಿಶ್ವ ಹಿಂದೂ ಪರಿಷತ್ ಕೊಟ್ಟಂತೆ ಎಂದೇ ಕಾರ್ಯಕರ್ತರು ಅಂದುಕೊಳ್ಳುತ್ತಾರೆ. ಇತ್ತೀಚೆಗೆ ಬಳ್ಳಾಲ್ ಭಾಗ್ ನಲ್ಲಿ ಒಂದು ಘಟನೆಯ ವಿಚಾರ ಮುಂದಿಟ್ಟು ಅಲ್ಲಿ ನಡೆದ ಪ್ರತಿಭಟನೆಯಲ್ಲಿ ಶರಣ್ ಪಂಪ್ವೆಲ್ ಅವರು ಭಾಗವಹಿಸಿ ಬಿರುವೆರ್ ಕುಡ್ಲ ಸಂಘಟನೆಯ ವಿಷಯದಲ್ಲಿ ವಿರುದ್ಧವಾಗಿ ಮಾತನಾಡಿದ್ದಾರೆ. ಅದಕ್ಕೆ ಪ್ರತಿಯಾಗಿ ಬಿರುವೆರ್ ಕುಡ್ಲ ಸಂಘಟನೆಯವರು ಸುದ್ದಿಗೋಷ್ಟಿ ಮಾಡಿ ಶರಣ್ ತಮ್ಮ ಬಳಿ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದಾರೆ.

ಇಬ್ಬರು ಕೂಡ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಪ್ರಭಾವಿಗಳಾಗಿದ್ದಾರೆ. ಶರಣ್ ಹಿಂದೂ ಸಂಘಟನೆಯ ಮೂಲಕ ಹಿಂದೂತ್ವದ ರಕ್ಷಣೆಗಾಗಿ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಇಂತಹ ಸಂಘಟನೆಗಳು ಇರುವುದರಿಂದಲೇ ಮತಾಂಧರಿಗೆ ಹಿಂದೂಗಳ ಮೇಲೆ ದಾಳಿ, ಹಲ್ಲೆ ಮಾಡಲು ಅಷ್ಟು ಸುಲಭವಾಗಿ ಧೈರ್ಯ ಬರುವುದಿಲ್ಲ ಎನ್ನುವುದನ್ನು ಎಲ್ಲರೂ ಒಪ್ಪಿಕೊಂಡಿರುವ ವಿಷಯ. ಇನ್ನು ಉದಯ್ ಅವರು ತಮ್ಮ ಸಂಘಟನೆಯ ಹೆಸರು ಬಿರುವೆರ್ ಕುಡ್ಲ ಎಂದು ಇಟ್ಟರೂ ಎಲ್ಲ ಜಾತಿ, ಧರ್ಮದವರಿಗೆ ಆರ್ಥಿಕ ನೆರವನ್ನು ನೀಡುತ್ತಾ ಬಂದಿದ್ದಾರೆ. ಅವರ ಸಂಘಟನೆಯಲ್ಲಿ ಬ್ರಾಹ್ಮಣರಿಂದ ಹಿಡಿದು ಬಿಲ್ಲವರು, ಬಂಟರು, ಮೊಗವೀರರ ಸಹಿತ ಎಲ್ಲರೂ ಇದ್ದಾರೆ. ಇವರ ಸಂಘಟನೆಗೂ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ. ಹೀಗಿರುವಾಗ ಈ ಕ್ಷಮೆಯಾಚನೆಯ ಹಟ ನಡುವೆ ಬಂದ ಕೂಡಲೇ ಅಲ್ಲಿ ಇಗೋ ಶುರುವಾಗುತ್ತದೆ. ಪರಸ್ಪರರಲ್ಲಿ ಯಾರು ಹೆಚ್ಚು ಪ್ರಖ್ಯಾತರು ಎನ್ನುವ ಟ್ರೋಲ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದರೆ ಎರಡೂ ಕಡೆಯಲ್ಲಿ ಹಟ ಜಿಡ್ಡುಗಟ್ಟುತ್ತದೆ. ಇದನ್ನೇ ಕಾಯುತ್ತಿರುವ ವಿಘ್ನ ಸಂತೋಷಿಗಳು ಎರಡೂ ಕಡೆಗೆ ತುಪ್ಪ ಹಾಕಿ ಬೆಂಕಿ ಕೊಟ್ಟು ಅಲ್ಲಿಯೇ ಕುಳಿತು ಚಳಿ ಕಾಯಿಸುವ ಕೆಲಸಕ್ಕೆ ಕೈ ಹಾಕುತ್ತಾರೆ. ಮನಸ್ಥಿತಿ ಎರಡೂ ಕಡೆಯವರದ್ದು ಹಾಳಾಗುತ್ತದೆ. ಇಬ್ಬರೂ ಸಮಾಜಕ್ಕೆ ಬೇಕಾದವರು. ಜೀವನಕ್ಕಾಗಿ ಇಬ್ಬರೂ ತಮ್ಮದೇ ಆದಾಯದ ಮೂಲವನ್ನು ಕಂಡುಕೊಂಡಿರಬಹುದು. ತಮ್ಮ ತನು, ಮನ, ಧನವನ್ನು ಸಂಘಟನೆಗಾಗಿ ಸುರಿಯುತ್ತಿರಬಹುದು. ಇಬ್ಬರೂ ಹಿಂದೂ ಸಮಾಜಕ್ಕೆ ಬೇಕಾದವರು. ಇವರ ನಡುವಿನ ಸಂಘರ್ಷ ಮೂರನೇಯವರಿಗೆ ಲಾಭವಾಗಬಾರದು. ಕೋವಿಡ್ ಸಮಯದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಿರುವೆರ್ ಕುಡ್ಲ ಎರಡೂ ಜನಮುಖಿ ಕಾರ್ಯಗಳನ್ನು ಮಾಡಿದೆ. ಈಗ ಯಾರೋ ಕೆಲವರು ಹೊಡೆದಾಡಿಕೊಂಡದ್ದಕ್ಕೆ ಈ ಮುಖಂಡರು ಬೀದಿ ಜಗಳಕ್ಕೆ ನಿಂತರೆ ಅದರಿಂದ ಹಿಂದೂ ಸಮಾಜಕ್ಕೆ ಹಾನಿಯಾಗುತ್ತದೆ. ಈಗ ವಿವಾದ ಚಿಕ್ಕದಿದೆ. ಇದನ್ನು ಹೀಗೆ ಬಿಟ್ಟರೆ ಅದು ದೊಡ್ಡದಾಗುತ್ತದೆ. ನಂತರ ಅದನ್ನು ಸರಿಪಡಿಸಲು ಆಗುವುದಿಲ್ಲ. ಆದ್ದರಿಂದ ಇಬ್ಬರೂ ಗೌರವಿಸುವ ವ್ಯಕ್ತಿಯೊಬ್ಬರು ತಕ್ಷಣ ಮಧ್ಯಸ್ಥಿಕೆಯನ್ನು ವಹಿಸಬೇಕು. ಇಬ್ಬರನ್ನು ಕೂರಿಸಿ ವಿವಾದವನ್ನು ಬಗೆಹರಿಸಬೇಕು. ಈ ಇಬ್ಬರಿಂದಲೂ ಹಿಂದೂ ಸಮಾಜಕ್ಕೆ ಆಗಬೇಕಾದ ಕೆಲಸ ತುಂಬಾ ಇದೆ. ಈಗಾಗಲೇ ಕೆಲವು ಹಿಂದೂ ಮುಖಂಡರು ಸಂಘಟನೆಗಳಿಂದ ಅಂತರ ಕಾಯ್ದುಕೊಂಡು ತಮ್ಮ ಪಾಡಿಗೆ ತಾವಿದ್ದಾರೆ. ಇದು ಬೇರೆ ಧರ್ಮದ ಸಂಘಟನೆಗಳು ಬೆಳೆಯಲು ಅವಕಾಶ ಮಾಡಿಕೊಟ್ಟಂತೆ ಆಗುತ್ತದೆ. ಬೇರೆಯವರು ನಮ್ಮತ್ತ ಬೆರಳು ತೋರಿಸಲು ಅವಕಾಶ ಮಾಡಿಕೊಟ್ಟಂತೆ ಆಗುತ್ತದೆ. ಹಾಗೆ ಆಗದಿರಲಿ ಎನ್ನುವುದು ಎಲ್ಲರ ಆಶಯ.

ಇನ್ನು ಇಬ್ಬರಿಗೂ ಮನಸ್ಸಿನ ಆಳದಲ್ಲಿ ಪರಸ್ಪರರ ಬಗ್ಗೆ ಗೌರವ ಇದೆ. ಇಬ್ಬರೂ ಒಬ್ಬರನ್ನೊಬ್ಬರ ಸಮಾಜಸೇವೆಯ ಬಗ್ಗೆ ಹೊಗಳುತ್ತಾರೆ. ಪರಸ್ಪರರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ತಮ್ಮ ಕೈಲಾದ ವಿವಿಧ ನೆರವನ್ನು ಇಬ್ಬರೂ ನೀಡಿದ್ದಾರೆ. ಇಬ್ಬರೂ ಈಗ ಒಂದು ದೃಢ ನಿರ್ಧಾರ ಮಾಡಿ ಆದದ್ದನ್ನು ಮರೆತು ಸ್ನೇಹದಿಂದ ಇರಲು ಮನಸ್ಸು ಮಾಡಬೇಕು. ಯಾರೂ ಕಿವಿಯೂದಿದರೂ ಅದನ್ನು ಕೇಳಲ್ಲ ಎಂದು ದೃಢ ಮನಸ್ಸು ಮಾಡಬೇಕು. ತಮ್ಮ ಕಾರ್ಯಕರ್ತರಿಗೂ ಸಂದೇಶ ನೀಡಬೇಕು. ಸಾಧ್ಯವಾದರೆ ಒಂದು ಜಂಟಿ ಸುದ್ದಿಗೋಷ್ಟಿ ಮಾಡಿ ಸಮಾಜಕ್ಕೆ ಉತ್ತರ ನೀಡಬೇಕು. ಇದೇನೂ ಕಷ್ಟವಲ್ಲ. ಇಬ್ಬರನ್ನೂ ಒಂದೇ ಫೋನ್ ಕರೆ ಮೂಲಕ ಕರೆದು ಎದುರಿಗೆ ಕೂರಿಸಿ “ನನ ಉಂತಾಲೇ” ಎಂದು ಜೋರು ಮಾಡಬಲ್ಲ ಸಾಮರ್ತ್ಯ ಇರುವ ಬೆರಳೆಣಿಕೆಯ ನಾಯಕರು ಮಂಗಳೂರಿನಲ್ಲಿ ಇದ್ದಾರೆ. ಅವರು ಇನ್ನು ತಡ ಮಾಡಬಾರದು ಎನ್ನುವುದು ನಮ್ಮ ಅಪೇಕ್ಷೆ!!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search